/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಪಾಲ್ಗುಣ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಮೇಷ ರಾಶಿ
- ಹೊಸ ಸಂಬಂಧಗಳು ನಿಮಗೆ ಸಹಾಯ ಮಾಡಬಹುದು
- ಸ್ನೇಹಿತರಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ
- ವ್ಯಾವಹಾರಿಕವಾಗಿ ಆದಾಯ ಹೆಚ್ಚಾಗಬಹುದು
- ಯೋಜನೆಗಳನ್ನು ಸರಿಯಾಗಿ ನಿರ್ಧರಿಸಿ
- ಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಮಾರ್ಗ ಲಭ್ಯವಾಗಲಿದೆ
- ಕುಲದೇವತಾರಾಧನೆ ಮಾಡಿ
ವೃಷಭ
- ಮಕ್ಕಳ ವರ್ತನೆಯಿಂದ ತೃಪ್ತರಾಗಬಹುದು
- ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ
- ಬರಬೇಕಾದ ಬಾಕಿ ಹಣವಿದ್ದರೆ ಈ ದಿನ ನಿರೀಕ್ಷಿಸಬಹುದು
- ವೃತ್ತಿ ಜೀವನದ ಬಗ್ಗೆ ಪ್ರಮುಖ ನಿರ್ಧಾರ ಮಾಡಿ
- ಆನಂದದಿಂದ ಕೆಲಸ ನಿರ್ವಹಿಸಲಾಗುವುದಿಲ್ಲ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಅಕ್ರಮವಿರಬಹುದು ಜಾಗ್ರತೆವಹಿಸಿ
- ಪ್ರತಿ ವಿಚಾರಕ್ಕೂ ಅಭಿಪ್ರಾಯ ನೀಡಬೇಡಿ
- ಅತಿಥಿಗಳ ಆಗಮನದಿಂದ ಸಂತಸವಾಗಲಿದೆ
- ಆತುರದ ಕೆಲಸಗಳಿಂದ ತೊಂದರೆಯಾಗಬಹುದು
- ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಾಧಾನವಿದೆ
- ಶಕ್ತಿ ದೇವತಾ ಪ್ರಾರ್ಥನೆ ಮಾಡಿ
ಕಟಕ
- ಮನೆಯ ವಾತಾವರಣದಿಂದ ಮಾನಸಿಕ ಬೇಸರ
- ಮುಖ್ಯ ಕೆಲಸಗಳಿಗಾಗಿ ಪ್ರಯಾಣ ಮಾಡುತ್ತೀರಿ
- ಸ್ವಲ್ಪ ಆರೋಗ್ಯ ಸಮಸ್ಯೆ ಕಾಡಬಹುದು
- ಕೆಲಸ ಕಾರ್ಯದಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ
- ಸಮಾಜದಲ್ಲಿ ಗೌರವ ಹೆಚ್ಚಾಗಿರಲಿದೆ
- ಮಕ್ಕಳೊಂದಿಗೆ ಮನೆಯ ವಿಚಾರ ಚರ್ಚಿಸಿ ಶುಭವಿದೆ
ಸಿಂಹ
- ಮಾನಸಿಕವಾದ ಶಾಂತಿಯಿರಲಿ
- ಇಂದು ಉತ್ತಮರ ಸಹವಾಸದಲ್ಲಿರಿ
- ಆಸ್ತಿ ವಿವಾದಗಳಿದ್ದರೆ ಉಪಶಮನವಾಗಬಹುದು
- ಕೆಲವು ಜವಾಬ್ದಾರಿ ಕೆಲಸಗಳಲ್ಲಿ ನಿರತರಾಗಿರುತ್ತೀರಿ
- ಆತ್ಮವಿಶ್ವಾಸ ತುಂಬಾ ಹೆಚ್ಚಾಗಲಿದೆ
- ಅನಗತ್ಯ ವಿಚಾರಗಳಿಗೆ ಕೋಪ ಬರಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ವಿರೋಧಿಗಳಿಂದ ಹಲವಾರು ರೀತಿಯಲ್ಲಿ ತೊಂದರೆಯಾಗಬಹುದು
- ಹಳೆಯ ಆರೋಗ್ಯ ಸಮಸ್ಯೆ ಕಾಡಬಹುದು
- ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನಹರಿಸಿ
- ಒಟ್ಟಾರೆ ಜೀವನದಲ್ಲಿ ಜಿಗುಪ್ಸೆ ಎನಿಸಬಹುದು
- ಆದಾಯದ ದೃಷ್ಟಿಯಿಂದಲೂ ದಿನ ಚೆನ್ನಾಗಿಲ್ಲ
- ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ತುಲಾ
- ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ
- ಮಾನಸಿಕವಾಗಿ ಸ್ವಲ್ಪ ಸಮಾಧಾನವಿರುವುದಿಲ್ಲ
- ಪ್ರೇಮಿಗಳಿಗೆ ತುಂಬಾ ಕಷ್ಟದ ಸಮಯ
- ವ್ಯಾವಹಾರಿಕವಾಗಿ ತುಂಬಾ ಜಾಗರೂಕರಾಗಿರಬೇಕು
- ಮೈಕೈ-ಬೆನ್ನು ನೋವಿನ ಸಮಸ್ಯೆ ಕಾಡಬಹುದು
- ಹಣದ ವಿಚಾರದಲ್ಲಿ ಲಾಭ ಕಾಣಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಆತ್ಮೀಯರ ಜೊತೆಯಲ್ಲಿ ಕಲಹವಿರಬಹುದು
- ಹೊರಗಡೆ ಹೋಗುವುದನ್ನು ನಿಯಂತ್ರಿಸಿ
- ಕೆಲಸದ ಸ್ಥಳದಲ್ಲಿ ಹೊರಗಿನವರಿಂದ ನಿರೀಕ್ಷಿಸಬೇಡಿ
- ನಿಮ್ಮಿಷ್ಟಕ್ಕೆ ತಕ್ಕಂತೆ ಕೆಲಸ ಮಾಡಿ ನೆಮ್ಮದಿ ಇರಲಿದೆ
- ಕುಟುಂಬ ಸದಸ್ಯರೊಂದಿಗೆ ಶೀತಲ ಸಮರವಾಗಬಹುದು
- ನಿಮ್ಮದೇ ಆದ ಜೀವನದ ಬಗ್ಗೆ ಚಿಂತಿಸಬಹುದು
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
- ದಿನದ ಆರಂಭ ತುಂಬಾ ಚೆನ್ನಾಗಿರಲಿದೆ
- ಭಾವನೆಗಳೊಂದಿಗೆ ಒಳಗಾಗಿ ಯಾವುದೇ ನಿರ್ಧಾರ ಬೇಡ
- ವೈವಾಹಿಕ ಜೀವನದ ಕಹಿ ಘಟನೆ ಕಾಡಬಹುದು
- ಮಾನಸಿಕವಾಗಿ ಧೈರ್ಯವಿರಲಿ ಶುಭವನ್ನು ನಿರೀಕ್ಷಿಸಿ
- ಕುಲ ದೇವತಾ ಪ್ರಾರ್ಥನೆ ಮಾಡಿ
ಮಕರ
- ವೈಯಕ್ತಿಕ ಜೀವನದಲ್ಲಿ ತೊಂದರೆಯಾಗಬಹುದು
- ನಿಮ್ಮ ಆಲೋಚನೆಗಳನ್ನು ಮನೆಯಲ್ಲಿ ಚರ್ಚಿಸಿ
- ಅನೇಕ ಒತ್ತಡಗಳನ್ನು ಹೊಂದಿರುತ್ತೀರಿ
- ನಿದ್ರಾಭಂಗವಾಗುವುದರಿಂದ ಸಮಸ್ಯೆಯಾಗಬಹುದು
- ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ
- ಆಸೆಯಿರಲಿ ಅದರೆ ಮಿತಿ ಇರಲಿ
- ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಶುಕ್ರನನ್ನು ಪ್ರಾರ್ಥನೆ ಮಾಡಿ
ಕುಂಭ
- ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
- ಹೊಸ ಉದ್ಯೋಗಾವಕಾಶವನ್ನು ಹುಡುಕಿ
- ಉತ್ಸಾಹದಲ್ಲಿ ಯಾವುದೇ ತಪ್ಪು ನಿರ್ಧಾರ ಬೇಡ
- ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಲಿದೆ
- ಸಾಯಂಕಾಲದ ಹೊತ್ತಿಗೆ ಒಳ್ಳೆ ಸುದ್ದಿ ಬರಬಹುದು
- ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಬೇರೆಯವರು ನಿಮ್ಮನ್ನು ಅವಲಂಬಿಸಿರುತ್ತಾರೆ
- ಬೇರೆಯವರಿಗೆ ತೊಂದರೆ ಅಥವಾ ಮೋಸ ನಿಮ್ಮಿಂದಾಗಬಹುದು
- ಹೊಸ ಪ್ರಯೋಗ ಮಾಡುವುದಿದ್ದರೆ ಈ ದಿನ ಅವಕಾಶವಿದೆ
- ನಿಂತಿದ್ದ ಕೆಲವು ಕೆಲಸಗಳು ನೆರವೇರಲಿದೆ
- ತಂದೆಯವರೊಂದಿಗೆ ಕೆಲವು ವಿಚಾರವನ್ನು ಚರ್ಚಿಸಿ
- ಭೂ ಸಂಬಂಧಿ ಮಾರಾಟ ವಿಚಾರ ಮುನ್ನೆಲೆಗೆ ಬರಬಹುದು
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ