newsfirstkannada.com

2ನೇ ಮದುವೆ ಆಸೆಗೆ 14 ತಿಂಗಳ ಸ್ವಂತ ಮಗನನ್ನೇ ಕೊಂದ ಪಾಪಿ ಅಪ್ಪ; ಮೂರು ದಿನ ಶವ ಮುಚ್ಚಿಟ್ಟು ಹೈಡ್ರಾಮಾ

Share :

Published September 5, 2023 at 3:04pm

Update September 5, 2023 at 3:14pm

    ಪರ ಪುರುಷನೊಂದಿಗೆ ಪತ್ನಿ ಅನೈತಿಕ‌ ಸಂಬಂಧ!

    ಹತ್ಯೆ ನಡೆದ ಮೂರು ದಿನಗಳ ಬಳಿಕ ಶವ ಪತ್ತೆ

    ಆರೋಪಿ ತಂದೆಯನ್ನ ಬಂಧಿಸಿದ ಪೊಲೀಸರು

ರಾಯಚೂರು: 14 ತಿಂಗಳ ಹಸುಗೂಸನ್ನು‌ ಸ್ವಂತ ತಂದೆಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಭಿನವ (14) ಮೃತ ಹಸುಗೂಸು. ಮಹಾಂತೇಶ್ (32) ಬಂಧಿತ ಆರೋಪಿ.

ಆರೋಪಿ ಮಹಾಂತೇಶ್ ಸ್ವಂತ ಮಗುವನ್ನೇ ಕೊಂದು 3 ದಿನ ಕಲ್ಲಿನ‌ ಪೊಟರೆಯಲ್ಲಿ ಮುಚ್ಚಿಟ್ಟಿದ್ದ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಪರ ಪುರುಷನೊಂದಿಗೆ ಪತ್ನಿ ಅನೈತಿಕ‌ ಸಂಬಂಧ ಹೊಂದಿದ್ದಳಂತೆ. ಈ ವಿಷಯ ತಿಳಿದು ಮತ್ತೊಂದು ಮದುವೆಗೆ‌ ತಯಾರಿ ನಡೆಸಿದ್ದ ಪತಿ ಮಹಾಂತೇಶ್. ಆದರೆ ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಮಗುವನ್ನು ಹತ್ಯೆ ಮಾಡಿದ್ದಾನೆ. ಹತ್ಯೆ ನಡೆದು ಮೂರು ದಿನಗಳ ಬಳಿಕ ಮಗುವಿನ ಶವ ಪತ್ತೆಯಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಆರೋಪಿ ತಂದೆಯನ್ನ ಬಂಧಿಸಿದ್ದಾರೆ.

ಇನ್ನು, ಪೊಲೀಸ್​ ಅಧಿಕಾರಿಗಳಿಗೆ ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ಬಂದಿತ್ತು. ಬಳಿಕ ಆರೋಪಿ ತಂದೆಯನ್ನು ಬಂಧಿಸಿ ಲಾಠಿ ರುಚಿ ತೋರಿಸಿದ್ದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ಮದುವೆ ಆಸೆಗೆ 14 ತಿಂಗಳ ಸ್ವಂತ ಮಗನನ್ನೇ ಕೊಂದ ಪಾಪಿ ಅಪ್ಪ; ಮೂರು ದಿನ ಶವ ಮುಚ್ಚಿಟ್ಟು ಹೈಡ್ರಾಮಾ

https://newsfirstlive.com/wp-content/uploads/2023/09/death-40.jpg

    ಪರ ಪುರುಷನೊಂದಿಗೆ ಪತ್ನಿ ಅನೈತಿಕ‌ ಸಂಬಂಧ!

    ಹತ್ಯೆ ನಡೆದ ಮೂರು ದಿನಗಳ ಬಳಿಕ ಶವ ಪತ್ತೆ

    ಆರೋಪಿ ತಂದೆಯನ್ನ ಬಂಧಿಸಿದ ಪೊಲೀಸರು

ರಾಯಚೂರು: 14 ತಿಂಗಳ ಹಸುಗೂಸನ್ನು‌ ಸ್ವಂತ ತಂದೆಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಭಿನವ (14) ಮೃತ ಹಸುಗೂಸು. ಮಹಾಂತೇಶ್ (32) ಬಂಧಿತ ಆರೋಪಿ.

ಆರೋಪಿ ಮಹಾಂತೇಶ್ ಸ್ವಂತ ಮಗುವನ್ನೇ ಕೊಂದು 3 ದಿನ ಕಲ್ಲಿನ‌ ಪೊಟರೆಯಲ್ಲಿ ಮುಚ್ಚಿಟ್ಟಿದ್ದ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಪರ ಪುರುಷನೊಂದಿಗೆ ಪತ್ನಿ ಅನೈತಿಕ‌ ಸಂಬಂಧ ಹೊಂದಿದ್ದಳಂತೆ. ಈ ವಿಷಯ ತಿಳಿದು ಮತ್ತೊಂದು ಮದುವೆಗೆ‌ ತಯಾರಿ ನಡೆಸಿದ್ದ ಪತಿ ಮಹಾಂತೇಶ್. ಆದರೆ ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಮಗುವನ್ನು ಹತ್ಯೆ ಮಾಡಿದ್ದಾನೆ. ಹತ್ಯೆ ನಡೆದು ಮೂರು ದಿನಗಳ ಬಳಿಕ ಮಗುವಿನ ಶವ ಪತ್ತೆಯಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಆರೋಪಿ ತಂದೆಯನ್ನ ಬಂಧಿಸಿದ್ದಾರೆ.

ಇನ್ನು, ಪೊಲೀಸ್​ ಅಧಿಕಾರಿಗಳಿಗೆ ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ಬಂದಿತ್ತು. ಬಳಿಕ ಆರೋಪಿ ತಂದೆಯನ್ನು ಬಂಧಿಸಿ ಲಾಠಿ ರುಚಿ ತೋರಿಸಿದ್ದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More