/newsfirstlive-kannada/media/post_attachments/wp-content/uploads/2025/07/MYS_KABINI.jpg)
ಮೈಸೂರು: ಕಬಿನಿ ಜಲಾಶಯದ ಬಫರ್ ಜೋನ್ನಲ್ಲಿ 1 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕರೊಬ್ಬರಿಗೆ ಕಾವೇರಿ ನೀರಾವರಿ ನಿಗಮ ನಿಯಮಿತ (ಕೆಎನ್ಎನ್ಎಲ್) ದಿಂದ ನೋಟಿಸ್ ಜಾರಿ ಮಾಡಲಾಗಿದೆ.
ಸರಗೂರು ತಾಲೂಕಿನ ಸಿಂಗಪಟ್ಟಣ-ಕಿತ್ತೂರು ಗ್ರಾಮದ ಕಬಿನಿ ಹಿನ್ನೀರಿನಲ್ಲಿ ರೆಸಾರ್ಟ್ ಮಾಲೀಕರಾದ ದಿನೇಶ್ ರೆಡ್ಡಿ ಎಂಬವರು 1 ಕಿಲೋ ಮೀಟರ್ ಅನಧಿಕೃತ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವರು ಪಸೀತಿ ಹಾಸ್ಪಿಟಾಲಿಟಿ ಹೆಸರಿನ ರೆಸಾರ್ಟ್ ಮಾಲೀಕರಾಗಿದ್ದಾರೆ. ಕಬಿನಿ ಭೂ ಸ್ವಾಧೀನ ಸ್ಥಳದಲ್ಲೇ ರಸ್ತೆ ನಿರ್ಮಿಸಿದ್ದರಿಂದ ಕೆಎನ್ಎನ್ಎಲ್ ನೋಟಿಸ್ ಜಾರಿ ಮಾಡಿದ್ದು ಮೊದಲಿನಿಂತೆ ಯಥಾಸ್ಥಿತಿ ಕಾಪಾಡಿಕೊಳ್ಳಿ ಎಂದು ಹೇಳಿದೆ.
ಇದನ್ನೂ ಓದಿ:ಚಿನ್ನಾಭರಣ ಪ್ರಿಯರಿಗೆ ಒಳ್ಳೆಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ.. ಎಷ್ಟು ರೂಪಾಯಿ?
ಗರಿಷ್ಠಮಟ್ಟ ರೇಖೆಯಿಂದ (ಹೆಚ್ಎಫ್ಎಲ್)ನಿಂದ 100 ಮೀಟರ್ ಅಂತರದ ಒಳಗೆ ನಿರ್ಮಾಣ ಮಾಡಲಾಗಿದೆ. ಆದರೆ ಬಫರ್ ಜೋನ್ನಲ್ಲಿ 100 ಮೀಟರ್ ಅಂತರದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಕಾನೂನು ಉಲ್ಲಂಘಿಸಿ ರಸ್ತೆ ನಿರ್ಮಿಸಿರುವುದು ಅಕ್ಷಮ್ಯವಾಗಿದೆ. ಇದರಿಂದ ನಿರ್ಮಾಣ ಮಾಡಿರುವ ರಸ್ತೆಯನ್ನ 7 ದಿನ ಒಳಗೆ ತೆರವು ಮಾಡಬೇಕು. ಜೊತೆಗೆ ಮೊದಲಿನಿಂತೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎನ್ಎನ್ಎಲ್ ಖಡಕ್ ಎಚ್ಚರಿಕೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ