newsfirstkannada.com

ಅಪ್ಪು ಸ್ಮರಿಸಿದ ಸಿದ್ದು ಬಜೆಟ್.. ಡಾ.ಪುನೀತ್ ರಾಜ್​ಕುಮಾರ್​ ಸ್ಮರಣಾರ್ಥ ಸರ್ಕಾರಿ ಆಸ್ಪತ್ರೆಗಳಿಗೆ ಏನ್ ಸಿಗುತ್ತೆ ಗೊತ್ತಾ?

Share :

08-07-2023

    ಪವರ್​ ಸ್ಟಾರ್​​  ಪುನೀತ್​ ರಾಜ್​ ಕುಮಾರ್ ಸ್ಮರಣಾರ್ಥ

    ಸರ್ಕಾರಿ ಆಸ್ಪತ್ರೆಗೆ ಎಇಡಿ ಸಾಧನ ಅಳವಡಿಕೆ

    ಹೊಸದಾಗಿ 47 ಡಯಾಲಿಸಿಸ್​​ ಕೇಂದ್ರ ಸ್ಥಾಪನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಜ್ಯ ಬಜೆಟ್​ ಮಂಡಿಸಿದ್ದಾರೆ. 3.27 ಲಕ್ಷ ಕೋಟಿ ಅಂದಾಜಿನ ಬಜೆಟ್​ ಅನ್ನು ರಾಜ್ಯದ ಜನತೆಯ ಮುಂದೆ ಇಟ್ಟಿದ್ದಾರೆ. ಈ ಬಜೆಟ್​ನಲ್ಲಿ ದಿವಂಗತ ನಟ ಪುನೀತ್ ಅವರನ್ನು ನೆನಪಿಸಿಕೊಂಡಿದ್ದು, ​ ಅವರ ಸ್ಮರಣಾರ್ಥವಾಗಿ ಸರ್ಕಾರಿ ಆಸ್ಪತ್ರೆಗೆ ಎಇಡಿ ಸಾಧನ ಅಳವಡಿಕೆ ಮಾಡುವುದಾಗಿ ಉಲ್ಲೇಖಿಸಿದ್ದಾರೆ.

ಪವರ್​ ಸ್ಟಾರ್​​  ಪುನೀತ್​ ರಾಜ್​ ಕುಮಾರ್​ ಹೃದಯಾಘಾತದಿಂದ ನಿಧನರಾದರು. ಇವರ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಾಯಿತು. ಆದರೆ ರಾಜ್ಯದಲ್ಲಿ ಕಂಡುಬರುವ ಹಠಾತ್​ ಹಾರ್ಟ್​ ಅಟ್ಯಾಕ್​ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಪುನೀತ್​ ರಾಜ್​ ಕುಮಾರ್​ ಸ್ಮರಣಾರ್ಥ ರಾಜ್ಯದ ಎಲ್ಲಾ  ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್​​ (ಎಇಡಿ) ಸಾಧನ ಅಳವಡಿಸಲು ಸರ್ಕಾರ ಮುಂದಾಗಿದೆ.

ಡಯಾಲಿಸಿಸ್​​ ಕೇಂದ್ರ ಸ್ಥಾಪನೆ

ಇವಿಷ್ಟು ಮಾತ್ರವಲ್ಲದೆ, ಹೊಸದಾಗಿ 47 ಡಯಾಲಿಸಿಸ್​​ ಕೇಂದ್ರ ಸ್ಥಾಪನೆ, 23 ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನಿನ್ನೆ ಮಂಡಿಸಿದ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಕ್ಷೇತ್ರಕ್ಕೆ 14,950 ಕೋಟಿ ಮೀಸಲಿಟ್ಟಿದ್ದಾರೆ.

ಡಿಜಿಟಲ್​ ಹೆಲ್ತ್​​ ಸೊಸೈಟಿ

ರಾಜ್ಯದ ಜನರ ಆರೋಗ್ಯ ದೃಷ್ಟಿಯನ್ನು ಗಮನಹರಿಸಿಕೊಂಡು ಕರ್ನಾಟಕದಲ್ಲಿ ಆರೋಗ್ಯ ತಂತ್ರಜ್ನಾನ ಪ್ರಯೋಗಾಲಯವನ್ನು ಸ್ಥಾಪಿಸಲು ಯೋಚಿಸಿದೆ. ಹೀಗಾಗಿ 8 ಕೋಟಿ ರೂ ಮೀಸಲಿಟ್ಟಿದೆ. ಇದರ ಜೊತೆಗೆ ಆಯುಷ್ಮಾನ್​ ಡಿಜಿಟಲ್​ ಮಿಷನ್​ ಯೋಜನೆ ಹಾಗೂ ಆರೀಗ್ಯ ಡಿಜಿಟಲ್​​ ಡಿಜಿಟೀಕರಣ ಉಪಕ್ರಮ ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್​ ಹೆಲ್ತ್​ ಸೊಸೈಟಿ ಸ್ಥಾಪಿಸಲು ನಿರ್ಧರಿಸಿದೆ.

ನವಜಾತ ಶಿಶುಗಳು, ಮಕ್ಕಳ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಸರ್ಕಾರ ಚಿತ್ತ ಹರಿಸಿದೆ. ಹೀಗಾಗಿ ಬಜೆಟ್​ನಲ್ಲಿ ಹಣವನ್ನು ಮೀಸಲಿಟ್ಟಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತ ಬಲವರ್ಧನೆಗಾಗಿ 25 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ. ಇನ್ನು ಮೆದುಳಿನ ಆರೋಗ್ಯ ವೃದ್ಧಿಗೆ ಬ್ರೈನ್​ ಹೆಲ್ತ್​​ ಇನಿಶಿಯೇಟಿವ್​ ಯೋಜನೆಯ ಕೆಳಗೆ ರಾಜ್ಯಕ್ಕೆ ಹಬ್​ ಮತ್ತು ಸ್ಟೋಕ್​ ಮಾದರಿಯಲ್ಲಿ 25 ಕೋಟಿ ಮೀಸಲಿಟ್ಟಿದೆ. ನಿಮ್ಹಾನ್ಸ್​ ಸಹಯೋಗದೊಂದಿಗೆ ಈ ಕಾರ್ಯ ಕೈಗೊಳ್ಳಲಿದೆ.

ಕ್ಷಯ ರೋಗ

ಇದರ ಜೊತೆ ಜೊತೆಗೆ ಕ್ಷಯ ರೋಗವನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಲು8 ಜಿಲ್ಲೆಗಳಲ್ಲಿ ಸಮುದಾಯ ತಪಾಸನೆ ಮಾಡಲು ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

ಅಪ್ಪು ಸ್ಮರಿಸಿದ ಸಿದ್ದು ಬಜೆಟ್.. ಡಾ.ಪುನೀತ್ ರಾಜ್​ಕುಮಾರ್​ ಸ್ಮರಣಾರ್ಥ ಸರ್ಕಾರಿ ಆಸ್ಪತ್ರೆಗಳಿಗೆ ಏನ್ ಸಿಗುತ್ತೆ ಗೊತ್ತಾ?

https://newsfirstlive.com/wp-content/uploads/2023/07/Puneeth-rajkumar.jpg

    ಪವರ್​ ಸ್ಟಾರ್​​  ಪುನೀತ್​ ರಾಜ್​ ಕುಮಾರ್ ಸ್ಮರಣಾರ್ಥ

    ಸರ್ಕಾರಿ ಆಸ್ಪತ್ರೆಗೆ ಎಇಡಿ ಸಾಧನ ಅಳವಡಿಕೆ

    ಹೊಸದಾಗಿ 47 ಡಯಾಲಿಸಿಸ್​​ ಕೇಂದ್ರ ಸ್ಥಾಪನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಜ್ಯ ಬಜೆಟ್​ ಮಂಡಿಸಿದ್ದಾರೆ. 3.27 ಲಕ್ಷ ಕೋಟಿ ಅಂದಾಜಿನ ಬಜೆಟ್​ ಅನ್ನು ರಾಜ್ಯದ ಜನತೆಯ ಮುಂದೆ ಇಟ್ಟಿದ್ದಾರೆ. ಈ ಬಜೆಟ್​ನಲ್ಲಿ ದಿವಂಗತ ನಟ ಪುನೀತ್ ಅವರನ್ನು ನೆನಪಿಸಿಕೊಂಡಿದ್ದು, ​ ಅವರ ಸ್ಮರಣಾರ್ಥವಾಗಿ ಸರ್ಕಾರಿ ಆಸ್ಪತ್ರೆಗೆ ಎಇಡಿ ಸಾಧನ ಅಳವಡಿಕೆ ಮಾಡುವುದಾಗಿ ಉಲ್ಲೇಖಿಸಿದ್ದಾರೆ.

ಪವರ್​ ಸ್ಟಾರ್​​  ಪುನೀತ್​ ರಾಜ್​ ಕುಮಾರ್​ ಹೃದಯಾಘಾತದಿಂದ ನಿಧನರಾದರು. ಇವರ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಾಯಿತು. ಆದರೆ ರಾಜ್ಯದಲ್ಲಿ ಕಂಡುಬರುವ ಹಠಾತ್​ ಹಾರ್ಟ್​ ಅಟ್ಯಾಕ್​ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಪುನೀತ್​ ರಾಜ್​ ಕುಮಾರ್​ ಸ್ಮರಣಾರ್ಥ ರಾಜ್ಯದ ಎಲ್ಲಾ  ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್​​ (ಎಇಡಿ) ಸಾಧನ ಅಳವಡಿಸಲು ಸರ್ಕಾರ ಮುಂದಾಗಿದೆ.

ಡಯಾಲಿಸಿಸ್​​ ಕೇಂದ್ರ ಸ್ಥಾಪನೆ

ಇವಿಷ್ಟು ಮಾತ್ರವಲ್ಲದೆ, ಹೊಸದಾಗಿ 47 ಡಯಾಲಿಸಿಸ್​​ ಕೇಂದ್ರ ಸ್ಥಾಪನೆ, 23 ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನಿನ್ನೆ ಮಂಡಿಸಿದ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಕ್ಷೇತ್ರಕ್ಕೆ 14,950 ಕೋಟಿ ಮೀಸಲಿಟ್ಟಿದ್ದಾರೆ.

ಡಿಜಿಟಲ್​ ಹೆಲ್ತ್​​ ಸೊಸೈಟಿ

ರಾಜ್ಯದ ಜನರ ಆರೋಗ್ಯ ದೃಷ್ಟಿಯನ್ನು ಗಮನಹರಿಸಿಕೊಂಡು ಕರ್ನಾಟಕದಲ್ಲಿ ಆರೋಗ್ಯ ತಂತ್ರಜ್ನಾನ ಪ್ರಯೋಗಾಲಯವನ್ನು ಸ್ಥಾಪಿಸಲು ಯೋಚಿಸಿದೆ. ಹೀಗಾಗಿ 8 ಕೋಟಿ ರೂ ಮೀಸಲಿಟ್ಟಿದೆ. ಇದರ ಜೊತೆಗೆ ಆಯುಷ್ಮಾನ್​ ಡಿಜಿಟಲ್​ ಮಿಷನ್​ ಯೋಜನೆ ಹಾಗೂ ಆರೀಗ್ಯ ಡಿಜಿಟಲ್​​ ಡಿಜಿಟೀಕರಣ ಉಪಕ್ರಮ ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್​ ಹೆಲ್ತ್​ ಸೊಸೈಟಿ ಸ್ಥಾಪಿಸಲು ನಿರ್ಧರಿಸಿದೆ.

ನವಜಾತ ಶಿಶುಗಳು, ಮಕ್ಕಳ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಲುವಾಗಿ ಸರ್ಕಾರ ಚಿತ್ತ ಹರಿಸಿದೆ. ಹೀಗಾಗಿ ಬಜೆಟ್​ನಲ್ಲಿ ಹಣವನ್ನು ಮೀಸಲಿಟ್ಟಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತ ಬಲವರ್ಧನೆಗಾಗಿ 25 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ. ಇನ್ನು ಮೆದುಳಿನ ಆರೋಗ್ಯ ವೃದ್ಧಿಗೆ ಬ್ರೈನ್​ ಹೆಲ್ತ್​​ ಇನಿಶಿಯೇಟಿವ್​ ಯೋಜನೆಯ ಕೆಳಗೆ ರಾಜ್ಯಕ್ಕೆ ಹಬ್​ ಮತ್ತು ಸ್ಟೋಕ್​ ಮಾದರಿಯಲ್ಲಿ 25 ಕೋಟಿ ಮೀಸಲಿಟ್ಟಿದೆ. ನಿಮ್ಹಾನ್ಸ್​ ಸಹಯೋಗದೊಂದಿಗೆ ಈ ಕಾರ್ಯ ಕೈಗೊಳ್ಳಲಿದೆ.

ಕ್ಷಯ ರೋಗ

ಇದರ ಜೊತೆ ಜೊತೆಗೆ ಕ್ಷಯ ರೋಗವನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಲು8 ಜಿಲ್ಲೆಗಳಲ್ಲಿ ಸಮುದಾಯ ತಪಾಸನೆ ಮಾಡಲು ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More