23 ವರ್ಷದ ಇಬ್ಬರು ಯುವಕರು ಆತ್ಮಹತ್ಯೆ
ಪಂದ್ಯ ನೋಡಲೆಂದೇ ರಜೆ ತೆಗೆದುಕೊಂಡಿದ್ದ ಉದ್ಯೋಗಿ
ಪಂದ್ಯ ಮುಗಿಯುತ್ತಿದ್ದಂತೆ ನೇಣಿಗೆ ಕೊರಳೊಡ್ಡಿದ ಯುವಕರು
ವಿಶ್ವಕಪ್ನಲ್ಲಿ ಭಾರತ ಸೋತಿದ್ದನ್ನು ಅರಗಿಸಿಕೊಳ್ಳಲಾಗದೆ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪಶ್ಚಿಮ ಬಂಗಾಳದ ಬಂಕುರಾ ಮೂಲದ ರಾಹುಲ್ ಲೋಹರ್(23) ಮತ್ತು ಒಡಿಶಾದ ಜಾಜ್ಪುರದ ದೇವ್ ರಣಹಾನ್ ದಾಸ್(23) ಎಂದು ಗುರುತಿಸಲಾಗಿದೆ.
ರಾಹುಲ್ ಲೋಹರ್ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಬಂಕುರಾದ ಬೆಲಿತೋರ್ ಪೊಲೀಸ್ ಠಾಣೆ ಬಳಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಟೀಂ ಇಂಡಿಯಾ ಸೋತ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದೇವ್ ರಣಹಾನ್ ದಾಸ್ ಕೂಡ ಪಂದ್ಯ ಮುಗಿದ ನಂತರ ಬಿಂಜರ್ಪುರದ ತನ್ನ ಮನೆಯ ಟೆರೇಸ್ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನು ಓದಿ: World Cup 2027: ಮುಂದಿನ ವಿಶ್ವಕಪ್ ಎಲ್ಲಿ ನಡೆಯುತ್ತೆ? ಎಷ್ಟು ತಂಡಗಳು ಇರಲಿವೆ? ಇಲ್ಲಿದೆ ಮಾಹಿತಿ
ರಾಹುಲ್ ಲೋಹರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಫೈನಲ್ ಪಂದ್ಯ ವೀಕ್ಷಿಸಲು ರಜೆಯನ್ನು ಪಡೆದಿದ್ದನು. ಪಂದ್ಯ ಮುಗಿದ ಕೂಡಲೆ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಆತನ ಸೋದರ ಮಾವ ಉತ್ತಮ್ ಸುರ್ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ! ಬೇಸರ ನಿವಾರಿಸಿಕೊಳ್ಳಲು ಬಾಸ್ ತೆಗೆದುಕೊಂಡ್ರು ಈ ನಿರ್ಧಾರ
ಒಡಿಶಾದ ದೇವ್ ರಣಹಾನ್ ದಾಸ್ ‘‘ಭಾವನಾತ್ಮಕ ಸಿಂಡ್ರೋಮ್ಗೆ’’ ಒಳಗಾಗಿದ್ದನು. ಟೀಂ ಇಂಡಿಯಾ ಸೋತಿದ್ದನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
23 ವರ್ಷದ ಇಬ್ಬರು ಯುವಕರು ಆತ್ಮಹತ್ಯೆ
ಪಂದ್ಯ ನೋಡಲೆಂದೇ ರಜೆ ತೆಗೆದುಕೊಂಡಿದ್ದ ಉದ್ಯೋಗಿ
ಪಂದ್ಯ ಮುಗಿಯುತ್ತಿದ್ದಂತೆ ನೇಣಿಗೆ ಕೊರಳೊಡ್ಡಿದ ಯುವಕರು
ವಿಶ್ವಕಪ್ನಲ್ಲಿ ಭಾರತ ಸೋತಿದ್ದನ್ನು ಅರಗಿಸಿಕೊಳ್ಳಲಾಗದೆ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪಶ್ಚಿಮ ಬಂಗಾಳದ ಬಂಕುರಾ ಮೂಲದ ರಾಹುಲ್ ಲೋಹರ್(23) ಮತ್ತು ಒಡಿಶಾದ ಜಾಜ್ಪುರದ ದೇವ್ ರಣಹಾನ್ ದಾಸ್(23) ಎಂದು ಗುರುತಿಸಲಾಗಿದೆ.
ರಾಹುಲ್ ಲೋಹರ್ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಬಂಕುರಾದ ಬೆಲಿತೋರ್ ಪೊಲೀಸ್ ಠಾಣೆ ಬಳಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಟೀಂ ಇಂಡಿಯಾ ಸೋತ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದೇವ್ ರಣಹಾನ್ ದಾಸ್ ಕೂಡ ಪಂದ್ಯ ಮುಗಿದ ನಂತರ ಬಿಂಜರ್ಪುರದ ತನ್ನ ಮನೆಯ ಟೆರೇಸ್ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನು ಓದಿ: World Cup 2027: ಮುಂದಿನ ವಿಶ್ವಕಪ್ ಎಲ್ಲಿ ನಡೆಯುತ್ತೆ? ಎಷ್ಟು ತಂಡಗಳು ಇರಲಿವೆ? ಇಲ್ಲಿದೆ ಮಾಹಿತಿ
ರಾಹುಲ್ ಲೋಹರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಫೈನಲ್ ಪಂದ್ಯ ವೀಕ್ಷಿಸಲು ರಜೆಯನ್ನು ಪಡೆದಿದ್ದನು. ಪಂದ್ಯ ಮುಗಿದ ಕೂಡಲೆ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಆತನ ಸೋದರ ಮಾವ ಉತ್ತಮ್ ಸುರ್ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ! ಬೇಸರ ನಿವಾರಿಸಿಕೊಳ್ಳಲು ಬಾಸ್ ತೆಗೆದುಕೊಂಡ್ರು ಈ ನಿರ್ಧಾರ
ಒಡಿಶಾದ ದೇವ್ ರಣಹಾನ್ ದಾಸ್ ‘‘ಭಾವನಾತ್ಮಕ ಸಿಂಡ್ರೋಮ್ಗೆ’’ ಒಳಗಾಗಿದ್ದನು. ಟೀಂ ಇಂಡಿಯಾ ಸೋತಿದ್ದನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ