ತಮ್ಮ ತಂಡದ ಹೋರಾಟ ಸಮರ್ಥಿಸಿಕೊಂಡ ದ್ರಾವಿಡ್
‘ನಮ್ಮ ಆಟಗಾರರು ಭಯದಿಂದ ಬ್ಯಾಟ್ ಮಾಡಿಲ್ಲ’
‘ವಿಕೆಟ್ ಬಿದ್ದಿದ್ದರೆ ನಾವು ಮತ್ತೆ ಗೇಮ್ನಲ್ಲಿ ಇರುತ್ತಿದ್ದೇವು’
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತು ನಿರಾಸೆ ಮೂಡಿಸಿದೆ. ಸೋಲು ಖಚಿತವಾಗುತ್ತಿದ್ದಂತೆಯೇ, ಟೀಂ ಇಂಡಿಯಾ ಆಟಗಾರರ ಮುಖ ಕಳೆಗುಂದಿತ್ತು. ಪಂದ್ಯ ಮುಗಿದ ಬೆನ್ನಲ್ಲೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ತನ್ನ ತಂಡವನ್ನು ಸಮರ್ಥಿಸಿಕೊಂಡು ಕುಗ್ಗಿ ಹೋಗಿದ್ದ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ನಾವು ಭಯದಿಂದ ಆಡಿಲ್ಲ
ಫೈನಲ್ ಪಂದ್ಯದ ವೇಳೆ ನಾವು ಭಯದಿಂದ ಆಡಿದ್ದೇವೆ ಅನ್ನೋದನ್ನು ನಾನು ಒಪ್ಪಿಕೊಳ್ಳುವುದಿಲ್ಲ, ನಮ್ಮ ತಂಡ ಕೂಡ ಒಪ್ಪಿಕೊಳ್ಳಲ್ಲ. ಮೊದಲ 10 ಓವರ್ನಲ್ಲಿ ನಾವು 80 ರನ್ ಗಳಿಸಿದ್ದೇವು. ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡೆವು. ಯಾವಾಗ ವಿಕೆಟ್ ಸತತವಾಗಿ ಬೀಳಲು ಶುರುವಾಯ್ತೋ ಆಗ ಗೇಮ್ ಸ್ಟ್ರಾಟರ್ಜಿ ಮತ್ತು ತಂತ್ರಗಳನ್ನು ಬದಲಾಯಿಸಿಕೊಂಡೆವು. ಆದರೆ ನಾವು ಇಡೀ ಟೂರ್ನಮೆಂಟ್ನಲ್ಲಿ (ವಿಶ್ವಕಪ್) ಉತ್ತಮ ಪ್ರದರ್ಶನ ನೀಡಿದ್ದೇವೆ.
ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಬೇಗ ವಿಕೆಟ್ ಕಳೆದುಕೊಂಡಾಗ ಬೇರೆ ಮಾರ್ಗದ ಮೂಲಕ ಚೆನ್ನಾಗಿ ಆಡಿದ್ದೇವು. ಕೆಲವೊಮ್ಮೆ ನಮಗೆ ಆರಂಭ ಉತ್ತಮವಾಗಿ ಸಿಕ್ಕರೂ ಅಂತ್ಯ ಸರಿಯಾಗಿ ಸಿಗದಿದ್ದರಿಂದ ಸೋಲಬೇಕಾಗುತ್ತದೆ. ಫೈನಲ್ನಲ್ಲೂ ಅದೇ ಆಗಿದೆ. ನಾವು ಭಯದಿಂದ ಆಟ ಆಡುವುದಿಲ್ಲ ಎಂದರು.
ಮತ್ತೆ ಪುಟಿದೇಳುತ್ತೇವೆ
ಮಿಡಲ್ ಓವರ್ಗಳಲ್ಲಿ ಅವರು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ಅದಕ್ಕೂ ಮೊದಲೇ ನಾವು ಮೂರು ವಿಕೆಟ್ ಕಳೆದುಕೊಂಡಿದ್ವಿ. ನಮಗೆ ಮಿಡಲ್ ಓವರ್ನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸುವ ಸಮಯವಾಗಿತ್ತು. ಯಾವಾಗ ಅಟ್ಯಾಕಿಂಗ್, ಪಾಸಿಟಿವ್ ಕ್ರಿಕೆಟ್ ಆಡಲು ಶುರುಮಾಡಿದಾಗ ವಿಕೆಟ್ಗಳನ್ನು ಕಳೆದುಕೊಂಡೆವು. ನಾವು ಮತ್ತೆ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಎದುರಾಳಿ ತಂಡದ ಮಾರ್ನಸ್ ಮತ್ತು ಹೆಡ್ ತುಮ್ಮ ಪಾರ್ಟ್ನರ್ಶಿಪ್ ಮಾಡಿದ್ದನ್ನು ನಾವು ನೋಡಿದೇವು. ಅವರು ವಿಕೆಟ್ಗಳನ್ನು ಕಳೆದುಕೊಳ್ಳಲಿಲ್ಲ. ಒಂದು ವೇಳೆ ಅವರ ವಿಕೆಟ್ ಬಿದ್ದಿದ್ದರೆ ನಾವು ಮತ್ತೆ ಗೇಮ್ನಲ್ಲಿ ಇರುತ್ತಿದ್ದೇವು ಎಂದು ದ್ರಾವಿಡ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ತಮ್ಮ ತಂಡದ ಹೋರಾಟ ಸಮರ್ಥಿಸಿಕೊಂಡ ದ್ರಾವಿಡ್
‘ನಮ್ಮ ಆಟಗಾರರು ಭಯದಿಂದ ಬ್ಯಾಟ್ ಮಾಡಿಲ್ಲ’
‘ವಿಕೆಟ್ ಬಿದ್ದಿದ್ದರೆ ನಾವು ಮತ್ತೆ ಗೇಮ್ನಲ್ಲಿ ಇರುತ್ತಿದ್ದೇವು’
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತು ನಿರಾಸೆ ಮೂಡಿಸಿದೆ. ಸೋಲು ಖಚಿತವಾಗುತ್ತಿದ್ದಂತೆಯೇ, ಟೀಂ ಇಂಡಿಯಾ ಆಟಗಾರರ ಮುಖ ಕಳೆಗುಂದಿತ್ತು. ಪಂದ್ಯ ಮುಗಿದ ಬೆನ್ನಲ್ಲೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ತನ್ನ ತಂಡವನ್ನು ಸಮರ್ಥಿಸಿಕೊಂಡು ಕುಗ್ಗಿ ಹೋಗಿದ್ದ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ನಾವು ಭಯದಿಂದ ಆಡಿಲ್ಲ
ಫೈನಲ್ ಪಂದ್ಯದ ವೇಳೆ ನಾವು ಭಯದಿಂದ ಆಡಿದ್ದೇವೆ ಅನ್ನೋದನ್ನು ನಾನು ಒಪ್ಪಿಕೊಳ್ಳುವುದಿಲ್ಲ, ನಮ್ಮ ತಂಡ ಕೂಡ ಒಪ್ಪಿಕೊಳ್ಳಲ್ಲ. ಮೊದಲ 10 ಓವರ್ನಲ್ಲಿ ನಾವು 80 ರನ್ ಗಳಿಸಿದ್ದೇವು. ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡೆವು. ಯಾವಾಗ ವಿಕೆಟ್ ಸತತವಾಗಿ ಬೀಳಲು ಶುರುವಾಯ್ತೋ ಆಗ ಗೇಮ್ ಸ್ಟ್ರಾಟರ್ಜಿ ಮತ್ತು ತಂತ್ರಗಳನ್ನು ಬದಲಾಯಿಸಿಕೊಂಡೆವು. ಆದರೆ ನಾವು ಇಡೀ ಟೂರ್ನಮೆಂಟ್ನಲ್ಲಿ (ವಿಶ್ವಕಪ್) ಉತ್ತಮ ಪ್ರದರ್ಶನ ನೀಡಿದ್ದೇವೆ.
ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಬೇಗ ವಿಕೆಟ್ ಕಳೆದುಕೊಂಡಾಗ ಬೇರೆ ಮಾರ್ಗದ ಮೂಲಕ ಚೆನ್ನಾಗಿ ಆಡಿದ್ದೇವು. ಕೆಲವೊಮ್ಮೆ ನಮಗೆ ಆರಂಭ ಉತ್ತಮವಾಗಿ ಸಿಕ್ಕರೂ ಅಂತ್ಯ ಸರಿಯಾಗಿ ಸಿಗದಿದ್ದರಿಂದ ಸೋಲಬೇಕಾಗುತ್ತದೆ. ಫೈನಲ್ನಲ್ಲೂ ಅದೇ ಆಗಿದೆ. ನಾವು ಭಯದಿಂದ ಆಟ ಆಡುವುದಿಲ್ಲ ಎಂದರು.
ಮತ್ತೆ ಪುಟಿದೇಳುತ್ತೇವೆ
ಮಿಡಲ್ ಓವರ್ಗಳಲ್ಲಿ ಅವರು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ಅದಕ್ಕೂ ಮೊದಲೇ ನಾವು ಮೂರು ವಿಕೆಟ್ ಕಳೆದುಕೊಂಡಿದ್ವಿ. ನಮಗೆ ಮಿಡಲ್ ಓವರ್ನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸುವ ಸಮಯವಾಗಿತ್ತು. ಯಾವಾಗ ಅಟ್ಯಾಕಿಂಗ್, ಪಾಸಿಟಿವ್ ಕ್ರಿಕೆಟ್ ಆಡಲು ಶುರುಮಾಡಿದಾಗ ವಿಕೆಟ್ಗಳನ್ನು ಕಳೆದುಕೊಂಡೆವು. ನಾವು ಮತ್ತೆ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಎದುರಾಳಿ ತಂಡದ ಮಾರ್ನಸ್ ಮತ್ತು ಹೆಡ್ ತುಮ್ಮ ಪಾರ್ಟ್ನರ್ಶಿಪ್ ಮಾಡಿದ್ದನ್ನು ನಾವು ನೋಡಿದೇವು. ಅವರು ವಿಕೆಟ್ಗಳನ್ನು ಕಳೆದುಕೊಳ್ಳಲಿಲ್ಲ. ಒಂದು ವೇಳೆ ಅವರ ವಿಕೆಟ್ ಬಿದ್ದಿದ್ದರೆ ನಾವು ಮತ್ತೆ ಗೇಮ್ನಲ್ಲಿ ಇರುತ್ತಿದ್ದೇವು ಎಂದು ದ್ರಾವಿಡ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್