ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ದರ್ಪ ತೋರಿದ ಮಹಿಳೆ..!
ಸರ್ಕಾರಿ ಕೆಲಸದ ಐಡಿ ಕಾರ್ಡ್ ತೋರಿಸಿ ಟಿಕೆಟ್ ಕೊಡಿ ಅಂದ್ರು
ಆಧಾರ್ ಕಾರ್ಡ್ ಕೇಳಿದಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಜತೆ ಜಗಳ
ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಐದು ಗ್ಯಾರಂಟಿಗಳ ಮೊದಲ ಜಾರಿಯಾಗಿದ್ದೇ ಶಕ್ತಿ ಸ್ಕೀಮ್. ಮಹಿಳೆಯರ ಹಿತದೃಷ್ಟಿಯಿಂದ ಜಾರಿಯಾದ ಈ ಯೋಜನೆಗೆ ಇಡೀ ರಾಜ್ಯಾದ್ಯಂತ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಅದರಲ್ಲೂ ಇಷ್ಟು ದಿನ ಮನೆಗಳಲ್ಲೇ ಇದ್ದ ಹೆಣ್ಣುಮಕ್ಕಳು ಹೊರಗೆ ಬಂದು ತಮ್ಮಿಷ್ಟದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಾರೆ.
ಒಂದೆಡೆ ವಾರಂತ್ಯದಲ್ಲಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಕಿಕ್ಕಿರಿದು ತುಂಬಿ ಪುಣ್ಯಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆ ಸಾಮಾನ್ಯ ಬಡ ಕುಟುಂಬದ ಕೂಲಿ ಕಾರ್ಮಿಕ ಹೆಣ್ಣುಮಕ್ಕಳು ನಿತ್ಯ ಕೆಲಸಕ್ಕೆ ಹೋಗಿ ಬರಲು ಸರ್ಕಾರಿ ಬಸ್ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಹಲವು ಸ್ಥಳಗಳಲ್ಲಿ ನಿಲ್ಲಲು ಕೂಡ ಜಾಗವಿಲ್ಲದಷ್ಟು ಮಹಿಳೆಯರು ತುಂಬಿರುವ ಕಾರಣ ಕಂಡಕ್ಟರ್ಗಳು ಟಿಕೆಟ್ ಹರಿಯಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಷ್ಟೇ ಕಷ್ಟವಾದ್ರೂ ಕಂಡಕ್ಟರ್ಗಳು ಪ್ರಯಾಣಿಕರ ಸ್ನೇಹಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿಯೇ ಮಹಿಳೆಯರು ಆರಾಮಾಗಿ ಬಸ್ಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಕಂಡಕ್ಟರ್ ಒಬ್ಬರು ಟಿಕೆಟ್ ಹರಿಯಲು ಮಹಿಳೆಯೊಬ್ಬರ ಬಳಿ ಆಧಾರ್ ಕಾರ್ಡ್ ಕೇಳಿ ಅವಮಾನಕ್ಕೀಡಾಗಿದ್ದಾರೆ. ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆ ಕಂಡಕ್ಟರ್ ಮೇಲೆ ದರ್ಪ ತೋರಿ ಅವಮಾನ ಮಾಡಿದ್ದಾರೆ.
ನನ್ನ ಬಳಿ ಈಗ ಆಧಾರ್ ಕಾರ್ಡ್ ಇಲ್ಲ. ನಾನು ಕೇಂದ್ರ ಸರ್ಕಾರದ ಉದ್ಯೋಗಿ. ಇದು ನನ್ನ ಸೆಂಟ್ರಲ್ ಗವರ್ನಮೆಂಟ್ ಜಾಬ್ ಐಡಿ ಕಾರ್ಡ್. ಅದರಲ್ಲೇ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಅಡ್ರೆಸ್ ಇದೆ ನೋಡಿ ಎಂದು ಕಂಡಕ್ಟರ್ಗೆ ಸಮಜಾಯಿಷಿ ಕೊಟ್ಟಿದ್ದಾರೆ. ಜತೆಗೆ ಮೊಬೈಲ್ನಿಂದ ವಿಡಿಯೋ ಮಾಡಿ ಕಂಡಕ್ಟರ್ ಬಳಿ ಜಗಳ ತೆಗೆದಿದ್ದಲ್ಲದೆ ಸಹ ಪ್ರಯಾಣಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದರು. ಈಕೆ ಹಿಂದಿ, ಇಂಗ್ಲೀಷ್ನಲ್ಲಿ ಕಂಡಕ್ಟರ್ ಮೇಲೆ ರೇಗಾಡಿ ಕೂಗಾಡಿ ದರ್ಪ ತೋರಿದ ವಿಡಿಯೋ ವೈರಲ್ ಆಗಿದೆ. ಜನರು ತುಂಬಿ ತುಳುಕುತ್ತಿರೋ ಸರ್ಕಾರಿ ಬಸ್ಗಳಲ್ಲಿ ದಿನವಿಡೀ ಜಾಗವಿಲ್ಲದೆ ಟಿಕೆಟ್ ಹರಿಯಲು ಪರದಾಡುವ, ನಿಂತು ಕೆಲಸ ಮಾಡಿ ದಣಿಯುವ ಕಂಡಕ್ಟರ್ಗಳ ಮೇಲೆ ಉತ್ತರ ಭಾರತದ ಮಹಿಳೆ ಹೀಗೆ ದರ್ಪ ತೋರುವುದು ಎಷ್ಟು ಸರಿ ಎಂಬುದು ಸದ್ಯ ಚರ್ಚಿತ ವಿಷಯ.
ಫ್ರೀ ಶಕ್ತಿ ಯೋಜನೆಯಲ್ಲಿ ಐಡಿ ಕಾರ್ಡ್ ಕೇಳಿದ್ದಕ್ಕೆ ಮಹಿಳೆ ಹಾಗೂ ಬಿಎಂಟಿಸಿ ಬಸ್ ಕಂಡಕ್ಟರ್ ಮಧ್ಯೆ ಜಗಳವಾಗಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ. ಮಹಿಳೆಯೊಬ್ಬರು ಆಧಾರ್ ಕಾರ್ಡ್ ತೋರಿಸಿ ಎಂದು ಹೇಳಿದ್ದಕ್ಕೆ ಸೆಂಟ್ರಲ್ ಗವರ್ನಮೆಂಟ್ ಐಡಿ ಕಾರ್ಡ್ ತೋರಿಸಿ ವಾಗ್ವಾದ ನಡೆಸಿದ್ದಾರೆ.#newsfirstlive #newsfirstkannada… pic.twitter.com/IxpdgOsSdp
— NewsFirst Kannada (@NewsFirstKan) July 26, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ದರ್ಪ ತೋರಿದ ಮಹಿಳೆ..!
ಸರ್ಕಾರಿ ಕೆಲಸದ ಐಡಿ ಕಾರ್ಡ್ ತೋರಿಸಿ ಟಿಕೆಟ್ ಕೊಡಿ ಅಂದ್ರು
ಆಧಾರ್ ಕಾರ್ಡ್ ಕೇಳಿದಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಜತೆ ಜಗಳ
ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಐದು ಗ್ಯಾರಂಟಿಗಳ ಮೊದಲ ಜಾರಿಯಾಗಿದ್ದೇ ಶಕ್ತಿ ಸ್ಕೀಮ್. ಮಹಿಳೆಯರ ಹಿತದೃಷ್ಟಿಯಿಂದ ಜಾರಿಯಾದ ಈ ಯೋಜನೆಗೆ ಇಡೀ ರಾಜ್ಯಾದ್ಯಂತ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಅದರಲ್ಲೂ ಇಷ್ಟು ದಿನ ಮನೆಗಳಲ್ಲೇ ಇದ್ದ ಹೆಣ್ಣುಮಕ್ಕಳು ಹೊರಗೆ ಬಂದು ತಮ್ಮಿಷ್ಟದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಾರೆ.
ಒಂದೆಡೆ ವಾರಂತ್ಯದಲ್ಲಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಕಿಕ್ಕಿರಿದು ತುಂಬಿ ಪುಣ್ಯಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆ ಸಾಮಾನ್ಯ ಬಡ ಕುಟುಂಬದ ಕೂಲಿ ಕಾರ್ಮಿಕ ಹೆಣ್ಣುಮಕ್ಕಳು ನಿತ್ಯ ಕೆಲಸಕ್ಕೆ ಹೋಗಿ ಬರಲು ಸರ್ಕಾರಿ ಬಸ್ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಹಲವು ಸ್ಥಳಗಳಲ್ಲಿ ನಿಲ್ಲಲು ಕೂಡ ಜಾಗವಿಲ್ಲದಷ್ಟು ಮಹಿಳೆಯರು ತುಂಬಿರುವ ಕಾರಣ ಕಂಡಕ್ಟರ್ಗಳು ಟಿಕೆಟ್ ಹರಿಯಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಷ್ಟೇ ಕಷ್ಟವಾದ್ರೂ ಕಂಡಕ್ಟರ್ಗಳು ಪ್ರಯಾಣಿಕರ ಸ್ನೇಹಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿಯೇ ಮಹಿಳೆಯರು ಆರಾಮಾಗಿ ಬಸ್ಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಕಂಡಕ್ಟರ್ ಒಬ್ಬರು ಟಿಕೆಟ್ ಹರಿಯಲು ಮಹಿಳೆಯೊಬ್ಬರ ಬಳಿ ಆಧಾರ್ ಕಾರ್ಡ್ ಕೇಳಿ ಅವಮಾನಕ್ಕೀಡಾಗಿದ್ದಾರೆ. ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆ ಕಂಡಕ್ಟರ್ ಮೇಲೆ ದರ್ಪ ತೋರಿ ಅವಮಾನ ಮಾಡಿದ್ದಾರೆ.
ನನ್ನ ಬಳಿ ಈಗ ಆಧಾರ್ ಕಾರ್ಡ್ ಇಲ್ಲ. ನಾನು ಕೇಂದ್ರ ಸರ್ಕಾರದ ಉದ್ಯೋಗಿ. ಇದು ನನ್ನ ಸೆಂಟ್ರಲ್ ಗವರ್ನಮೆಂಟ್ ಜಾಬ್ ಐಡಿ ಕಾರ್ಡ್. ಅದರಲ್ಲೇ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಅಡ್ರೆಸ್ ಇದೆ ನೋಡಿ ಎಂದು ಕಂಡಕ್ಟರ್ಗೆ ಸಮಜಾಯಿಷಿ ಕೊಟ್ಟಿದ್ದಾರೆ. ಜತೆಗೆ ಮೊಬೈಲ್ನಿಂದ ವಿಡಿಯೋ ಮಾಡಿ ಕಂಡಕ್ಟರ್ ಬಳಿ ಜಗಳ ತೆಗೆದಿದ್ದಲ್ಲದೆ ಸಹ ಪ್ರಯಾಣಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದರು. ಈಕೆ ಹಿಂದಿ, ಇಂಗ್ಲೀಷ್ನಲ್ಲಿ ಕಂಡಕ್ಟರ್ ಮೇಲೆ ರೇಗಾಡಿ ಕೂಗಾಡಿ ದರ್ಪ ತೋರಿದ ವಿಡಿಯೋ ವೈರಲ್ ಆಗಿದೆ. ಜನರು ತುಂಬಿ ತುಳುಕುತ್ತಿರೋ ಸರ್ಕಾರಿ ಬಸ್ಗಳಲ್ಲಿ ದಿನವಿಡೀ ಜಾಗವಿಲ್ಲದೆ ಟಿಕೆಟ್ ಹರಿಯಲು ಪರದಾಡುವ, ನಿಂತು ಕೆಲಸ ಮಾಡಿ ದಣಿಯುವ ಕಂಡಕ್ಟರ್ಗಳ ಮೇಲೆ ಉತ್ತರ ಭಾರತದ ಮಹಿಳೆ ಹೀಗೆ ದರ್ಪ ತೋರುವುದು ಎಷ್ಟು ಸರಿ ಎಂಬುದು ಸದ್ಯ ಚರ್ಚಿತ ವಿಷಯ.
ಫ್ರೀ ಶಕ್ತಿ ಯೋಜನೆಯಲ್ಲಿ ಐಡಿ ಕಾರ್ಡ್ ಕೇಳಿದ್ದಕ್ಕೆ ಮಹಿಳೆ ಹಾಗೂ ಬಿಎಂಟಿಸಿ ಬಸ್ ಕಂಡಕ್ಟರ್ ಮಧ್ಯೆ ಜಗಳವಾಗಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ. ಮಹಿಳೆಯೊಬ್ಬರು ಆಧಾರ್ ಕಾರ್ಡ್ ತೋರಿಸಿ ಎಂದು ಹೇಳಿದ್ದಕ್ಕೆ ಸೆಂಟ್ರಲ್ ಗವರ್ನಮೆಂಟ್ ಐಡಿ ಕಾರ್ಡ್ ತೋರಿಸಿ ವಾಗ್ವಾದ ನಡೆಸಿದ್ದಾರೆ.#newsfirstlive #newsfirstkannada… pic.twitter.com/IxpdgOsSdp
— NewsFirst Kannada (@NewsFirstKan) July 26, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ