ಗಯಾನದ ಸ್ಟೇಡಿಯಂ ಬೌಲರ್ಗಳಿಗೆ ಹೆಚ್ಚು ಅನುಕೂಲ
ಸೇಮ್ ಕಾಂಬಿನೇಷನ್ನಲ್ಲೇ ಕಣಕ್ಕಿಳಿಯುತ್ತಾ ಭಾರತ?
ವಿಂಡೀಸ್ ಕಟ್ಟಿ ಹಾಕಲು ತಂಡದಲ್ಲಿ ಬದಲಾವಣೆ ಸಾಧ್ಯತೆ
ಮೊದಲ T20ಯಲ್ಲಿ ಸೋತ ಟೀಮ್ ಇಂಡಿಯಾ, ಈಗ 2ನೇ ಚುಟುಕು ಸಮರದಲ್ಲಿ ವಿಂಡೀಸ್ಗೆ ಟಕ್ಕರ್ ನೀಡೋಕೆ ರೆಡಿಯಾಗಿದೆ. ಗೆಲ್ಲೋ ಪಂದ್ಯವನ್ನ ಕೈಯಾರೆ ಚೆಲ್ಲಿದ ಟೀಮ್ ಇಂಡಿಯಾ, ತನ್ನ ಹಳೆಯ ತಪ್ಪುಗಳನ್ನ ತಿದ್ದಿಕೊಂಡು ಗಯಾನದಲ್ಲಿ ಗೆಲುವಿನ ಕಹಳೆ ಮೊಳಗಿಸುವ ಉತ್ಸಾಹದಲ್ಲಿದೆ. ಹಾಗಾದ್ರೆ, ಇಂದಿನ ಟಿ20 ಗೇಮ್ನಲ್ಲಿ ಅಪಾಯಕಾರಿ ವಿಂಡೀಸ್ಗೆ ಶಾಕ್ ನೀಡುತ್ತಾ ಭಾರತ..?
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಗೆಲ್ಲುವಲ್ಲಿ ವಿಫಲವಾದ ಟೀಮ್ ಇಂಡಿಯಾ, ಗಯಾನದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಗೆಲುವಿನ ಉತ್ಸಾಹದಲ್ಲಿರೋ ವೆಸ್ಟ್ ಇಂಡೀಸ್ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಮೊದಲ ಪಂದ್ಯದ ತಪ್ಪುಗಳಿಂದ ಪಾಠ ಕಲಿತಿರುವ ಟೀಮ್ ಇಂಡಿಯಾ ಪುಟಿದೇಳುವ ಲೆಕ್ಕಚಾರದಲ್ಲಿದೆ. ಆದ್ರೆ, ಇದೆಲ್ಲವು ಗಯಾನ ಪ್ರಾವಿಡೆನ್ಸ್ನಲ್ಲಿ ಸುಲಭದ ಮಾತಲ್ಲ.
ಬದಲಾಗಬೇಕು ಟಾಪ್ ಆರ್ಡರ್ನ ಬ್ಯಾಟಿಂಗ್ ಅಪ್ರೋಚ್..!
ಟ್ರಿನಿಡಾಡ್ನ ಕಠಿಣ ಪಿಚ್ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಓಪನರ್ಸ್. ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸದ ಓಪನರ್ಗಳು ಬಿಗ್ ಇನ್ನಿಂಗ್ಸ್ ಆಡಲೇ ಇಲ್ಲ. ಟಿ20ಯಲ್ಲಿ ಟೆಸ್ಟ್ ಮಾದರಿ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್, ಇಶಾನ್ ಕಿಶನ್ ಒಂದಂಕಿ ರನ್ ದಾಟುವಲ್ಲಿ ಪರದಾಡಿದ್ರು. ಆದ್ರೆ, ಇವತ್ತಿನ ಪಂದ್ಯದಲ್ಲಿ ಇದು ಕಂಪ್ಲೀಟ್ ಬದಲಾಗಬೇಕಿದೆ. ಅಟ್ಯಾಕಿಂಗ್ ಬ್ಯಾಟಿಂಗ್ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಬೇಕಿದೆ.
ಜವಾಬ್ದಾರಿ ಅರಿತು ಅಡಬೇಕಿದೆ ಮಿಡಲ್ ಆರ್ಡರ್..!
ಮೊದಲ ಪಂದ್ಯದ ಸೋಲಿಗೆ ಟಾಪ್ ಅರ್ಡರ್ ಮಾತ್ರವೇ ಕಾರಣವಲ್ಲ. ಮಿಡಲ್ ಆರ್ಡರ್ ಕೂಡ ಮೇನ್ ರೀಸನ್ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಡೆಬ್ಯೂ ಸ್ಟಾರ್ ತಿಲಕ್ ವರ್ಮ ಹೊರತು ಪಡೆಸಿದ್ರೆ. ಉಳಿದೆಲ್ಲರೂ ಆಗಿದ್ದು ಫ್ಲಾಫ್.
ಮೋಸ್ಟ್ ಇಂಪಾರ್ಟೆಂಟ್ಲಿ ಟಿ20 ನಂಬರ್ ವೀರ ಸೂರ್ಯ, ಇವತ್ತು ಪ್ರತಾಪ ತೋರಿಸಬೇಕಿದೆ. ಅದಕ್ಕಿಂತ ಮಿಗಿಲಾಗಿ ನಾಯಕ ಹಾರ್ದಿಕ್ ನಾಯಕತ್ವದ ಆಟ ಆಡಬೇಕಿದೆ. ಇಲ್ದಿದ್ರೆ, ಗಯಾನದ 2ನೇ ಟಿ20 ಪಂದ್ಯದಲ್ಲೂ ಗೆಲ್ಲೋದು ಕಷ್ಟ ಸಾಧ್ಯವೇ ಆಗಿದೆ.
ಬೌಲರ್ಗಳಿಂದ ಬರಬೇಕು ಸೇಮ್ ಪರ್ಫಾಮೆನ್ಸ್..!
ಟ್ರಿನಿಡಾಡ್ನ ಕಂಡೀಷನ್ಸ್ನ ಸರಿಯಾಗಿ ಬಳಸಿಕೊಂಡ ಬೌಲರ್ಗಳು, ಟಿ20 ದೈತ್ಯರನ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ಮಿಡಲ್ ಓವರ್ಗಳಲ್ಲಿ ಸ್ಪಿನ್ನರ್ಗಳು ಜಾದೂ ಮಾಡಿದ್ರೆ. ಡೆತ್ ಓವರ್ಗಳಲ್ಲಿ ಪೇಸರ್ಗಳು, ವಿಂಡೀಸ್ ಬ್ಯಾಟರ್ಗಳಿಗೆ ಸಿಂಹಸ್ವಪ್ನವೇ ಆಗಿದ್ದರು. ಹೀಗಾಗಿ ಇಂದಿನ ಪಂದ್ಯಲ್ಲೂ ಇಂಥದ್ದೇ ಪರ್ಫಾಮೆನ್ಸ್ ನಿರೀಕ್ಷಿಸಲಾಗ್ತಿದೆ.
ಗಯಾನದಲ್ಲೂ ಗೆಲ್ಲೋದು ಸುಲಭದ ಮಾತಲ್ಲ..!
ಗಯಾನ ಪ್ರಾವಿಡೆನ್ಸ್ ಪಿಚ್ ಟ್ರಿನಿಡಾಡ್ನ ಕಂಡೀಷನ್ಸ್ನಷ್ಟೇ ಟ್ವಿಸ್ಟ್ನಿಂದ ಕೂಡಿದೆ. ಆರಂಭದಲ್ಲಿ ಸ್ವಿಂಗ್ ಬೌಲರ್ಗಳು ಮೆರೆದಾಡಿದ್ರೆ, ಪಂದ್ಯ ಸಾಗಿದಂತೆ ಸ್ಪಿನ್ನರ್ಗಳು ಮೇಲುಗೈ ಸಾಧಿಸ್ತಾರೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸೋದು ಕಬ್ಬಿಣದ ಕಡಲೆಯಾಗಿದೆ. ಈ ಪಿಚ್ ಲೋಸ್ಕೋರಿಂಗ್ ಆಗಿದ್ದು, ಚೇಸಿಂಗ್ ಉತ್ತಮ ಆಯ್ಕೆ ಎನಿಸಿದೆ. ಹೀಗಾಗಿ ಟಾಸ್ ನಿರ್ಣಯಕವಾಗಿದೆ.
ಇಲ್ಲ ತಂಡದಲ್ಲಿ ಮಾಡುತ್ತಾ ಒಂದು ಬದಲಾವಣೆ..?
ಬೌಲರ್ಗಳಿಗೆ ನೆರವಾಗೋ ಈ ಪಿಚ್ನಲ್ಲಿ ಟೀಮ್ ಇಂಡಿಯಾ ಬದಲಾವಣೆಯ ಮೊರೆ ಹೋಗಬೇಕಿದೆ. ಪ್ರಮುಖವಾಗಿ ಅಕ್ಷರ್ ಪಟೇಲ್ ಬದಲಿಗೆ ಓರ್ವ ಸ್ಪೆಷಲಿಸ್ಟ್ ಬ್ಯಾಟರ್ ಬೇಕಾಗಿದೆ. ಹೀಗಾಗಿ ಒಂದು ಬದಲಾವಣೆ ಮಾಡುವ ಅನಿವಾರ್ಯತೆ ಇದ್ದೇ ಇದೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್, ಇಂಥಹ ನಿರ್ಧಾರಕ್ಕೆ ಕೈಹಾಕುತ್ತಾ ಅನ್ನೋದು ಕಾದುನೋಡಬೇಕಿದೆ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಗಯಾನದ ಸ್ಟೇಡಿಯಂ ಬೌಲರ್ಗಳಿಗೆ ಹೆಚ್ಚು ಅನುಕೂಲ
ಸೇಮ್ ಕಾಂಬಿನೇಷನ್ನಲ್ಲೇ ಕಣಕ್ಕಿಳಿಯುತ್ತಾ ಭಾರತ?
ವಿಂಡೀಸ್ ಕಟ್ಟಿ ಹಾಕಲು ತಂಡದಲ್ಲಿ ಬದಲಾವಣೆ ಸಾಧ್ಯತೆ
ಮೊದಲ T20ಯಲ್ಲಿ ಸೋತ ಟೀಮ್ ಇಂಡಿಯಾ, ಈಗ 2ನೇ ಚುಟುಕು ಸಮರದಲ್ಲಿ ವಿಂಡೀಸ್ಗೆ ಟಕ್ಕರ್ ನೀಡೋಕೆ ರೆಡಿಯಾಗಿದೆ. ಗೆಲ್ಲೋ ಪಂದ್ಯವನ್ನ ಕೈಯಾರೆ ಚೆಲ್ಲಿದ ಟೀಮ್ ಇಂಡಿಯಾ, ತನ್ನ ಹಳೆಯ ತಪ್ಪುಗಳನ್ನ ತಿದ್ದಿಕೊಂಡು ಗಯಾನದಲ್ಲಿ ಗೆಲುವಿನ ಕಹಳೆ ಮೊಳಗಿಸುವ ಉತ್ಸಾಹದಲ್ಲಿದೆ. ಹಾಗಾದ್ರೆ, ಇಂದಿನ ಟಿ20 ಗೇಮ್ನಲ್ಲಿ ಅಪಾಯಕಾರಿ ವಿಂಡೀಸ್ಗೆ ಶಾಕ್ ನೀಡುತ್ತಾ ಭಾರತ..?
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಗೆಲ್ಲುವಲ್ಲಿ ವಿಫಲವಾದ ಟೀಮ್ ಇಂಡಿಯಾ, ಗಯಾನದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಗೆಲುವಿನ ಉತ್ಸಾಹದಲ್ಲಿರೋ ವೆಸ್ಟ್ ಇಂಡೀಸ್ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಮೊದಲ ಪಂದ್ಯದ ತಪ್ಪುಗಳಿಂದ ಪಾಠ ಕಲಿತಿರುವ ಟೀಮ್ ಇಂಡಿಯಾ ಪುಟಿದೇಳುವ ಲೆಕ್ಕಚಾರದಲ್ಲಿದೆ. ಆದ್ರೆ, ಇದೆಲ್ಲವು ಗಯಾನ ಪ್ರಾವಿಡೆನ್ಸ್ನಲ್ಲಿ ಸುಲಭದ ಮಾತಲ್ಲ.
ಬದಲಾಗಬೇಕು ಟಾಪ್ ಆರ್ಡರ್ನ ಬ್ಯಾಟಿಂಗ್ ಅಪ್ರೋಚ್..!
ಟ್ರಿನಿಡಾಡ್ನ ಕಠಿಣ ಪಿಚ್ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಓಪನರ್ಸ್. ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸದ ಓಪನರ್ಗಳು ಬಿಗ್ ಇನ್ನಿಂಗ್ಸ್ ಆಡಲೇ ಇಲ್ಲ. ಟಿ20ಯಲ್ಲಿ ಟೆಸ್ಟ್ ಮಾದರಿ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್, ಇಶಾನ್ ಕಿಶನ್ ಒಂದಂಕಿ ರನ್ ದಾಟುವಲ್ಲಿ ಪರದಾಡಿದ್ರು. ಆದ್ರೆ, ಇವತ್ತಿನ ಪಂದ್ಯದಲ್ಲಿ ಇದು ಕಂಪ್ಲೀಟ್ ಬದಲಾಗಬೇಕಿದೆ. ಅಟ್ಯಾಕಿಂಗ್ ಬ್ಯಾಟಿಂಗ್ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಬೇಕಿದೆ.
ಜವಾಬ್ದಾರಿ ಅರಿತು ಅಡಬೇಕಿದೆ ಮಿಡಲ್ ಆರ್ಡರ್..!
ಮೊದಲ ಪಂದ್ಯದ ಸೋಲಿಗೆ ಟಾಪ್ ಅರ್ಡರ್ ಮಾತ್ರವೇ ಕಾರಣವಲ್ಲ. ಮಿಡಲ್ ಆರ್ಡರ್ ಕೂಡ ಮೇನ್ ರೀಸನ್ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಡೆಬ್ಯೂ ಸ್ಟಾರ್ ತಿಲಕ್ ವರ್ಮ ಹೊರತು ಪಡೆಸಿದ್ರೆ. ಉಳಿದೆಲ್ಲರೂ ಆಗಿದ್ದು ಫ್ಲಾಫ್.
ಮೋಸ್ಟ್ ಇಂಪಾರ್ಟೆಂಟ್ಲಿ ಟಿ20 ನಂಬರ್ ವೀರ ಸೂರ್ಯ, ಇವತ್ತು ಪ್ರತಾಪ ತೋರಿಸಬೇಕಿದೆ. ಅದಕ್ಕಿಂತ ಮಿಗಿಲಾಗಿ ನಾಯಕ ಹಾರ್ದಿಕ್ ನಾಯಕತ್ವದ ಆಟ ಆಡಬೇಕಿದೆ. ಇಲ್ದಿದ್ರೆ, ಗಯಾನದ 2ನೇ ಟಿ20 ಪಂದ್ಯದಲ್ಲೂ ಗೆಲ್ಲೋದು ಕಷ್ಟ ಸಾಧ್ಯವೇ ಆಗಿದೆ.
ಬೌಲರ್ಗಳಿಂದ ಬರಬೇಕು ಸೇಮ್ ಪರ್ಫಾಮೆನ್ಸ್..!
ಟ್ರಿನಿಡಾಡ್ನ ಕಂಡೀಷನ್ಸ್ನ ಸರಿಯಾಗಿ ಬಳಸಿಕೊಂಡ ಬೌಲರ್ಗಳು, ಟಿ20 ದೈತ್ಯರನ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ಮಿಡಲ್ ಓವರ್ಗಳಲ್ಲಿ ಸ್ಪಿನ್ನರ್ಗಳು ಜಾದೂ ಮಾಡಿದ್ರೆ. ಡೆತ್ ಓವರ್ಗಳಲ್ಲಿ ಪೇಸರ್ಗಳು, ವಿಂಡೀಸ್ ಬ್ಯಾಟರ್ಗಳಿಗೆ ಸಿಂಹಸ್ವಪ್ನವೇ ಆಗಿದ್ದರು. ಹೀಗಾಗಿ ಇಂದಿನ ಪಂದ್ಯಲ್ಲೂ ಇಂಥದ್ದೇ ಪರ್ಫಾಮೆನ್ಸ್ ನಿರೀಕ್ಷಿಸಲಾಗ್ತಿದೆ.
ಗಯಾನದಲ್ಲೂ ಗೆಲ್ಲೋದು ಸುಲಭದ ಮಾತಲ್ಲ..!
ಗಯಾನ ಪ್ರಾವಿಡೆನ್ಸ್ ಪಿಚ್ ಟ್ರಿನಿಡಾಡ್ನ ಕಂಡೀಷನ್ಸ್ನಷ್ಟೇ ಟ್ವಿಸ್ಟ್ನಿಂದ ಕೂಡಿದೆ. ಆರಂಭದಲ್ಲಿ ಸ್ವಿಂಗ್ ಬೌಲರ್ಗಳು ಮೆರೆದಾಡಿದ್ರೆ, ಪಂದ್ಯ ಸಾಗಿದಂತೆ ಸ್ಪಿನ್ನರ್ಗಳು ಮೇಲುಗೈ ಸಾಧಿಸ್ತಾರೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸೋದು ಕಬ್ಬಿಣದ ಕಡಲೆಯಾಗಿದೆ. ಈ ಪಿಚ್ ಲೋಸ್ಕೋರಿಂಗ್ ಆಗಿದ್ದು, ಚೇಸಿಂಗ್ ಉತ್ತಮ ಆಯ್ಕೆ ಎನಿಸಿದೆ. ಹೀಗಾಗಿ ಟಾಸ್ ನಿರ್ಣಯಕವಾಗಿದೆ.
ಇಲ್ಲ ತಂಡದಲ್ಲಿ ಮಾಡುತ್ತಾ ಒಂದು ಬದಲಾವಣೆ..?
ಬೌಲರ್ಗಳಿಗೆ ನೆರವಾಗೋ ಈ ಪಿಚ್ನಲ್ಲಿ ಟೀಮ್ ಇಂಡಿಯಾ ಬದಲಾವಣೆಯ ಮೊರೆ ಹೋಗಬೇಕಿದೆ. ಪ್ರಮುಖವಾಗಿ ಅಕ್ಷರ್ ಪಟೇಲ್ ಬದಲಿಗೆ ಓರ್ವ ಸ್ಪೆಷಲಿಸ್ಟ್ ಬ್ಯಾಟರ್ ಬೇಕಾಗಿದೆ. ಹೀಗಾಗಿ ಒಂದು ಬದಲಾವಣೆ ಮಾಡುವ ಅನಿವಾರ್ಯತೆ ಇದ್ದೇ ಇದೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್, ಇಂಥಹ ನಿರ್ಧಾರಕ್ಕೆ ಕೈಹಾಕುತ್ತಾ ಅನ್ನೋದು ಕಾದುನೋಡಬೇಕಿದೆ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ