newsfirstkannada.com

2011ರ ವಿಶ್ವಕಪ್​ ಗೆದ್ದ ದಿನ ಧೋನಿ ತಲೆ ಬೋಳಿಸಿಕೊಂಡಿದ್ದು ಯಾಕೆ ಗೊತ್ತಾ? ಅಂದು ದೇವರ ಮೊರೆ ಹೋಗಿದ್ರಾ ಮಾಹಿ?

Share :

16-08-2023

    ಮಾಹಿ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಇಲ್ಲಿದೆ

    ಮಹೇಂದ್ರ ಸಿಂಗ್​ ಧೋನಿ ಅಂದು ದೇವರಿಕೆ ಹರಕೆ ಕಟ್ಟಿಕೊಂಡಿದ್ರಾ?

    ರಾಂಚಿಯ ಮಾಹಿ ತಿರುಪತಿ ತಿಮ್ಮಪ್ಪನ ಪರಮ ಭಕ್ತನೇ? ಸಖತ್ತಿದೆ ಈ ಸ್ಟೋರಿ

2011ರ ವಿಶ್ವಕಪ್​ ಗೆದ್ದ ರಾತ್ರಿಯೇ ಧೋನಿ ಹೆರ್​ಕಟ್ ಮಾಡಿಸಿದ್ದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಇಂದಿಗೂ ಹಲವರಿಗೆ ಉತ್ತರ ಗೊತ್ತಿಲ್ಲ. ಅವತ್ತಿನ ರಾತ್ರಿ ನಡೆದಿದ್ದೇನು ಅನ್ನೋದರ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.

2011ರ ಏಕದಿನ ವಿಶ್ವಕಪ್​ ಗೆಲುವು ಭಾರತೀಯರ ಪಾಲಿಗೆ ಅವಿಸ್ಮರಣೀಯ ಕ್ಷಣ. 28 ವರ್ಷಗಳ ಬಳಿಕ ವಿಶ್ವ ಕೀರಿಟಕ್ಕೆ ಮುತ್ತಿಟ್ಟ ಆ ಕ್ಷಣವನ್ನ ಮರೆಯಲು ಸಾಧ್ಯವೇ ಇಲ್ಲ. ಆ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಧೋನಿ ಹೆಡ್​ ಶೇವ್​ ಮಾಡಿಸಿಕೊಂಡು ಕೊಟ್ಟ ಸರ್​ಪ್ರೈಸ್​ ಶಾಕ್​, ಇಂದಿಗೂ ಹಲವರಿಗೆ ಅರ್ಥವೇ ಆಗಿಲ್ಲ.

ಧೋನಿ ಕೊಟ್ಟ ಸರ್​​ಪ್ರೈಸ್​ ಶಾಕ್

ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದಿದ್ದು ಏಪ್ರಿಲ್​ 2 ತಡರಾತ್ರಿ. ಆಟಗಾರರು ಹೋಟೆಲ್​​ಗೆ ತೆರಳಿ ಅಲ್ಲಿ ಸಂಭ್ರಮಾರಣೆ ಮುಗಿಸಿ ಮಲಗುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತಂತೆ. ಬೆಳಗ್ಗೆ ಎದ್ದಾಗ ಆಟಗಾರರಿಗೆಲ್ಲಾ ಧೋನಿ ಸರ್​​ಪ್ರೈಸ್​ ಶಾಕ್​ ಕೊಟ್ಟಿದ್ರು. ರಾತ್ರಿ ಮಲಗುವಾಗ ಇದ್ದ ಧೋನಿ ತಲೆ ಕೂದಲು ಬೆಳಗಾಗುವಷ್ಟರಲ್ಲಿ ಮಾಯವಾಗಿತ್ತು. ಇದನ್ನ ಕಂಡ ಅಭಿಮಾನಿಗಳೂ ಕೂಡ ಬೆರಗಾಗಿದ್ರು. ಇದ್ರ ಹಿಂದಿನ ಕಾರಣ ಧೋನಿಯ ದೈವಭಕ್ತಿ.

ಧೋನಿ ಮತ್ತು ಸಾಕ್ಷಿ ಧೋನಿ
ಧೋನಿ ಮತ್ತು ಸಾಕ್ಷಿ ಧೋನಿ

ತಿರುಪತಿ ತಿಮ್ಮಪ್ಪನ ಭಕ್ತ

ವಿಶ್ವಕಪ್​ಗೂ ಮುನ್ನ ತಾವು ತುಂಬಾ ನಂಬ್ತಿದ್ದ ರಾಂಚಿಯ ದೇವರಲ್ಲಿ ಧೋನಿ ಮುಡಿಕೊಡುವ ಹರಕೆ ಮಾಡಿಕೊಂಡಿದ್ರು. ಹೀಗಾಗಿ, ವಿಶ್ವಕಪ್​ ಗೆದ್ದ ದಿನ ರಾತ್ರಿ, ಧೋನಿ ತಾವು ಹರಕೆ ಮಾಡಿಕೊಂಡಿದ್ದ ದೇವಸ್ಥಾನದ ಪೂಜಾರಿಗಳು ತಿಳಿಸಿದಂತೆ, ರಾತ್ರಿ 2.45ರಿಂದ 3ಗಂಟೆಯ ಅವಧಿಯಲ್ಲಿ ಮುಡಿ ತೆಗೆಸಿಕೊಂಡಿದ್ರು. ಇಷ್ಟೇ ಅಲ್ಲದೆ, ಆ ಕೂದಲನ್ನ ಧೋನಿ, ತಿರುಮಲ ತಿರುಪತಿಗೆ ಕೂದಲು ಕಳುಹಿಸಿಕೊಟ್ಟಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2011ರ ವಿಶ್ವಕಪ್​ ಗೆದ್ದ ದಿನ ಧೋನಿ ತಲೆ ಬೋಳಿಸಿಕೊಂಡಿದ್ದು ಯಾಕೆ ಗೊತ್ತಾ? ಅಂದು ದೇವರ ಮೊರೆ ಹೋಗಿದ್ರಾ ಮಾಹಿ?

https://newsfirstlive.com/wp-content/uploads/2023/08/Mahendra-Singh-Dhoni.jpg

    ಮಾಹಿ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಇಲ್ಲಿದೆ

    ಮಹೇಂದ್ರ ಸಿಂಗ್​ ಧೋನಿ ಅಂದು ದೇವರಿಕೆ ಹರಕೆ ಕಟ್ಟಿಕೊಂಡಿದ್ರಾ?

    ರಾಂಚಿಯ ಮಾಹಿ ತಿರುಪತಿ ತಿಮ್ಮಪ್ಪನ ಪರಮ ಭಕ್ತನೇ? ಸಖತ್ತಿದೆ ಈ ಸ್ಟೋರಿ

2011ರ ವಿಶ್ವಕಪ್​ ಗೆದ್ದ ರಾತ್ರಿಯೇ ಧೋನಿ ಹೆರ್​ಕಟ್ ಮಾಡಿಸಿದ್ದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಇಂದಿಗೂ ಹಲವರಿಗೆ ಉತ್ತರ ಗೊತ್ತಿಲ್ಲ. ಅವತ್ತಿನ ರಾತ್ರಿ ನಡೆದಿದ್ದೇನು ಅನ್ನೋದರ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.

2011ರ ಏಕದಿನ ವಿಶ್ವಕಪ್​ ಗೆಲುವು ಭಾರತೀಯರ ಪಾಲಿಗೆ ಅವಿಸ್ಮರಣೀಯ ಕ್ಷಣ. 28 ವರ್ಷಗಳ ಬಳಿಕ ವಿಶ್ವ ಕೀರಿಟಕ್ಕೆ ಮುತ್ತಿಟ್ಟ ಆ ಕ್ಷಣವನ್ನ ಮರೆಯಲು ಸಾಧ್ಯವೇ ಇಲ್ಲ. ಆ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಧೋನಿ ಹೆಡ್​ ಶೇವ್​ ಮಾಡಿಸಿಕೊಂಡು ಕೊಟ್ಟ ಸರ್​ಪ್ರೈಸ್​ ಶಾಕ್​, ಇಂದಿಗೂ ಹಲವರಿಗೆ ಅರ್ಥವೇ ಆಗಿಲ್ಲ.

ಧೋನಿ ಕೊಟ್ಟ ಸರ್​​ಪ್ರೈಸ್​ ಶಾಕ್

ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದಿದ್ದು ಏಪ್ರಿಲ್​ 2 ತಡರಾತ್ರಿ. ಆಟಗಾರರು ಹೋಟೆಲ್​​ಗೆ ತೆರಳಿ ಅಲ್ಲಿ ಸಂಭ್ರಮಾರಣೆ ಮುಗಿಸಿ ಮಲಗುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತಂತೆ. ಬೆಳಗ್ಗೆ ಎದ್ದಾಗ ಆಟಗಾರರಿಗೆಲ್ಲಾ ಧೋನಿ ಸರ್​​ಪ್ರೈಸ್​ ಶಾಕ್​ ಕೊಟ್ಟಿದ್ರು. ರಾತ್ರಿ ಮಲಗುವಾಗ ಇದ್ದ ಧೋನಿ ತಲೆ ಕೂದಲು ಬೆಳಗಾಗುವಷ್ಟರಲ್ಲಿ ಮಾಯವಾಗಿತ್ತು. ಇದನ್ನ ಕಂಡ ಅಭಿಮಾನಿಗಳೂ ಕೂಡ ಬೆರಗಾಗಿದ್ರು. ಇದ್ರ ಹಿಂದಿನ ಕಾರಣ ಧೋನಿಯ ದೈವಭಕ್ತಿ.

ಧೋನಿ ಮತ್ತು ಸಾಕ್ಷಿ ಧೋನಿ
ಧೋನಿ ಮತ್ತು ಸಾಕ್ಷಿ ಧೋನಿ

ತಿರುಪತಿ ತಿಮ್ಮಪ್ಪನ ಭಕ್ತ

ವಿಶ್ವಕಪ್​ಗೂ ಮುನ್ನ ತಾವು ತುಂಬಾ ನಂಬ್ತಿದ್ದ ರಾಂಚಿಯ ದೇವರಲ್ಲಿ ಧೋನಿ ಮುಡಿಕೊಡುವ ಹರಕೆ ಮಾಡಿಕೊಂಡಿದ್ರು. ಹೀಗಾಗಿ, ವಿಶ್ವಕಪ್​ ಗೆದ್ದ ದಿನ ರಾತ್ರಿ, ಧೋನಿ ತಾವು ಹರಕೆ ಮಾಡಿಕೊಂಡಿದ್ದ ದೇವಸ್ಥಾನದ ಪೂಜಾರಿಗಳು ತಿಳಿಸಿದಂತೆ, ರಾತ್ರಿ 2.45ರಿಂದ 3ಗಂಟೆಯ ಅವಧಿಯಲ್ಲಿ ಮುಡಿ ತೆಗೆಸಿಕೊಂಡಿದ್ರು. ಇಷ್ಟೇ ಅಲ್ಲದೆ, ಆ ಕೂದಲನ್ನ ಧೋನಿ, ತಿರುಮಲ ತಿರುಪತಿಗೆ ಕೂದಲು ಕಳುಹಿಸಿಕೊಟ್ಟಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More