ಆ ಕಾರಣಕ್ಕೆ ವಿಶ್ವಕಪ್ನಲ್ಲಿ ಸ್ಲೋ ಬ್ಯಾಟಿಂಗ್ ಮಾಡಿದ್ರಾ ಮಾಹಿ?
'ಧೋನಿ ಶೂನ್ಯ'..'ಮೀಡಿಯಾದಿಂದಲೇ ದೇವರಾದ MS ಧೋನಿ'
ಕೂಲ್ ಕ್ಯಾಪ್ಟನ್ನನ್ನು ಕಂಡ್ರೆ ಕೆಂಡಾಮಂಡಲ ಆಗೋದ್ಯಾಕೆ..?
ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾಗೆ 3 ಐಸಿಸಿ ಟ್ರೋಫಿ ಗೆದ್ದು ಕೊಟ್ಟಿರುವ ನಾಯಕ. ಇಂಥಹ ಸಕ್ಸಸ್ಫುಲ್ ಕ್ಯಾಪ್ಟನ್ ಧೋನಿಯ ನೀವ್ ನೋಡಿರದ ಮತ್ತೊಂದು ಮುಖವಿದೆಯಂತೆ. ಅದರಲ್ಲೂ 2019ರ ಏಕದಿನ ವಿಶ್ವಕಪ್ನಲ್ಲಿ ಧೋನಿ ರನೌಟ್ ಹಿಂದೆ ಮೋಸದಾಟ ಇದೆಯಾ..? ಇಂಥ ಆರೋಪ ಮಾಡಿದ್ದಾದ್ರೂ ಯಾರು..?
ಜುಲೈ 09, 2019 ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ಚಿದ್ರವಾಗಿದ್ದ ದಿನ. ಈ ದಿನಕ್ಕೆ ಬರೋಬ್ಬರಿ 4 ವರ್ಷ 4 ದಿನಗಳು ತುಂಬಿದೆ. ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಆಗಿದ್ದ ರನೌಟ್ ಪರಿ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಈ ರನೌಟ್ ಬಳಿಕ ಸ್ವತಃ ಧೋನಿ ಕಣ್ಣೀರಿಟ್ಟಿದ್ದರು. ಭಾರವಾದ ಹೃದಯದೊಂದಿಗೆ ಪವಿಲಿಯನ್ಗೆ ಹೆಜ್ಜೆ ಹಾಕಿದ್ದರು.
ಈ ಘಟನೆ ಮುಗೀದು ನಾಲ್ಕು ವರ್ಷಗಳೇ ಮುಗಿದಿದೆ. ಅಷ್ಟೇ ಅಲ್ಲ. ಮತ್ತೊಂದು ಏಕದಿನ ವಿಶ್ವಕಪ್ ಆರಂಭಕ್ಕೂ ಕೌಂಟ್ಡೌನ್ ಶುರುವಾಗ್ತಿದೆ. ಈ ಹೊತ್ತಲ್ಲೇ ಮತ್ತೆ ಧೋನಿ ರನೌಟ್ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆಲ್ಲ ಕಾರಣ ಮಾಜಿ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್.
ಧೋನಿಗೆ ರನೌಟ್ ಹಿಂದಿತ್ತಾ ದುರಾಲೋಚನೆ..?
ಮಾಹಿ, ಟೀಮ್ ಇಂಡಿಯಾಗೆ 3 ಐಸಿಸಿ ಟ್ರೋಫಿಗಳನ್ನ ಗೆದ್ದು ಕೊಟ್ಟ ನಾಯಕ. ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ. ಆದ್ರೆ, 2019ರ ಏಕದಿನ ವಿಶ್ವಕಪ್ ಕನಸು ಭಗ್ನಗೊಳ್ಳೋಕೆ ಕಾರಣ ಧೋನಿಯ ರನೌಟ್ ಅನ್ನೋದು ಎಲ್ಲರಿಗೋ ಗೊತ್ತಿರೋ ವಿಚಾರ. ಆದ್ರೆ, ಧೋನಿ ರನೌಟ್ ಹಿಂದೆ ದುರಾಲೋಚನೆಯಂತೆ, ಈ ಆರೋಪ ಹೇಳ್ತಿರೋದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್.
2019ರಲ್ಲೇ ಈ ಬಗ್ಗೆ ಹೇಳಿಕೆ ನೀಡಿದ್ದ ಯೋಗರಾಜ್ ಸಿಂಗ್, ಧೋನಿ ಸ್ಲೋ ಬ್ಯಾಟಿಂಗ್ ಹಾಗೂ ರನೌಟ್ ಬಗ್ಗೆ ಕೆಂಡಕಾರಿದ್ದರು. ಕೊಹ್ಲಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಆಸೆ ಇಲ್ಲದೆಯೇ ಧೋನಿ ರನೌಟ್ ಆಗಿದ್ರು. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದ ಮತ್ತೊಬ್ಬ ನಾಯಕನ ಅಡಿ ವಿಶ್ವಕಪ್ ಗೆಲ್ಲಬಾರದು ಅನ್ನೋ ದುರಾಸೆ ಅಂತೆಲ್ಲ ವಾಗ್ದಾಳಿ ನಡೆಸಿದ್ದರು. ಇದೀಗ ಮತ್ತೆ ಟ್ವಿಟರ್ನಲ್ಲಿ ಅದೇ ವಿಡಿಯೋ ಪೋಸ್ಟ್ ಮಾಡಿರೋ ಯೋಗರಾಜ್ ಸಿಂಗ್, ಮತ್ತೆ ಮಾಹಿಯನ್ನ ಟಾರ್ಗೆಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ನನ್ನ ರಕ್ತ ಕುದಿಯುತ್ತಿದೆ ಎಂದು ಬರೆದುಕೊಂಡಿರೋ ಯೋಗರಾಜ್, ತನ್ನ ಸಂಪೂರ್ಣ ಸಂದರ್ಶನ ಕೊನೆಯವರೆಗೂ ನೋಡುವಂತೆ ಕ್ರಿಕೆಟ್ ಫ್ಯಾನ್ಸ್ಗೆ ಕೇಳಿಕೊಂಡಿದ್ದಾರೆ.
ಇದೇ ಮೊದಲಲ್ಲ ಯೋಗರಾಜ್ ಸಿಂಗ್ರ ಟಾರ್ಗೆಟ್
ಧೋನಿಯನ್ನ ಯೋಗರಾಜ್ ಸಿಂಗ್ ಇದೇ ಮೊದಲ ಸಲ ಟಾರ್ಗೆಟ್ ಮಾಡ್ತಿಲ್ಲ. ಈ ಹಿಂದೆ ಹಲವು ಸಲ ಧೋನಿ ವಿರುದ್ಧ ಗುಡುಗಿದ್ದಾರೆ. ಅದರಲ್ಲೂ 2015ರ ಏಕದಿನ ವಿಶ್ವಕಪ್ ತಂಡದಲ್ಲಿ ಯುವರಾಜ್ಗೆ ಸ್ಥಾನ ನೀಡದಕ್ಕಾಗಿ ನಿಂದಿಸಿದ್ದರು. ಯುವರಾಜ್ ಸಿಂಗ್ ಕರಿಯರ್ ಖತಂ ಆಗೋಕೆ ಧೋನಿ ಕಾರಣ ಅಂತೆಲ್ಲ ಟೀಕಿಸಿದ್ದರು.
ಇದನ್ನು ಓದಿ: ಪೂಜಾರ ವಿಚಿತ್ರ ನಡೆ.. ನೀರು ಕುಡಿಯಲಿ, ಹಣ್ಣು ತಿನ್ನಲಿ ಚೇತೇಶ್ವರ್ಗೆ ಇದು ಬೇಕೆಬೇಕು..!
ಅಷ್ಟೇ ಅಲ್ಲ, ಮಾಹಿ ಸಾಧನೆಗಳನ್ನ ಒಪ್ಪಿಕೊಳ್ಳದ ಯೋಗರಾಜ್ ಸಿಂಗ್, ಮೀಡಿಯಾಗಳೇ ಧೋನಿಯನ್ನ ದೇವರನ್ನಾಗಿಸಿವೆ ಅಂತಾ ಕಿಡಿಕಾರಿದ್ದರು. ಆದ್ರೆ, 3 ವರ್ಷಗಳ ಬಳಿಕ ಯುವರಾಜ್ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದೇ ತಡ ಕ್ಷಮಿಸುಬಿಡು ಧೋನಿ ಎಂದು ಮೊಸಳೆ ಕಣ್ಣೀರು ಹಾಕಿದ್ದರು.
ಧೋನಿ ಟೀಕಿಸಿದರೆ ಸಾಧನೆಗಳು ಸುಳ್ಳಾಗುತ್ತಾ..?
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಎಷ್ಟೇ ಟೀಕೆ ಟಿಪ್ಪಣೆಗಳು ಮಾಡಿದ್ರು. ಧೋನಿ ಎಂದಿಗೂ ಅಭಿಮಾನಿಗಳ ಪಾಲಿನ ಯುಗಪುರುಷನೆ. ಯಾಕಂದ್ರೆ, ಧೋನಿ ಕ್ರಿಕೆಟ್ ಎಂಬ ಜಂಟಲ್ಮನ್ಗೆ ಸಿಕ್ಕ ಅತ್ಯದ್ಭುತ ಮಾಣಿಕ್ಯ. ಇದಕ್ಕೆ ಸಾಕ್ಷಿ ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗೇ ಧೋನಿ ಫ್ಯಾನ್ಸ್, ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ..? ಧೋನಿ ಟೀಕಿಸಿದರೆ ಸಾಧನೆಗಳು ಸುಳ್ಳಾಗ್ತಾವಾ ಎಂದು ಟಾಂಗ್ ನೀಡ್ತಿದ್ದಾರೆ. ಯಾರೇ ಏನೇ ಹೇಳಲಿ.. ಟೀಕಿಸಲಿ.. ಧೋನಿ, ಕ್ರಿಕೆಟ್ ಎಂಬ ಜಂಟಲಮನ್ ಗೇಮ್ಗೆ ಸಿಕ್ಕ ರಿಯಲ್ ಜಂಟಲ್ಮ್ಯಾನ್ ಅನ್ನೋದನ್ನ ಮರೆಯುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಆ ಕಾರಣಕ್ಕೆ ವಿಶ್ವಕಪ್ನಲ್ಲಿ ಸ್ಲೋ ಬ್ಯಾಟಿಂಗ್ ಮಾಡಿದ್ರಾ ಮಾಹಿ?
'ಧೋನಿ ಶೂನ್ಯ'..'ಮೀಡಿಯಾದಿಂದಲೇ ದೇವರಾದ MS ಧೋನಿ'
ಕೂಲ್ ಕ್ಯಾಪ್ಟನ್ನನ್ನು ಕಂಡ್ರೆ ಕೆಂಡಾಮಂಡಲ ಆಗೋದ್ಯಾಕೆ..?
ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾಗೆ 3 ಐಸಿಸಿ ಟ್ರೋಫಿ ಗೆದ್ದು ಕೊಟ್ಟಿರುವ ನಾಯಕ. ಇಂಥಹ ಸಕ್ಸಸ್ಫುಲ್ ಕ್ಯಾಪ್ಟನ್ ಧೋನಿಯ ನೀವ್ ನೋಡಿರದ ಮತ್ತೊಂದು ಮುಖವಿದೆಯಂತೆ. ಅದರಲ್ಲೂ 2019ರ ಏಕದಿನ ವಿಶ್ವಕಪ್ನಲ್ಲಿ ಧೋನಿ ರನೌಟ್ ಹಿಂದೆ ಮೋಸದಾಟ ಇದೆಯಾ..? ಇಂಥ ಆರೋಪ ಮಾಡಿದ್ದಾದ್ರೂ ಯಾರು..?
ಜುಲೈ 09, 2019 ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ಚಿದ್ರವಾಗಿದ್ದ ದಿನ. ಈ ದಿನಕ್ಕೆ ಬರೋಬ್ಬರಿ 4 ವರ್ಷ 4 ದಿನಗಳು ತುಂಬಿದೆ. ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಆಗಿದ್ದ ರನೌಟ್ ಪರಿ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಈ ರನೌಟ್ ಬಳಿಕ ಸ್ವತಃ ಧೋನಿ ಕಣ್ಣೀರಿಟ್ಟಿದ್ದರು. ಭಾರವಾದ ಹೃದಯದೊಂದಿಗೆ ಪವಿಲಿಯನ್ಗೆ ಹೆಜ್ಜೆ ಹಾಕಿದ್ದರು.
ಈ ಘಟನೆ ಮುಗೀದು ನಾಲ್ಕು ವರ್ಷಗಳೇ ಮುಗಿದಿದೆ. ಅಷ್ಟೇ ಅಲ್ಲ. ಮತ್ತೊಂದು ಏಕದಿನ ವಿಶ್ವಕಪ್ ಆರಂಭಕ್ಕೂ ಕೌಂಟ್ಡೌನ್ ಶುರುವಾಗ್ತಿದೆ. ಈ ಹೊತ್ತಲ್ಲೇ ಮತ್ತೆ ಧೋನಿ ರನೌಟ್ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆಲ್ಲ ಕಾರಣ ಮಾಜಿ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್.
ಧೋನಿಗೆ ರನೌಟ್ ಹಿಂದಿತ್ತಾ ದುರಾಲೋಚನೆ..?
ಮಾಹಿ, ಟೀಮ್ ಇಂಡಿಯಾಗೆ 3 ಐಸಿಸಿ ಟ್ರೋಫಿಗಳನ್ನ ಗೆದ್ದು ಕೊಟ್ಟ ನಾಯಕ. ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ. ಆದ್ರೆ, 2019ರ ಏಕದಿನ ವಿಶ್ವಕಪ್ ಕನಸು ಭಗ್ನಗೊಳ್ಳೋಕೆ ಕಾರಣ ಧೋನಿಯ ರನೌಟ್ ಅನ್ನೋದು ಎಲ್ಲರಿಗೋ ಗೊತ್ತಿರೋ ವಿಚಾರ. ಆದ್ರೆ, ಧೋನಿ ರನೌಟ್ ಹಿಂದೆ ದುರಾಲೋಚನೆಯಂತೆ, ಈ ಆರೋಪ ಹೇಳ್ತಿರೋದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್.
2019ರಲ್ಲೇ ಈ ಬಗ್ಗೆ ಹೇಳಿಕೆ ನೀಡಿದ್ದ ಯೋಗರಾಜ್ ಸಿಂಗ್, ಧೋನಿ ಸ್ಲೋ ಬ್ಯಾಟಿಂಗ್ ಹಾಗೂ ರನೌಟ್ ಬಗ್ಗೆ ಕೆಂಡಕಾರಿದ್ದರು. ಕೊಹ್ಲಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಆಸೆ ಇಲ್ಲದೆಯೇ ಧೋನಿ ರನೌಟ್ ಆಗಿದ್ರು. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದ ಮತ್ತೊಬ್ಬ ನಾಯಕನ ಅಡಿ ವಿಶ್ವಕಪ್ ಗೆಲ್ಲಬಾರದು ಅನ್ನೋ ದುರಾಸೆ ಅಂತೆಲ್ಲ ವಾಗ್ದಾಳಿ ನಡೆಸಿದ್ದರು. ಇದೀಗ ಮತ್ತೆ ಟ್ವಿಟರ್ನಲ್ಲಿ ಅದೇ ವಿಡಿಯೋ ಪೋಸ್ಟ್ ಮಾಡಿರೋ ಯೋಗರಾಜ್ ಸಿಂಗ್, ಮತ್ತೆ ಮಾಹಿಯನ್ನ ಟಾರ್ಗೆಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ನನ್ನ ರಕ್ತ ಕುದಿಯುತ್ತಿದೆ ಎಂದು ಬರೆದುಕೊಂಡಿರೋ ಯೋಗರಾಜ್, ತನ್ನ ಸಂಪೂರ್ಣ ಸಂದರ್ಶನ ಕೊನೆಯವರೆಗೂ ನೋಡುವಂತೆ ಕ್ರಿಕೆಟ್ ಫ್ಯಾನ್ಸ್ಗೆ ಕೇಳಿಕೊಂಡಿದ್ದಾರೆ.
ಇದೇ ಮೊದಲಲ್ಲ ಯೋಗರಾಜ್ ಸಿಂಗ್ರ ಟಾರ್ಗೆಟ್
ಧೋನಿಯನ್ನ ಯೋಗರಾಜ್ ಸಿಂಗ್ ಇದೇ ಮೊದಲ ಸಲ ಟಾರ್ಗೆಟ್ ಮಾಡ್ತಿಲ್ಲ. ಈ ಹಿಂದೆ ಹಲವು ಸಲ ಧೋನಿ ವಿರುದ್ಧ ಗುಡುಗಿದ್ದಾರೆ. ಅದರಲ್ಲೂ 2015ರ ಏಕದಿನ ವಿಶ್ವಕಪ್ ತಂಡದಲ್ಲಿ ಯುವರಾಜ್ಗೆ ಸ್ಥಾನ ನೀಡದಕ್ಕಾಗಿ ನಿಂದಿಸಿದ್ದರು. ಯುವರಾಜ್ ಸಿಂಗ್ ಕರಿಯರ್ ಖತಂ ಆಗೋಕೆ ಧೋನಿ ಕಾರಣ ಅಂತೆಲ್ಲ ಟೀಕಿಸಿದ್ದರು.
ಇದನ್ನು ಓದಿ: ಪೂಜಾರ ವಿಚಿತ್ರ ನಡೆ.. ನೀರು ಕುಡಿಯಲಿ, ಹಣ್ಣು ತಿನ್ನಲಿ ಚೇತೇಶ್ವರ್ಗೆ ಇದು ಬೇಕೆಬೇಕು..!
ಅಷ್ಟೇ ಅಲ್ಲ, ಮಾಹಿ ಸಾಧನೆಗಳನ್ನ ಒಪ್ಪಿಕೊಳ್ಳದ ಯೋಗರಾಜ್ ಸಿಂಗ್, ಮೀಡಿಯಾಗಳೇ ಧೋನಿಯನ್ನ ದೇವರನ್ನಾಗಿಸಿವೆ ಅಂತಾ ಕಿಡಿಕಾರಿದ್ದರು. ಆದ್ರೆ, 3 ವರ್ಷಗಳ ಬಳಿಕ ಯುವರಾಜ್ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದೇ ತಡ ಕ್ಷಮಿಸುಬಿಡು ಧೋನಿ ಎಂದು ಮೊಸಳೆ ಕಣ್ಣೀರು ಹಾಕಿದ್ದರು.
ಧೋನಿ ಟೀಕಿಸಿದರೆ ಸಾಧನೆಗಳು ಸುಳ್ಳಾಗುತ್ತಾ..?
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಎಷ್ಟೇ ಟೀಕೆ ಟಿಪ್ಪಣೆಗಳು ಮಾಡಿದ್ರು. ಧೋನಿ ಎಂದಿಗೂ ಅಭಿಮಾನಿಗಳ ಪಾಲಿನ ಯುಗಪುರುಷನೆ. ಯಾಕಂದ್ರೆ, ಧೋನಿ ಕ್ರಿಕೆಟ್ ಎಂಬ ಜಂಟಲ್ಮನ್ಗೆ ಸಿಕ್ಕ ಅತ್ಯದ್ಭುತ ಮಾಣಿಕ್ಯ. ಇದಕ್ಕೆ ಸಾಕ್ಷಿ ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗೇ ಧೋನಿ ಫ್ಯಾನ್ಸ್, ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ..? ಧೋನಿ ಟೀಕಿಸಿದರೆ ಸಾಧನೆಗಳು ಸುಳ್ಳಾಗ್ತಾವಾ ಎಂದು ಟಾಂಗ್ ನೀಡ್ತಿದ್ದಾರೆ. ಯಾರೇ ಏನೇ ಹೇಳಲಿ.. ಟೀಕಿಸಲಿ.. ಧೋನಿ, ಕ್ರಿಕೆಟ್ ಎಂಬ ಜಂಟಲಮನ್ ಗೇಮ್ಗೆ ಸಿಕ್ಕ ರಿಯಲ್ ಜಂಟಲ್ಮ್ಯಾನ್ ಅನ್ನೋದನ್ನ ಮರೆಯುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ