/newsfirstlive-kannada/media/post_attachments/wp-content/uploads/2025/04/King-cobra1.jpg)
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮನೆಯೊಂದರ ಬಳಿ ಬರೋಬ್ಬರಿ 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಮತ್ತೆ ಟ್ವಿಸ್ಟ್; ಜಯಂತ್ಗೆ ಜಾನೂ ಬಗ್ಗೆ ಸಿಕ್ತು ಸುಳಿವು!
ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿ 18 ಅಡಿ ಉದ್ದದ ಕಾಳಿಂಗ ಮನುಷ್ಯರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿತ್ತು. 18 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.
ಕೂಡಲೇ ಉರಗ ತಜ್ಞ ಅರ್ಜನ್ ಅವರು ಕಾರ್ಯಚರಣೆ ನಡೆಸಿ ಮನೆ ಮುಂಭಾಗದ ಮಣ್ಣಿನಡಿಯಲ್ಲಿ ಅಡಗಿ ಕುಳಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಆದರೆ ಇದೇ ವೇಳೆ ಉರಗ ತಜ್ಞರ ಮೇಲೆ ಅಟ್ಯಾಕ್ ಮಾಡೋದಕ್ಕೆ ಮುಂದಾಗಿತ್ತು.
ಇದಾದ ಬಳಿಕ ಉರಗ ತಜ್ಞ ಅರ್ಜನ್ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ