ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ
ಆಟಗಾರರಿಂದ ಡ್ರೆಸ್ಸಿಂಗ್ ರೂಮ್, ಮೈದಾನದಲ್ಲಿ ಒಗ್ಗಟ್ಟು ಪ್ರದರ್ಶನ
ಬಲಾಢ್ಯ ತಂಡಗಳನ್ನೆಲ್ಲ ಮಣ್ಣು ಮುಕ್ಕಿಸುತ್ತಿರುವ ಟೀಮ್ ಇಂಡಿಯಾ
ಟೀಮ್ ಇಂಡಿಯಾವನ್ನ ನೋಡ್ತಿದ್ರೆ, ಈ ಸಲ ವಿಶ್ವಕಪ್ ಗೆಲುವಿನ ಭರವಸೆ ದಿನೇ ದಿನೇ ಹೆಚ್ಚಾಗುತ್ತಿದೆ. 2011ರ ಏಕದಿನ ವಿಶ್ವಕಪ್ ಟೂರ್ನಿ ಪದೆ ಪದೇ ನೆನಪಾಗುತ್ತಿದೆ. ತಂಡದ ಈ ಗೆಲುವಿನ ನಾಗಲೋಟದ ಹಿಂದೆ, ಒಂದು ಸಿಕ್ರೇಟ್ ಕಥೆಯಿದೆ. ಅದೇನು..
ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಆಟವಾಡ್ತಿರೋ ಟೀಮ್ ಇಂಡಿಯಾ, ಸೆಮೀಸ್ನತ್ತ ಹೆಜ್ಜೆ ಇಟ್ಟಿದೆ. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಪರಿ ನೋಡಿದ್ರೆ, ಈ ಸಲ ವಿಶ್ವ ಕಿರೀಟಕ್ಕೆ ಮುತ್ತಿಡೋದು ಖಾಯಂ ಎನಿಸಿದೆ. ಬಲಾಢ್ಯ ತಂಡಗಳನ್ನೆಲ್ಲ ಮಣ್ಣು ಮುಕ್ಕಿಸುತ್ತಿರುವ ಟೀಮ್ ಇಂಡಿಯಾ ಸಕ್ಸಸ್ನ ಅಲೆಯಲ್ಲಿ ತೇಲಾಡುತ್ತಿದೆ. ಟೀಮ್ ಇಂಡಿಯಾದ ಈ ಸಕ್ಸಸ್ ಹಿಂದೆ ಒಂದು ಸ್ಪೆಷಲ್ ಸೂತ್ರವಿದೆ.
ಟೀಮ್ ಇಂಡಿಯಾ ಸಕ್ಸಸ್ ಹಿಂದೆ ಒಗ್ಗಟ್ಟಿನ ಮಂತ್ರ..!
ಈ ಹಿಂದೆ ಟೀಮ್ ಇಂಡಿಯಾದಲ್ಲಿ ಬರೀ ಬಣರಾಜಕೀಯದ್ದೇ ಸುದ್ದಿ. ಬಂಡಾಯ ಹಾಗೂ ಭಿನ್ನಾಭಿಪ್ರಾಯದ್ದೇ ಹೊಗೆ. ಆದ್ರೀಗ ಟೀಮ್ ಇಂಡಿಯಾಲ್ಲಿ ಇದೆಲ್ಲಕ್ಕೂ ಫುಲ್ಸ್ಟಾಪ್ ಬಿದ್ದಿದೆ. ಒನ್ ಟೀಮ್ ಒನ್ ಅಜೆಂಡಾ ವಾತಾವರಣ ಕ್ರಿಯೇಟ್ ಆಗಿದೆ. ಎಂದೂ ಕಾಣದ ಪರಸ್ಪರ ಗೌರವ ಆಟಗಾರರ ನಡುವೆ ಕಾಣ್ತಿದೆ. ಆನ್ಫೀಲ್ಡ್ನಲ್ಲೇ ಅಲ್ಲ, ಆಫ್ ದಿ ಫೀಲ್ಡ್ನಲ್ಲೂ ಆಟಗಾರರ ಸಮನ್ವಯತೆ ಟೀಮ್ ಇಂಡಿಯಾದ ಸಕ್ಸಸ್ ಸಿಕ್ರೇಟ್ ಆಗಿ ಮಾರ್ಪಟ್ಟಿದೆ.
2011ರ ವಿಶ್ವಕಪ್ ನೆನಪಿಸ್ತಿದೆ ಡ್ರೆಸ್ಸಿಂಗ್ ರೂಮ್!
ಸದ್ಯದ ಟೀಮ್ ಇಂಡಿಯಾವನ್ನ ನೋಡ್ತಿದ್ರೆ, ನಿಜಕ್ಕೂ 2011ರ ಟೀಮ್ ಇಂಡಿಯಾವನ್ನೇ ನೋಡಿದಂತಿದೆ. 2011ರ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದೇ ಆಟಗಾರರ ನಡುವಿನ ಒಗ್ಗಟ್ಟು. ಆ ಒಗ್ಗಟ್ಟಿನ ಮಂತ್ರವೇ ಟೀಮ್ ಇಂಡಿಯಾವನ್ನ ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಿತ್ತು.. ಇದೀಗ ಅಂಥದ್ದೇ ವಾತಾವರಣ ಮತ್ತೆ ನಿರ್ಮಾಣವಾಗಿದೆ.
Indian support staff took a day off and went on to explore Mountains in Dharmshala.#INDvsENG #INDvENG #ENGvsIND #Lucknow #Dharmshala #TeamIndia #IndianCricketTeam #IndianCricket #RohitSharma #ViratKohli #RahulDravid #CWC23 #CWC2023 #WorldCup2023 pic.twitter.com/7EyWl519m0
— Cric trendy (@CricTrendy) October 25, 2023
ಒಬ್ಬರನ್ನ ಒಬ್ಬರು ಟೀಕಿಸಿಕೊಳ್ಳದೆ, ಸಹ ಆಟಗಾರರನ್ನ ಬೆನ್ನು ತಟ್ಟುತ್ತಾ ಸಾಗ್ತಿರುವ ಪರಿಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಇತರೆ ಆಟಗಾರರ ಯಶಸ್ಸನ್ನು ಎಲ್ರೂ ಸಂಭ್ರಮಿಸ್ತಿದ್ದಾರೆ. ವಿರಾಟ್ ಕೊಹ್ಲಿ ಶತಕ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕಕ್ಕೆ ಕೆ.ಎಲ್ ರಾಹುಲ್ ಸಾಥ್ ನೀಡಿದ ರೀತಿಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಈ ಹಿಂದೆ ಒಂದೇ ಒಂದು ಕ್ಯಾಚ್ ಬಿಟ್ಟರೆ, ಸಹ ಆಟಗಾರರನ ಮೇಲೆ ಕೂಗಾಡುತ್ತಿದ್ದ ಆಟಗಾರರು, ಈಗ ಕೂಲ್ & ಕಾಮ್ ಆಗಿದ್ದಾರೆ. ಇದೆಲ್ಲವೂ ಡ್ರೆಸ್ಸಿಂಗ್ ರೂಮ್ನಲ್ಲಿನ ಒಗ್ಗಟ್ಟನ್ನು ಎತ್ತಿ ತೋರಿಸ್ತಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗದಿದ್ರೂ ಆಟಗಾರರಲ್ಲಿ ಬೇಸರವಿಲ್ಲ. ಬದಲಾಗಿ ಆಪ್ ಫೀಲ್ಡ್ನಿಂದಲೇ ತಂಡಕ್ಕೆ ನೆರವಾಗ್ತಿದ್ದಾರೆ. ಇದೆಲ್ಲವೂ ಡ್ರೆಸ್ಸಿಂಗ್ ರೂಮ್ನಲ್ಲಿನ ಸಮನ್ವಯತೆಗೆ ಹಿಡಿದ ಕನ್ನಡಿಯಾಗಿದೆ.
ತಂಡದಲ್ಲಿಲ್ಲ ಸಿನೀಯರ್.. ಜೂನಿಯರ್ ಎಂಬ ಭಾವ..!
ಸಿನೀಯರ್-ಜೂನಿಯರ್ ಎಂಬ ಅಹಃ, ಇಡೀ ತಂಡದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತೆ. ಆದ್ರೆ, ರೋಹಿತ್ ನಾಯಕತ್ವದ ಟೀಮ್ ಇಂಡಿಯದಲ್ಲಿ ಅಂಥಹ ಬೇದಭಾವ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಪಂದ್ಯಕ್ಕೂ ಮುನ್ನ ಯುವ ಆಟಗಾರರ ಪೆಪ್ ಟಾಕ್.. ಹಿರಿಯರಷ್ಟೇ ಅಲ್ದೇ ಗಿಲ್ರಂಥ ಯುವ ಆಟಗಾರನಿಗೂ ಇಡೀ ತಂಡವನ್ನ ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಗ್ತಿದೆ.
The way Rahul Dravid applauding him. 😍🤌🤌#ShreyasIyer pic.twitter.com/ADpPfm0t8R
— Pick-up Shot (@96ShreyasIyer) October 23, 2023
ರೋಹಿತ್-ಕೊಹ್ಲಿ ನಡುವೆ ನೋ ವಾರ್..!
ರೋಹಿತ್ ಆ್ಯಂಡ್ ಕೊಹ್ಲಿ. ಇವರಿಬ್ಬರ ನಡುವಿನ ಕ್ಲಾಶ್ ಪದೇ ಪದೇ ಸದ್ದು ಮಾಡ್ತಿತ್ತು. ಇದೀಗ ನಾನು ಎಂಬ ಅಹಂ ಈ ಇಬ್ಬರಲ್ಲೂ ಕಣ್ಮರೆಯಾಗಿದೆ. ತಂಡಕ್ಕಾಗಿ ಟ್ರೋಫಿ ಗೆಲ್ಲಬೇಕೆಂಬ ತುಡಿತ ಇಬ್ಬರಲ್ಲೂ ಕಾಣ್ತಿದೆ. ನಾಯಕನ ಬೆನ್ನಿಗೆ ವಿರಾಟ್ ನಿಲ್ಲುತ್ತಿದ್ದಾರೆ. ವಿರಾಟ್ ಆಟಕ್ಕೆ ರೋಹಿತ್ ಪ್ರೋತ್ಸಾಹಿಸುತ್ತಿದ್ದಾರೆ. ಇವರಿಬ್ಬರು ಸ್ನೇಹ ತಂಡದಲ್ಲಿನ ಜೋಶ್ ಮತ್ತಷ್ಟು ಹೆಚ್ಚಿಸಿದೆ.
ಟೀಮ್ ಇಂಡಿಯಾ ಈ ಒಗ್ಗಟ್ಟಿನ ಸೂತ್ರ ಹಿಂದಿನ ಸೂತ್ರದಾರರು ಕೋಚ್ ರಾಹುಲ್ ದ್ರಾವಿಡ್ & ಕ್ಯಾಪ್ಟನ್ ರೋಹಿತ್ ಶರ್ಮಾ. ಇವರಿಬ್ಬರ ನಡೆ ನಡಿ ಎಲ್ಲವೂ ತಂಡದ ವಾತಾವರಣದ ಮೇಲೆ ಬಿಗ್ ಇಂಪ್ಯಾಕ್ಟ್ ಮೂಡಿಸಿದೆ. ಒಟ್ಟಿನಲ್ಲಿ, ಆಟಗಾರರ ಒಗ್ಗಟ್ಟು ನೋಡಿದ್ರೆ, 2011ರ ವಿಶ್ವಕಪ್ನ ಜೈತ್ರಯಾತ್ರೆ ಮತ್ತೊಮ್ಮೆ ರಿಕ್ರೀಯೆಟ್ ಆಗೋ ಭರವಸೆಯಂತೂ ಹೆಚ್ಚಾಗ್ತಿದೆ. ಆ ಭರವಸೆ ನಿಜವಾಗಲಿ ಅನ್ನೋದೆ ಎಲ್ಲರ ಪ್ರಾರ್ಥನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ
ಆಟಗಾರರಿಂದ ಡ್ರೆಸ್ಸಿಂಗ್ ರೂಮ್, ಮೈದಾನದಲ್ಲಿ ಒಗ್ಗಟ್ಟು ಪ್ರದರ್ಶನ
ಬಲಾಢ್ಯ ತಂಡಗಳನ್ನೆಲ್ಲ ಮಣ್ಣು ಮುಕ್ಕಿಸುತ್ತಿರುವ ಟೀಮ್ ಇಂಡಿಯಾ
ಟೀಮ್ ಇಂಡಿಯಾವನ್ನ ನೋಡ್ತಿದ್ರೆ, ಈ ಸಲ ವಿಶ್ವಕಪ್ ಗೆಲುವಿನ ಭರವಸೆ ದಿನೇ ದಿನೇ ಹೆಚ್ಚಾಗುತ್ತಿದೆ. 2011ರ ಏಕದಿನ ವಿಶ್ವಕಪ್ ಟೂರ್ನಿ ಪದೆ ಪದೇ ನೆನಪಾಗುತ್ತಿದೆ. ತಂಡದ ಈ ಗೆಲುವಿನ ನಾಗಲೋಟದ ಹಿಂದೆ, ಒಂದು ಸಿಕ್ರೇಟ್ ಕಥೆಯಿದೆ. ಅದೇನು..
ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಆಟವಾಡ್ತಿರೋ ಟೀಮ್ ಇಂಡಿಯಾ, ಸೆಮೀಸ್ನತ್ತ ಹೆಜ್ಜೆ ಇಟ್ಟಿದೆ. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಪರಿ ನೋಡಿದ್ರೆ, ಈ ಸಲ ವಿಶ್ವ ಕಿರೀಟಕ್ಕೆ ಮುತ್ತಿಡೋದು ಖಾಯಂ ಎನಿಸಿದೆ. ಬಲಾಢ್ಯ ತಂಡಗಳನ್ನೆಲ್ಲ ಮಣ್ಣು ಮುಕ್ಕಿಸುತ್ತಿರುವ ಟೀಮ್ ಇಂಡಿಯಾ ಸಕ್ಸಸ್ನ ಅಲೆಯಲ್ಲಿ ತೇಲಾಡುತ್ತಿದೆ. ಟೀಮ್ ಇಂಡಿಯಾದ ಈ ಸಕ್ಸಸ್ ಹಿಂದೆ ಒಂದು ಸ್ಪೆಷಲ್ ಸೂತ್ರವಿದೆ.
ಟೀಮ್ ಇಂಡಿಯಾ ಸಕ್ಸಸ್ ಹಿಂದೆ ಒಗ್ಗಟ್ಟಿನ ಮಂತ್ರ..!
ಈ ಹಿಂದೆ ಟೀಮ್ ಇಂಡಿಯಾದಲ್ಲಿ ಬರೀ ಬಣರಾಜಕೀಯದ್ದೇ ಸುದ್ದಿ. ಬಂಡಾಯ ಹಾಗೂ ಭಿನ್ನಾಭಿಪ್ರಾಯದ್ದೇ ಹೊಗೆ. ಆದ್ರೀಗ ಟೀಮ್ ಇಂಡಿಯಾಲ್ಲಿ ಇದೆಲ್ಲಕ್ಕೂ ಫುಲ್ಸ್ಟಾಪ್ ಬಿದ್ದಿದೆ. ಒನ್ ಟೀಮ್ ಒನ್ ಅಜೆಂಡಾ ವಾತಾವರಣ ಕ್ರಿಯೇಟ್ ಆಗಿದೆ. ಎಂದೂ ಕಾಣದ ಪರಸ್ಪರ ಗೌರವ ಆಟಗಾರರ ನಡುವೆ ಕಾಣ್ತಿದೆ. ಆನ್ಫೀಲ್ಡ್ನಲ್ಲೇ ಅಲ್ಲ, ಆಫ್ ದಿ ಫೀಲ್ಡ್ನಲ್ಲೂ ಆಟಗಾರರ ಸಮನ್ವಯತೆ ಟೀಮ್ ಇಂಡಿಯಾದ ಸಕ್ಸಸ್ ಸಿಕ್ರೇಟ್ ಆಗಿ ಮಾರ್ಪಟ್ಟಿದೆ.
2011ರ ವಿಶ್ವಕಪ್ ನೆನಪಿಸ್ತಿದೆ ಡ್ರೆಸ್ಸಿಂಗ್ ರೂಮ್!
ಸದ್ಯದ ಟೀಮ್ ಇಂಡಿಯಾವನ್ನ ನೋಡ್ತಿದ್ರೆ, ನಿಜಕ್ಕೂ 2011ರ ಟೀಮ್ ಇಂಡಿಯಾವನ್ನೇ ನೋಡಿದಂತಿದೆ. 2011ರ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದೇ ಆಟಗಾರರ ನಡುವಿನ ಒಗ್ಗಟ್ಟು. ಆ ಒಗ್ಗಟ್ಟಿನ ಮಂತ್ರವೇ ಟೀಮ್ ಇಂಡಿಯಾವನ್ನ ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಿತ್ತು.. ಇದೀಗ ಅಂಥದ್ದೇ ವಾತಾವರಣ ಮತ್ತೆ ನಿರ್ಮಾಣವಾಗಿದೆ.
Indian support staff took a day off and went on to explore Mountains in Dharmshala.#INDvsENG #INDvENG #ENGvsIND #Lucknow #Dharmshala #TeamIndia #IndianCricketTeam #IndianCricket #RohitSharma #ViratKohli #RahulDravid #CWC23 #CWC2023 #WorldCup2023 pic.twitter.com/7EyWl519m0
— Cric trendy (@CricTrendy) October 25, 2023
ಒಬ್ಬರನ್ನ ಒಬ್ಬರು ಟೀಕಿಸಿಕೊಳ್ಳದೆ, ಸಹ ಆಟಗಾರರನ್ನ ಬೆನ್ನು ತಟ್ಟುತ್ತಾ ಸಾಗ್ತಿರುವ ಪರಿಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಇತರೆ ಆಟಗಾರರ ಯಶಸ್ಸನ್ನು ಎಲ್ರೂ ಸಂಭ್ರಮಿಸ್ತಿದ್ದಾರೆ. ವಿರಾಟ್ ಕೊಹ್ಲಿ ಶತಕ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕಕ್ಕೆ ಕೆ.ಎಲ್ ರಾಹುಲ್ ಸಾಥ್ ನೀಡಿದ ರೀತಿಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಈ ಹಿಂದೆ ಒಂದೇ ಒಂದು ಕ್ಯಾಚ್ ಬಿಟ್ಟರೆ, ಸಹ ಆಟಗಾರರನ ಮೇಲೆ ಕೂಗಾಡುತ್ತಿದ್ದ ಆಟಗಾರರು, ಈಗ ಕೂಲ್ & ಕಾಮ್ ಆಗಿದ್ದಾರೆ. ಇದೆಲ್ಲವೂ ಡ್ರೆಸ್ಸಿಂಗ್ ರೂಮ್ನಲ್ಲಿನ ಒಗ್ಗಟ್ಟನ್ನು ಎತ್ತಿ ತೋರಿಸ್ತಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗದಿದ್ರೂ ಆಟಗಾರರಲ್ಲಿ ಬೇಸರವಿಲ್ಲ. ಬದಲಾಗಿ ಆಪ್ ಫೀಲ್ಡ್ನಿಂದಲೇ ತಂಡಕ್ಕೆ ನೆರವಾಗ್ತಿದ್ದಾರೆ. ಇದೆಲ್ಲವೂ ಡ್ರೆಸ್ಸಿಂಗ್ ರೂಮ್ನಲ್ಲಿನ ಸಮನ್ವಯತೆಗೆ ಹಿಡಿದ ಕನ್ನಡಿಯಾಗಿದೆ.
ತಂಡದಲ್ಲಿಲ್ಲ ಸಿನೀಯರ್.. ಜೂನಿಯರ್ ಎಂಬ ಭಾವ..!
ಸಿನೀಯರ್-ಜೂನಿಯರ್ ಎಂಬ ಅಹಃ, ಇಡೀ ತಂಡದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತೆ. ಆದ್ರೆ, ರೋಹಿತ್ ನಾಯಕತ್ವದ ಟೀಮ್ ಇಂಡಿಯದಲ್ಲಿ ಅಂಥಹ ಬೇದಭಾವ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಪಂದ್ಯಕ್ಕೂ ಮುನ್ನ ಯುವ ಆಟಗಾರರ ಪೆಪ್ ಟಾಕ್.. ಹಿರಿಯರಷ್ಟೇ ಅಲ್ದೇ ಗಿಲ್ರಂಥ ಯುವ ಆಟಗಾರನಿಗೂ ಇಡೀ ತಂಡವನ್ನ ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಗ್ತಿದೆ.
The way Rahul Dravid applauding him. 😍🤌🤌#ShreyasIyer pic.twitter.com/ADpPfm0t8R
— Pick-up Shot (@96ShreyasIyer) October 23, 2023
ರೋಹಿತ್-ಕೊಹ್ಲಿ ನಡುವೆ ನೋ ವಾರ್..!
ರೋಹಿತ್ ಆ್ಯಂಡ್ ಕೊಹ್ಲಿ. ಇವರಿಬ್ಬರ ನಡುವಿನ ಕ್ಲಾಶ್ ಪದೇ ಪದೇ ಸದ್ದು ಮಾಡ್ತಿತ್ತು. ಇದೀಗ ನಾನು ಎಂಬ ಅಹಂ ಈ ಇಬ್ಬರಲ್ಲೂ ಕಣ್ಮರೆಯಾಗಿದೆ. ತಂಡಕ್ಕಾಗಿ ಟ್ರೋಫಿ ಗೆಲ್ಲಬೇಕೆಂಬ ತುಡಿತ ಇಬ್ಬರಲ್ಲೂ ಕಾಣ್ತಿದೆ. ನಾಯಕನ ಬೆನ್ನಿಗೆ ವಿರಾಟ್ ನಿಲ್ಲುತ್ತಿದ್ದಾರೆ. ವಿರಾಟ್ ಆಟಕ್ಕೆ ರೋಹಿತ್ ಪ್ರೋತ್ಸಾಹಿಸುತ್ತಿದ್ದಾರೆ. ಇವರಿಬ್ಬರು ಸ್ನೇಹ ತಂಡದಲ್ಲಿನ ಜೋಶ್ ಮತ್ತಷ್ಟು ಹೆಚ್ಚಿಸಿದೆ.
ಟೀಮ್ ಇಂಡಿಯಾ ಈ ಒಗ್ಗಟ್ಟಿನ ಸೂತ್ರ ಹಿಂದಿನ ಸೂತ್ರದಾರರು ಕೋಚ್ ರಾಹುಲ್ ದ್ರಾವಿಡ್ & ಕ್ಯಾಪ್ಟನ್ ರೋಹಿತ್ ಶರ್ಮಾ. ಇವರಿಬ್ಬರ ನಡೆ ನಡಿ ಎಲ್ಲವೂ ತಂಡದ ವಾತಾವರಣದ ಮೇಲೆ ಬಿಗ್ ಇಂಪ್ಯಾಕ್ಟ್ ಮೂಡಿಸಿದೆ. ಒಟ್ಟಿನಲ್ಲಿ, ಆಟಗಾರರ ಒಗ್ಗಟ್ಟು ನೋಡಿದ್ರೆ, 2011ರ ವಿಶ್ವಕಪ್ನ ಜೈತ್ರಯಾತ್ರೆ ಮತ್ತೊಮ್ಮೆ ರಿಕ್ರೀಯೆಟ್ ಆಗೋ ಭರವಸೆಯಂತೂ ಹೆಚ್ಚಾಗ್ತಿದೆ. ಆ ಭರವಸೆ ನಿಜವಾಗಲಿ ಅನ್ನೋದೆ ಎಲ್ಲರ ಪ್ರಾರ್ಥನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ