newsfirstkannada.com

12 ವರ್ಷದಿಂದ ಹುಡುಗಿನೇ ಸಿಗ್ತಿಲ್ಲ.. ಮದುವೆಗಾಗಿ 130 ಕಿ.ಮೀ ಪಾದಯಾತ್ರೆ ಹೊರಟ ಯುವಕರ ಅಳಲು

Share :

10-11-2023

    ಮೈಸೂರಿನ ದೊಡ್ಡಮುಲಗೂಡು ಗ್ರಾಮಸ್ಥರಿಂದ ಕಾಲ್ನಡಿಗೆ ಜಾಥಾ

    ಊರಿಗೆ ಊರೇ ಮಹದೇಶ್ವರ ಬೆಟ್ಟಕ್ಕೆ ಹೊರಡುವ ಪಾದಯಾತ್ರೆ

    ತಂದೆ, ತಾಯಿಯ ಜೊತೆ ಮದುವೆ ಭಾಗ್ಯಕ್ಕಾಗಿ ಮಾದಪ್ಪನ ಮೊರೆ!

ಮಂಡ್ಯ: ಜನರು ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರ ಮೊರೆ ಹೋಗುವುದು ಸರ್ವೆ ಸಾಮಾನ್ಯ. ಅದೇ ರೀತಿ 30 ವರ್ಷ ದಾಟಿದ್ದರು ಮದುವೆಯಾಗದ ಅವಿವಾಹಿತರು ವಧು ಸಿಗುವಂತೆ ಮಾದಪ್ಪನ ಮೊರೆ ಹೋಗಿದ್ದಾರೆ. ಹೌದು ಅನ್ನದಾತರ ಮಕ್ಕಳಿಗೆ ಹೆಣ್ಣು ಕೊಡಿ ಅಂತ ಯುವಕರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ.

 

ಇನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಕೌಂಟ್​ಡೌನ್ ಶುರುವಾಗಿದೆ. ಇದೇ ವೇಳೆ ಮಂಡ್ಯದಿಂದ ನೂರಾರು ಯುವಕರಿಂದ ಪಾದಯಾತ್ರೆ ನಡೆಸಿದ್ದಾರೆ. ಊರಿಗೆ ಊರೇ ಮದಹೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮೈಸೂರಿನ ದೊಡ್ಡಮುಲಗೂಡು ಗ್ರಾಮದ ಯುವಕರು ತಂದೆ, ತಾಯಿಯ ಜೊತೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ನಡೆಸಿದ್ದಾರೆ. ಮದುವೆ ವಯಸ್ಸಿಗೆ ಬಂದಿರುವ ಯುವ ರೈತರಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಅನ್ನದಾತರ ಮಕ್ಕಳಿಗೂ ಹೆಣ್ಣು ಕೊಡಿ ಅಂತಾ 130 ಕಿ.ಮೀ. ದೂರದವರೆಗೆ ಮಾದಪನ್ನ ಸನ್ನಿಧಿಗೆ ಹೋಗಿದ್ದಾರೆ.

ಕಳೆದ ವರ್ಷವೂ ಇದೇ ರೀತಿಯಲ್ಲಿ ಅವಿವಾಹಿತರು ಪಾದಯಾತ್ರೆ ನಡೆಸಿದ್ದರು. ಚಾಮರಾಜನಗರದ ಮಾದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಪಾದಯಾತ್ರೆ ನಡೆಸಿದ ಹಲವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಸಾಕಷ್ಟು ಅವಿವಾಹಿತರು ಪಾದಯಾತ್ರೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

12 ವರ್ಷದಿಂದ ಹುಡುಗಿನೇ ಸಿಗ್ತಿಲ್ಲ.. ಮದುವೆಗಾಗಿ 130 ಕಿ.ಮೀ ಪಾದಯಾತ್ರೆ ಹೊರಟ ಯುವಕರ ಅಳಲು

https://newsfirstlive.com/wp-content/uploads/2023/11/Mandya-Youth.jpg

    ಮೈಸೂರಿನ ದೊಡ್ಡಮುಲಗೂಡು ಗ್ರಾಮಸ್ಥರಿಂದ ಕಾಲ್ನಡಿಗೆ ಜಾಥಾ

    ಊರಿಗೆ ಊರೇ ಮಹದೇಶ್ವರ ಬೆಟ್ಟಕ್ಕೆ ಹೊರಡುವ ಪಾದಯಾತ್ರೆ

    ತಂದೆ, ತಾಯಿಯ ಜೊತೆ ಮದುವೆ ಭಾಗ್ಯಕ್ಕಾಗಿ ಮಾದಪ್ಪನ ಮೊರೆ!

ಮಂಡ್ಯ: ಜನರು ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರ ಮೊರೆ ಹೋಗುವುದು ಸರ್ವೆ ಸಾಮಾನ್ಯ. ಅದೇ ರೀತಿ 30 ವರ್ಷ ದಾಟಿದ್ದರು ಮದುವೆಯಾಗದ ಅವಿವಾಹಿತರು ವಧು ಸಿಗುವಂತೆ ಮಾದಪ್ಪನ ಮೊರೆ ಹೋಗಿದ್ದಾರೆ. ಹೌದು ಅನ್ನದಾತರ ಮಕ್ಕಳಿಗೆ ಹೆಣ್ಣು ಕೊಡಿ ಅಂತ ಯುವಕರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ.

 

ಇನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಕೌಂಟ್​ಡೌನ್ ಶುರುವಾಗಿದೆ. ಇದೇ ವೇಳೆ ಮಂಡ್ಯದಿಂದ ನೂರಾರು ಯುವಕರಿಂದ ಪಾದಯಾತ್ರೆ ನಡೆಸಿದ್ದಾರೆ. ಊರಿಗೆ ಊರೇ ಮದಹೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮೈಸೂರಿನ ದೊಡ್ಡಮುಲಗೂಡು ಗ್ರಾಮದ ಯುವಕರು ತಂದೆ, ತಾಯಿಯ ಜೊತೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ನಡೆಸಿದ್ದಾರೆ. ಮದುವೆ ವಯಸ್ಸಿಗೆ ಬಂದಿರುವ ಯುವ ರೈತರಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಅನ್ನದಾತರ ಮಕ್ಕಳಿಗೂ ಹೆಣ್ಣು ಕೊಡಿ ಅಂತಾ 130 ಕಿ.ಮೀ. ದೂರದವರೆಗೆ ಮಾದಪನ್ನ ಸನ್ನಿಧಿಗೆ ಹೋಗಿದ್ದಾರೆ.

ಕಳೆದ ವರ್ಷವೂ ಇದೇ ರೀತಿಯಲ್ಲಿ ಅವಿವಾಹಿತರು ಪಾದಯಾತ್ರೆ ನಡೆಸಿದ್ದರು. ಚಾಮರಾಜನಗರದ ಮಾದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಪಾದಯಾತ್ರೆ ನಡೆಸಿದ ಹಲವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಸಾಕಷ್ಟು ಅವಿವಾಹಿತರು ಪಾದಯಾತ್ರೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More