newsfirstkannada.com

ಇದೆಂಥಾ ದ್ವೇಷ.. ಪ್ರಿಯಕರನನ್ನ ಹಾವು ಕಚ್ಚಿಸಿ ಕೊಂದ ಪ್ರಿಯತಮೆ

Share :

19-07-2023

    ಹಾವು ಬಿಟ್ಟು ಪ್ರಿಯಕರನ ಕೊಂದ ಪ್ರಿಯತಮೆ

    ಸತ್ತ ಉದ್ಯಮಿಯ ಕಾಲಿನಲ್ಲಿತ್ತು ಹಾವು ಕಚ್ಚಿದ ಗುರುತು

    ಉದ್ಯಮಿ ಕೊಲೆಯಲ್ಲಿ ಹಾವಾಡಿಗನು ಭಾಗಿ

ಮಹಿಳೆಯೊಬ್ಬಳು ತಾನು ಸಂಪರ್ಕಹೊಂದಿದ್ದ ಉದ್ಯಮಿಯನ್ನ ಹಾವು ಕಚ್ಚಿಸಿ ಕೊಲೆ ಮಾಡಿದ ಘಟನೆ ಉತ್ತರಾಖಂಡದ ಹಲ್ವಾನಿಯಲ್ಲಿ ನಡೆದಿದೆ. ಅಂಕಿತ್​ ಚೌಹಾಣ್​ ಎಂಬಾತ ಕೊಲೆಯಾಗಿದ್ದು, ಈ ಕೊಲೆಯಲ್ಲಿ ಹಾವಾಡಿಗನು ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಹಲ್ವಾನಿಯ ತೀನ್​ ಪಾನಿ ಎಂಬಲ್ಲಿ ಜುಲೈ 15ರಂದು ಅಂಕಿತ್​ ಚೌಹಾನ್​ ಮೃತದೇಹ ಕಾರಿನಲ್ಲಿ ಪತ್ತೆಯಾಗಿತ್ತು. ಆತನ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕೂಡ ಸಿಕ್ಕಿತ್ತು. ಕುಟುಂಬಸ್ಥರ ದೂರಿನ ಅನ್ವಯ ಜುಲೈ 17ರಂದು ಐಪಿಸಿ ಸೆಕ್ಷನ್​ 369/23 ಮತ್ತು 3042ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಯೋಜನೆ ರೂಪಿತ ಕೊಲೆ

ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಅಂಕಿತ್​ ಚೌಹಾಣ್​ನದ್ದು ಯೋಜನೆ ರೂಪಿತ ಕೊಲೆ ಎಂಬುದು ಧೃಡವಾಯಿತು. ಮಾತ್ರವಲ್ಲದೆ, ಹಾವಾಡಿಗ ಮತ್ತು ಮಹಿಳೆಯ ಕೈವಾಡ ಈ ಕೊಲೆ ಮೇಲಿದೆ ಎಂಬುದು ತನಿಖೆ ವೇಳೆ ಗೊತ್ತಾಯಿತು. ಬಳಿಕ ನೈನಿತಾಲ್ನ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಕೊಲೆಯಲ್ಲಿ ಐವರು ಭಾಗಿ

ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಪಂಕಜ್​ ಭಟ್​ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ್ದು, ಅಂಕಿತ್​ ಚೌಹಾಣ್​ ಕೊಲೆಯಲ್ಲಿ ಐವರು ಭಾಗಿಯಾಗಿದ್ದಾರೆ. ಇದರ ಪ್ರಮುಖ ಆರೋಪಿ ಡಾಲಿ ಅಲಿಯಾಸ್​ ಮಾಹಿ ಎಂಬಾತ ಮೃತ ಅಂಕಿತ್​ ಚೌಹಾಣ್​ ಜೊತೆ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಇದೆಂಥಾ ದ್ವೇಷ.. ಪ್ರಿಯಕರನನ್ನ ಹಾವು ಕಚ್ಚಿಸಿ ಕೊಂದ ಪ್ರಿಯತಮೆ

https://newsfirstlive.com/wp-content/uploads/2023/07/Snake-1.jpg

    ಹಾವು ಬಿಟ್ಟು ಪ್ರಿಯಕರನ ಕೊಂದ ಪ್ರಿಯತಮೆ

    ಸತ್ತ ಉದ್ಯಮಿಯ ಕಾಲಿನಲ್ಲಿತ್ತು ಹಾವು ಕಚ್ಚಿದ ಗುರುತು

    ಉದ್ಯಮಿ ಕೊಲೆಯಲ್ಲಿ ಹಾವಾಡಿಗನು ಭಾಗಿ

ಮಹಿಳೆಯೊಬ್ಬಳು ತಾನು ಸಂಪರ್ಕಹೊಂದಿದ್ದ ಉದ್ಯಮಿಯನ್ನ ಹಾವು ಕಚ್ಚಿಸಿ ಕೊಲೆ ಮಾಡಿದ ಘಟನೆ ಉತ್ತರಾಖಂಡದ ಹಲ್ವಾನಿಯಲ್ಲಿ ನಡೆದಿದೆ. ಅಂಕಿತ್​ ಚೌಹಾಣ್​ ಎಂಬಾತ ಕೊಲೆಯಾಗಿದ್ದು, ಈ ಕೊಲೆಯಲ್ಲಿ ಹಾವಾಡಿಗನು ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಹಲ್ವಾನಿಯ ತೀನ್​ ಪಾನಿ ಎಂಬಲ್ಲಿ ಜುಲೈ 15ರಂದು ಅಂಕಿತ್​ ಚೌಹಾನ್​ ಮೃತದೇಹ ಕಾರಿನಲ್ಲಿ ಪತ್ತೆಯಾಗಿತ್ತು. ಆತನ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕೂಡ ಸಿಕ್ಕಿತ್ತು. ಕುಟುಂಬಸ್ಥರ ದೂರಿನ ಅನ್ವಯ ಜುಲೈ 17ರಂದು ಐಪಿಸಿ ಸೆಕ್ಷನ್​ 369/23 ಮತ್ತು 3042ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಯೋಜನೆ ರೂಪಿತ ಕೊಲೆ

ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಅಂಕಿತ್​ ಚೌಹಾಣ್​ನದ್ದು ಯೋಜನೆ ರೂಪಿತ ಕೊಲೆ ಎಂಬುದು ಧೃಡವಾಯಿತು. ಮಾತ್ರವಲ್ಲದೆ, ಹಾವಾಡಿಗ ಮತ್ತು ಮಹಿಳೆಯ ಕೈವಾಡ ಈ ಕೊಲೆ ಮೇಲಿದೆ ಎಂಬುದು ತನಿಖೆ ವೇಳೆ ಗೊತ್ತಾಯಿತು. ಬಳಿಕ ನೈನಿತಾಲ್ನ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಕೊಲೆಯಲ್ಲಿ ಐವರು ಭಾಗಿ

ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಪಂಕಜ್​ ಭಟ್​ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ್ದು, ಅಂಕಿತ್​ ಚೌಹಾಣ್​ ಕೊಲೆಯಲ್ಲಿ ಐವರು ಭಾಗಿಯಾಗಿದ್ದಾರೆ. ಇದರ ಪ್ರಮುಖ ಆರೋಪಿ ಡಾಲಿ ಅಲಿಯಾಸ್​ ಮಾಹಿ ಎಂಬಾತ ಮೃತ ಅಂಕಿತ್​ ಚೌಹಾಣ್​ ಜೊತೆ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More