ಪೊಲೀಸ್ ಅಧಿಕಾರಿಗಳ ಮುಂದೆ ಮಾಹಿತಿ ಬಿಚ್ಚಿಟ್ಟ ಸಂತ್ರಸ್ತ ಮಾಡೆಲ್
ಬಂಧಿತ ಆರೋಪಿಗಳು ಗಾಜಿಯಾಬಾದ್ ಮೂಲದ ನಿವಾಸಿಗಳು
ಬಾಲಕಿ ದೂರು ನೀಡಿದ 24 ಗಂಟೆಗಳ ಒಳಗೆ ಆರೋಪಿಗಳು ಅರೆಸ್ಟ್
ಲಕ್ನೋ: 17 ವರ್ಷದ ಮಾಡೆಲ್ ಮೇಲೆ ಮೂವರು ದುರುಳರು ಅತ್ಯಾಚಾರ ಎಸಗಿದ ಘಟನೆ ಮೊರಾದಾಬಾದ್ನ ಹೋಟೆಲ್ನಲ್ಲಿ ನಡೆದಿದೆ. ಭರತ್ ಸಿಂಗ್, ಅನಿಲ್ ಮತ್ತು ವಸೀಂ ಅಲಿಯಾಸ್ ಸೋನು ಬಂಧಿತ ಆರೋಪಿಗಳು.
ಬಂಧಿತರು ಗಾಜಿಯಾಬಾದ್ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಾಡೆಲ್ ತನಿಖಾ ಅಧಿಕಾರಿ ಉಷಾ ಮಲಿಕ್ ಅವರಿಗೆ ಮಾಹಿತಿ ನೀಡಿದ್ದಾಳೆ. ತನ್ನ ಮೂವರು ಸ್ನೇಹಿತರು ಕಾರಿನಲ್ಲಿ ಹೊಸದಿಲ್ಲಿಯಿಂದ ಮೊರಾಡಾಗೆ ಕರೆದುಕೊಂಡು ಹೋದರು. ಬಳಿಕ ಕಾರಿನಲ್ಲೇ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ನಂತರ ಹೋಟೆಲ್ಗೆ ಕರೆದುಕೊಂಡು ಹೋಗಿ ಅಲ್ಲಿಯೂ ಕೂಡ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಮಾಡೆಲ್ ದೂರು ನೀಡಿದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Video- ಅಬ್ಬಬ್ಬಾ! 2 ಕಾಡಾನೆಗಳ ನಡುವೆ ಭಯಾನಕ ಕಾಳಗ.. ನೀರಿನ ವಾಲ್, ಅಡಿಕೆ ತೋಟ ನಾಶ
ಮಾಡೆಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂಭಾಲ್ನ ಬಾಲಕಿ ಜೈಪುರಕ್ಕೆ ಮಾಡೆಲಿಂಗ್ ನಿಯೋಜನೆಗಾಗಿ ಬಂದಿದ್ದಳಂತೆ. ಹೀಗಾಗಿ ದೆಹಲಿಗೆ ಬಂದು ಧೌಲಾ ಕುವಾನ್ ಮೆಟ್ರೋ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಳಂತೆ. ಆಗ ಆಕೆಯ ಸ್ನೇಹಿತರು ತಮ್ಮ ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹೇಳಿದ್ದರಂತೆ. ಪರಿಚಯ ಎಂಬ ಕಾರಣಕ್ಕೆ ಬಾಲಕಿ ಕಾರು ಅನ್ನು ಹತ್ತುತ್ತಿದ್ದಂತೆ ಮೂರು ಯುವಕರು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪೊಲೀಸ್ ಅಧಿಕಾರಿಗಳ ಮುಂದೆ ಮಾಹಿತಿ ಬಿಚ್ಚಿಟ್ಟ ಸಂತ್ರಸ್ತ ಮಾಡೆಲ್
ಬಂಧಿತ ಆರೋಪಿಗಳು ಗಾಜಿಯಾಬಾದ್ ಮೂಲದ ನಿವಾಸಿಗಳು
ಬಾಲಕಿ ದೂರು ನೀಡಿದ 24 ಗಂಟೆಗಳ ಒಳಗೆ ಆರೋಪಿಗಳು ಅರೆಸ್ಟ್
ಲಕ್ನೋ: 17 ವರ್ಷದ ಮಾಡೆಲ್ ಮೇಲೆ ಮೂವರು ದುರುಳರು ಅತ್ಯಾಚಾರ ಎಸಗಿದ ಘಟನೆ ಮೊರಾದಾಬಾದ್ನ ಹೋಟೆಲ್ನಲ್ಲಿ ನಡೆದಿದೆ. ಭರತ್ ಸಿಂಗ್, ಅನಿಲ್ ಮತ್ತು ವಸೀಂ ಅಲಿಯಾಸ್ ಸೋನು ಬಂಧಿತ ಆರೋಪಿಗಳು.
ಬಂಧಿತರು ಗಾಜಿಯಾಬಾದ್ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಾಡೆಲ್ ತನಿಖಾ ಅಧಿಕಾರಿ ಉಷಾ ಮಲಿಕ್ ಅವರಿಗೆ ಮಾಹಿತಿ ನೀಡಿದ್ದಾಳೆ. ತನ್ನ ಮೂವರು ಸ್ನೇಹಿತರು ಕಾರಿನಲ್ಲಿ ಹೊಸದಿಲ್ಲಿಯಿಂದ ಮೊರಾಡಾಗೆ ಕರೆದುಕೊಂಡು ಹೋದರು. ಬಳಿಕ ಕಾರಿನಲ್ಲೇ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ನಂತರ ಹೋಟೆಲ್ಗೆ ಕರೆದುಕೊಂಡು ಹೋಗಿ ಅಲ್ಲಿಯೂ ಕೂಡ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಮಾಡೆಲ್ ದೂರು ನೀಡಿದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Video- ಅಬ್ಬಬ್ಬಾ! 2 ಕಾಡಾನೆಗಳ ನಡುವೆ ಭಯಾನಕ ಕಾಳಗ.. ನೀರಿನ ವಾಲ್, ಅಡಿಕೆ ತೋಟ ನಾಶ
ಮಾಡೆಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂಭಾಲ್ನ ಬಾಲಕಿ ಜೈಪುರಕ್ಕೆ ಮಾಡೆಲಿಂಗ್ ನಿಯೋಜನೆಗಾಗಿ ಬಂದಿದ್ದಳಂತೆ. ಹೀಗಾಗಿ ದೆಹಲಿಗೆ ಬಂದು ಧೌಲಾ ಕುವಾನ್ ಮೆಟ್ರೋ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಳಂತೆ. ಆಗ ಆಕೆಯ ಸ್ನೇಹಿತರು ತಮ್ಮ ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹೇಳಿದ್ದರಂತೆ. ಪರಿಚಯ ಎಂಬ ಕಾರಣಕ್ಕೆ ಬಾಲಕಿ ಕಾರು ಅನ್ನು ಹತ್ತುತ್ತಿದ್ದಂತೆ ಮೂರು ಯುವಕರು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ