newsfirstkannada.com

World Cup; ಮುಂದುವರೆದ ಭಾರತದ ಜೈತಯಾತ್ರೆ.. ಆದ್ರೆ ಡ್ರೆಸಿಂಗ್​ ರೂಮ್​ನಲ್ಲಿ ಆತಂಕದ ವಾತಾವರಣ, ಯಾಕೆ?

Share :

27-10-2023

    ಪಾಂಡ್ಯ ಇಲ್ಲದೇ ಟೀಮ್​ ಇಂಡಿಯಾಗೆ ಶರುವಾಗಿದೆ ಹಿನ್ನಡೆಯ ಆತಂಕ

    ರೋಹಿತ್ ಬಳಗದಲ್ಲಿ ಗೆಲುವಿನ ಸಂಭ್ರಮ ಮಾಯ, ತಂಡದಲ್ಲಿ ಟೆನ್ಶನ್​

    ರವೀಂದ್ರ ಜಡೇಜಾ ಮಾತ್ರ ಏಕೈಕ ಆಲ್​ರೌಂಡರ್ ಆಗಿ ತಂಡದಲ್ಲಿದ್ದಾರೆ

ತವರಿನಲ್ಲಿ ನಡೆಯುತ್ತ ಇರೋ ಪ್ರತಿಷ್ಟಿತ ಟೂರ್ನಿಯಲ್ಲಿ ಸೆಮೀಸ್​ನತ್ತ ದಿಟ್ಟ ಹೆಜ್ಜೆ ಇಟ್ಟಿರೋ ಟೀಮ್​ ಇಂಡಿಯಾದಲ್ಲಿ ಆತಂಕ ಮನೆ ಮಾಡಿದೆ. ಐದಕ್ಕೆ 5 ಪಂದ್ಯ ಗೆದ್ದಿದ್ರೂ, ಡ್ರೆಸ್ಸಿಂಗ್​ ರೂಮ್​ನಲ್ಲಿ ಆತಂಕದ ಕಾರ್ಮೋಡ ಆವರಿಸಿದೆ. ಬೆಂಗಳೂರಿನ ಎನ್​​ಸಿಎನಿಂದ ಹೊರಬಿದ್ದ ಆ ಒಂದು ಸುದ್ದಿ ಅಜೇಯ ರೋಹಿತ್​ ಪಡೆಯ ಕಾನ್ಫಿಡೆನ್ಸ್​ ಕುಸಿಯುವಂತೆ ಮಾಡಿದೆ.

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಅದ್ಧೂರಿ ಆರಂಭ ಮಾಡಿದ್ದು ಆಯ್ತು. ಸೆಮೀಸ್​ ಟಿಕೆಟ್​ ಬಹುತೇಕ ಫಿಕ್ಸ್​ ಎಂಬ ನಿರಾಳ ಭಾವ ಮೂಡಿದ್ದು ಆಯ್ತು. ಸದ್ಯ ಟೇಬಲ್​​ ಟಾಪರ್​ ಆಗಿರೋ ಟೀಮ್​ ಇಂಡಿಯಾ, ಈ ಬಾರಿ ಚಾಂಪಿಯನ್​ ಪಟ್ಟಕ್ಕೇರೋದು ಕನ್​ಫರ್ಮ್​ ಅನ್ನೋವಷ್ಟರ ಮಟ್ಟಿಗೆ ಅಭಿಮಾನಿಗಳಲ್ಲಿ ಕಾನ್ಫಿಡೆನ್ಸ್​ ಬಂದು ಬಿಟ್ಟಿದೆ.

ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯ

ಗೆಲುವಿನ ಸಂಭ್ರಮದ ನಡುವೆ ಹಿನ್ನಡೆಯ ಆತಂಕ

ಟೀಮ್​ ಇಂಡಿಯಾ ಗೆಲುವಿನ ಜೈತಯಾತ್ರೆಯನ್ನ ಮುಂದುವರೆಸಿದ್ರೂ, ಡ್ರೆಸ್ಸಿಂಗ್​ ರೂಮ್​ನ ಆತಂಕದ ಕರಿಛಾಯೆ ಆವರಿಸಿದೆ. ಫುಲ್​ ಸೆಟ್​ ಆಗಿದ್ದ ಟೀಮ್​ ಕಾಂಬಿನೇಷನ್​ ಮುಂದಿನ ದಿನಗಳಲ್ಲಿ ಹೆಚ್ಚು ಡಿಸ್ಟರ್ಬ್​ ಆಗಲಿದೆ. ಇದಕ್ಕೆಲ್ಲ ಕಾರಣ ಆಲ್​​ರೌಂಡರ್​ ಹಾರ್ದಿಕ್​ ಇಂಜುರಿ.

ಆಲ್​​ರೌಂಡರ್​ ಪಾಂಡ್ಯ ಇಂಜುರಿ ಗಂಭೀರ.!

ಬಾಂಗ್ಲಾದೇಶ ವಿರುದ್ಧದ ಲೀಗ್​ ಫೈಟ್​ನಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್​ ಪಾಂಡ್ಯ ಹೆಲ್ತ್​ನ ಬಿಗ್​ ಅಪ್ಡೇಟ್​​ ಹೊರ ಬಿದ್ದಿದೆ. ಹಾರ್ದಿಕ್​ ಸೀರಿಯಸ್​​ ಲಿಗಮೆಂಟ್​ ಟೇರ್​​ ಇಂಜುರಿಗೆ ತುತ್ತಾಗಿದ್ದಾರೆ. ಏನಿಲ್ಲ ಅಂದ್ರೂ ಹಾರ್ದಿಕ್​ ಚೇತರಿಕೆಗೆ ಕನಿಷ್ಟ 1 ವಾರಕ್ಕಿಂತ ಹೆಚ್ಚು ದಿನಗಳ ಕಾಲಾವಕಾಶ ಬೇಕಂತೆ. ಇನ್ನು, ಕಂಪ್ಲೀಟ್​​ ಫಿಟ್​​ ಆಗಲು ಇನ್ನೂ ಹೆಚ್ಚಿನ ದಿನಗಳು ಬೇಕು ಅನ್ನೋ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ಲೀಗ್​ ಪಂದ್ಯಗಳಿಂದ ಹಾರ್ದಿಕ್​​ ಪಾಂಡ್ಯ ಔಟ್​​.?

ಹಾರ್ದಿಕ್​ ಪಾಂಡ್ಯ ಸದ್ಯ ಬೆಂಗಳೂರಿನ ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದಾರೆ. ಎನ್​ಸಿಎನ ಸ್ಪೋರ್ಟ್ಸ್​ ಸೈನ್ಸ್​ ಹಾಗೂ ಮೆಡಿಸನ್​ ವಿಭಾಗದ ಹೆಡ್​ ನಿತಿನ್​ ಪಟೇಲ್​, ಹಾರ್ದಿಕ್​ ಇಂಜುರಿಯನ್ನ ಮಾನಿಟರ್​ ಮಾಡ್ತಿದ್ದಾರೆ. ಈಗಾಗಲೇ ಟೀಮ್​ ಮ್ಯಾನೇಜ್​ಮೆಂಟ್​ಗೆ ನಿತಿನ್​ ಪಟೇಲ್​ ವರದಿ ನೀಡಿದ್ದು, ಲೀಗ್​ ಪಂದ್ಯಗಳಿಗೆ 100% ಫಿಟ್​​ ಆಗೋದು ಅನುಮಾನ ಎಂದಿದ್ದಾರೆ.

ರಿಸ್ಕ್​ ತೆಗೆದುಕೊಳ್ಳೋಕೆ ರೆಡಿಯಿಲ್ಲ ಬಿಸಿಸಿಐ.!

ಲೀಗ್​ ಪಂದ್ಯಗಳಿಗೆ ಅಲಭ್ಯರಾದ್ರೂ, ನಾಕೌಟ್​ ಪಂದ್ಯಗಳಲ್ಲಿ ಪಾಂಡ್ಯರನ್ನ ಆಡಿಸಲು ಟೀಮ್​ ಮ್ಯಾನೇಜ್​ಮೆಂಟ್​​ ಚಿಂತಿಸಿದೆ. 100% ಫಿಟ್​ ಆಗಲಿಲ್ಲ ಅಂದ್ರೆ ಇಂಜೆಕ್ಷನ್​ ಮೊರೆ ಹೋಗೋ ಲೆಕ್ಕಾಚಾರ ನಡೀತಿದೆ. ಆದ್ರೆ, ಬಿಸಿಸಿಐ ಮಾತ್ರ ರಿಸ್ಕ್​ ತೆಗೆದುಕೊಳ್ಳಲು ಹಿಂದೇಟೆ ಹಾಕ್ತಿದೆ. ಕಂಪ್ಲೀಟ್​ ಫಿಟ್​ ಆಗೋವರೆಗೂ ಟೀಮ್​ ಇಂಡಿಯಾಗೆ ನೋ ಎಂಟ್ರಿ ಅಂತಿದೆ ಬಿಸಿಸಿಐ.

ಮ್ಯಾನೇಜ್​ಮೆಂಟ್​ನಿಂದ ರಿಪ್ಲೆಸ್​ಮೆಂಟ್ ಹುಡುಕಾಟ

ಹಾರ್ದಿಕ್​ ಪಾಂಡ್ಯ ತಂಡಕ್ಕೆ ಮರಳಿ ಬೌಲಿಂಗ್​ ಮಾಡದಿದ್ರೆ ಟೀಮ್​ ಇಂಡಿಯಾಗೆ ಯಾವುದೇ ಅನುಕೂಲವಿಲ್ಲ. ಹೀಗಾಗಿ ರಿಪ್ಲೇಸ್​ಮೆಂಟ್​ನ ಹುಡುಕಾಟ ನಡೆಯುತ್ತಿದೆ. ಏಷ್ಯಾಕಪ್​ ವೇಳೆ ಇಂಜುರಿಗೆ ತುತ್ತಾಗಿ ವಿಶ್ವಕಪ್​ ತಂಡದಿಂದ ಹೊರ ಬಿದ್ದಿದ್ದ ಅಕ್ಷರ್​ ಪಟೇಲ್​ ಸದ್ಯ ಫಿಟ್​ ಆಗಿದ್ದಾರೆ. ಬಹುತೇಕ ಅಕ್ಷರ್​ ಪಟೇಲ್​ಗೆ ವಿಶ್ವಕಪ್​ ಟೀಮ್​ ಡೋರ್​ ಓಪನ್​ ಆಗೋ ಸಾಧ್ಯತೆಯಿದೆ.

ಹಾರ್ದಿಕ್ ಪಾಂಡ್ಯಗೆ ಗಾಯವಾಗಿರುವುದು

ತಂಡಕ್ಕೆ ತೀವ್ರ ಹಿನ್ನಡೆಯಾಗುತ್ತಾ ಹಾರ್ದಿಕ್​ ಅಲಭ್ಯತೆ.?

2021ರ ಟಿ20 ವಿಶ್ವಕಪ್​ಗೂ ಮುನ್ನವೂ ಹಾರ್ದಿಕ್​ ಪಾಂಡ್ಯ ಇಂಜುರಿಗೆ ತುತ್ತಾಗಿದ್ರು. ಆಗ 100% ಫಿಟ್​ ಆಗೋಕೆ ಮುನ್ನವೇ ವಿಶ್ವಕಪ್​ ಟೂರ್ನಿಯಲ್ಲಿ ಆಡಿದ್ದ ಪಾಂಡ್ಯ 3 ಇನ್ನಿಂಗ್ಸ್​ನಿಂದ ಕೇವಲ 69 ರನ್​ ಸಿಡಿಸಿದ್ರು. ಟೂರ್ನಿಯಲ್ಲಿ ಕೇವಲ 4 ಓವರ್​ ಮಾತ್ರ ಬೌಲಿಂಗ್​ ಮಾಡಿದ್ರು. ಆಲ್​​ರೌಂಡರ್​ ಪಾಂಡ್ಯ ತಂಡದಲ್ಲಿ ಇದ್ದೂ ಇಲ್ಲದಂತಾಗಿದ್ದು ಟೀಮ್​ ಇಂಡಿಯಾಗೆ ತೀವ್ರ ಹಿನ್ನಡೆಯನ್ನ ತಂದಿಟ್ಟಿತ್ತು. ಇದೀಗ ಮತ್ತೆ ಅಂತದ್ದೇ ಆತಂಕ ಟೀಮ್​ ಇಂಡಿಯಾವನ್ನ ಕಾಡುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup; ಮುಂದುವರೆದ ಭಾರತದ ಜೈತಯಾತ್ರೆ.. ಆದ್ರೆ ಡ್ರೆಸಿಂಗ್​ ರೂಮ್​ನಲ್ಲಿ ಆತಂಕದ ವಾತಾವರಣ, ಯಾಕೆ?

https://newsfirstlive.com/wp-content/uploads/2023/10/HARDHIK_PANDYA_KOHLI.jpg

    ಪಾಂಡ್ಯ ಇಲ್ಲದೇ ಟೀಮ್​ ಇಂಡಿಯಾಗೆ ಶರುವಾಗಿದೆ ಹಿನ್ನಡೆಯ ಆತಂಕ

    ರೋಹಿತ್ ಬಳಗದಲ್ಲಿ ಗೆಲುವಿನ ಸಂಭ್ರಮ ಮಾಯ, ತಂಡದಲ್ಲಿ ಟೆನ್ಶನ್​

    ರವೀಂದ್ರ ಜಡೇಜಾ ಮಾತ್ರ ಏಕೈಕ ಆಲ್​ರೌಂಡರ್ ಆಗಿ ತಂಡದಲ್ಲಿದ್ದಾರೆ

ತವರಿನಲ್ಲಿ ನಡೆಯುತ್ತ ಇರೋ ಪ್ರತಿಷ್ಟಿತ ಟೂರ್ನಿಯಲ್ಲಿ ಸೆಮೀಸ್​ನತ್ತ ದಿಟ್ಟ ಹೆಜ್ಜೆ ಇಟ್ಟಿರೋ ಟೀಮ್​ ಇಂಡಿಯಾದಲ್ಲಿ ಆತಂಕ ಮನೆ ಮಾಡಿದೆ. ಐದಕ್ಕೆ 5 ಪಂದ್ಯ ಗೆದ್ದಿದ್ರೂ, ಡ್ರೆಸ್ಸಿಂಗ್​ ರೂಮ್​ನಲ್ಲಿ ಆತಂಕದ ಕಾರ್ಮೋಡ ಆವರಿಸಿದೆ. ಬೆಂಗಳೂರಿನ ಎನ್​​ಸಿಎನಿಂದ ಹೊರಬಿದ್ದ ಆ ಒಂದು ಸುದ್ದಿ ಅಜೇಯ ರೋಹಿತ್​ ಪಡೆಯ ಕಾನ್ಫಿಡೆನ್ಸ್​ ಕುಸಿಯುವಂತೆ ಮಾಡಿದೆ.

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಅದ್ಧೂರಿ ಆರಂಭ ಮಾಡಿದ್ದು ಆಯ್ತು. ಸೆಮೀಸ್​ ಟಿಕೆಟ್​ ಬಹುತೇಕ ಫಿಕ್ಸ್​ ಎಂಬ ನಿರಾಳ ಭಾವ ಮೂಡಿದ್ದು ಆಯ್ತು. ಸದ್ಯ ಟೇಬಲ್​​ ಟಾಪರ್​ ಆಗಿರೋ ಟೀಮ್​ ಇಂಡಿಯಾ, ಈ ಬಾರಿ ಚಾಂಪಿಯನ್​ ಪಟ್ಟಕ್ಕೇರೋದು ಕನ್​ಫರ್ಮ್​ ಅನ್ನೋವಷ್ಟರ ಮಟ್ಟಿಗೆ ಅಭಿಮಾನಿಗಳಲ್ಲಿ ಕಾನ್ಫಿಡೆನ್ಸ್​ ಬಂದು ಬಿಟ್ಟಿದೆ.

ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯ

ಗೆಲುವಿನ ಸಂಭ್ರಮದ ನಡುವೆ ಹಿನ್ನಡೆಯ ಆತಂಕ

ಟೀಮ್​ ಇಂಡಿಯಾ ಗೆಲುವಿನ ಜೈತಯಾತ್ರೆಯನ್ನ ಮುಂದುವರೆಸಿದ್ರೂ, ಡ್ರೆಸ್ಸಿಂಗ್​ ರೂಮ್​ನ ಆತಂಕದ ಕರಿಛಾಯೆ ಆವರಿಸಿದೆ. ಫುಲ್​ ಸೆಟ್​ ಆಗಿದ್ದ ಟೀಮ್​ ಕಾಂಬಿನೇಷನ್​ ಮುಂದಿನ ದಿನಗಳಲ್ಲಿ ಹೆಚ್ಚು ಡಿಸ್ಟರ್ಬ್​ ಆಗಲಿದೆ. ಇದಕ್ಕೆಲ್ಲ ಕಾರಣ ಆಲ್​​ರೌಂಡರ್​ ಹಾರ್ದಿಕ್​ ಇಂಜುರಿ.

ಆಲ್​​ರೌಂಡರ್​ ಪಾಂಡ್ಯ ಇಂಜುರಿ ಗಂಭೀರ.!

ಬಾಂಗ್ಲಾದೇಶ ವಿರುದ್ಧದ ಲೀಗ್​ ಫೈಟ್​ನಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್​ ಪಾಂಡ್ಯ ಹೆಲ್ತ್​ನ ಬಿಗ್​ ಅಪ್ಡೇಟ್​​ ಹೊರ ಬಿದ್ದಿದೆ. ಹಾರ್ದಿಕ್​ ಸೀರಿಯಸ್​​ ಲಿಗಮೆಂಟ್​ ಟೇರ್​​ ಇಂಜುರಿಗೆ ತುತ್ತಾಗಿದ್ದಾರೆ. ಏನಿಲ್ಲ ಅಂದ್ರೂ ಹಾರ್ದಿಕ್​ ಚೇತರಿಕೆಗೆ ಕನಿಷ್ಟ 1 ವಾರಕ್ಕಿಂತ ಹೆಚ್ಚು ದಿನಗಳ ಕಾಲಾವಕಾಶ ಬೇಕಂತೆ. ಇನ್ನು, ಕಂಪ್ಲೀಟ್​​ ಫಿಟ್​​ ಆಗಲು ಇನ್ನೂ ಹೆಚ್ಚಿನ ದಿನಗಳು ಬೇಕು ಅನ್ನೋ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ಲೀಗ್​ ಪಂದ್ಯಗಳಿಂದ ಹಾರ್ದಿಕ್​​ ಪಾಂಡ್ಯ ಔಟ್​​.?

ಹಾರ್ದಿಕ್​ ಪಾಂಡ್ಯ ಸದ್ಯ ಬೆಂಗಳೂರಿನ ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದಾರೆ. ಎನ್​ಸಿಎನ ಸ್ಪೋರ್ಟ್ಸ್​ ಸೈನ್ಸ್​ ಹಾಗೂ ಮೆಡಿಸನ್​ ವಿಭಾಗದ ಹೆಡ್​ ನಿತಿನ್​ ಪಟೇಲ್​, ಹಾರ್ದಿಕ್​ ಇಂಜುರಿಯನ್ನ ಮಾನಿಟರ್​ ಮಾಡ್ತಿದ್ದಾರೆ. ಈಗಾಗಲೇ ಟೀಮ್​ ಮ್ಯಾನೇಜ್​ಮೆಂಟ್​ಗೆ ನಿತಿನ್​ ಪಟೇಲ್​ ವರದಿ ನೀಡಿದ್ದು, ಲೀಗ್​ ಪಂದ್ಯಗಳಿಗೆ 100% ಫಿಟ್​​ ಆಗೋದು ಅನುಮಾನ ಎಂದಿದ್ದಾರೆ.

ರಿಸ್ಕ್​ ತೆಗೆದುಕೊಳ್ಳೋಕೆ ರೆಡಿಯಿಲ್ಲ ಬಿಸಿಸಿಐ.!

ಲೀಗ್​ ಪಂದ್ಯಗಳಿಗೆ ಅಲಭ್ಯರಾದ್ರೂ, ನಾಕೌಟ್​ ಪಂದ್ಯಗಳಲ್ಲಿ ಪಾಂಡ್ಯರನ್ನ ಆಡಿಸಲು ಟೀಮ್​ ಮ್ಯಾನೇಜ್​ಮೆಂಟ್​​ ಚಿಂತಿಸಿದೆ. 100% ಫಿಟ್​ ಆಗಲಿಲ್ಲ ಅಂದ್ರೆ ಇಂಜೆಕ್ಷನ್​ ಮೊರೆ ಹೋಗೋ ಲೆಕ್ಕಾಚಾರ ನಡೀತಿದೆ. ಆದ್ರೆ, ಬಿಸಿಸಿಐ ಮಾತ್ರ ರಿಸ್ಕ್​ ತೆಗೆದುಕೊಳ್ಳಲು ಹಿಂದೇಟೆ ಹಾಕ್ತಿದೆ. ಕಂಪ್ಲೀಟ್​ ಫಿಟ್​ ಆಗೋವರೆಗೂ ಟೀಮ್​ ಇಂಡಿಯಾಗೆ ನೋ ಎಂಟ್ರಿ ಅಂತಿದೆ ಬಿಸಿಸಿಐ.

ಮ್ಯಾನೇಜ್​ಮೆಂಟ್​ನಿಂದ ರಿಪ್ಲೆಸ್​ಮೆಂಟ್ ಹುಡುಕಾಟ

ಹಾರ್ದಿಕ್​ ಪಾಂಡ್ಯ ತಂಡಕ್ಕೆ ಮರಳಿ ಬೌಲಿಂಗ್​ ಮಾಡದಿದ್ರೆ ಟೀಮ್​ ಇಂಡಿಯಾಗೆ ಯಾವುದೇ ಅನುಕೂಲವಿಲ್ಲ. ಹೀಗಾಗಿ ರಿಪ್ಲೇಸ್​ಮೆಂಟ್​ನ ಹುಡುಕಾಟ ನಡೆಯುತ್ತಿದೆ. ಏಷ್ಯಾಕಪ್​ ವೇಳೆ ಇಂಜುರಿಗೆ ತುತ್ತಾಗಿ ವಿಶ್ವಕಪ್​ ತಂಡದಿಂದ ಹೊರ ಬಿದ್ದಿದ್ದ ಅಕ್ಷರ್​ ಪಟೇಲ್​ ಸದ್ಯ ಫಿಟ್​ ಆಗಿದ್ದಾರೆ. ಬಹುತೇಕ ಅಕ್ಷರ್​ ಪಟೇಲ್​ಗೆ ವಿಶ್ವಕಪ್​ ಟೀಮ್​ ಡೋರ್​ ಓಪನ್​ ಆಗೋ ಸಾಧ್ಯತೆಯಿದೆ.

ಹಾರ್ದಿಕ್ ಪಾಂಡ್ಯಗೆ ಗಾಯವಾಗಿರುವುದು

ತಂಡಕ್ಕೆ ತೀವ್ರ ಹಿನ್ನಡೆಯಾಗುತ್ತಾ ಹಾರ್ದಿಕ್​ ಅಲಭ್ಯತೆ.?

2021ರ ಟಿ20 ವಿಶ್ವಕಪ್​ಗೂ ಮುನ್ನವೂ ಹಾರ್ದಿಕ್​ ಪಾಂಡ್ಯ ಇಂಜುರಿಗೆ ತುತ್ತಾಗಿದ್ರು. ಆಗ 100% ಫಿಟ್​ ಆಗೋಕೆ ಮುನ್ನವೇ ವಿಶ್ವಕಪ್​ ಟೂರ್ನಿಯಲ್ಲಿ ಆಡಿದ್ದ ಪಾಂಡ್ಯ 3 ಇನ್ನಿಂಗ್ಸ್​ನಿಂದ ಕೇವಲ 69 ರನ್​ ಸಿಡಿಸಿದ್ರು. ಟೂರ್ನಿಯಲ್ಲಿ ಕೇವಲ 4 ಓವರ್​ ಮಾತ್ರ ಬೌಲಿಂಗ್​ ಮಾಡಿದ್ರು. ಆಲ್​​ರೌಂಡರ್​ ಪಾಂಡ್ಯ ತಂಡದಲ್ಲಿ ಇದ್ದೂ ಇಲ್ಲದಂತಾಗಿದ್ದು ಟೀಮ್​ ಇಂಡಿಯಾಗೆ ತೀವ್ರ ಹಿನ್ನಡೆಯನ್ನ ತಂದಿಟ್ಟಿತ್ತು. ಇದೀಗ ಮತ್ತೆ ಅಂತದ್ದೇ ಆತಂಕ ಟೀಮ್​ ಇಂಡಿಯಾವನ್ನ ಕಾಡುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More