ಮುಂಗಡ ಬುಕ್ಕಿಂಗ್ಗೆ ಮುಂದಾದ ಮಹಿಳೆಯರಿಗೆ ನಿರಾಸೆ ಮೂಡಿಸಿದ KSRTC!
ಉಚಿತ ಬಸ್ನ ಲಾಭವನ್ನು ಪಡೆಯುತ್ತಿದ್ದಾರೆ 50 ಲಕ್ಷಕ್ಕೂ ಅಧಿಕ ಮಹಿಳೆಯರು
ಟಿಕೆಟ್ ಬುಕ್ಕಿಂಗ್ ಹೆಚ್ಚಳವಾಗುತ್ತಿದ್ದಂತೆ KSRTC ಆ್ಯಪ್, ವೆಬ್ಸೈಟ್ನ ಸರ್ವರ್ ಡೌನ್!
ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ನಿತ್ಯ 50 ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಬಸ್ನ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆ ಜಾರಿಯಾದ ಬೆನ್ನಲ್ಲೇ ಮಹಿಳೆಯರ ಓಡಾಟವೂ ಹೆಚ್ಚಿದೆ. ರಾಜ್ಯದ ಮೂಲೆ ಮೂಲೆಗೂ ಟ್ರಿಪ್ ಮಾಡ್ತಿದ್ದಾರೆ. ದೂರ ಊರಿಗೆ ಪ್ರವಾಸಕ್ಕೆ ತೆರಳುವವರಿಗೆ ಶಕ್ತಿ ಯೋಜನೆ ಅಡಿ ಅಡ್ವಾನ್ಸ್ ಬಸ್ ಬುಕ್ಕಿಂಗ್ಗೂ ಅವಕಾಶ ನೀಡಲಾಗಿತ್ತು. ಆದರೆ ಮುಂಗಡ ಬುಕ್ಕಿಂಗ್ಗೆ ಮುಂದಾದ ಮಹಿಳಾ ಮಣಿಯರಿಗೆ ನಿರಾಸೆಯಾಗಿದೆ.
ಶಕ್ತಿ ಯೋಜನೆ ಮೂಲಕ ದೂರದ ಊರುಗಳಿಗೆ ತೆರಳುವವರಿಗೆ ಅನುಕೂಲ ಆಗಲು, ಅಡ್ವಾನ್ಸ್ ಬಸ್ ಬುಕ್ಕಿಂಗ್ಗೆ ಕೆಎಸ್ಆರ್ಟಿಸಿ ಅವಕಾಶ ನೀಡಿತ್ತು. ಸಾಧಾರಣ ಬಸ್ಗಳಲ್ಲಿ ಟಿಕೆಟ್ ಬುಕ್ ಮಾಡಲು ಕೆಎಸ್ಆರ್ಟಿಸಿ ಆ್ಯಪ್ ನಲ್ಲಿ ಅವಕಾಶ ನೀಡಿತ್ತು. ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಮಹಿಳೆಯರು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದರು. ಅಲ್ಲದೆ ಅಡ್ವಾನ್ಸ್ ಟಿಕೆಟ್ ಬುಕ್ ಮಾಡಲು ಕೇವಲ 20 ರುಪಾಯಿ ಮಾತ್ರ ತೆಗೆದುಕೊಳ್ಳಲಾಗ್ತಿತ್ತು. ಏಕಾಏಕಿ ಬುಕ್ಕಿಂಗ್ ಹೆಚ್ಚಳವಾದ ಕಾರಣ ಕೆಎಸ್ಆರ್ಟಿಸಿ ಆ್ಯಪ್ ಹಾಗೂ ವೆಬ್ಸೈಟ್ನ ಸರ್ವರ್ ಡೌನ್ ಆಗಿದೆ.
ಕೆಎಸ್ಆರ್ಟಿಸಿ ವೆಬ್ಸೈಟ್ ಸರ್ವರ್ ಡೌನ್ ಆಗಿದ್ದಕ್ಕೆ ಜನರು ಟ್ವಿಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಟಿಕೆಟ್ ಬುಕ್ ಮಾಡಿದ್ರೆ ಅಮೌಂಟ್ ಕಟ್ ಆಗ್ತಿದೆ ಆದರೆ ಸೀಟ್ ಬುಕ್ ಆಗ್ತಿಲ್ಲ ಅಂತ ಕಿಡಿಕಾರಿದ್ದಾರೆ. ಅಲ್ಲದೆ ಕೆಎಸ್ಆರ್ಟಿಸಿ ಸಹಾಯವಾಣಿಗೆ ಕರೆ ಮಾಡಿದ್ರು ನೋ ರೆಸ್ಪಾನ್ಸ್ ಅಂತ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಜನರು ರೊಚ್ಚಿಗೆದ್ದು ಟ್ವೀಟ್ ಮಾಡಿದ್ರೋ ಕೆಎಸ್ಆರ್ಟಿಸಿ ಅಲರ್ಟ್ ಆಗಿ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದೆ. ಟೆಕ್ನಿಕಲ್ ಸಮಸ್ಯೆಯಿಂದ ಸರ್ವರ್ ಡೌನ್ ಆಗಿದೆ ಅಂತ ಸ್ಪಷ್ಟನೆ ನೀಡಿದೆ. ಜೊತೆಗೆ ಕಟ್ ಆಗಿರುವ ಹಣ ಐದರಿಂದ ಏಳು ದಿನದೊಳಗೆ ನಿಮ್ಮ ಖಾತೆಗೆ ಹಣ ರಿಫಂಡ್ ಆಗುತ್ತೆ ಅಂತ ಭರವಸೆ ನೀಡಿದೆ. ಶೀಘ್ರದಲ್ಲಿಯೇ ಸರ್ವರ್ ಸರಿ ಹೋಗುತ್ತೆ ಅಂತ ತಿಳಿಸಿದೆ.
ಒಟ್ಟಾರೆ ಶಕ್ತಿ ಯೋಜನೆಗೆ ಜಾರಿ ಆದ ನಂತರ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಳವಾಗಿದೆ. ನಾರಿಯರು ಭರ್ಜರಿ ಟ್ರೀಪ್ ಕೂಡ ಮಾಡ್ತಿದ್ದಾರೆ. ಆದರೆ ಏಕಾಏಕಿಯಾಗಿ ಸರ್ವರ್ ಡೌನ್ ಆಗಿದ್ದು ಜನರಿಗೆ ನಿರಾಸೆ ಮೂಡಿಸಿತ್ತು. ಈಗ ಕೆಎಸ್ಆರ್ಟಿಸಿ ಸರಿ ಮಾಡುವ ಭರವಸೆ ನೀಡಿದ್ದು, ಮತ್ತೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಮಹಿಳೆಯರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮುಂಗಡ ಬುಕ್ಕಿಂಗ್ಗೆ ಮುಂದಾದ ಮಹಿಳೆಯರಿಗೆ ನಿರಾಸೆ ಮೂಡಿಸಿದ KSRTC!
ಉಚಿತ ಬಸ್ನ ಲಾಭವನ್ನು ಪಡೆಯುತ್ತಿದ್ದಾರೆ 50 ಲಕ್ಷಕ್ಕೂ ಅಧಿಕ ಮಹಿಳೆಯರು
ಟಿಕೆಟ್ ಬುಕ್ಕಿಂಗ್ ಹೆಚ್ಚಳವಾಗುತ್ತಿದ್ದಂತೆ KSRTC ಆ್ಯಪ್, ವೆಬ್ಸೈಟ್ನ ಸರ್ವರ್ ಡೌನ್!
ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ನಿತ್ಯ 50 ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಬಸ್ನ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆ ಜಾರಿಯಾದ ಬೆನ್ನಲ್ಲೇ ಮಹಿಳೆಯರ ಓಡಾಟವೂ ಹೆಚ್ಚಿದೆ. ರಾಜ್ಯದ ಮೂಲೆ ಮೂಲೆಗೂ ಟ್ರಿಪ್ ಮಾಡ್ತಿದ್ದಾರೆ. ದೂರ ಊರಿಗೆ ಪ್ರವಾಸಕ್ಕೆ ತೆರಳುವವರಿಗೆ ಶಕ್ತಿ ಯೋಜನೆ ಅಡಿ ಅಡ್ವಾನ್ಸ್ ಬಸ್ ಬುಕ್ಕಿಂಗ್ಗೂ ಅವಕಾಶ ನೀಡಲಾಗಿತ್ತು. ಆದರೆ ಮುಂಗಡ ಬುಕ್ಕಿಂಗ್ಗೆ ಮುಂದಾದ ಮಹಿಳಾ ಮಣಿಯರಿಗೆ ನಿರಾಸೆಯಾಗಿದೆ.
ಶಕ್ತಿ ಯೋಜನೆ ಮೂಲಕ ದೂರದ ಊರುಗಳಿಗೆ ತೆರಳುವವರಿಗೆ ಅನುಕೂಲ ಆಗಲು, ಅಡ್ವಾನ್ಸ್ ಬಸ್ ಬುಕ್ಕಿಂಗ್ಗೆ ಕೆಎಸ್ಆರ್ಟಿಸಿ ಅವಕಾಶ ನೀಡಿತ್ತು. ಸಾಧಾರಣ ಬಸ್ಗಳಲ್ಲಿ ಟಿಕೆಟ್ ಬುಕ್ ಮಾಡಲು ಕೆಎಸ್ಆರ್ಟಿಸಿ ಆ್ಯಪ್ ನಲ್ಲಿ ಅವಕಾಶ ನೀಡಿತ್ತು. ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಮಹಿಳೆಯರು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದರು. ಅಲ್ಲದೆ ಅಡ್ವಾನ್ಸ್ ಟಿಕೆಟ್ ಬುಕ್ ಮಾಡಲು ಕೇವಲ 20 ರುಪಾಯಿ ಮಾತ್ರ ತೆಗೆದುಕೊಳ್ಳಲಾಗ್ತಿತ್ತು. ಏಕಾಏಕಿ ಬುಕ್ಕಿಂಗ್ ಹೆಚ್ಚಳವಾದ ಕಾರಣ ಕೆಎಸ್ಆರ್ಟಿಸಿ ಆ್ಯಪ್ ಹಾಗೂ ವೆಬ್ಸೈಟ್ನ ಸರ್ವರ್ ಡೌನ್ ಆಗಿದೆ.
ಕೆಎಸ್ಆರ್ಟಿಸಿ ವೆಬ್ಸೈಟ್ ಸರ್ವರ್ ಡೌನ್ ಆಗಿದ್ದಕ್ಕೆ ಜನರು ಟ್ವಿಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಟಿಕೆಟ್ ಬುಕ್ ಮಾಡಿದ್ರೆ ಅಮೌಂಟ್ ಕಟ್ ಆಗ್ತಿದೆ ಆದರೆ ಸೀಟ್ ಬುಕ್ ಆಗ್ತಿಲ್ಲ ಅಂತ ಕಿಡಿಕಾರಿದ್ದಾರೆ. ಅಲ್ಲದೆ ಕೆಎಸ್ಆರ್ಟಿಸಿ ಸಹಾಯವಾಣಿಗೆ ಕರೆ ಮಾಡಿದ್ರು ನೋ ರೆಸ್ಪಾನ್ಸ್ ಅಂತ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಜನರು ರೊಚ್ಚಿಗೆದ್ದು ಟ್ವೀಟ್ ಮಾಡಿದ್ರೋ ಕೆಎಸ್ಆರ್ಟಿಸಿ ಅಲರ್ಟ್ ಆಗಿ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದೆ. ಟೆಕ್ನಿಕಲ್ ಸಮಸ್ಯೆಯಿಂದ ಸರ್ವರ್ ಡೌನ್ ಆಗಿದೆ ಅಂತ ಸ್ಪಷ್ಟನೆ ನೀಡಿದೆ. ಜೊತೆಗೆ ಕಟ್ ಆಗಿರುವ ಹಣ ಐದರಿಂದ ಏಳು ದಿನದೊಳಗೆ ನಿಮ್ಮ ಖಾತೆಗೆ ಹಣ ರಿಫಂಡ್ ಆಗುತ್ತೆ ಅಂತ ಭರವಸೆ ನೀಡಿದೆ. ಶೀಘ್ರದಲ್ಲಿಯೇ ಸರ್ವರ್ ಸರಿ ಹೋಗುತ್ತೆ ಅಂತ ತಿಳಿಸಿದೆ.
ಒಟ್ಟಾರೆ ಶಕ್ತಿ ಯೋಜನೆಗೆ ಜಾರಿ ಆದ ನಂತರ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಳವಾಗಿದೆ. ನಾರಿಯರು ಭರ್ಜರಿ ಟ್ರೀಪ್ ಕೂಡ ಮಾಡ್ತಿದ್ದಾರೆ. ಆದರೆ ಏಕಾಏಕಿಯಾಗಿ ಸರ್ವರ್ ಡೌನ್ ಆಗಿದ್ದು ಜನರಿಗೆ ನಿರಾಸೆ ಮೂಡಿಸಿತ್ತು. ಈಗ ಕೆಎಸ್ಆರ್ಟಿಸಿ ಸರಿ ಮಾಡುವ ಭರವಸೆ ನೀಡಿದ್ದು, ಮತ್ತೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಮಹಿಳೆಯರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ