ಸ್ಟ್ರಾಂಗ್ ಕಂಬ್ಯಾಕ್ ಮಾಡಿದ ಟೀಂ ಇಂಡಿಯಾ ಬೌಲರ್ಸ್..!
ಕೇವಲ 2 ರನ್ಗಳಿಂದ ಅರ್ಧ ಶತಕ ಮಿಸ್ ಮಾಡ್ಕೊಂಡ ಜಡ್ಡು
2ನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 151ರನ್
ವರ್ಲ್ಡ್ ಟೆಸ್ಟ್ ಚಾಂಪಿಯನ್ ಫೈನಲ್ನ ಎರಡನೇ ದಿನ, ಟೀಮ್ ಇಂಡಿಯಾ ಬೌಲರ್ಸ್ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದರು. ಆದರೆ ಬ್ಯಾಟ್ಸ್ಮನ್ಗಳು ಮಾತ್ರ ಆಸಿಸ್ ದಾಳಿಗೆ ಉಡೀಸ್ ಆದರು. ಕ್ಯಾಪ್ಟನ್ ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಪೂಜಾರ, ನಿರೀಕ್ಷೆಗಳನ್ನು ಮತ್ತೆ ಹುಸಿ ಮಾಡಿದ್ದಾರೆ.
ಎರಡನೇ ದಿನದ ಟೀಮ್ ಇಂಡಿಯಾ, ಬ್ಯಾಕ್ಫೂಟ್ನಲ್ಲೇ ಇನ್ನಿಂಗ್ಸ್ ಆರಂಭಿಸಿತು. ದಿನದಾಟದ ಆರಂಭದಲ್ಲೇ ಸ್ಟೀವ್ ಸ್ಮಿತ್, ಸತತ 2 ಬೌಂಡ್ರಿ ಬಾರಿಸಿ ಶತಕ ಸಿಡಿಸಿದ್ರು. ಮತ್ತೊಂದೆಡೆ ಟ್ರಾವಿಸ್ ಹೆಡ್, 150 ರನ್ ಬಾರಿಸಿದ್ರು. ಮೊದಲ ದಿನ ಹೆಡ್ ವಿರುದ್ಧ ಗೇಮ್ಪ್ಲಾನ್ ಮಾಡಿದ್ದ ಟೀಮ್ ಇಂಡಿಯಾ, ಎರಡನೇ ದಿನವೂ ಅದೇ ಪ್ಲಾನ್ ಮುಂದುವರೆಸಿತು. ಪ್ಲಾನ್ ವರ್ಕ್ಔಟ್ ಕೂಡ ಆಯ್ತು. 163 ರನ್ಗಳಿಸಿದ ಹೆಡ್, ಸಿರಾಜ್ಗೆ ವಿಕೆಟ್ ಒಪ್ಪಿಸಿದರು.
ಕ್ಯಾಮರೂನ್ ಗ್ರೀನ್ 6 ರನ್ಗಳಿಸಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ್ರು. ಪ್ಲಾನ್ಗೆ ತಕ್ಕನಂತೆ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಬೌಲರ್ಸ್, 121 ರನ್ಗಳಿಸಿದ ಸ್ಟೀವ್ ಸ್ಮಿತ್ಗೆ ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಸೆಷನ್ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಟೀಮ್ ಇಂಡಿಯಾ, 13 ಓವರ್ಗಳಲ್ಲಿ ಆಸ್ಟ್ರೇಲಿಯಾದ ಉಳಿದ ಬ್ಯಾಟ್ಸ್ಮನ್ಗಳನ್ನ ಕಟ್ಟಿಹಾಕ್ತು. ಅಂತಿಮವಾಗಿ ಆಸ್ಟ್ರೇಲಿಯಾ 469 ರನ್ಗಳಿಗೆ ಆಲೌಟಾಯ್ತು. ಸಿರಾಜ್ 4 ವಿಕೆಟ್ ಪಡೆದು ಗಮನ ಸೆಳೆದರು.
ಆಸಿಸ್ ಸವಾಲಿಗೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಒಳ್ಳೆ ಸ್ಟಾರ್ಟ್ ಸಿಗಲೇ ಇಲ್ಲ. ಸ್ಕೋರ್ 30 ರನ್ ಆಗುವಷ್ಟರಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ಚೆತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ತಲಾ 14 ರನ್ಗಳಿಸಿದ ಉಭಯ ಬ್ಯಾಟ್ಸ್ಮನ್ಗಳು, ಬೇಗ ಪೆವಿಲಿಯನ್ ಸೇರಿಕೊಂಡರು.
17 ರನ್ಗಳಿಸಿದಾಗ ಜೀವದಾನ ಪಡೆದ ಅಜಿಂಕ್ಯಾ ರಹಾನೆ, ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ರಹಾನೆ ಜತೆಯಾದ ಜಡೇಜಾ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಜಡೇಜಾ, 48 ರನ್ಗಳಿಸಿದ್ದಾಗ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ಹೊರ ನಡೆದರು.
2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿರೋ ಟೀಮ್ ಇಂಡಿಯಾ, 318 ರನ್ಗಳ ಹಿನ್ನೆಯಲ್ಲಿದ್ದು. ಸೋಲಿನ ಸಂಕಷ್ಟಕ್ಕೆ ಸಿಲುಕಿದೆ. ಆದ್ರೀಗ ಆಪತ್ತಿನಿಂದ ಪಾರು ಮಾಡಬೇಕಾದ ಜವಾಬ್ದಾರಿ ಅಜಿಂಕ್ಯಾ ರಹಾನೆ ಹಾಗೂ ಕೆ.ಎಸ್.ಭರತ್ ಮೇಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸ್ಟ್ರಾಂಗ್ ಕಂಬ್ಯಾಕ್ ಮಾಡಿದ ಟೀಂ ಇಂಡಿಯಾ ಬೌಲರ್ಸ್..!
ಕೇವಲ 2 ರನ್ಗಳಿಂದ ಅರ್ಧ ಶತಕ ಮಿಸ್ ಮಾಡ್ಕೊಂಡ ಜಡ್ಡು
2ನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 151ರನ್
ವರ್ಲ್ಡ್ ಟೆಸ್ಟ್ ಚಾಂಪಿಯನ್ ಫೈನಲ್ನ ಎರಡನೇ ದಿನ, ಟೀಮ್ ಇಂಡಿಯಾ ಬೌಲರ್ಸ್ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದರು. ಆದರೆ ಬ್ಯಾಟ್ಸ್ಮನ್ಗಳು ಮಾತ್ರ ಆಸಿಸ್ ದಾಳಿಗೆ ಉಡೀಸ್ ಆದರು. ಕ್ಯಾಪ್ಟನ್ ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಪೂಜಾರ, ನಿರೀಕ್ಷೆಗಳನ್ನು ಮತ್ತೆ ಹುಸಿ ಮಾಡಿದ್ದಾರೆ.
ಎರಡನೇ ದಿನದ ಟೀಮ್ ಇಂಡಿಯಾ, ಬ್ಯಾಕ್ಫೂಟ್ನಲ್ಲೇ ಇನ್ನಿಂಗ್ಸ್ ಆರಂಭಿಸಿತು. ದಿನದಾಟದ ಆರಂಭದಲ್ಲೇ ಸ್ಟೀವ್ ಸ್ಮಿತ್, ಸತತ 2 ಬೌಂಡ್ರಿ ಬಾರಿಸಿ ಶತಕ ಸಿಡಿಸಿದ್ರು. ಮತ್ತೊಂದೆಡೆ ಟ್ರಾವಿಸ್ ಹೆಡ್, 150 ರನ್ ಬಾರಿಸಿದ್ರು. ಮೊದಲ ದಿನ ಹೆಡ್ ವಿರುದ್ಧ ಗೇಮ್ಪ್ಲಾನ್ ಮಾಡಿದ್ದ ಟೀಮ್ ಇಂಡಿಯಾ, ಎರಡನೇ ದಿನವೂ ಅದೇ ಪ್ಲಾನ್ ಮುಂದುವರೆಸಿತು. ಪ್ಲಾನ್ ವರ್ಕ್ಔಟ್ ಕೂಡ ಆಯ್ತು. 163 ರನ್ಗಳಿಸಿದ ಹೆಡ್, ಸಿರಾಜ್ಗೆ ವಿಕೆಟ್ ಒಪ್ಪಿಸಿದರು.
ಕ್ಯಾಮರೂನ್ ಗ್ರೀನ್ 6 ರನ್ಗಳಿಸಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ್ರು. ಪ್ಲಾನ್ಗೆ ತಕ್ಕನಂತೆ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಬೌಲರ್ಸ್, 121 ರನ್ಗಳಿಸಿದ ಸ್ಟೀವ್ ಸ್ಮಿತ್ಗೆ ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಸೆಷನ್ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಟೀಮ್ ಇಂಡಿಯಾ, 13 ಓವರ್ಗಳಲ್ಲಿ ಆಸ್ಟ್ರೇಲಿಯಾದ ಉಳಿದ ಬ್ಯಾಟ್ಸ್ಮನ್ಗಳನ್ನ ಕಟ್ಟಿಹಾಕ್ತು. ಅಂತಿಮವಾಗಿ ಆಸ್ಟ್ರೇಲಿಯಾ 469 ರನ್ಗಳಿಗೆ ಆಲೌಟಾಯ್ತು. ಸಿರಾಜ್ 4 ವಿಕೆಟ್ ಪಡೆದು ಗಮನ ಸೆಳೆದರು.
ಆಸಿಸ್ ಸವಾಲಿಗೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಒಳ್ಳೆ ಸ್ಟಾರ್ಟ್ ಸಿಗಲೇ ಇಲ್ಲ. ಸ್ಕೋರ್ 30 ರನ್ ಆಗುವಷ್ಟರಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ಚೆತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ತಲಾ 14 ರನ್ಗಳಿಸಿದ ಉಭಯ ಬ್ಯಾಟ್ಸ್ಮನ್ಗಳು, ಬೇಗ ಪೆವಿಲಿಯನ್ ಸೇರಿಕೊಂಡರು.
17 ರನ್ಗಳಿಸಿದಾಗ ಜೀವದಾನ ಪಡೆದ ಅಜಿಂಕ್ಯಾ ರಹಾನೆ, ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ರಹಾನೆ ಜತೆಯಾದ ಜಡೇಜಾ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಜಡೇಜಾ, 48 ರನ್ಗಳಿಸಿದ್ದಾಗ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ಹೊರ ನಡೆದರು.
2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿರೋ ಟೀಮ್ ಇಂಡಿಯಾ, 318 ರನ್ಗಳ ಹಿನ್ನೆಯಲ್ಲಿದ್ದು. ಸೋಲಿನ ಸಂಕಷ್ಟಕ್ಕೆ ಸಿಲುಕಿದೆ. ಆದ್ರೀಗ ಆಪತ್ತಿನಿಂದ ಪಾರು ಮಾಡಬೇಕಾದ ಜವಾಬ್ದಾರಿ ಅಜಿಂಕ್ಯಾ ರಹಾನೆ ಹಾಗೂ ಕೆ.ಎಸ್.ಭರತ್ ಮೇಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್