newsfirstkannada.com

ಟೀಮ್​ ಇಂಡಿಯಾ ವಿರುದ್ಧ ಹೀನಾಯ ಸೋಲು.. ಇಡೀ ಕ್ರಿಕೆಟ್​ ಬೋರ್ಡ್ ಅಧಿಕಾರಿಗಳನ್ನೇ ವಜಾಗೊಳಿಸಿದ ಲಂಕಾ!

Share :

06-11-2023

    ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮೊದಲೇ ನಿರ್ಧಾರ

    ಟೀಮ್ ಇಂಡಿಯಾ ವಿರುದ್ಧ 302 ರನ್​ಗಳ ಅಂತರದಿಂದ ಸೋಲು

    1996ರ ತಂಡದ ಕ್ಯಾಪ್ಟನ್​ ಅರ್ಜುನ್ ರಣತುಂಗ ಹೊಸ ಅಧ್ಯಕ್ಷ

ವಾಂಖೆಡೆಯಲ್ಲಿ ಟೀಮ್​ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡ 302 ರನ್​ಗಳ ಅಂತರದಿಂದ ಹೀನಾಯವಾಗಿ ಸೋಲು ಹಾಗೂ ವಿಶ್ವಕಪ್​​ನಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಇಡೀ ಲಂಕಾ ಕ್ರಿಕೆಟ್​ ಬೋರ್ಡ್​ನ ಅಧಿಕಾರಿಗಳನ್ನ ವಜಾಗೊಳಿಸಲಾಗಿದೆ. ಸದ್ಯ ಇಂದು ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮೊದಲೇ ಅಲ್ಲಿನ ಕ್ರೀಡಾ ಸಚಿವ ರೋಶನ್ ರಣಸಿಂಗ್ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

ಶ್ರೀಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಗ್ ಅವರು ಇಡೀ ಕ್ರಿಕೆಟ್​ ಬೋರ್ಡ್​ ಅಧಿಕಾರಿಗಳನ್ನ ವಜಾಗೊಳಿಸಿ 1996ರ ವರ್ಲ್ಡ್​​ಕಪ್​ ಗೆದ್ದ ತಂಡದ ನಾಯಕ ಅರ್ಜುನ್ ರಣತುಂಗರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕ್ರಿಕೆಟ್ ಬೋರ್ಡ್​ ನಿಷ್ಠಾವಂತರನ್ನು ಕಡೆಗಣಿಸಿದ್ದು ಭ್ರಷ್ಟಾಚಾರದಿಂದ ಕೂಡಿದೆ. ಕೂಡಲೇ ಬೋರ್ಡ್​ಗೆ ಸಂಬಂಧಿಸಿದವರು ರಾಜೀನಾಮೆ ಸಲ್ಲಿಸಬೇಕು ಎಂದು ಮೊನ್ನೆ ಖಡಕ್​ ಆಗಿ ವಾರ್ನ್ ಮಾಡಿದ್ದರು.

ಶ್ರೀಲಂಕಾ ಟೀಮ್

ಇದರ ಬೆನ್ನಲ್ಲೇ ಶನಿವಾರದಂದು ಕ್ರಿಕೆಟ್​ ಬೋರ್ಡ್​ನ ಕಾರ್ಯದರ್ಶಿ ಹಾಗೂ ಸಂಸ್ಥೆಯಲ್ಲಿ 2ನೇ ಅತ್ಯುನ್ನತ ಸ್ಥಾನ ಹೊಂದಿದ್ದ ಮೋಹನ್ ಡಿ ಸಿಲ್ವಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅರ್ಜನ್ ರಣತುಂಗ ಅವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದರ ಜೊತೆಗೆ ಹೊಸದಾಗಿ ರಚಿಸಲಾದ 7 ಸದಸ್ಯರ ಸಮಿತಿಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು ಸದ್ಯ ನಡೆಯುತ್ತಿರುವ 2023ರ ವಿಶ್ವಕಪ್​ ಟೂರ್ನಿಯಲ್ಲಿ ಶ್ರೀಲಂಕಾ ತಂಡವು ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದು ಅಫ್ಘಾನ್​ಗಿಂದ ಕೆಳಗಿದೆ. ಕ್ಯಾಪ್ಟನ್​ ಕುಸಲಾ ಮೆಂಡೀಸ್ ಮಾರ್ಗದಲ್ಲಿ ಸಾಗುತ್ತಿರುವ ಟೀಮ್, ಈಗಾಗಲೇ 7 ಪಂದ್ಯಗಳನ್ನು ಆಡಿ 5 ಮ್ಯಾಚ್​ಗಳಲ್ಲಿ ಸೋತು, 2ರಲ್ಲಿ ಮಾತ್ರ ಗೆದ್ದಿದೆ. ಇದರಿಂದ ಪಾಯಿಂಟ್ ಪಟ್ಟಿಯಲ್ಲಿ ಕೇವಲ 4 ಅಂಕಗಳಿಂದ 7ನೇ ಸ್ಥಾನದಲ್ಲಿ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ವಿರುದ್ಧ ಹೀನಾಯ ಸೋಲು.. ಇಡೀ ಕ್ರಿಕೆಟ್​ ಬೋರ್ಡ್ ಅಧಿಕಾರಿಗಳನ್ನೇ ವಜಾಗೊಳಿಸಿದ ಲಂಕಾ!

https://newsfirstlive.com/wp-content/uploads/2023/11/Sri_Lanka-1.jpg

    ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮೊದಲೇ ನಿರ್ಧಾರ

    ಟೀಮ್ ಇಂಡಿಯಾ ವಿರುದ್ಧ 302 ರನ್​ಗಳ ಅಂತರದಿಂದ ಸೋಲು

    1996ರ ತಂಡದ ಕ್ಯಾಪ್ಟನ್​ ಅರ್ಜುನ್ ರಣತುಂಗ ಹೊಸ ಅಧ್ಯಕ್ಷ

ವಾಂಖೆಡೆಯಲ್ಲಿ ಟೀಮ್​ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡ 302 ರನ್​ಗಳ ಅಂತರದಿಂದ ಹೀನಾಯವಾಗಿ ಸೋಲು ಹಾಗೂ ವಿಶ್ವಕಪ್​​ನಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಇಡೀ ಲಂಕಾ ಕ್ರಿಕೆಟ್​ ಬೋರ್ಡ್​ನ ಅಧಿಕಾರಿಗಳನ್ನ ವಜಾಗೊಳಿಸಲಾಗಿದೆ. ಸದ್ಯ ಇಂದು ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮೊದಲೇ ಅಲ್ಲಿನ ಕ್ರೀಡಾ ಸಚಿವ ರೋಶನ್ ರಣಸಿಂಗ್ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

ಶ್ರೀಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಗ್ ಅವರು ಇಡೀ ಕ್ರಿಕೆಟ್​ ಬೋರ್ಡ್​ ಅಧಿಕಾರಿಗಳನ್ನ ವಜಾಗೊಳಿಸಿ 1996ರ ವರ್ಲ್ಡ್​​ಕಪ್​ ಗೆದ್ದ ತಂಡದ ನಾಯಕ ಅರ್ಜುನ್ ರಣತುಂಗರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕ್ರಿಕೆಟ್ ಬೋರ್ಡ್​ ನಿಷ್ಠಾವಂತರನ್ನು ಕಡೆಗಣಿಸಿದ್ದು ಭ್ರಷ್ಟಾಚಾರದಿಂದ ಕೂಡಿದೆ. ಕೂಡಲೇ ಬೋರ್ಡ್​ಗೆ ಸಂಬಂಧಿಸಿದವರು ರಾಜೀನಾಮೆ ಸಲ್ಲಿಸಬೇಕು ಎಂದು ಮೊನ್ನೆ ಖಡಕ್​ ಆಗಿ ವಾರ್ನ್ ಮಾಡಿದ್ದರು.

ಶ್ರೀಲಂಕಾ ಟೀಮ್

ಇದರ ಬೆನ್ನಲ್ಲೇ ಶನಿವಾರದಂದು ಕ್ರಿಕೆಟ್​ ಬೋರ್ಡ್​ನ ಕಾರ್ಯದರ್ಶಿ ಹಾಗೂ ಸಂಸ್ಥೆಯಲ್ಲಿ 2ನೇ ಅತ್ಯುನ್ನತ ಸ್ಥಾನ ಹೊಂದಿದ್ದ ಮೋಹನ್ ಡಿ ಸಿಲ್ವಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅರ್ಜನ್ ರಣತುಂಗ ಅವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದರ ಜೊತೆಗೆ ಹೊಸದಾಗಿ ರಚಿಸಲಾದ 7 ಸದಸ್ಯರ ಸಮಿತಿಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು ಸದ್ಯ ನಡೆಯುತ್ತಿರುವ 2023ರ ವಿಶ್ವಕಪ್​ ಟೂರ್ನಿಯಲ್ಲಿ ಶ್ರೀಲಂಕಾ ತಂಡವು ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದು ಅಫ್ಘಾನ್​ಗಿಂದ ಕೆಳಗಿದೆ. ಕ್ಯಾಪ್ಟನ್​ ಕುಸಲಾ ಮೆಂಡೀಸ್ ಮಾರ್ಗದಲ್ಲಿ ಸಾಗುತ್ತಿರುವ ಟೀಮ್, ಈಗಾಗಲೇ 7 ಪಂದ್ಯಗಳನ್ನು ಆಡಿ 5 ಮ್ಯಾಚ್​ಗಳಲ್ಲಿ ಸೋತು, 2ರಲ್ಲಿ ಮಾತ್ರ ಗೆದ್ದಿದೆ. ಇದರಿಂದ ಪಾಯಿಂಟ್ ಪಟ್ಟಿಯಲ್ಲಿ ಕೇವಲ 4 ಅಂಕಗಳಿಂದ 7ನೇ ಸ್ಥಾನದಲ್ಲಿ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More