newsfirstkannada.com

1983ರಲ್ಲಿ ವಿಶ್ವಕಪ್​ ಗೆದ್ದಾಗ BCCI ಬಳಿ ಆಟಗಾರರಿಗೆ ನೀಡಲು ಹಣವಿರಲಿಲ್ಲ.. ಲತಾ ಮಂಗೇಶ್ಕರ್ ಮಾಡಿದ್ದರು ಸಹಾಯ

Share :

19-11-2023

    ಲತಾ ಮಂಗೇಶ್ಕರ್​ ಮಾಡಿದ ಸಹಾಯವನ್ನು ಸ್ಮರಿಸುತ್ತಿದೆ BCCI

    ಅಂದು ವಿಶ್ವಕಪ್​ ಗೆದ್ದ ಧೀರರಿಗೆ ನೀಡಲು ಬಿಸಿಸಿಐ ಬಳಿ ಹಣವಿರಲಿಲ್ಲ

    BCCI ಬಳಿ ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ಸಹಾಯ ಮಾಡಿದ್ದ ಲತಾ ಮಂಗೇಶ್ಕರ್​

1983ರಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್​ ಟ್ರೋಪಿ ಗೆದ್ದಿತು. ಕಪಿಲ್​ ದೇವ್​ ನಾಯಕತ್ವದ ತಂಡ ಜಯವನ್ನು ತನ್ನಗಾಗಿಸುವ ಮೂಲಕ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಆದರೆ ಆ ಸಮಯದಲ್ಲಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಹಣ ನೀಡಲು ಬಿಸಿಸಿಐ ಬಳಿ ಅಷ್ಟೊಂದು ಹಣ ಇರಲಿಲ್ಲ ಎಂದರೆ ನಂಬುತ್ತೀರಾ? ಆ ಸಮಯದಲ್ಲಿ ಬಿಸಿಸಿಐ ಕೈ ಹಿಡಿದದ್ದು ಯಾರು ಗೊತ್ತಾ? ಭಾರತದ ಗಾನ ಕೋಗಿಲೆ ಎಂದರೆ ನಂಬಲೇಬೇಕು.

ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿಯಾದ ಬಿಸಿಸಿಐ ಅಂದಿನ ಸ್ಥಿತಿ ಮಾತ್ರ ಕೆಟ್ಟದಾಗಿತ್ತು. ಆಗಿನ ಬಿಸಿಸಿಐ ಅಧ್ಯಕ್ಷ ಎನ್​ಕೆಪಿ ಸಾಳ್ವೆ ಭಾರತೀಯ ಕ್ರಿಕೆಟಿಗರಿಗೆ ಪ್ರಶಸ್ತಿ ನೀಡಲು ಮುಂದಾದರು . ಆದರೆ ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಈ ಸಮಯದಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ ಅವರ ಸಹಾಯ ಕೋರಿದ್ದರಂತೆ.

ಹೌದು. ಅಂದು ಭಾರತ ತಂಡ ವಿಜಯೋತ್ಸವ ಆಚರಿಸಲು ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್​ ಅವರನ್ನು ಬರಮಾಡಿಕೊಂಡಿದ್ದರು. ಮಾತ್ರವಲ್ಲದೆ ಅವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ವಿಶ್ವಕಪ್​ ಗೆದ್ದ ಆಟಗಾರರಿಗೆ ಅಂದು ನೀಡಲು ಏನು ಇಲ್ಲದ ಕಾರಣ ಲತಾ ಮಂಗೇಶ್ಕರ್​ ತಲಾ ಒಬ್ಬೊಬ್ಬ ಆಟಗಾರರಿಗೆ ಒಂದೊಂದು ಲಕ್ಷವನ್ನು ಬಹುಮಾನವನ್ನಾಗಿ ನೀಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಅಂದು ಲತಾ ಮಂಗೇಶ್ಕರ್​ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು ಸಹ ಬಿಸಿಸಿಐ ಬಳಿ ಒಂದು ರೂಪಾಯಿಯನ್ನು ಸಹ ತೆಗೆದುಕೊಂಡಿಲ್ಲ. ಇವರ ಸಹಾಯವನ್ನು ಬಿಸಿಸಿಐ ಇಂದಿಗೂ ಸ್ಮರಿಸುತ್ತಿದೆ. ಮಾತ್ರವಲ್ಲದೆ ಲತಾ ಮಂಗೇಶ್ಕರ್​ ಬದುಕಿರುವಾಗ ಭಾರತದ ಪ್ರತಿಯೊಂದು ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಅವರಿಸಗೆ ಆಸನವನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1983ರಲ್ಲಿ ವಿಶ್ವಕಪ್​ ಗೆದ್ದಾಗ BCCI ಬಳಿ ಆಟಗಾರರಿಗೆ ನೀಡಲು ಹಣವಿರಲಿಲ್ಲ.. ಲತಾ ಮಂಗೇಶ್ಕರ್ ಮಾಡಿದ್ದರು ಸಹಾಯ

https://newsfirstlive.com/wp-content/uploads/2023/11/tweaml.jpg

    ಲತಾ ಮಂಗೇಶ್ಕರ್​ ಮಾಡಿದ ಸಹಾಯವನ್ನು ಸ್ಮರಿಸುತ್ತಿದೆ BCCI

    ಅಂದು ವಿಶ್ವಕಪ್​ ಗೆದ್ದ ಧೀರರಿಗೆ ನೀಡಲು ಬಿಸಿಸಿಐ ಬಳಿ ಹಣವಿರಲಿಲ್ಲ

    BCCI ಬಳಿ ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ಸಹಾಯ ಮಾಡಿದ್ದ ಲತಾ ಮಂಗೇಶ್ಕರ್​

1983ರಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್​ ಟ್ರೋಪಿ ಗೆದ್ದಿತು. ಕಪಿಲ್​ ದೇವ್​ ನಾಯಕತ್ವದ ತಂಡ ಜಯವನ್ನು ತನ್ನಗಾಗಿಸುವ ಮೂಲಕ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಆದರೆ ಆ ಸಮಯದಲ್ಲಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಹಣ ನೀಡಲು ಬಿಸಿಸಿಐ ಬಳಿ ಅಷ್ಟೊಂದು ಹಣ ಇರಲಿಲ್ಲ ಎಂದರೆ ನಂಬುತ್ತೀರಾ? ಆ ಸಮಯದಲ್ಲಿ ಬಿಸಿಸಿಐ ಕೈ ಹಿಡಿದದ್ದು ಯಾರು ಗೊತ್ತಾ? ಭಾರತದ ಗಾನ ಕೋಗಿಲೆ ಎಂದರೆ ನಂಬಲೇಬೇಕು.

ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿಯಾದ ಬಿಸಿಸಿಐ ಅಂದಿನ ಸ್ಥಿತಿ ಮಾತ್ರ ಕೆಟ್ಟದಾಗಿತ್ತು. ಆಗಿನ ಬಿಸಿಸಿಐ ಅಧ್ಯಕ್ಷ ಎನ್​ಕೆಪಿ ಸಾಳ್ವೆ ಭಾರತೀಯ ಕ್ರಿಕೆಟಿಗರಿಗೆ ಪ್ರಶಸ್ತಿ ನೀಡಲು ಮುಂದಾದರು . ಆದರೆ ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಈ ಸಮಯದಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ ಅವರ ಸಹಾಯ ಕೋರಿದ್ದರಂತೆ.

ಹೌದು. ಅಂದು ಭಾರತ ತಂಡ ವಿಜಯೋತ್ಸವ ಆಚರಿಸಲು ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್​ ಅವರನ್ನು ಬರಮಾಡಿಕೊಂಡಿದ್ದರು. ಮಾತ್ರವಲ್ಲದೆ ಅವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ವಿಶ್ವಕಪ್​ ಗೆದ್ದ ಆಟಗಾರರಿಗೆ ಅಂದು ನೀಡಲು ಏನು ಇಲ್ಲದ ಕಾರಣ ಲತಾ ಮಂಗೇಶ್ಕರ್​ ತಲಾ ಒಬ್ಬೊಬ್ಬ ಆಟಗಾರರಿಗೆ ಒಂದೊಂದು ಲಕ್ಷವನ್ನು ಬಹುಮಾನವನ್ನಾಗಿ ನೀಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಅಂದು ಲತಾ ಮಂಗೇಶ್ಕರ್​ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು ಸಹ ಬಿಸಿಸಿಐ ಬಳಿ ಒಂದು ರೂಪಾಯಿಯನ್ನು ಸಹ ತೆಗೆದುಕೊಂಡಿಲ್ಲ. ಇವರ ಸಹಾಯವನ್ನು ಬಿಸಿಸಿಐ ಇಂದಿಗೂ ಸ್ಮರಿಸುತ್ತಿದೆ. ಮಾತ್ರವಲ್ಲದೆ ಲತಾ ಮಂಗೇಶ್ಕರ್​ ಬದುಕಿರುವಾಗ ಭಾರತದ ಪ್ರತಿಯೊಂದು ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಅವರಿಸಗೆ ಆಸನವನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More