newsfirstkannada.com

WIvsIND: T20 ಸರಣಿಯ ವಿಜಯಮಾಲೆ ಯಾರಿಗೆ..? ಜೈಸ್ವಾಲ್, ಶುಭ್​ಮನ್ ಗಿಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆ..!

Share :

13-08-2023

    ಮೊದಲ 2 ಪಂದ್ಯ ಗೆದ್ದಿದ್ದ ವಿಂಡೀಸ್​ಗೆ ಭಾರತ ಶಾಕ್

    ಸರಣಿ ಕೈವಶ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಭಾರತ

    ಟಿ20 ಸರಣಿಯನ್ನಾದ್ರೂ ವೆಸ್ಟ್​ ಇಂಡೀಸ್​ ಗೆಲ್ಲುತ್ತಾ..?

ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಈಗಾಗಲೇ ಟೆಸ್ಟ್​, ಏಕದಿನ ಸರಣಿಗಳನ್ನು ಗೆದ್ದು ವಿಜಯಮಾಲೆ ಹಾಕಿಕೊಂಡಿದೆ. ಸದ್ಯ ಟಿ20 ಸರಣಿಯು ಅಂತಿಮ ಘಟ್ಟ ತಲುಪಿದ್ದು ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ ಎರಡು ಟೀಮ್​ಗಳು ಜಿದ್ದಾಜಿದ್ದಿಯಿಂದ 2-2 ರಿಂದ ಸಮಬಲ ಸಾಧಿಸಿವೆ. ಹೀಗಾಗಿ ಇಂದು ನಡೆಯುವ ಪಂದ್ಯವು ನಿರ್ಣಾಯಕವಾಗಿದ್ದು ಎರಡು ತಂಡಗಳಲ್ಲಿ  ಯಾವುದು ಗೆಲ್ಲುತ್ತದೋ ಅದಕ್ಕೆ ಸರಣಿ ಕೈ ವಶವಾಗಲಿದೆ.

ಓಪನರ್​ ಬ್ಯಾಟರ್ಸ್​​ ಆದ ಯಶಸ್ವಿ ಜೈಸ್ವಾಲ್ ಮತ್ತು ಶುಭ್​ಮನ್ ಗಿಲ್​ ಮತ್ತೆ ಈ ಪಂದ್ಯದಲ್ಲಿ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಪಕ್ಕಾ ಎನ್ನಲಾಗುತ್ತಿದೆ. ಭಾರತ ತಂಡ ಕೂಡ 5ನೇ ಪಂದ್ಯ ಗೆಲ್ಲಲು ಭಾರೀ ಕಸರತ್ತು ನಡೆಸಿದೆ. ತಿಲಕ್ ವರ್ಮಾ, ಸೂರ್ಯಕುಮಾರ್​ ಬ್ಯಾಟ್​ನಿಂದ ರನ್​ ಹೊಳೆ ಹರಿದು ಬಂದರೆ ಕೆರಿಬಿಯನ್​ನಿಂದ ಸರಣಿ ಕೈ ತಪ್ಪುವುದಂತು ಗ್ಯಾರಂಟಿ. ಇನ್ನು ವಿಂಡೀಸ್​ ಕೂಡ ಟೆಸ್ಟ್​ ಹಾಗೂ ಏಕದಿನ ಸರಣಿಗಳನ್ನ ಸೋತಿದ್ದು ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.

ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ಶುಭ್​ಮನ್ ಗಿಲ್

ಕ್ಯಾಪ್ಟನ್​ ರೋವ್ಮನ್ ಪೊವೆಲ್​ರ ಸಾರಥ್ಯದ ವಿಂಡೀಸ್​ ಪಡೆ ಮೊದಲ ಎರಡು ಪಂದ್ಯಗಳನ್ನು ಗೆದ್ದು ಇನ್ನೇನು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿತ್ತು. ಆದರೆ ನಿರ್ದಿಷ್ಟ ಹೋರಾಟದಿಂದ 3 ಮತ್ತು 4ನೇ ಪಂದ್ಯವನ್ನು ಹಾರ್ದಿಕ್​ ಸಾರಥ್ಯದ ಟೀಮ್​ ಇಂಡಿಯಾ ಗೆದ್ದುಕೊಂಡಿತು. ಇದು ವಿಂಡೀಸ್​ಗೆ ಭಾರೀ ಆಘಾತವನ್ನುಂಟು ಮಾಡಿದೆ. ಇದರಿಂದ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿವೆ. ಇಂದು ರಾತ್ರಿ 8 ಗಂಟೆಗೆ ನಡೆಯುವ 5ನೇ ಟಿ20 ಪಂದ್ಯದಲ್ಲಿ ಯಾವ ತಂಡ ಜಯಭೇರಿ ಬಾರಿಸುವುದು ಆ ತಂಡಕ್ಕೆ ವಿಜಯ ಲಕ್ಷ್ಮಿ ಒಲಿಯಲಿದ್ದಾಳೆ.

ಇಂದಿನ 5ನೇ ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್​ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಮ್ಯಾಚ್​ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WIvsIND: T20 ಸರಣಿಯ ವಿಜಯಮಾಲೆ ಯಾರಿಗೆ..? ಜೈಸ್ವಾಲ್, ಶುಭ್​ಮನ್ ಗಿಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆ..!

https://newsfirstlive.com/wp-content/uploads/2023/08/JAISWAL_GILL.jpg

    ಮೊದಲ 2 ಪಂದ್ಯ ಗೆದ್ದಿದ್ದ ವಿಂಡೀಸ್​ಗೆ ಭಾರತ ಶಾಕ್

    ಸರಣಿ ಕೈವಶ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಭಾರತ

    ಟಿ20 ಸರಣಿಯನ್ನಾದ್ರೂ ವೆಸ್ಟ್​ ಇಂಡೀಸ್​ ಗೆಲ್ಲುತ್ತಾ..?

ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಈಗಾಗಲೇ ಟೆಸ್ಟ್​, ಏಕದಿನ ಸರಣಿಗಳನ್ನು ಗೆದ್ದು ವಿಜಯಮಾಲೆ ಹಾಕಿಕೊಂಡಿದೆ. ಸದ್ಯ ಟಿ20 ಸರಣಿಯು ಅಂತಿಮ ಘಟ್ಟ ತಲುಪಿದ್ದು ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ ಎರಡು ಟೀಮ್​ಗಳು ಜಿದ್ದಾಜಿದ್ದಿಯಿಂದ 2-2 ರಿಂದ ಸಮಬಲ ಸಾಧಿಸಿವೆ. ಹೀಗಾಗಿ ಇಂದು ನಡೆಯುವ ಪಂದ್ಯವು ನಿರ್ಣಾಯಕವಾಗಿದ್ದು ಎರಡು ತಂಡಗಳಲ್ಲಿ  ಯಾವುದು ಗೆಲ್ಲುತ್ತದೋ ಅದಕ್ಕೆ ಸರಣಿ ಕೈ ವಶವಾಗಲಿದೆ.

ಓಪನರ್​ ಬ್ಯಾಟರ್ಸ್​​ ಆದ ಯಶಸ್ವಿ ಜೈಸ್ವಾಲ್ ಮತ್ತು ಶುಭ್​ಮನ್ ಗಿಲ್​ ಮತ್ತೆ ಈ ಪಂದ್ಯದಲ್ಲಿ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಪಕ್ಕಾ ಎನ್ನಲಾಗುತ್ತಿದೆ. ಭಾರತ ತಂಡ ಕೂಡ 5ನೇ ಪಂದ್ಯ ಗೆಲ್ಲಲು ಭಾರೀ ಕಸರತ್ತು ನಡೆಸಿದೆ. ತಿಲಕ್ ವರ್ಮಾ, ಸೂರ್ಯಕುಮಾರ್​ ಬ್ಯಾಟ್​ನಿಂದ ರನ್​ ಹೊಳೆ ಹರಿದು ಬಂದರೆ ಕೆರಿಬಿಯನ್​ನಿಂದ ಸರಣಿ ಕೈ ತಪ್ಪುವುದಂತು ಗ್ಯಾರಂಟಿ. ಇನ್ನು ವಿಂಡೀಸ್​ ಕೂಡ ಟೆಸ್ಟ್​ ಹಾಗೂ ಏಕದಿನ ಸರಣಿಗಳನ್ನ ಸೋತಿದ್ದು ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.

ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ಶುಭ್​ಮನ್ ಗಿಲ್

ಕ್ಯಾಪ್ಟನ್​ ರೋವ್ಮನ್ ಪೊವೆಲ್​ರ ಸಾರಥ್ಯದ ವಿಂಡೀಸ್​ ಪಡೆ ಮೊದಲ ಎರಡು ಪಂದ್ಯಗಳನ್ನು ಗೆದ್ದು ಇನ್ನೇನು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿತ್ತು. ಆದರೆ ನಿರ್ದಿಷ್ಟ ಹೋರಾಟದಿಂದ 3 ಮತ್ತು 4ನೇ ಪಂದ್ಯವನ್ನು ಹಾರ್ದಿಕ್​ ಸಾರಥ್ಯದ ಟೀಮ್​ ಇಂಡಿಯಾ ಗೆದ್ದುಕೊಂಡಿತು. ಇದು ವಿಂಡೀಸ್​ಗೆ ಭಾರೀ ಆಘಾತವನ್ನುಂಟು ಮಾಡಿದೆ. ಇದರಿಂದ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿವೆ. ಇಂದು ರಾತ್ರಿ 8 ಗಂಟೆಗೆ ನಡೆಯುವ 5ನೇ ಟಿ20 ಪಂದ್ಯದಲ್ಲಿ ಯಾವ ತಂಡ ಜಯಭೇರಿ ಬಾರಿಸುವುದು ಆ ತಂಡಕ್ಕೆ ವಿಜಯ ಲಕ್ಷ್ಮಿ ಒಲಿಯಲಿದ್ದಾಳೆ.

ಇಂದಿನ 5ನೇ ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್​ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಮ್ಯಾಚ್​ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More