newsfirstkannada.com

ಇಂಜೆಕ್ಷನ್ ಕೊಟ್ಟ ಬಳಿಕ ಯುವ ಉದ್ಯಮಿ ಸಾವು ಆರೋಪ; ‘ಮಗನ ಮದುವೆಗೆ ತಯಾರಿ ನಡೆಯುತ್ತಿತ್ತು..’ ಎಂದು ಹೆತ್ತವರು ಕಣ್ಣೀರು..!

Share :

19-08-2023

    ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯಲ್ಲಿ ಕೇಸ್

    ಪುತ್ರನ ಕಳ್ಕೊಂಡು ಕಣ್ಣೀರಲ್ಲಿ ಮುಳುಗಿದ ಕುಟುಂಬ

    ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ಟರು-ಕುಟುಂಬಸ್ಥರು

‘ಬೆಂಗಳೂರು: ವೈದ್ಯರು ನೀಡಿದ ಇಂಜೆಕ್ಷನ್​ನಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಯುವ ಹೋಟೆಲ್ ಉದ್ಯಮಿ ಅಮರ್ ಶೆಟ್ಟಿ ಪೋಷಕರು ಆರೋಪಿಸಿದ್ದಾರೆ. ಇದೀಗ ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಮೃತ ಯುವಕ ಈ ವರ್ಷ ಮದುವೆಯಾಗಬೇಕಿದ್ದ. ಇನ್ನೆರಡು ದಿನಗಳಲ್ಲಿ ಮದುವೆ ಮಾತುಕತೆ ಕೂಡ ನಡೆಯಬೇಕಿತ್ತು. ಅಷ್ಟರಲ್ಲೇ ಹೀಗೆ ಆಗಿದೆ ಎಂದು ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಜ್ವರಕ್ಕಾಗಿ ಇಂಜೆಕ್ಷನ್ ಕೊಟ್ರಂತೆ ವೈದ್ಯರು.. ಯುವ ಉದ್ಯಮಿ ಸಾವು.. ಈ ಸಾವು ನ್ಯಾಯವೇ..?

ಮೃತನ ಸಹೋದರ ರಾಘವೇಂದ್ರ ಶೆಟ್ಟಿ ಪ್ರತಿಕ್ರಿಯಿಸಿ.. ಅಮರ್ ಕೆ.ಪಿ.ಅಗ್ರಹಾರದಲ್ಲಿ ಮಾವನ ಜೊತೆ ಇದ್ದ. ಕ್ಲಿನಿಕ್ ನಲ್ಲಿ ಇಂಜೆಕ್ಷನ್ ಕೊಟ್ಟ ಬಳಿಕ ಆ ಜಾಗ ಊದಿಕೊಂಡಿತ್ತು. ಜ್ವರ ಇದೆ ಅಂತಾ ಭಾಗ್ಯ ಕ್ಲಿನಿಕ್​ಗೆ ಹೋಗಿದ್ದ. ಇಂಜೆಕ್ಷನ್ ಕೊಟ್ಟ ಬಳಿಕ ಆರ್ಗಾನ್ಸ್​ಗೆ ಡ್ಯಾಮೇಜ್ ಆಗಿದೆ. ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ಟರು. ಅಮರ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೃತ ಅಮರ್ ಶೆಟ್ಟಿಯ ಚಿಕ್ಕಮ್ಮ ನ್ಯೂಸ್​ಫಸ್ಟ್​ ಜೊತೆ ಮಾತನಾಡಿ, ಅವನು ಇಲ್ಲೇ ಮಾವನ ಜೊತೆ ವಾಸವಿದ್ದ. ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದ. ಕ್ಲಿನಿಕ್​ನಲ್ಲಿ ಇಂಜೆಕ್ಷನ್ ಕೊಟ್ಟ ಬಳಿಕ ಹೀಗಾಗಿದೆ. ಆ ಡಾಕ್ಟರ್ ಯಾವ ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ಗೊತ್ತಾಗ್ತಿಲ್ಲ. ಇಂಜೆಕ್ಷನ್ ಹೆಸರು ಎಲ್ಲೂ ಬರೆದಿಲ್ಲ. ಅವನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ. ಇನ್ನೊಂದು ವರ್ಷದಲ್ಲಿ ಮದುವೆ ಇತ್ತು ಎಂದು ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಜೆಕ್ಷನ್ ಕೊಟ್ಟ ಬಳಿಕ ಯುವ ಉದ್ಯಮಿ ಸಾವು ಆರೋಪ; ‘ಮಗನ ಮದುವೆಗೆ ತಯಾರಿ ನಡೆಯುತ್ತಿತ್ತು..’ ಎಂದು ಹೆತ್ತವರು ಕಣ್ಣೀರು..!

https://newsfirstlive.com/wp-content/uploads/2023/08/Amar-Shetty.jpg

    ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯಲ್ಲಿ ಕೇಸ್

    ಪುತ್ರನ ಕಳ್ಕೊಂಡು ಕಣ್ಣೀರಲ್ಲಿ ಮುಳುಗಿದ ಕುಟುಂಬ

    ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ಟರು-ಕುಟುಂಬಸ್ಥರು

‘ಬೆಂಗಳೂರು: ವೈದ್ಯರು ನೀಡಿದ ಇಂಜೆಕ್ಷನ್​ನಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಯುವ ಹೋಟೆಲ್ ಉದ್ಯಮಿ ಅಮರ್ ಶೆಟ್ಟಿ ಪೋಷಕರು ಆರೋಪಿಸಿದ್ದಾರೆ. ಇದೀಗ ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಮೃತ ಯುವಕ ಈ ವರ್ಷ ಮದುವೆಯಾಗಬೇಕಿದ್ದ. ಇನ್ನೆರಡು ದಿನಗಳಲ್ಲಿ ಮದುವೆ ಮಾತುಕತೆ ಕೂಡ ನಡೆಯಬೇಕಿತ್ತು. ಅಷ್ಟರಲ್ಲೇ ಹೀಗೆ ಆಗಿದೆ ಎಂದು ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಜ್ವರಕ್ಕಾಗಿ ಇಂಜೆಕ್ಷನ್ ಕೊಟ್ರಂತೆ ವೈದ್ಯರು.. ಯುವ ಉದ್ಯಮಿ ಸಾವು.. ಈ ಸಾವು ನ್ಯಾಯವೇ..?

ಮೃತನ ಸಹೋದರ ರಾಘವೇಂದ್ರ ಶೆಟ್ಟಿ ಪ್ರತಿಕ್ರಿಯಿಸಿ.. ಅಮರ್ ಕೆ.ಪಿ.ಅಗ್ರಹಾರದಲ್ಲಿ ಮಾವನ ಜೊತೆ ಇದ್ದ. ಕ್ಲಿನಿಕ್ ನಲ್ಲಿ ಇಂಜೆಕ್ಷನ್ ಕೊಟ್ಟ ಬಳಿಕ ಆ ಜಾಗ ಊದಿಕೊಂಡಿತ್ತು. ಜ್ವರ ಇದೆ ಅಂತಾ ಭಾಗ್ಯ ಕ್ಲಿನಿಕ್​ಗೆ ಹೋಗಿದ್ದ. ಇಂಜೆಕ್ಷನ್ ಕೊಟ್ಟ ಬಳಿಕ ಆರ್ಗಾನ್ಸ್​ಗೆ ಡ್ಯಾಮೇಜ್ ಆಗಿದೆ. ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ಟರು. ಅಮರ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೃತ ಅಮರ್ ಶೆಟ್ಟಿಯ ಚಿಕ್ಕಮ್ಮ ನ್ಯೂಸ್​ಫಸ್ಟ್​ ಜೊತೆ ಮಾತನಾಡಿ, ಅವನು ಇಲ್ಲೇ ಮಾವನ ಜೊತೆ ವಾಸವಿದ್ದ. ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದ. ಕ್ಲಿನಿಕ್​ನಲ್ಲಿ ಇಂಜೆಕ್ಷನ್ ಕೊಟ್ಟ ಬಳಿಕ ಹೀಗಾಗಿದೆ. ಆ ಡಾಕ್ಟರ್ ಯಾವ ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ಗೊತ್ತಾಗ್ತಿಲ್ಲ. ಇಂಜೆಕ್ಷನ್ ಹೆಸರು ಎಲ್ಲೂ ಬರೆದಿಲ್ಲ. ಅವನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ. ಇನ್ನೊಂದು ವರ್ಷದಲ್ಲಿ ಮದುವೆ ಇತ್ತು ಎಂದು ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More