ಭಾರತದ ಮಿಡಲ್ ಆರ್ಡರ್ಗೆ ಮಾಸ್ಟರ್ಗಳ ಬಲ
ಟಾಪ್ ಆರ್ಡರ್ ಟಾಪ್ಕ್ಲಾಸ್ ಆಟಕ್ಕೆ ಇದೇ ಧೈರ್ಯ
ಕನ್ನಡಿಗ ಕೆ ಎಲ್ ರಾಹುಲ್ ತಾಳ್ಮೆಯ ಹೋರಾಟಕ್ಕೆ ಸಲಾಂ
ಯಾವಾಗ್ಲೂ ಡಿಫೆನ್ಸಿವ್ ಮೂಡ್ನಲ್ಲಿ ಇರ್ತಿದ್ದ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಅಗ್ರೆಸ್ಸಿವ್ ಅವತಾರ ಎತ್ತಿದ್ದು ಹೇಗೆ.? ಇದ್ದಕ್ಕಿಂದ್ದಂತೆ ಡೇರ್ ಡೆವಿಲ್ ಆಟವಾಡಲು ಧೈರ್ಯ ಬಂದಿದ್ದು ಹೇಗೆ.? ಈ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು ಇದಕ್ಕೆ ಉತ್ತರ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳು. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ.
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸಕ್ಸಸ್ ಹಿಂದಿನ ಸೂತ್ರ ಬ್ಯಾಟಿಂಗ್ ಅಪ್ರೋಚ್ನಲ್ಲಾದ ಬದಲಾವಣೆ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಹಿಂದೆದಿಗಿಂತಲೂ ಅಗ್ರೆಸ್ಸಿವ್ ಆಟವಾಡ್ತಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಇಂಟ್ರ್ಯುಡ್ಯೂಸ್ ಮಾಡಿದ ಈ ಸೂತ್ರ, ವಿಶ್ವಕಪ್ ಅಖಾಡದಲ್ಲಿ ಭಾರತದ ಯಶಸ್ಸಿನ ಟಾಪ್ ಸೀಕ್ರೆಟ್.! ಆರಂಭದಲ್ಲೇ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸ್ತಾ ಇರೋ ಕ್ಯಾಪ್ಟನ್ ರೋಹಿತ್, ಬಿಗ್ ಇನ್ನಿಂಗ್ಸ್ಗೆ ಸಾಲಿಡ್ ಅಡಿಪಾಯ ಹಾಕ್ತಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಮಾತ್ರವಲ್ಲ. ಯಂಗ್ಗನ್ ಶುಭ್ಮನ್ ಗಿಲ್, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ವಿರಾಟ್ ಕೊಹ್ಲಿ ಕೂಡ ಬೌಲರ್ಗಳ ಬೆಂಡೆತ್ತುತ್ತಿದ್ದಾರೆ. ರಣಾಗಂಣದಲ್ಲಿ ಎದುರಾಳಿಗಳ ಗೇಮ್ಪ್ಲಾನ್ಗಳನ್ನ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಸ್ ಚಿಂದಿ ಉಡಾಯಿಸ್ತಿದ್ದಾರೆ. ಡಿಫೆನ್ಸಿವ್ ಮೂಡ್ನಲ್ಲಿ ಇರ್ತಾ ಇದ್ದ ಟೀಮ್ ಇಂಡಿಯಾದ ಬ್ಯಾಟರ್ಸ್ ಇದ್ದಕ್ಕಿದ್ದಂತೆ ಡೇರ್ ಡೆವಿಲ್ಸ್ ಆಗಿದ್ದಾರೆ.
ಮಿಡಲ್ ಆರ್ಡರ್ಗೆ ಮಾಸ್ಟರ್ಗಳ ಬಲ.. ಟಾಪ್ ಆರ್ಡರ್ಗೆ ಧೈರ್ಯ.!
ವಿಶ್ವಕಪ್ಗೂ ಮುನ್ನ ಡಿಫೆನ್ಸಿವ್ ಮೂಡ್ನಲ್ಲಿ ಇನ್ನಿಂಗ್ಸ್ ಸ್ಟಾರ್ಟ್ ಮಾಡ್ತಾ ಇದ್ದ ಟೀಮ್ ಇಂಡಿಯಾ ಎದುರಾಳಿಗಳ ರಣತಂತ್ರಕ್ಕೆ ಸುಲಭಕ್ಕೆ ಸಿಕ್ಕಿ ಬೀಳ್ತಿತ್ತು. ಆದ್ರೆ, ಈಗ ಟೀಮ್ ಇಂಡಿಯಾ ಅಗ್ರೆಸ್ಸಿವ್ ಆಟ ಎದುರಾಳಿಗಳಲ್ಲಿ ನಡುಕ ಹುಟ್ಟಿಸ್ತಾ ಇದೆ. ತಂಡವೂ ಆರಂಭದಲ್ಲೇ ಮೇಲುಗೈ ಸಾಧಿಸ್ತಿದೆ. ಇದ್ರ ಹಿಂದೆ ಸಿಕ್ಕಾಪಟ್ಟೆ ರಿಸ್ಕ್ ಇದೆ. ರನ್ಗಳಿಸೋ ಭರದಲ್ಲಿ ವಿಕೆಟ್ ಕಳೆದುಕೊಂಡ್ರೆ, ಮುಂದೆ ಏನಪ್ಪಾ ಕಥೆ ಅನ್ನೋ ಟೆನ್ಶನ್ ಹಿಂದಿತ್ತು. ಆದ್ರೆ, ಈಗ ಅದಿಲ್ಲ.. ಮಿಡಲ್ ಆರ್ಡರ್ಗೆ ಮಾಸ್ಟರ್ಗಳ ಬಲ ಬಂದಿದೆ.
ಇದನ್ನು ಓದಿ: World Cup 2023: ಆಸೀಸ್ಗೆ ಈತನೇ ಕೃಪಾಕಟಾಕ್ಷ! ಯೆಲ್ಲೋ ಆರ್ಮಿಯ ಹಣೆಬರಹ ಬದಲಿಸಿದ ಪುಣ್ಯಾತ್ಮ ಈತ!
4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸೂಪರ್ ಆಟ.!
4ನೇ ಕ್ರಮಾಂಕದ ತಲೆನೋವು ಈ ವಿಶ್ವಕಪ್ಗೂ ಮುನ್ನ ಕೂಡ ಟೀಮ್ ಇಂಡಿಯಾವನ್ನ ಕಾಡಿತ್ತು. ಆದ್ರೆ, ಶ್ರೇಯಸ್ ಅಯ್ಯರ್ ಈ ಸಮಸ್ಯೆಗೆ ಪರಿಹಾರವಾಗಿ ನಿಂತಿದ್ದಾರೆ. 4ನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡ್ತಿದ್ದಾರೆ. ಗೇಮ್ ರೀಡ್ ಮಾಡೋದ್ರಲ್ಲೂ ಪಂಟರ್ ಅನ್ನೋದನ್ನ ನಿರೂಪಿಸಿರುವ ಶ್ರೇಯಸ್, ಸಿಚ್ಯುವೇಶನ್ಗೆ ತಕ್ಕಂತೆ ಬ್ಯಾಟ್ ಬೀಸ್ತಿದ್ದಾರೆ. ಮಿಸ್ಟರ್ ಡಿಪೆಂಡೆಬಲ್ ಅಂದ ಮಾತ್ರಕ್ಕೆ ಕ್ಲಾಸ್ ಆಟ ಮಾತ್ರವಲ್ಲ. ಮಾಸ್ ಆಟದಲ್ಲೂ ಮಿಂಚುತ್ತಿದ್ದಾರೆ. ಇದಕ್ಕೆ ಸೆಮಿಫೈನಲ್ ಪಂದ್ಯ ಇನ್ನಿಂಗ್ಸ್ ಬೆಸ್ಟ್ ಎಕ್ಸಾಂಪಲ್.!
ಕನ್ನಡಿಗ ರಾಹುಲ್ ತಾಳ್ಮೆಯ ಹೋರಾಟಕ್ಕೆ ಒಂದು ಸಲಾಂ.!
ಅಂದು ರಾಹುಲ್ ದ್ರಾವಿಡ್ ನಿಭಾಯಿಸ್ತಾ ಇದ್ದ ರೋಲ್ ಅನ್ನೆ ಸದ್ಯ ಕನ್ನಡಿಗ ಕೆ.ಎಲ್ ರಾಹುಲ್ ನಿಭಾಯಿಸ್ತಿದ್ದಾರೆ. ಮಿಸ್ಟರ್ ಡಿಪೆಂಡೆಬಲ್ ಆಗಿ ತಂಡದ ಹಿತಕ್ಕಾಗಿ ಕನ್ನಡಿಗ ಹೋರಾಟ ನಡೆಸ್ತಿದ್ದಾನೆ. ಟಾಪ್ ಆರ್ಡರ್ ವೈಫಲ್ಯ ಅನುಭವಿಸಿದಾಗಲೆಲ್ಲಾ ಟೊಂಕ ಕಟ್ಟಿ ನಿಂತು ಹೋರಾಟ ನಡೆಸ್ತಿದ್ದಾನೆ. ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸಿಸ್ ವಿರುದ್ಧ ನಡೆಸಿದ ಕೆಚ್ಚೆದೆಯ ಹೋರಾಟವೇ ಇದಕ್ಕೆ ನಿದರ್ಶನ.
ಇದನ್ನು ಓದಿ: IND V/S AUS: ವಿಶ್ವಕಪ್ ಫೈನಲ್ ಪಂದ್ಯ ಒನ್ ಸೈಡೆಡ್ ಗೇಮ್ ಆಗೋಕೆ ಚಾನ್ಸೇ ಇಲ್ಲ.. ಕಾರಣ ಏನು ಗೊತ್ತಾ?
ಶ್ರೇಯಸ್ – ರಾಹುಲ್ ಜೊತೆಯಾಟ ಸೂಪರ್..!
ವೈಯಕ್ತಿಕವಾಗಿ ಮಾತ್ರವಲ್ಲ.. 4-5ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಜೊತೆಯಾಟ ಸೂಪರ್.! ಸೆಮಿಫೈನಲ್ನಂತಹ ಹೈ ಪ್ರೆಶರ್ ಗೇಮ್ನಲ್ಲಿ ಇವರಿಬ್ಬರು ಆಡಿದ 208 ರನ್ಗಳ ಭರ್ಜರಿ ಜೊತೆಯಾಟ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಹೆಚ್ಚು ರನ್ಗಳ ಜೊತೆಯಾಟವಾಗಿದೆ. ಇವರಿಬ್ಬರ ಜವಾಬ್ದಾರಿಯುತ ಆಟಕ್ಕೆ ಇದೇ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ, ಟೀಮ್ ಇಂಡಿಯಾದ ಅಜೇಯ ಓಟದ ಹಿಂದೆ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳದ್ದೂ ಶ್ರಮವಿದೆ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಟೀಮ್ ಮ್ಯಾನೇಜ್ಮೆಂಟ್ ತಮಗೆ ನೀಡಿರುವ ಜವಾಬ್ದಾರಿಯನ್ನ ಸಮರ್ಥವಾಗಿ ಇವರಿಬ್ಬರು ನಿಭಾಯಿಸ್ತಾರೆ. ತಮ್ಮ ಮೇಲೆ ಇಟ್ಟ ಭರವಸೆಯನ್ನ ಉಳಿಸಿಕೊಂಡು ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಫಿಯರ್ ಲೆಸ್ ನೆರವಾಗ್ತಿದ್ದಾರೆ. ತಂಡಕ್ಕಾಗಿ ಸೆಲ್ಫ್ಲೆಸ್ ಆಟವಾಡ್ತಿರೋ ಶ್ರೇಯಸ್, ರಾಹುಲ್ಗೆ ಒಂದು ಸಲಾಂ ಹೇಳಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಭಾರತದ ಮಿಡಲ್ ಆರ್ಡರ್ಗೆ ಮಾಸ್ಟರ್ಗಳ ಬಲ
ಟಾಪ್ ಆರ್ಡರ್ ಟಾಪ್ಕ್ಲಾಸ್ ಆಟಕ್ಕೆ ಇದೇ ಧೈರ್ಯ
ಕನ್ನಡಿಗ ಕೆ ಎಲ್ ರಾಹುಲ್ ತಾಳ್ಮೆಯ ಹೋರಾಟಕ್ಕೆ ಸಲಾಂ
ಯಾವಾಗ್ಲೂ ಡಿಫೆನ್ಸಿವ್ ಮೂಡ್ನಲ್ಲಿ ಇರ್ತಿದ್ದ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಅಗ್ರೆಸ್ಸಿವ್ ಅವತಾರ ಎತ್ತಿದ್ದು ಹೇಗೆ.? ಇದ್ದಕ್ಕಿಂದ್ದಂತೆ ಡೇರ್ ಡೆವಿಲ್ ಆಟವಾಡಲು ಧೈರ್ಯ ಬಂದಿದ್ದು ಹೇಗೆ.? ಈ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು ಇದಕ್ಕೆ ಉತ್ತರ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳು. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ.
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸಕ್ಸಸ್ ಹಿಂದಿನ ಸೂತ್ರ ಬ್ಯಾಟಿಂಗ್ ಅಪ್ರೋಚ್ನಲ್ಲಾದ ಬದಲಾವಣೆ. ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಹಿಂದೆದಿಗಿಂತಲೂ ಅಗ್ರೆಸ್ಸಿವ್ ಆಟವಾಡ್ತಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಇಂಟ್ರ್ಯುಡ್ಯೂಸ್ ಮಾಡಿದ ಈ ಸೂತ್ರ, ವಿಶ್ವಕಪ್ ಅಖಾಡದಲ್ಲಿ ಭಾರತದ ಯಶಸ್ಸಿನ ಟಾಪ್ ಸೀಕ್ರೆಟ್.! ಆರಂಭದಲ್ಲೇ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸ್ತಾ ಇರೋ ಕ್ಯಾಪ್ಟನ್ ರೋಹಿತ್, ಬಿಗ್ ಇನ್ನಿಂಗ್ಸ್ಗೆ ಸಾಲಿಡ್ ಅಡಿಪಾಯ ಹಾಕ್ತಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಮಾತ್ರವಲ್ಲ. ಯಂಗ್ಗನ್ ಶುಭ್ಮನ್ ಗಿಲ್, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ವಿರಾಟ್ ಕೊಹ್ಲಿ ಕೂಡ ಬೌಲರ್ಗಳ ಬೆಂಡೆತ್ತುತ್ತಿದ್ದಾರೆ. ರಣಾಗಂಣದಲ್ಲಿ ಎದುರಾಳಿಗಳ ಗೇಮ್ಪ್ಲಾನ್ಗಳನ್ನ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಸ್ ಚಿಂದಿ ಉಡಾಯಿಸ್ತಿದ್ದಾರೆ. ಡಿಫೆನ್ಸಿವ್ ಮೂಡ್ನಲ್ಲಿ ಇರ್ತಾ ಇದ್ದ ಟೀಮ್ ಇಂಡಿಯಾದ ಬ್ಯಾಟರ್ಸ್ ಇದ್ದಕ್ಕಿದ್ದಂತೆ ಡೇರ್ ಡೆವಿಲ್ಸ್ ಆಗಿದ್ದಾರೆ.
ಮಿಡಲ್ ಆರ್ಡರ್ಗೆ ಮಾಸ್ಟರ್ಗಳ ಬಲ.. ಟಾಪ್ ಆರ್ಡರ್ಗೆ ಧೈರ್ಯ.!
ವಿಶ್ವಕಪ್ಗೂ ಮುನ್ನ ಡಿಫೆನ್ಸಿವ್ ಮೂಡ್ನಲ್ಲಿ ಇನ್ನಿಂಗ್ಸ್ ಸ್ಟಾರ್ಟ್ ಮಾಡ್ತಾ ಇದ್ದ ಟೀಮ್ ಇಂಡಿಯಾ ಎದುರಾಳಿಗಳ ರಣತಂತ್ರಕ್ಕೆ ಸುಲಭಕ್ಕೆ ಸಿಕ್ಕಿ ಬೀಳ್ತಿತ್ತು. ಆದ್ರೆ, ಈಗ ಟೀಮ್ ಇಂಡಿಯಾ ಅಗ್ರೆಸ್ಸಿವ್ ಆಟ ಎದುರಾಳಿಗಳಲ್ಲಿ ನಡುಕ ಹುಟ್ಟಿಸ್ತಾ ಇದೆ. ತಂಡವೂ ಆರಂಭದಲ್ಲೇ ಮೇಲುಗೈ ಸಾಧಿಸ್ತಿದೆ. ಇದ್ರ ಹಿಂದೆ ಸಿಕ್ಕಾಪಟ್ಟೆ ರಿಸ್ಕ್ ಇದೆ. ರನ್ಗಳಿಸೋ ಭರದಲ್ಲಿ ವಿಕೆಟ್ ಕಳೆದುಕೊಂಡ್ರೆ, ಮುಂದೆ ಏನಪ್ಪಾ ಕಥೆ ಅನ್ನೋ ಟೆನ್ಶನ್ ಹಿಂದಿತ್ತು. ಆದ್ರೆ, ಈಗ ಅದಿಲ್ಲ.. ಮಿಡಲ್ ಆರ್ಡರ್ಗೆ ಮಾಸ್ಟರ್ಗಳ ಬಲ ಬಂದಿದೆ.
ಇದನ್ನು ಓದಿ: World Cup 2023: ಆಸೀಸ್ಗೆ ಈತನೇ ಕೃಪಾಕಟಾಕ್ಷ! ಯೆಲ್ಲೋ ಆರ್ಮಿಯ ಹಣೆಬರಹ ಬದಲಿಸಿದ ಪುಣ್ಯಾತ್ಮ ಈತ!
4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸೂಪರ್ ಆಟ.!
4ನೇ ಕ್ರಮಾಂಕದ ತಲೆನೋವು ಈ ವಿಶ್ವಕಪ್ಗೂ ಮುನ್ನ ಕೂಡ ಟೀಮ್ ಇಂಡಿಯಾವನ್ನ ಕಾಡಿತ್ತು. ಆದ್ರೆ, ಶ್ರೇಯಸ್ ಅಯ್ಯರ್ ಈ ಸಮಸ್ಯೆಗೆ ಪರಿಹಾರವಾಗಿ ನಿಂತಿದ್ದಾರೆ. 4ನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡ್ತಿದ್ದಾರೆ. ಗೇಮ್ ರೀಡ್ ಮಾಡೋದ್ರಲ್ಲೂ ಪಂಟರ್ ಅನ್ನೋದನ್ನ ನಿರೂಪಿಸಿರುವ ಶ್ರೇಯಸ್, ಸಿಚ್ಯುವೇಶನ್ಗೆ ತಕ್ಕಂತೆ ಬ್ಯಾಟ್ ಬೀಸ್ತಿದ್ದಾರೆ. ಮಿಸ್ಟರ್ ಡಿಪೆಂಡೆಬಲ್ ಅಂದ ಮಾತ್ರಕ್ಕೆ ಕ್ಲಾಸ್ ಆಟ ಮಾತ್ರವಲ್ಲ. ಮಾಸ್ ಆಟದಲ್ಲೂ ಮಿಂಚುತ್ತಿದ್ದಾರೆ. ಇದಕ್ಕೆ ಸೆಮಿಫೈನಲ್ ಪಂದ್ಯ ಇನ್ನಿಂಗ್ಸ್ ಬೆಸ್ಟ್ ಎಕ್ಸಾಂಪಲ್.!
ಕನ್ನಡಿಗ ರಾಹುಲ್ ತಾಳ್ಮೆಯ ಹೋರಾಟಕ್ಕೆ ಒಂದು ಸಲಾಂ.!
ಅಂದು ರಾಹುಲ್ ದ್ರಾವಿಡ್ ನಿಭಾಯಿಸ್ತಾ ಇದ್ದ ರೋಲ್ ಅನ್ನೆ ಸದ್ಯ ಕನ್ನಡಿಗ ಕೆ.ಎಲ್ ರಾಹುಲ್ ನಿಭಾಯಿಸ್ತಿದ್ದಾರೆ. ಮಿಸ್ಟರ್ ಡಿಪೆಂಡೆಬಲ್ ಆಗಿ ತಂಡದ ಹಿತಕ್ಕಾಗಿ ಕನ್ನಡಿಗ ಹೋರಾಟ ನಡೆಸ್ತಿದ್ದಾನೆ. ಟಾಪ್ ಆರ್ಡರ್ ವೈಫಲ್ಯ ಅನುಭವಿಸಿದಾಗಲೆಲ್ಲಾ ಟೊಂಕ ಕಟ್ಟಿ ನಿಂತು ಹೋರಾಟ ನಡೆಸ್ತಿದ್ದಾನೆ. ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸಿಸ್ ವಿರುದ್ಧ ನಡೆಸಿದ ಕೆಚ್ಚೆದೆಯ ಹೋರಾಟವೇ ಇದಕ್ಕೆ ನಿದರ್ಶನ.
ಇದನ್ನು ಓದಿ: IND V/S AUS: ವಿಶ್ವಕಪ್ ಫೈನಲ್ ಪಂದ್ಯ ಒನ್ ಸೈಡೆಡ್ ಗೇಮ್ ಆಗೋಕೆ ಚಾನ್ಸೇ ಇಲ್ಲ.. ಕಾರಣ ಏನು ಗೊತ್ತಾ?
ಶ್ರೇಯಸ್ – ರಾಹುಲ್ ಜೊತೆಯಾಟ ಸೂಪರ್..!
ವೈಯಕ್ತಿಕವಾಗಿ ಮಾತ್ರವಲ್ಲ.. 4-5ನೇ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಜೊತೆಯಾಟ ಸೂಪರ್.! ಸೆಮಿಫೈನಲ್ನಂತಹ ಹೈ ಪ್ರೆಶರ್ ಗೇಮ್ನಲ್ಲಿ ಇವರಿಬ್ಬರು ಆಡಿದ 208 ರನ್ಗಳ ಭರ್ಜರಿ ಜೊತೆಯಾಟ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಹೆಚ್ಚು ರನ್ಗಳ ಜೊತೆಯಾಟವಾಗಿದೆ. ಇವರಿಬ್ಬರ ಜವಾಬ್ದಾರಿಯುತ ಆಟಕ್ಕೆ ಇದೇ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ, ಟೀಮ್ ಇಂಡಿಯಾದ ಅಜೇಯ ಓಟದ ಹಿಂದೆ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ಗಳದ್ದೂ ಶ್ರಮವಿದೆ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಟೀಮ್ ಮ್ಯಾನೇಜ್ಮೆಂಟ್ ತಮಗೆ ನೀಡಿರುವ ಜವಾಬ್ದಾರಿಯನ್ನ ಸಮರ್ಥವಾಗಿ ಇವರಿಬ್ಬರು ನಿಭಾಯಿಸ್ತಾರೆ. ತಮ್ಮ ಮೇಲೆ ಇಟ್ಟ ಭರವಸೆಯನ್ನ ಉಳಿಸಿಕೊಂಡು ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಫಿಯರ್ ಲೆಸ್ ನೆರವಾಗ್ತಿದ್ದಾರೆ. ತಂಡಕ್ಕಾಗಿ ಸೆಲ್ಫ್ಲೆಸ್ ಆಟವಾಡ್ತಿರೋ ಶ್ರೇಯಸ್, ರಾಹುಲ್ಗೆ ಒಂದು ಸಲಾಂ ಹೇಳಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ