ಗಂಡನ ಚರ್ಮದ ಬಣ್ಣದಿಂದ ಬೇಸತ್ತು ಕೊಂದ ಪತ್ನಿ
ಬೆಳಗ್ಗಿನ ಜಾವ ಗಂಡನಿಗೆ ಪೆಟ್ರೋಲ್ ಸುರಿದು ಕೊಲೆ
ಅಣ್ಣನನ್ನು ಕೊಂದ ಅತ್ತಿಗೆ ವಿರುದ್ಧ ಕೋರ್ಟ್ ಮೊರೆ ಹೋದ ತಮ್ಮ
ಉತ್ತರ ಪ್ರದೇಶ: ಪತಿ ಕಪ್ಪಗಿದ್ದಾನೆಂದು ಪೆಟ್ರೋಲ್ ಸುರಿದು ಕೊಲೆ ಮಾಡಿದ್ದ ಪತ್ನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
2019ರಲ್ಲಿ ಬಿಚೆಟ್ಟಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಸೋಮವಾರದಂದು ಸಂಭಾಲ್ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.
ಗಂಡ ಸತ್ಯವೀರ್ ಕಪ್ಪು ಬಣ್ಣವನ್ನು ಹೊಂದಿದ್ದಾನೆಂದು ಪತ್ನಿ ಪ್ರೇಮಶ್ರೀ ಅಲಿಯಾಸ್ ನಹಿ ಆತ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ್ದಳು. ಈ ಪ್ರಕರಣದಡಿ ಮಹಿಳೆಗೆ ಶಿಕ್ಷೆಯ ಜೊತೆಗೆ 25 ಸಾವಿರ ದಂಡವನ್ನು ವಿಧಿಸಿತ್ತು. ಆದರೆ ಈ ಪ್ರಕರಣವು ಹೆಚ್ಚುವರಿ ಸೆಷನ್ಸ್ ನ್ಯಾಯಾಲದ ಮೆಟ್ಟಿಲೇರಿದ್ದು, ಸೋಮವಾರದಂದು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಪ್ರೇಮಶ್ರೀ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಗಂಡನಿಗೆ ಪೆಟ್ರೋಲ್ ಸುರಿಯುತ್ತಾಳೆ. ಬೆಂಕಿಗೆ ಗಂಡ ಸತ್ಯವೀರ್ ಸಂಪೂರ್ಣ ಸುಟ್ಟು ಕರಕಲಾಗಿದ್ದನು. ಈ ಪ್ರಕರಣದ ಸಂಬಂಧ ಮೃತನ ಸಹೋದರ ಹರ್ವೀರ್ ಸಿಂಗ್ ಅತ್ತಿಗೆ ವಿರುದ್ಧ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದನು. ಅದರಂತೆ ಕೋರ್ಟ್ ಮಹಿಳೆಗೆ ಶಿಕ್ಷೆ ವಿಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗಂಡನ ಚರ್ಮದ ಬಣ್ಣದಿಂದ ಬೇಸತ್ತು ಕೊಂದ ಪತ್ನಿ
ಬೆಳಗ್ಗಿನ ಜಾವ ಗಂಡನಿಗೆ ಪೆಟ್ರೋಲ್ ಸುರಿದು ಕೊಲೆ
ಅಣ್ಣನನ್ನು ಕೊಂದ ಅತ್ತಿಗೆ ವಿರುದ್ಧ ಕೋರ್ಟ್ ಮೊರೆ ಹೋದ ತಮ್ಮ
ಉತ್ತರ ಪ್ರದೇಶ: ಪತಿ ಕಪ್ಪಗಿದ್ದಾನೆಂದು ಪೆಟ್ರೋಲ್ ಸುರಿದು ಕೊಲೆ ಮಾಡಿದ್ದ ಪತ್ನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
2019ರಲ್ಲಿ ಬಿಚೆಟ್ಟಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಸೋಮವಾರದಂದು ಸಂಭಾಲ್ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.
ಗಂಡ ಸತ್ಯವೀರ್ ಕಪ್ಪು ಬಣ್ಣವನ್ನು ಹೊಂದಿದ್ದಾನೆಂದು ಪತ್ನಿ ಪ್ರೇಮಶ್ರೀ ಅಲಿಯಾಸ್ ನಹಿ ಆತ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ್ದಳು. ಈ ಪ್ರಕರಣದಡಿ ಮಹಿಳೆಗೆ ಶಿಕ್ಷೆಯ ಜೊತೆಗೆ 25 ಸಾವಿರ ದಂಡವನ್ನು ವಿಧಿಸಿತ್ತು. ಆದರೆ ಈ ಪ್ರಕರಣವು ಹೆಚ್ಚುವರಿ ಸೆಷನ್ಸ್ ನ್ಯಾಯಾಲದ ಮೆಟ್ಟಿಲೇರಿದ್ದು, ಸೋಮವಾರದಂದು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಪ್ರೇಮಶ್ರೀ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಗಂಡನಿಗೆ ಪೆಟ್ರೋಲ್ ಸುರಿಯುತ್ತಾಳೆ. ಬೆಂಕಿಗೆ ಗಂಡ ಸತ್ಯವೀರ್ ಸಂಪೂರ್ಣ ಸುಟ್ಟು ಕರಕಲಾಗಿದ್ದನು. ಈ ಪ್ರಕರಣದ ಸಂಬಂಧ ಮೃತನ ಸಹೋದರ ಹರ್ವೀರ್ ಸಿಂಗ್ ಅತ್ತಿಗೆ ವಿರುದ್ಧ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದನು. ಅದರಂತೆ ಕೋರ್ಟ್ ಮಹಿಳೆಗೆ ಶಿಕ್ಷೆ ವಿಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ