newsfirstkannada.com

11 ವರ್ಷದ ಬಾಲಕ ದಾರುಣ ಸಾವು.. ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ತಾಯಿ

Share :

Published March 2, 2024 at 5:37pm

Update March 2, 2024 at 5:38pm

    4ನೇ ತರಗತಿ ಓದುತ್ತಿದ್ದ 11 ವರ್ಷದ ಸಾತ್ವಿಕ್ ಅಕಾಲಿಕ ನಿಧನ

    ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾತ್ವಿಕ್‌ ಮೆದುಳು ನಿಷ್ಕ್ರಿಯ

    ಮೃತ ಮಗನ ಅಂಗಾಂಗ ದಾನ ಮಾಡಲು ತಾಯಿ ದಿಟ್ಟ ನಿರ್ಧಾರ

ವಿಜಯನಗರ: ಮೆದುಳು ನಿಷ್ಕ್ರಿಯಗೊಂಡ ಬಾಲಕನ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಸಾತ್ವಿಕ್ ಸಾವನ್ನಪ್ಪಿದ್ದು, ತಾಯಿ ಚೇತನಾ ದಿಟ್ಟ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

11 ವರ್ಷದ ಸಾತ್ವಿಕ್ ಕಾನಾಹೊಸಹಳ್ಳಿಯಲ್ಲಿ 4ನೇ ತರಗತಿ ಓದುತ್ತಿದ್ದ. ಈ ಬಾಲಕ ಮೂಗು ಸಂಬಂಧಿತ ಶಸ್ತ್ರಚಿಕಿತ್ಸೆ‌ಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. 5 ದಿನಗಳ ಹಿಂದೆ ಸಾತ್ವಿಕ್‌ ಅನ್ನು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಸಲಾಗಿತ್ತು.

ಇದನ್ನೂ ಓದಿ: VIDEO: ಮಗನ ಮಾತಿಗೆ ಗಳ ಗಳನೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ.. ಭಾವುಕನಾದ ಅನಂತ್ ಹೇಳಿದ್ದೇನು?

ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾತ್ವಿಕ್‌ ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾತ್ವಿಕ್ ಸಾವಿನ ಬಳಿಕ ತಾಯಿ ಚೇತನಾ ಮಾನವೀಯತೆ ಮೆರೆದಿದ್ದಾರೆ. ಶಿಕ್ಷಕಿಯಾಗಿ ಸೇವೆ ಮಾಡ್ತಿರೋ ಸಾತ್ವಿಕ ತಾಯಿ ಚೇತನಾ, ಮೃತನ ಮಗನ ಅಂಗಾಂಗ ದಾನ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

11 ವರ್ಷದ ಬಾಲಕ ದಾರುಣ ಸಾವು.. ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ತಾಯಿ

https://newsfirstlive.com/wp-content/uploads/2024/03/Boy-Death-1.jpg

    4ನೇ ತರಗತಿ ಓದುತ್ತಿದ್ದ 11 ವರ್ಷದ ಸಾತ್ವಿಕ್ ಅಕಾಲಿಕ ನಿಧನ

    ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾತ್ವಿಕ್‌ ಮೆದುಳು ನಿಷ್ಕ್ರಿಯ

    ಮೃತ ಮಗನ ಅಂಗಾಂಗ ದಾನ ಮಾಡಲು ತಾಯಿ ದಿಟ್ಟ ನಿರ್ಧಾರ

ವಿಜಯನಗರ: ಮೆದುಳು ನಿಷ್ಕ್ರಿಯಗೊಂಡ ಬಾಲಕನ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಸಾತ್ವಿಕ್ ಸಾವನ್ನಪ್ಪಿದ್ದು, ತಾಯಿ ಚೇತನಾ ದಿಟ್ಟ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

11 ವರ್ಷದ ಸಾತ್ವಿಕ್ ಕಾನಾಹೊಸಹಳ್ಳಿಯಲ್ಲಿ 4ನೇ ತರಗತಿ ಓದುತ್ತಿದ್ದ. ಈ ಬಾಲಕ ಮೂಗು ಸಂಬಂಧಿತ ಶಸ್ತ್ರಚಿಕಿತ್ಸೆ‌ಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. 5 ದಿನಗಳ ಹಿಂದೆ ಸಾತ್ವಿಕ್‌ ಅನ್ನು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಸಲಾಗಿತ್ತು.

ಇದನ್ನೂ ಓದಿ: VIDEO: ಮಗನ ಮಾತಿಗೆ ಗಳ ಗಳನೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ.. ಭಾವುಕನಾದ ಅನಂತ್ ಹೇಳಿದ್ದೇನು?

ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾತ್ವಿಕ್‌ ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾತ್ವಿಕ್ ಸಾವಿನ ಬಳಿಕ ತಾಯಿ ಚೇತನಾ ಮಾನವೀಯತೆ ಮೆರೆದಿದ್ದಾರೆ. ಶಿಕ್ಷಕಿಯಾಗಿ ಸೇವೆ ಮಾಡ್ತಿರೋ ಸಾತ್ವಿಕ ತಾಯಿ ಚೇತನಾ, ಮೃತನ ಮಗನ ಅಂಗಾಂಗ ದಾನ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More