ಟಿ20 ವಿಶ್ವಕಪ್ ಟೂರ್ನಿಯೇ ಟೀಮ್ ಇಂಡಿಯಾಕ್ಕೆ ಟಾರ್ಗೆಟ್.!
ರೋಹಿತ್ ಇರಲ್ಲ.. ಅಡಕತ್ತರಿಯಲ್ಲಿ ಕೋಚ್ ದ್ರಾವಿಡ್ ಭವಿಷ್ಯ
ಮುಂದಿನ ಟಿ20 ವಿಶ್ವಕಪ್ ಗೆಲ್ಲಲು ಬಿಸಿಸಿಐನಿಂದ ಬಿಗ್ ಪ್ಲಾನ್
ಕೊನೆಗೂ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ಮುಖ್ಯಸ್ಥನ ಹುದ್ದೆಗೆ ಸಮರ್ಥ ಅಭ್ಯರ್ಥಿ ಬಂದಾಗಿದೆ. ಸಾಕಷ್ಟು ಲೆಕ್ಕಾಚಾರ ಹಾಕಿ, ಎಲ್ಲಾ ಫಾರ್ಮೆಟ್ ಕ್ರಿಕೆಟ್ ಆಡಿರೋ ಅಜಿತ್ ಅಗರ್ಕರ್ಗೆ ಬಿಸಿಸಿಐ ಮಣೆ ಹಾಕಿದೆ. ಬಿಸಿಸಿಐ ಏನೋ ಸ್ಟಾರ್ ಆಟಗಾರನಿಗೆ ಪಟ್ಟ ಕಟ್ಟಿ ಕೈ ತೊಳೆದುಕೊಳ್ತು. ಈಗ ಅಗರ್ಕರ್ ಮುಂದಿರೋದು ಚಾಲೆಂಜ್. ಅದ್ರಲ್ಲೂ, ಫಸ್ಟ್ ಟಾಸ್ಕೇ ಅಗರ್ಕರ್ ಪಾಲಿಗೆ ಟಫೆಸ್ಟ್ ಟಾಸ್ಕ್ ಆಗಿದೆ.
ಟೀಮ್ ಇಂಡಿಯಾ ನೂತನ ಸೆಲೆಕ್ಟರ್ ಆಗಿ ಆಯ್ಕೆಯಾಗಿರುವ ಅಜಿತ್ ಅಗರ್ಕರ್ ಮುಂದೆ ಸಾಲು ಸಾಲು ಸವಾಲಿವೆ. ಏಕದಿನ ವಿಶ್ವಕಪ್ಗೆ ಬಲಿಷ್ಠ ತಂಡದ ಆಯ್ಕೆ, ಸೀನಿಯರ್ ಆಟಗಾರರ ಭವಿಷ್ಯ ನಿರ್ಧಾರ, ರೋಹಿತ್ ಉತ್ತರಾಧಿಕಾರಿ ನೇಮಕ. ಹೀಗೆ ದೊಡ್ಡ ದೊಡ್ಡ ಸವಾಲುಗಳು ಅಗರ್ಕರ್ ಮುಂದಿವೆ.
ವೆಸ್ಟ್ ಇಂಡೀಸ್ ಸರಣಿಯಿಂದಲೇ ಸಿದ್ಧವಾಗಬೇಕು ಬ್ಲೂ ಪ್ರಿಂಟ್.!
2007ರ ಚೊಚ್ಚಲ ಆವೃತ್ತಿಯಲ್ಲಿ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದ ಟೀಮ್ ಇಂಡಿಯಾ ಆ ಬಳಿಕ ಟಿ20 ಕಿರೀಟ ಗೆಲ್ಲುವಲ್ಲಿ ವಿಫಲವಾಗಿದೆ. ಟಿ20 ಫಾರ್ಮೆಟ್ನಲ್ಲಿ ಎಷ್ಟೇ ಬಲಿಷ್ಠ ತಂಡವಾಗಿ ರೂಪುಗೊಂಡರು ಚಾಂಪಿಯನ್ ಪಟ್ಟ ಕನಸಾಗಿ ಉಳಿದಿದೆ. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ ನಡೆಯೋ ಟೂರ್ನಿಯಲ್ಲಾದ್ರೂ, ಕಪ್ ಗೆಲ್ಲಬೇಕು ಅನ್ನೋದು ಬಿಸಿಸಿಐನ ಲೆಕ್ಕಾಚಾರವಾಗಿದೆ. ಹಾಗಾಗಬೇಕಂದ್ರೆ ಈ ಬಾರಿಯ ಇಂಡೀಸ್ ಪ್ರವಾಸದಿಂದಲೇ ಬ್ಲ್ಯೂ ಪ್ರಿಂಟ್ ಸಿದ್ಧವಾಗಬೇಕಿದೆ.
ಅಜಿತ್ ಅಗರ್ಕರ್ ಹೆಗಲ ಮೇಲಿದೆ ಪೂರ್ತಿ ಭಾರ..!
ಕಳೆದ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ 2024ರ ಟಿ20 ವಿಶ್ವಕಪ್ನಿಂದ ಹೊರಗುಳಿಯೋದು ಬಹುತೇಕ ಕನ್ಫರ್ಮ್. ಇನ್ನು ಕೋಚ್ ದ್ರಾವಿಡ್, ಒಪ್ಪಂದ ಏಕದಿನ ವಿಶ್ವಕಪ್ ಬಳಿಕ ಮುಗಿಯಲಿದೆ. ಆ ಬಳಿಕ ದ್ರಾವಿಡ್ ಮುಂದುವರೆಯೋದು ಅನುಮಾನ. ಹೀಗಾಗಿ ಭವಿಷ್ಯದ ಟಿ20 ತಂಡವನ್ನ ರೂಪಿಸುವ ಸಂಪೂರ್ಣ ಜವಾಬ್ದಾರಿ ಈಗ ಅಜಿತ್ ಅಗರ್ಕರ್ ಹೆಗಲೇರಿದೆ.
ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಗೆ ಬೇಕಿದೆ ಉತ್ತರ.!
ಕಳೆದ ಟಿ20 ವಿಶ್ವಕಪ್ ಅಂತ್ಯದ ಬಳಿಕ ಹಾರ್ದಿಕ್ ಪಾಂಡ್ಯನೇ ಶಾರ್ಟೆಸ್ಟ್ ಫಾರ್ಮೆಟ್ನಲ್ಲಿ ತಂಡವನ್ನ ಮುನ್ನಡೆಸ್ತಾ ಬರುತ್ತಿದ್ದಾರೆ. ಟಿ20 ತಂಡಕ್ಕೆ ಇನ್ಮುಂದೆ ಹಾರ್ದಿಕ್ ಪಾಂಡ್ಯ ಸಾರಥಿ ಎಂಬ ಮಾತು ಬಿಸಿಸಿಐ ಮೂಲಗಳಿಂದ ಪದೇ ಪದೇ ಕೇಳಿ ಬಂದಿದೆ. ಆದ್ರೆ, ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಇದನ್ನು ಓದಿ: Pawan Kalyan: ಡಿವೋರ್ಸ್ ವದಂತಿಗೆ ಪವನ್ ಕಲ್ಯಾಣ್ ಸ್ಪಷ್ಟನೆ -ನಿಟ್ಟುಸಿರು ಬಿಟ್ಟ ಅಭಿಮಾನಿಗಳು
ಟಿ20 ಫಾರ್ಮೆಟ್ನಿಂದ ಸೀನಿಯರ್ ಆಟಗಾರರನ್ನ ಹೊರಗಿಟ್ಟು, ಯಂಗ್ಸ್ಟರ್ಗಳನ್ನ ಕರೆತರಲು ಬಿಸಿಸಿಐ ತೆರೆಮರೆಯಲ್ಲೇ ಕಸರತ್ತು ನಡೆಸ್ತಿದೆ. ಸರಣಿಯಿಂದ ಸರಣಿಗೆ ಯುವ ಆಟಗಾರರಿಗೆ ಚಾನ್ಸ್ ನೀಡ್ತಾ ಬಂದಿದೆ. ಆದ್ರೆ, ಸ್ಥಾನಕ್ಕಿರೋ ಪೈಪೋಟಿ ಆಟಗಾರರಲ್ಲಿ ಅಭದ್ರತೆಯನ್ನ ಸೃಷ್ಟಿಸಿದೆ. ಈ ಆತಂಕದಿಂದ ಯುವ ಆಟಗಾರರನ್ನ ಹೊರ ತಂದು ಕೋರ್ ಟೀಮ್ ಕಟ್ಟೋ ಸವಾಲು ಅಗರ್ಕರ್ ಹೆಗಲಮೇಲಿದೆ.
ಮುಂಬರುವ ಅಕ್ಟೋಬರ್ -ನವೆಂಬರ್ನಲ್ಲಿ ನಡೆಯೋ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಹೆಚ್ಚು ಹೆಚ್ಚು ಟಿ20 ಸರಣಿಗಳನ್ನ ಆಡಲಿದೆ. ಸಿರೀಸ್ ಬೈ ಸಿರೀಸ್ ಆಟಗಾರರನ್ನ ಶಾರ್ಟ್ ಲಿಸ್ಟ್ ಮಾಡುವ ಅವಕಾಶವಿದೆ. ಆದ್ರೂ, ಮುಂದಿನ ಎಲ್ಲ ಲೆಕ್ಕಾಚಾರಗಳು ಸಲೀಸಾಗಿ ನಡೆಯಬೇಕಂದ್ರೆ, ಈ ವೆಸ್ಟ್ ಇಂಡೀಸ್ ಸರಣಿಯಿಂದ ಸಿದ್ಧತೆ ಆರಂಭಿಸಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟಿ20 ವಿಶ್ವಕಪ್ ಟೂರ್ನಿಯೇ ಟೀಮ್ ಇಂಡಿಯಾಕ್ಕೆ ಟಾರ್ಗೆಟ್.!
ರೋಹಿತ್ ಇರಲ್ಲ.. ಅಡಕತ್ತರಿಯಲ್ಲಿ ಕೋಚ್ ದ್ರಾವಿಡ್ ಭವಿಷ್ಯ
ಮುಂದಿನ ಟಿ20 ವಿಶ್ವಕಪ್ ಗೆಲ್ಲಲು ಬಿಸಿಸಿಐನಿಂದ ಬಿಗ್ ಪ್ಲಾನ್
ಕೊನೆಗೂ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ಮುಖ್ಯಸ್ಥನ ಹುದ್ದೆಗೆ ಸಮರ್ಥ ಅಭ್ಯರ್ಥಿ ಬಂದಾಗಿದೆ. ಸಾಕಷ್ಟು ಲೆಕ್ಕಾಚಾರ ಹಾಕಿ, ಎಲ್ಲಾ ಫಾರ್ಮೆಟ್ ಕ್ರಿಕೆಟ್ ಆಡಿರೋ ಅಜಿತ್ ಅಗರ್ಕರ್ಗೆ ಬಿಸಿಸಿಐ ಮಣೆ ಹಾಕಿದೆ. ಬಿಸಿಸಿಐ ಏನೋ ಸ್ಟಾರ್ ಆಟಗಾರನಿಗೆ ಪಟ್ಟ ಕಟ್ಟಿ ಕೈ ತೊಳೆದುಕೊಳ್ತು. ಈಗ ಅಗರ್ಕರ್ ಮುಂದಿರೋದು ಚಾಲೆಂಜ್. ಅದ್ರಲ್ಲೂ, ಫಸ್ಟ್ ಟಾಸ್ಕೇ ಅಗರ್ಕರ್ ಪಾಲಿಗೆ ಟಫೆಸ್ಟ್ ಟಾಸ್ಕ್ ಆಗಿದೆ.
ಟೀಮ್ ಇಂಡಿಯಾ ನೂತನ ಸೆಲೆಕ್ಟರ್ ಆಗಿ ಆಯ್ಕೆಯಾಗಿರುವ ಅಜಿತ್ ಅಗರ್ಕರ್ ಮುಂದೆ ಸಾಲು ಸಾಲು ಸವಾಲಿವೆ. ಏಕದಿನ ವಿಶ್ವಕಪ್ಗೆ ಬಲಿಷ್ಠ ತಂಡದ ಆಯ್ಕೆ, ಸೀನಿಯರ್ ಆಟಗಾರರ ಭವಿಷ್ಯ ನಿರ್ಧಾರ, ರೋಹಿತ್ ಉತ್ತರಾಧಿಕಾರಿ ನೇಮಕ. ಹೀಗೆ ದೊಡ್ಡ ದೊಡ್ಡ ಸವಾಲುಗಳು ಅಗರ್ಕರ್ ಮುಂದಿವೆ.
ವೆಸ್ಟ್ ಇಂಡೀಸ್ ಸರಣಿಯಿಂದಲೇ ಸಿದ್ಧವಾಗಬೇಕು ಬ್ಲೂ ಪ್ರಿಂಟ್.!
2007ರ ಚೊಚ್ಚಲ ಆವೃತ್ತಿಯಲ್ಲಿ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದ ಟೀಮ್ ಇಂಡಿಯಾ ಆ ಬಳಿಕ ಟಿ20 ಕಿರೀಟ ಗೆಲ್ಲುವಲ್ಲಿ ವಿಫಲವಾಗಿದೆ. ಟಿ20 ಫಾರ್ಮೆಟ್ನಲ್ಲಿ ಎಷ್ಟೇ ಬಲಿಷ್ಠ ತಂಡವಾಗಿ ರೂಪುಗೊಂಡರು ಚಾಂಪಿಯನ್ ಪಟ್ಟ ಕನಸಾಗಿ ಉಳಿದಿದೆ. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ ನಡೆಯೋ ಟೂರ್ನಿಯಲ್ಲಾದ್ರೂ, ಕಪ್ ಗೆಲ್ಲಬೇಕು ಅನ್ನೋದು ಬಿಸಿಸಿಐನ ಲೆಕ್ಕಾಚಾರವಾಗಿದೆ. ಹಾಗಾಗಬೇಕಂದ್ರೆ ಈ ಬಾರಿಯ ಇಂಡೀಸ್ ಪ್ರವಾಸದಿಂದಲೇ ಬ್ಲ್ಯೂ ಪ್ರಿಂಟ್ ಸಿದ್ಧವಾಗಬೇಕಿದೆ.
ಅಜಿತ್ ಅಗರ್ಕರ್ ಹೆಗಲ ಮೇಲಿದೆ ಪೂರ್ತಿ ಭಾರ..!
ಕಳೆದ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ 2024ರ ಟಿ20 ವಿಶ್ವಕಪ್ನಿಂದ ಹೊರಗುಳಿಯೋದು ಬಹುತೇಕ ಕನ್ಫರ್ಮ್. ಇನ್ನು ಕೋಚ್ ದ್ರಾವಿಡ್, ಒಪ್ಪಂದ ಏಕದಿನ ವಿಶ್ವಕಪ್ ಬಳಿಕ ಮುಗಿಯಲಿದೆ. ಆ ಬಳಿಕ ದ್ರಾವಿಡ್ ಮುಂದುವರೆಯೋದು ಅನುಮಾನ. ಹೀಗಾಗಿ ಭವಿಷ್ಯದ ಟಿ20 ತಂಡವನ್ನ ರೂಪಿಸುವ ಸಂಪೂರ್ಣ ಜವಾಬ್ದಾರಿ ಈಗ ಅಜಿತ್ ಅಗರ್ಕರ್ ಹೆಗಲೇರಿದೆ.
ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಗೆ ಬೇಕಿದೆ ಉತ್ತರ.!
ಕಳೆದ ಟಿ20 ವಿಶ್ವಕಪ್ ಅಂತ್ಯದ ಬಳಿಕ ಹಾರ್ದಿಕ್ ಪಾಂಡ್ಯನೇ ಶಾರ್ಟೆಸ್ಟ್ ಫಾರ್ಮೆಟ್ನಲ್ಲಿ ತಂಡವನ್ನ ಮುನ್ನಡೆಸ್ತಾ ಬರುತ್ತಿದ್ದಾರೆ. ಟಿ20 ತಂಡಕ್ಕೆ ಇನ್ಮುಂದೆ ಹಾರ್ದಿಕ್ ಪಾಂಡ್ಯ ಸಾರಥಿ ಎಂಬ ಮಾತು ಬಿಸಿಸಿಐ ಮೂಲಗಳಿಂದ ಪದೇ ಪದೇ ಕೇಳಿ ಬಂದಿದೆ. ಆದ್ರೆ, ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಇದನ್ನು ಓದಿ: Pawan Kalyan: ಡಿವೋರ್ಸ್ ವದಂತಿಗೆ ಪವನ್ ಕಲ್ಯಾಣ್ ಸ್ಪಷ್ಟನೆ -ನಿಟ್ಟುಸಿರು ಬಿಟ್ಟ ಅಭಿಮಾನಿಗಳು
ಟಿ20 ಫಾರ್ಮೆಟ್ನಿಂದ ಸೀನಿಯರ್ ಆಟಗಾರರನ್ನ ಹೊರಗಿಟ್ಟು, ಯಂಗ್ಸ್ಟರ್ಗಳನ್ನ ಕರೆತರಲು ಬಿಸಿಸಿಐ ತೆರೆಮರೆಯಲ್ಲೇ ಕಸರತ್ತು ನಡೆಸ್ತಿದೆ. ಸರಣಿಯಿಂದ ಸರಣಿಗೆ ಯುವ ಆಟಗಾರರಿಗೆ ಚಾನ್ಸ್ ನೀಡ್ತಾ ಬಂದಿದೆ. ಆದ್ರೆ, ಸ್ಥಾನಕ್ಕಿರೋ ಪೈಪೋಟಿ ಆಟಗಾರರಲ್ಲಿ ಅಭದ್ರತೆಯನ್ನ ಸೃಷ್ಟಿಸಿದೆ. ಈ ಆತಂಕದಿಂದ ಯುವ ಆಟಗಾರರನ್ನ ಹೊರ ತಂದು ಕೋರ್ ಟೀಮ್ ಕಟ್ಟೋ ಸವಾಲು ಅಗರ್ಕರ್ ಹೆಗಲಮೇಲಿದೆ.
ಮುಂಬರುವ ಅಕ್ಟೋಬರ್ -ನವೆಂಬರ್ನಲ್ಲಿ ನಡೆಯೋ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಹೆಚ್ಚು ಹೆಚ್ಚು ಟಿ20 ಸರಣಿಗಳನ್ನ ಆಡಲಿದೆ. ಸಿರೀಸ್ ಬೈ ಸಿರೀಸ್ ಆಟಗಾರರನ್ನ ಶಾರ್ಟ್ ಲಿಸ್ಟ್ ಮಾಡುವ ಅವಕಾಶವಿದೆ. ಆದ್ರೂ, ಮುಂದಿನ ಎಲ್ಲ ಲೆಕ್ಕಾಚಾರಗಳು ಸಲೀಸಾಗಿ ನಡೆಯಬೇಕಂದ್ರೆ, ಈ ವೆಸ್ಟ್ ಇಂಡೀಸ್ ಸರಣಿಯಿಂದ ಸಿದ್ಧತೆ ಆರಂಭಿಸಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ