ಆಪರೇಷನ್ ಸಿಂಧೂ ಯಶಸ್ವಿ ಕಾರ್ಯಾಚರಣೆ.. ದೆಹಲಿಗೆ ಬಂದಿಳಿದ 110 ಭಾರತೀಯರು..!

author-image
Ganesh
Updated On
ಆಪರೇಷನ್ ಸಿಂಧೂ ಯಶಸ್ವಿ ಕಾರ್ಯಾಚರಣೆ.. ದೆಹಲಿಗೆ ಬಂದಿಳಿದ 110 ಭಾರತೀಯರು..!
Advertisment
  • ಇರಾನ್​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಚುರುಕು
  • ಇರಾನ್​ನಲ್ಲಿ ಸುಮಾರು 10 ಸಾವಿರ ಭಾರತೀಯರಿದ್ದಾರೆ
  • ಇರಾನ್​, ಅರ್ಮೇನಿಯಾ ಸರ್ಕಾರಕ್ಕೆ ಭಾರತ ಧನ್ಯವಾದ

ಇರಾನ್-ಇಸ್ರೇಲ್ ಆಗಸದಲ್ಲಿ ನಕ್ಷತ್ರಗಳೇ ಕಾಣ್ತಿಲ್ಲ.. ಬದಲಾಗಿ ಮಿಸೈಲ್‌ಗಳೇ ಝೇಂಕರಿಸುತ್ತಿವೆ. ಯಾವಾಗ ಏನ್ ಬೇಕಾದ್ರೂ ಆಗಬಹುದಾದ ಆತಂಕ ಮನೆ ಮಾಡಿದೆ. ಯುದ್ಧೋನ್ಮಾದ ಮೇಳೈಸುತ್ತಿರೋ ಇರಾನ್​ ಮತ್ತು ಇಸ್ರೇಲ್​ನಲ್ಲಿ ಸಿಲುಕಿರೋ ಭಾರತೀಯರಿಗೆ ಆತಂಕದ ಕಾರ್ಮೋಡ ಕವಿದಿದೆ.

ಇದನ್ನೂ ಓದಿ: ಇಸ್ರೇಲ್​​ನ ಮತ್ತೆ ಕೆಣಕಿದ ಇರಾನ್.. ಟ್ರಂಪ್ ವಾರ್ನಿಂಗ್ ಬೆನ್ನಲ್ಲೇ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ..

publive-image

ತಾಯ್ನಾಡಿಗೆ ವಾಪಸ್ ಆಗಲು ಮನ ಹಂಬಲಿಸುತ್ತಿದೆ. ಇದಕ್ಕೆ ಸ್ಪಂದಿಸಿದ ಭಾರತ ಸರ್ಕಾರ ಸ್ಥಳಾಂತರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದ್ದು, ಭಾರತೀಯರ ರಕ್ಷಣೆಗೆ ಆಪರೇಷನ್ ಸಿಂಧೂ ಹೆಸರನ್ನಿಟ್ಟಿದೆ. ಇದೀಗ ಆಪರೇಷನ್ ಸಿಂಧೂನ ಮೊದಲ ಬ್ಯಾಚ್​ ದೆಹಲಿಗೆ ಬಂದಿಳಿದಿದೆ.

ಇರಾನ್​ನಲ್ಲಿ ಸುಮಾರು 10 ಸಾವಿರ ಭಾರತೀಯರಿದ್ದಾರೆ. ಇದರಲ್ಲಿ 1500, 2000 ವಿದ್ಯಾರ್ಥಿಗಳು.. ಈಗಾಗಲೇ ಊರ್ಮಿ ಯುನಿವರ್ಸಿಟಿಯ 110 ವಿದ್ಯಾರ್ಥಿಗಳ ಭೂ ಮಾರ್ಗವಾಗಿ ಇರಾನ್​ನಿಂದ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು. ಅವರೆಲ್ಲ ಇದೀಗ ದೆಹಲಿ ತಲುಪಿದ್ದಾರೆ.

ಇದನ್ನೂ ಓದಿ: ವಿಶ್ವದ ಬೆಸ್ಟ್​ ಏರ್​ಲೈನ್ ಯಾವುದು..? ಕತಾರ್ ಏರ್ವೇಸ್​ಗೆ ಸಾಲು ಸಾಲು ಪ್ರಶಸ್ತಿಗಳು

ಅರ್ಮೇನಿಯಾದ ಯೆರೆವಾನ್​ ಏರ್​ಪೋರ್ಟ್​ನಿಂದ ವಿಶೇಷ ಇಂಡಿಗೋ ವಿಮಾನದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಮೊದಲ ತಂಡದಲ್ಲಿರುವ ಬಹುತೇಕರು ಜಮ್ಮು-ಕಾಶ್ಮೀರ ಭಾಗದವರಾಗಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನ, ಭಾರತದತ್ತ ಹೊರಟಿದೆ. ಕೆಲವೇ ಕ್ಷಣಗಳಲ್ಲಿ ಮೊದಲ ತಂಡ ದೆಹಲಿಗೆ ಆಗಮಿಸಲಿದೆ.

ಇರಾನ್​, ಅರ್ಮೇನಿಯಾ ಸರ್ಕಾರಕ್ಕೆ ಭಾರತ ಧನ್ಯವಾದ

ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಅನುಕೂಲ ಮಾಡಿಕೊಟ್ಟ ಇರಾನ್​ ಮತ್ತು ಅರ್ಮೇನಿಯಾ ಸರ್ಕಾರಕ್ಕೆ ಭಾರತ ಸರ್ಕಾರ ಕೃತಜ್ಞತೆ ಹೇಳಿದೆ.

ಇದನ್ನೂ ಓದಿ: ಇಸ್ರೇಲ್​​ನ ಮತ್ತೆ ಕೆಣಕಿದ ಇರಾನ್.. ಟ್ರಂಪ್ ವಾರ್ನಿಂಗ್ ಬೆನ್ನಲ್ಲೇ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment