/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಆಶ್ಲೇಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ನಿಮ್ಮ ಪ್ರತಿಭೆಗೆ ಗೌರವ, ಪುರಸ್ಕಾರ ದೊರೆಯುವ ದಿನ
- ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ಆರ್ಥಿಕವಾಗಿಯೂ ಬಹಳ ಅನುಕೂಲಕರವಾದ ಸಮಯ
- ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬಹುದು, ಪ್ರಯಾಣದಿಂದ ಶುಭವಿದೆ
- ಸಂಬಂಧಿಕರ ಜೊತೆ ದೊಡ್ಡ ಕಾರ್ಯಗಳ ಬಗ್ಗೆ ಚರ್ಚೆ ಸಾಧ್ಯತೆಯಿದೆ
- ಪಕ್ಷಿಗಳಿಗೆ ಆಹಾರ, ನೀರು ಕೊಡಿ
ವೃಷಭ
- ಇಂದು ನಿಮ್ಮ ಕೋಪ ನಿಯಂತ್ರಣದಲ್ಲಿರಲಿ
- ಪರಸ್ಪರ ವಿವಾಹ ಅಪೇಕ್ಷಿಗಳ ವೈವಾಹಿಕ ವಿಚಾರದಲ್ಲಿ ಸಹಾಯಕ್ಕೆ ಹೋದರೆ ಅವಮಾನ ಸಾಧ್ಯತೆ
- ಇಂದು ಮಾತಾಡುವಾಗ ಕೆಟ್ಟ ಭಾಷೆ ಬಳಸಬೇಡಿ
- ನಿಮ್ಮ ಕುಟುಂಬಕ್ಕೆ ನಿಮ್ಮಿಂದ ಸೌಖ್ಯ, ಆನಂದ ಸಿಗುವ ದಿನ
- ಇಂದು ಯಾರಿಗೂ ಮನಸ್ಸಿಗೆ ನೋವಾಗದಂತೆ ವರ್ತಿಸಬೇಡಿ
- ವಿಕಲಚೇತನರಿಗೆ ಹಣ್ಣನ್ನು ನೀಡಿ
ಮಿಥುನ
- ಇಂದು ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ರೂ ಶುಭವಾಗುತ್ತದೆ
- ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳು ಇಂದು ಪೂರ್ಣಗೊಳ್ಳವ ಸಾಧ್ಯತೆಯಿದೆ
- ದಿನಪೂರ್ತಿ ಬಿಡುವಿಲ್ಲದೆ ನಿಮ್ಮ ಕೆಲಸಗಳಲ್ಲಿ ನಿರತರಾಗುತ್ತೀರಿ
- ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸ್ನೇಹಿತರು, ಕುಟುಂಬದವರು ನಿಮ್ಮ ಬಗ್ಗೆ ಸಂತೋಷ ಪಡುತ್ತಾರೆ
- ನಿಮ್ಮ ಕುಟುಂಬದ ಜೊತೆ ಬಹಳ ಮೌಲ್ಯಯುತ ಸಮಯ ಕಳೆಯುವ ದಿನ
- ಮಾತೃ ಭಕ್ತ ಪರಶುರಾಮನನ್ನು ಪ್ರಾರ್ಥನೆ ಮಾಡಿ
ಕಟಕ
- ಇಂದು ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
- ಯಾವುದೇ ಪರಿಸ್ಥಿತಿಯಲ್ಲಿ ನೀವು ಉದ್ವಿಗ್ನಕ್ಕೆ ಒಳಗಾಗದಿದ್ದರೆ ಒಳ್ಳೆಯದು
- ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಾದಾಗ ಅದನ್ನ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು
- ಮನೆಯ ದಿನನಿತ್ಯದ ಖರ್ಚಿಗೆ ತೊಂದರೆಯಾಗಬಹುದು ಜಾಗ್ರತೆ ಇರಲಿ
- ಸ್ವಾರ್ಥಿಗಳ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
- ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿರಲಿ
- ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಈ ದಿನ ಒಳ್ಳೆಯ ವಿಚಾರಗಳಿಂದ ಪ್ರಾರಂಭವಾಗುತ್ತದೆ
- ನಿಮ್ಮ ಕೆಲಸ-ಕಾರ್ಯಗಳ ಗುಣಮಟ್ಟ ಹೆಚ್ಚಾಗಲಿದೆ
- ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ ಕಾಣುವ ದಿನ
- ಹಿರಿಯರ ಆಶೀರ್ವಾದ, ಮಾರ್ಗದರ್ಶನ ಹಾಗೂ ಚಿಕ್ಕಮಕ್ಕಳ ಪ್ರೀತಿ ನಿಮಗೆ ಸಂತೋಷ ನೀಡುತ್ತದೆ
- ಅತ್ಯಂತ ಶುಭವಾದ ದಿನ ಎಲ್ಲ ಚಿಂತೆಗಳನ್ನು ದೂರವಿಡಿ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಕನ್ಯಾ
- ಇಂದು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯಿದೆ
- ಹಿಂದೆ ಸೇವಿಸಿದ ಆಹಾರ ವಿಷಾಹಾರವಾಗಿ ಪರಿವರ್ತನೆಯಾಗಬಹುದು
- ಆರೋಗ್ಯ ಸಮಸ್ಯೆಗೆ ಮನೆಮದ್ದನ್ನು ಉಪಯೋಗಿಸಿ ಗುಣಮುಖರಾಗಬಹುದು
- ಈ ದಿನ ಅಗತ್ಯವಾಗಿ ವಿಶ್ರಾಂತಿ ಮಾಡಿದರೆ ಒಳ್ಳೆಯದು
- ಅಗತ್ಯ ಬಿದ್ದರೆ ಮಾತ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ, ವೈದ್ಯರನ್ನ ಭೇಟಿ ಮಾಡಿ
- ಮೂಕಾಂಬಿಕೆಯನ್ನು ಧ್ಯಾನ ಮಾಡಿ
ತುಲಾ
- ಕುಟುಂಬದವರು ತೆಗೆದುಕೊಂಡ ಒಂದು ನಿರ್ಧಾರ ಮನೆಯ ವಾತಾವರಣ ಕಲುಷಿತ ಮಾಡಬಹುದು
- ನಿಮ್ಮ ಕೋಪದ ಮೇಲೆ ಹಿಡಿತ ಇರಲಿ, ತಾಳ್ಮೆ ಕಳೆದುಕೊಳ್ಳಬೇಡಿ
- ಯಾವುದೇ ಪರಿಸ್ಥಿತಿಯನ್ನ ವಿಕೋಪಕ್ಕೆ ಹೋಗಲು ಅವಕಾಶ ಮಾಡಿಕೊಡಬೇಡಿ
- ಮಕ್ಕಳು ನಿಮ್ಮ ಬಗ್ಗೆ ಮಾನಸಿಕವಾಗಿ ಬೇಸತ್ತು ದೂರವಾಗಬಹುದು ಎಚ್ಚರಿಕೆ ಇರಲಿ
- ಮನೆಯವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಹೆಚ್ಚು ಗಮನವಿರಲಿ
- ಕೆಂಪು ಹೂವಿನಿಂದ ಕಾಳಿಕಾದೇವಿಯನ್ನು ಅರ್ಚನೆ ಮಾಡಿ
ವೃಶ್ಚಿಕ
- ಅತಿ ಮಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಹಾಳಾಗುವ ಸಾಧ್ಯತೆ ಇದೆ
- ಅಗೌರವ, ಹಣದ ನಷ್ಟ ಕಾಡುವ ಸಾಧ್ಯತೆ, ನಿಮ್ಮ ತಾಳ್ಮೆ ಪರೀಕ್ಷೆಗೆ ಒಳಗಾಗಬಹುದು
- ಮಾತೆಯರು ತಮ್ಮ ಆಸೆ-ಆಕಾಂಕ್ಷೆಗಳನ್ನು ಇಂದು ಮನೆಯಲ್ಲಿ ವ್ಯಕ್ತಪಡಿಸದಿದ್ದರೆ ಉತ್ತಮ
- ಹಿಂದೆ ಖರೀದಿಸಿದ ವಸ್ತುವಿನಿಂದ ನಿಷ್ಠೂರಕ್ಕೆ ಒಳಗಾಗುವ ಸಾಧ್ಯತೆಯಿದೆ
- ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ
ಧನಸ್ಸು
- ನಿಮ್ಮ ಹಲವು ದಿನದ ಕನಸು ಇಂದು ನೆರವೇರಬಹುದು
- ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು, ಗೌರವ ಸಂಪಾದನೆ ಮಾಡುವ ದಿನ
- ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು ಎಚ್ಚರಿಕೆ ಇರಲಿ
- ಲ್ಯಾಪ್ಟಾಪ್, ಮೊಬೈಲ್ ಬಳಕೆಯನ್ನು ಅಗತ್ಯವಿದ್ದಷ್ಟು ಬಳಸಿ
- ವಿನಾಕಾರಣ ಆರೋಗ್ಯ ಹಾಳಾಗಬಹುದು, ಜಾಗ್ರತೆವಹಿಸಿ
- ಅಶ್ವಿನಿ ದೇವತೆಗಳನ್ನು ಪ್ರಾರ್ಥನೆ ಮಾಡಿ
ಮಕರ
- ಇಂದು ನಿಮ್ಮ ಮನೆಯ ವಾತಾವರಣ ಬಹಳ ಚೆನ್ನಾಗಿರುತ್ತದೆ
- ಸರ್ಕಾರದಿಂದ ಹರಾಜಾಗುವ ಭೂಮಿ ಮತ್ತು ವಸ್ತುಗಳ ಹರಾಜಿನಲ್ಲಿ ಭಾಗವಹಿಸಿದರೆ ಶುಭವಿದೆ
- ಇಂದು ವಾಹನ ಹರಾಜಿನಲ್ಲಿ ಭಾಗವಹಿಸಬೇಡಿ ತೊಂದರೆಯಿದೆ
- ಭೂಮಿಗೆ ಸಂಬಂಧಿಸಿದ ವ್ಯವಹಾರ ಬೇಡ
- ಮನೆಯಿಂದ ಹೊರಡುವಾಗ ಬಾಯಿ ಸಿಹಿ ಮಾಡಿಕೊಂಡು ಹೊರಡಿ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನು ಮಾಡಿಕೊಂಡರೆ ಒಳ್ಳೆಯದು
- ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪನ್ನೇ ಸರಿ ಎಂದು ವಾದ ಮಾಡಬಹುದು
- ತಪ್ಪು ಅರ್ಥವಾದ ನಂತರ ಪಶ್ಚಾತ್ತಾಪ ಪಡುತ್ತೀರಿ
- ಅತಿಯಾದ ಆತ್ಮವಿಶ್ವಾಸ ಯಾವ ಕಾರಣಕ್ಕೂ ಬೇಡ
- ಧ್ಯಾನಾವಸ್ಥೆಯಲ್ಲಿರುವ ಗಾಯತ್ರಿದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
- ನಿಮ್ಮ ಸ್ವಭಾವ-ನಡೆತೆಗಳಿಂದ ಸ್ನೇಹಿತರು, ಬಂಧುಗಳು ಕೋಪಗೊಳ್ಳಬಹುದು
- ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
- ರಾಜಕಾರಣಿಗಳಿಗೆ ಬಹಳ ಉತ್ತಮ ದಿನ
- ವಿನಾಕಾರಣ ಬೇರೆ ರಾಜಕಾರಣಿಗಳೊಂದಿಗೆ ವಾದ-ವಿವಾದ ಬೇಡ, ತೊಂದರೆ ಸಾಧ್ಯತೆಯಿದೆ
- ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ ತುಂಬಾ ಎಚ್ಚರಿಕೆ ಇರಲಿ
- ಕಾಲಭೈರವನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ