newsfirstkannada.com

ಅಶಿಸ್ತು ತೋರಿ ಅಂಗಳದಿಂದ ಹೊರನಡೆದಿದ್ದ ಜೈಸ್ವಾಲ್​​; ಅಪಮಾನದ ಬಳಿಕ ಕೆರಳಿ ನಿಂತ ಯಂಗ್​​​​​ ಟೈಗರ್‌ಗೆ ಯಶಸ್ಸು

Share :

02-07-2023

    ಅಶಿಸ್ತು ತೋರಿ ಅಂಗಳದಿಂದ ಹೊರನಡೆದಿದ್ದ ಜೈಸ್ವಾಲ್​​

    ಫೀಲ್ಡ್‌ ತೊರೆಯುವಂತೆ ಕ್ಯಾಪ್ಟನ್ ರಹಾನೆ ಖಡಕ್ ಸೂಚನೆ 

    ವಿಜಯ್​​ ಹಜಾರೆ-IPL ನಲ್ಲಿ ಜೈಸ್ವಾಲ್‌ 'ಯಶಸ್ವಿ' ಪ್ರದರ್ಶನ 

ಯಶಸ್ವಿ ಜೈಸ್ವಾಲ್​​ ಹೆಸರಿನಲ್ಲಿರುವಂತೆ ಯಶಸ್ಸು ಅವರ ಬೆನ್ನೇರಿದೆ. ಟೀಮ್ ಇಂಡಿಯಾ ಪರ ಆಡುವ ಅವರ ಬಿಗ್​​ ಡ್ರೀಮ್​​​​ ನನಸಾಗುವ ಕಾಲ ದೂರವಿಲ್ಲ. ಇಲ್ಲಿ ತನಕ ಡೊಮೆಸ್ಟಿಕ್​​​​​ ಕ್ರಿಕೆಟ್‌ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದ 21ರ ಜೈಸ್ವಾಲ್​​​​ ಟೀಮ್ ಇಂಡಿಯಾ ಪರ ಹೂಂಕರಿಸಲು ಸಜ್ಜಾಗಿದ್ದಾನೆ. ಇದಕ್ಕೆಲ್ಲ ಕಾರಣ ಆ ಒಂದು ಅವಮಾನ. ಅಂದಾದ ಆ ಅಪಮಾನ ಜೈಸ್ವಾಲ್‌​ರಲ್ಲಿ ಭಾರತ ಪರ ಆಡುವ ಕಿಡಿ ಹೊತ್ತಿಸಿದೆ.
ಯಶಸ್ವಿ ಜೈಸ್ವಾಲ್​​​ ಇಷ್ಟು ದಿನ ಈ ಹೆಸರು ಬರೀ ಡೊಮೆಸ್ಟಿಕ್​ ಕ್ರಿಕೆಟ್​ ವಲಯದಲ್ಲಿ ಮಾತ್ರ ಕೇಳಿ ಬರ್ತಿತ್ತು. ಆದರೆ ಒಂದು ವಾರದ ಹಿಂದೆ ವೆಸ್ಟ್ ​ಇಂಡೀಸ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯ ಅನೌನ್ಸ್ ಆಗಿದ್ದೇ ಬಂತು. 21ರ ಜೈಸ್ವಾಲ್​ ನೇಮ್​ ಹಾಟ್​ಟಾಫಿಕ್ ಆಗಿದೆ. ವಿಂಡೀಸ್​​​​​ ಸರಣಿಗೆ ಸೆಲೆಕ್ಟ್ ಆಗಿರೋ ಲೆಫ್ಟಿ ಡ್ಯಾಶರ್, ಟೀಮ್ ಇಂಡಿಯಾ ಪರ ಅಬ್ಬರಿಸಲು ವೇದಿಕ್ಕೆ ಸಜ್ಜಾಗಿದೆ.
ಆದರೆ ನಿಮಗೆ ನೆನಪಿರಲಿ. ಈ ಫೈರಿ ಲೆಫ್ಟಿ ಬ್ಯಾಟ್ಸ್​​ಮನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದೇ ಈ ಒಂದು ಅವಮಾನ. ಈ ಅಪಮಾನ ಜೈಸ್ವಾಲ್​ಗೆ ಟೀಮ್‌ ಇಂಡಿಯಾ ಡೋರ್ ಓಪನ್ ಆಗುವಂತೆ ಮಾಡಿದೆ. ಎಲ್ಲರ ಮುಂದೆ ತಲೆತಗ್ಗಿಸಿ ಹೊರನಡೆದ ಈ ಇನ್ಸಿಡೆಂಟ್ ಜೈಸ್ವಾಲ್​ರಲ್ಲಿ ಹೊಸ ಹೋರಾಟದ ಕಿಚ್ಚನ್ನ ಹಚ್ಚಿಸಿತು. ಕಳೆದ ಹೋಗುತ್ತಿದ್ದ ಡೇರಿಂಗ್ ಬ್ಯಾಟ್ಸ್​​ಮನ್​​ ನ್ಯೂಸ್ ಪೇಪರ್​​ಗಳಲ್ಲಿ ಹೆಡ್​​ಲೈನ್​​ ಆಗುವಂತೆ ಮಾಡಿತು.
ಅಕಸ್ಮಾತ್‌ ಈ ಅಪಮಾನ ಆಗದಿದ್ರೆ ಯಶಸ್ವಿ ಆಟ ಬರೀ ದೇಶಿ ಕ್ರಿಕೆಟ್​​​ಗೆ ಸೀಮಿತವಾಗ್ತಿತ್ತು. ಆದರೆ ಕಳೆದ ವರ್ಷ ದುಲೀಪ್​​ ಟ್ರೋಫಿ ವೇಳೆ ಆದ ಈ ಅಪಮಾನ ಜೈಸ್ವಾಲ್​ ಬದುಕಿಗೆ ಹೊಸ ತಿರುವು ನೀಡ್ತು.
ಅಶಿಸ್ತು ತೋರಿ ಅಂಗಳದಿಂದ ಹೊರನಡೆದ ಜೈಸ್ವಾಲ್​​! 
ಅಂಗಳ ತೊರೆಯುವಂತೆ ರಹಾನೆ ಖಡಕ್ ಸೂಚನೆ 
ಜೈಸ್ವಾಲ್ ಕಳೆದ ದುಲೀಪ್​ ಟ್ರೋಫಿ ಫೈನಲ್​​ ಪಂದ್ಯದ ವೇಳೆ ಅಶಿಸ್ತು ತೋರಿ ಬಾರಿ ಸುದ್ದಿಯಾಗಿದ್ರು. ರವಿ ತೇಜರನ್ನ ಪದೇ ಪದೇ ಕೆಣಕಿದ್ದರಿಂದ ಕ್ಯಾಪ್ಟನ್ ರಹಾನೆ ತಾಳ್ಮೆ ಜೈಸ್ವಾಲ್​ರನ್ನ ಸ್ಟೇಡಿಯಂನಿಂದ ಹೊರನಡೆಯುವಂತೆ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ರು. ಈ ಘಟನೆಯಿಂದ ಯಂಗ್​ ಬ್ಯಾಟ್ಸ್​​ಮನ್ ಅಂದು ಅವಮಾನಕ್ಕೊಳಗಾದ್ರು.
ಅಪಮಾನದ ಬಳಿಕ ಕೆರಳಿ ನಿಂತ ಯಂಗ್​​​​​ ಟೈಗರ್ 
ವಿಜಯ್​​ ಹಜಾರೆ-IPL ನಲ್ಲಿ ‘ಯಶಸ್ವಿ’ ಪ್ರದರ್ಶನ 
ಯಾವಾಗ ಅಶಿಸ್ತು ತೋರಿ ಸ್ಟೇಡಿಯಂನಿಂದ ಹೊರನಡೆದ್ರೋ ಆ ಘಟನೆಯನ್ನ ಚಾಲೆಂಜಸ್​ ಆಗಿ ತೆಗೆದುಕೊಂಡ್ರು. ಪರಿಣಾಮ ಡೊಮೆಸ್ಟಿಕ್​​ನಲ್ಲಿ ಕ್ರಿಕೆಟ್​​ನಲ್ಲಿ ಜೈಸ್ವಾಲ್​​ ರನ್ ಭರಾಟೆ ನಡೆಸಿದ್ರು. ಯಾರ ಮುಂದೆ ತಲೆತಗ್ಗಿಸಿದ್ರೋ ಅವರೆಲ್ಲಾ ತಲೆ ಎತ್ತಿ ನೋಡುವಂಥ ಸೂಪರ್​ ಡೂಪರ್​​​ ಪರ್ಫಾಮೆನ್ಸ್​ ನೀಡಿದ್ರು.
ಜೈಸ್ವಾಲ್​​ ‘ಯಶಸ್ವಿ’  ಪರ್ಫಾಮೆನ್ಸ್​
ವಿಜಯ್ ಹಜಾರೆ  6 396
ರಣಜಿ ಟ್ರೋಫಿ 8 498
IPL 14 652
2022ರ ವಿಜಯ್​ ಹಜಾರೆ ಟ್ರೋಫಿಯಲ್ಲಿ ರನ್​ ಮಳೆಯನ್ನ ಸುರಿಸಿದ ಯಶಸ್ವಿ ಜೈಸ್ವಾಲ್​ 6 ಪಂದ್ಯಗಳಿಂದ 396 ರನ್​​​ ಚಚ್ಚಿದ್ರು. ಬಳಿಕ ನಡೆದ ರಣಜಿ ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಿಂದ 498 ರನ್ ಗಳಿಸಿದ್ರು. ಇನ್ನು ಐಪಿಎಲ್‌ನಲ್ಲಿ ಧೂಳೆಬ್ಬಿಸಿದ ಜೈಸ್ವಾಲ್​​ 14 ಪಂದ್ಯದಲ್ಲಿ 652 ರನ್​​ ಬಾರಿಸಿ ಆರೆಂಜ್​ ಕ್ಯಾಪ್​ ವಿನ್ನರ್ ಆದ್ರು.
ಶೀಘ್ರದಲ್ಲೇ ಜೈಸ್ವಾಲ್​ ಬಿಗ್​ ಡ್ರೀಮ್ ನನಸು..! 
ಡೊಮೆಸ್ಟಿಕ್​​​ ಹಾಗೂ ಐಪಿಎಲ್​​ನಲ್ಲಿ ರನ್ ಗುಡ್ಡೆ ಹಾಕಿದ್ದ 21ರ ಡೇರಿಂಗ್ ಬ್ಯಾಟ್ಸ್​​ಮನ್ ಮುಂಬರೋ ವಿಂಡೀಸ್​ ಟೆಸ್ಟ್​ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಡ್​ಫಾರ್ಮ್​ನಿಂದ ಚೇತೇಶ್ವರ್​​ ಪೂಜಾರ ಅವರನ್ನ ತಂಡದಿಂದ ಡ್ರಾಪ್​​​​ ಮಾಡಲಾಗಿದೆ. ಅವರ ಬದಲಿ ಜೈಸ್ವಾಲ್​​ಗೆ ಮಣೆ ಹಾಕಲಾಗಿದೆ. ಹೀಗಾಗಿ ವೈಟ್​ ಜೈರ್ಸಿಯಲ್ಲಿ ಜೈಸ್ವಾಲ್​​​ ಆಡುವುದು ಬಹುತೇಕ ಖಚಿತ. ಭಾರತ ಪರ ಆಡುವ ಬಿಗ್ ಡ್ರೀಮ್​ ಕೂಡ ಈಡೇರಿದಂತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಶಿಸ್ತು ತೋರಿ ಅಂಗಳದಿಂದ ಹೊರನಡೆದಿದ್ದ ಜೈಸ್ವಾಲ್​​; ಅಪಮಾನದ ಬಳಿಕ ಕೆರಳಿ ನಿಂತ ಯಂಗ್​​​​​ ಟೈಗರ್‌ಗೆ ಯಶಸ್ಸು

https://newsfirstlive.com/wp-content/uploads/2023/07/Yashasvi-Jaisval-1.jpg

    ಅಶಿಸ್ತು ತೋರಿ ಅಂಗಳದಿಂದ ಹೊರನಡೆದಿದ್ದ ಜೈಸ್ವಾಲ್​​

    ಫೀಲ್ಡ್‌ ತೊರೆಯುವಂತೆ ಕ್ಯಾಪ್ಟನ್ ರಹಾನೆ ಖಡಕ್ ಸೂಚನೆ 

    ವಿಜಯ್​​ ಹಜಾರೆ-IPL ನಲ್ಲಿ ಜೈಸ್ವಾಲ್‌ 'ಯಶಸ್ವಿ' ಪ್ರದರ್ಶನ 

ಯಶಸ್ವಿ ಜೈಸ್ವಾಲ್​​ ಹೆಸರಿನಲ್ಲಿರುವಂತೆ ಯಶಸ್ಸು ಅವರ ಬೆನ್ನೇರಿದೆ. ಟೀಮ್ ಇಂಡಿಯಾ ಪರ ಆಡುವ ಅವರ ಬಿಗ್​​ ಡ್ರೀಮ್​​​​ ನನಸಾಗುವ ಕಾಲ ದೂರವಿಲ್ಲ. ಇಲ್ಲಿ ತನಕ ಡೊಮೆಸ್ಟಿಕ್​​​​​ ಕ್ರಿಕೆಟ್‌ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದ 21ರ ಜೈಸ್ವಾಲ್​​​​ ಟೀಮ್ ಇಂಡಿಯಾ ಪರ ಹೂಂಕರಿಸಲು ಸಜ್ಜಾಗಿದ್ದಾನೆ. ಇದಕ್ಕೆಲ್ಲ ಕಾರಣ ಆ ಒಂದು ಅವಮಾನ. ಅಂದಾದ ಆ ಅಪಮಾನ ಜೈಸ್ವಾಲ್‌​ರಲ್ಲಿ ಭಾರತ ಪರ ಆಡುವ ಕಿಡಿ ಹೊತ್ತಿಸಿದೆ.
ಯಶಸ್ವಿ ಜೈಸ್ವಾಲ್​​​ ಇಷ್ಟು ದಿನ ಈ ಹೆಸರು ಬರೀ ಡೊಮೆಸ್ಟಿಕ್​ ಕ್ರಿಕೆಟ್​ ವಲಯದಲ್ಲಿ ಮಾತ್ರ ಕೇಳಿ ಬರ್ತಿತ್ತು. ಆದರೆ ಒಂದು ವಾರದ ಹಿಂದೆ ವೆಸ್ಟ್ ​ಇಂಡೀಸ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯ ಅನೌನ್ಸ್ ಆಗಿದ್ದೇ ಬಂತು. 21ರ ಜೈಸ್ವಾಲ್​ ನೇಮ್​ ಹಾಟ್​ಟಾಫಿಕ್ ಆಗಿದೆ. ವಿಂಡೀಸ್​​​​​ ಸರಣಿಗೆ ಸೆಲೆಕ್ಟ್ ಆಗಿರೋ ಲೆಫ್ಟಿ ಡ್ಯಾಶರ್, ಟೀಮ್ ಇಂಡಿಯಾ ಪರ ಅಬ್ಬರಿಸಲು ವೇದಿಕ್ಕೆ ಸಜ್ಜಾಗಿದೆ.
ಆದರೆ ನಿಮಗೆ ನೆನಪಿರಲಿ. ಈ ಫೈರಿ ಲೆಫ್ಟಿ ಬ್ಯಾಟ್ಸ್​​ಮನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದೇ ಈ ಒಂದು ಅವಮಾನ. ಈ ಅಪಮಾನ ಜೈಸ್ವಾಲ್​ಗೆ ಟೀಮ್‌ ಇಂಡಿಯಾ ಡೋರ್ ಓಪನ್ ಆಗುವಂತೆ ಮಾಡಿದೆ. ಎಲ್ಲರ ಮುಂದೆ ತಲೆತಗ್ಗಿಸಿ ಹೊರನಡೆದ ಈ ಇನ್ಸಿಡೆಂಟ್ ಜೈಸ್ವಾಲ್​ರಲ್ಲಿ ಹೊಸ ಹೋರಾಟದ ಕಿಚ್ಚನ್ನ ಹಚ್ಚಿಸಿತು. ಕಳೆದ ಹೋಗುತ್ತಿದ್ದ ಡೇರಿಂಗ್ ಬ್ಯಾಟ್ಸ್​​ಮನ್​​ ನ್ಯೂಸ್ ಪೇಪರ್​​ಗಳಲ್ಲಿ ಹೆಡ್​​ಲೈನ್​​ ಆಗುವಂತೆ ಮಾಡಿತು.
ಅಕಸ್ಮಾತ್‌ ಈ ಅಪಮಾನ ಆಗದಿದ್ರೆ ಯಶಸ್ವಿ ಆಟ ಬರೀ ದೇಶಿ ಕ್ರಿಕೆಟ್​​​ಗೆ ಸೀಮಿತವಾಗ್ತಿತ್ತು. ಆದರೆ ಕಳೆದ ವರ್ಷ ದುಲೀಪ್​​ ಟ್ರೋಫಿ ವೇಳೆ ಆದ ಈ ಅಪಮಾನ ಜೈಸ್ವಾಲ್​ ಬದುಕಿಗೆ ಹೊಸ ತಿರುವು ನೀಡ್ತು.
ಅಶಿಸ್ತು ತೋರಿ ಅಂಗಳದಿಂದ ಹೊರನಡೆದ ಜೈಸ್ವಾಲ್​​! 
ಅಂಗಳ ತೊರೆಯುವಂತೆ ರಹಾನೆ ಖಡಕ್ ಸೂಚನೆ 
ಜೈಸ್ವಾಲ್ ಕಳೆದ ದುಲೀಪ್​ ಟ್ರೋಫಿ ಫೈನಲ್​​ ಪಂದ್ಯದ ವೇಳೆ ಅಶಿಸ್ತು ತೋರಿ ಬಾರಿ ಸುದ್ದಿಯಾಗಿದ್ರು. ರವಿ ತೇಜರನ್ನ ಪದೇ ಪದೇ ಕೆಣಕಿದ್ದರಿಂದ ಕ್ಯಾಪ್ಟನ್ ರಹಾನೆ ತಾಳ್ಮೆ ಜೈಸ್ವಾಲ್​ರನ್ನ ಸ್ಟೇಡಿಯಂನಿಂದ ಹೊರನಡೆಯುವಂತೆ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ರು. ಈ ಘಟನೆಯಿಂದ ಯಂಗ್​ ಬ್ಯಾಟ್ಸ್​​ಮನ್ ಅಂದು ಅವಮಾನಕ್ಕೊಳಗಾದ್ರು.
ಅಪಮಾನದ ಬಳಿಕ ಕೆರಳಿ ನಿಂತ ಯಂಗ್​​​​​ ಟೈಗರ್ 
ವಿಜಯ್​​ ಹಜಾರೆ-IPL ನಲ್ಲಿ ‘ಯಶಸ್ವಿ’ ಪ್ರದರ್ಶನ 
ಯಾವಾಗ ಅಶಿಸ್ತು ತೋರಿ ಸ್ಟೇಡಿಯಂನಿಂದ ಹೊರನಡೆದ್ರೋ ಆ ಘಟನೆಯನ್ನ ಚಾಲೆಂಜಸ್​ ಆಗಿ ತೆಗೆದುಕೊಂಡ್ರು. ಪರಿಣಾಮ ಡೊಮೆಸ್ಟಿಕ್​​ನಲ್ಲಿ ಕ್ರಿಕೆಟ್​​ನಲ್ಲಿ ಜೈಸ್ವಾಲ್​​ ರನ್ ಭರಾಟೆ ನಡೆಸಿದ್ರು. ಯಾರ ಮುಂದೆ ತಲೆತಗ್ಗಿಸಿದ್ರೋ ಅವರೆಲ್ಲಾ ತಲೆ ಎತ್ತಿ ನೋಡುವಂಥ ಸೂಪರ್​ ಡೂಪರ್​​​ ಪರ್ಫಾಮೆನ್ಸ್​ ನೀಡಿದ್ರು.
ಜೈಸ್ವಾಲ್​​ ‘ಯಶಸ್ವಿ’  ಪರ್ಫಾಮೆನ್ಸ್​
ವಿಜಯ್ ಹಜಾರೆ  6 396
ರಣಜಿ ಟ್ರೋಫಿ 8 498
IPL 14 652
2022ರ ವಿಜಯ್​ ಹಜಾರೆ ಟ್ರೋಫಿಯಲ್ಲಿ ರನ್​ ಮಳೆಯನ್ನ ಸುರಿಸಿದ ಯಶಸ್ವಿ ಜೈಸ್ವಾಲ್​ 6 ಪಂದ್ಯಗಳಿಂದ 396 ರನ್​​​ ಚಚ್ಚಿದ್ರು. ಬಳಿಕ ನಡೆದ ರಣಜಿ ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಿಂದ 498 ರನ್ ಗಳಿಸಿದ್ರು. ಇನ್ನು ಐಪಿಎಲ್‌ನಲ್ಲಿ ಧೂಳೆಬ್ಬಿಸಿದ ಜೈಸ್ವಾಲ್​​ 14 ಪಂದ್ಯದಲ್ಲಿ 652 ರನ್​​ ಬಾರಿಸಿ ಆರೆಂಜ್​ ಕ್ಯಾಪ್​ ವಿನ್ನರ್ ಆದ್ರು.
ಶೀಘ್ರದಲ್ಲೇ ಜೈಸ್ವಾಲ್​ ಬಿಗ್​ ಡ್ರೀಮ್ ನನಸು..! 
ಡೊಮೆಸ್ಟಿಕ್​​​ ಹಾಗೂ ಐಪಿಎಲ್​​ನಲ್ಲಿ ರನ್ ಗುಡ್ಡೆ ಹಾಕಿದ್ದ 21ರ ಡೇರಿಂಗ್ ಬ್ಯಾಟ್ಸ್​​ಮನ್ ಮುಂಬರೋ ವಿಂಡೀಸ್​ ಟೆಸ್ಟ್​ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಡ್​ಫಾರ್ಮ್​ನಿಂದ ಚೇತೇಶ್ವರ್​​ ಪೂಜಾರ ಅವರನ್ನ ತಂಡದಿಂದ ಡ್ರಾಪ್​​​​ ಮಾಡಲಾಗಿದೆ. ಅವರ ಬದಲಿ ಜೈಸ್ವಾಲ್​​ಗೆ ಮಣೆ ಹಾಕಲಾಗಿದೆ. ಹೀಗಾಗಿ ವೈಟ್​ ಜೈರ್ಸಿಯಲ್ಲಿ ಜೈಸ್ವಾಲ್​​​ ಆಡುವುದು ಬಹುತೇಕ ಖಚಿತ. ಭಾರತ ಪರ ಆಡುವ ಬಿಗ್ ಡ್ರೀಮ್​ ಕೂಡ ಈಡೇರಿದಂತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More