/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ
- ಪ್ರೇಮಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಗಣಪತಿಯ ಪಾರ್ಥನೆ ಮಾಡಿ
- ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
- ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ವೃಷಭ
- ನಿಮ್ಮ ಮನೆಯ ಸದಸ್ಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ
- ಇಂದು ವಿನಾಕಾರಣ ಕೋಪ ಮಾಡಿಕೊಳ್ಳುವುದು ಬೇಡ
- ಸಾಲ ಮಾಡಿದ್ದರೆ ಅದನ್ನ ಇಂದು ಹಿಂದಿರುಗಿಸುವ ಪ್ರಯತ್ನ ಮಾಡಿ
- ಜನರ ನಿರೀಕ್ಷೆಗೆ ತಕ್ಕಂತೆ ಬದಲಾಗಿ, ನಿಮ್ಮ ಚಿಂತನೆಗಳ ಬಗ್ಗೆ ಸ್ಪಷ್ಟವಾಗಿರಿ
- ಶ್ರೀ ಆಂಜನೇಯಸ್ವಾಮಿ ದರ್ಶನ ಮಾಡಿ
ಮಿಥುನ
- ಮನೆಯ ಸದಸ್ಯರಿಗೆ ಆರೋಗ್ಯ ಹದಗೆಡಬಹುದು
- ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ
- ನಿಮಗೆ ಆಗದೆ ಇರುವವರು ನಿಮ್ಮ ಬಗ್ಗೆ ತಪ್ಪಾಗಿ ಪ್ರಚಾರ ಮಾಡಬಹುದು
- ಆದಾಯ ಕಡಿಮೆಯಾಗಿ ಆತ್ಮವಿಶ್ವಾಸ ಕೊರತೆಯಾಗುವ ಸಾಧ್ಯತೆ
- ಹೊಟ್ಟೆಗೆ ಸಂಬಂಧಪಟ್ಟ ನೋವು ಕಾಣಬಹುದು
- ದುರ್ಗಾದೇವಿಯ ಆರಾಧನೆ ಮಾಡಿ
ಕಟಕ
- ಸಮಾಜದಲ್ಲಿ ಗಣ್ಯ ವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
- ನಿಮ್ಮಲ್ಲಿ ಮಹತ್ವದ ವಿಚಾರಗಳಿದ್ದರೆ ಸಂಬಂಧಿಸಿದ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ
- ನಿಮ್ಮ ಯಶಸ್ಸಿನ ಬಗ್ಗೆ ನಿಮಗೆ ತೃಪ್ತಿ ಸಿಗುವ ದಿನ
- ಕುಟುಂಬದ ಸದಸ್ಯರು, ಸ್ನೇಹಿತರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ
- ನಿಮ್ಮ ಕುಲದೇವರ ಆರಾಧನೆ ಮಾಡಿ
ಸಿಂಹ
- ನಿಮ್ಮ ವ್ಯಾಪಾರ, ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
- ಎಲ್ಲರಿಂದ ಸಂಪೂರ್ಣ ಸಹಕಾರ ದೊರೆಯುವ ಸಮಯ
- ಇದ್ದಕ್ಕಿದ್ದಂತೆ ಆರ್ಥಿಕ ಬದಲಾವಣೆ ಕಾಣುವ ದಿನ
- ಹಣವನ್ನು ಠೇವಣಿ, ಹೂಡಿಕೆ ಮಾಡಲು ಉತ್ತಮ ದಿನ
- ಇಂದು ಅಷ್ಟಲಕ್ಷ್ಮಿಯರನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ತಪ್ಪುಗಳನ್ನ ತಿದ್ದಿಕೊಳ್ಳಲು ಇದು ಉತ್ತಮ ದಿನ
- ಯಾರನ್ನಾದರು ಕ್ಷಮೆ ಕೇಳಬೇಕು ಅಂದರೆ ಕೇಳಿ ಅವರು ಕ್ಷಮಿಸುತ್ತಾರೆ
- ನಿಮ್ಮ ಮನಸ್ಸನ್ನು ಸರಿಪಡಿಸಿಕೊಂಡರೆ ಎಲ್ಲ ರೀತಿಯಲ್ಲಿ ಅನುಕೂಲ ಆಗುತ್ತದೆ
- ಮಕ್ಕಳಿಗೆ ಯಶಸ್ಸು ಸಿಗುವ ದಿನ
- ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ತೊಂದರೆಯಾಗಬಹುದು ಎಚ್ಚರವಹಿಸಿ
- ಮಹಾವಿಷ್ಣುವನ್ನು ಸ್ಮರಣೆ ಮಾಡಿ
ತುಲಾ
- ಸಣ್ಣ ಕೆಲಸಗಳಿಗೆ ಹೆಚ್ಚು ಆಸಕ್ತಿ ತೋರಿಸಿ ಸಮಯ ವ್ಯರ್ಥವಾಗುವ ಸಾಧ್ಯತೆ
- ವ್ಯಾಪಾರಿಗಳಿಗೆ ಗ್ರಾಹಕರ ವರ್ತನೆಯಿಂದ ಬೇಸರವಾಗುತ್ತದೆ
- ಭವಿಷ್ಯದ ವಿಚಾರದಲ್ಲಿ ಆರ್ಥಿಕ ಚಿಂತನೆ ಕಾಡುತ್ತದೆ
- ದೊಡ್ಡ ವ್ಯಕ್ತಿಗಳ ಸಲಹೆ ಸೂಚನೆಯನ್ನು ನೀವು ತಿರಸ್ಕಾರ ಮಾಡುವ ಸಾಧ್ಯತೆ ಇದೆ
- ಚಕ್ರರೂಪಿ ಸುದರ್ಶನನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಕೆಲಸದಲ್ಲಿ ಬದಲಾವಣೆಯ ಅಲೆಯಿಂದ ಮಾನಸಿಕ ತೊಳಲಾಟ ಕಾಡುತ್ತದೆ
- ಬೆಲೆ ಬಾಳುವ ವಸ್ತು ಖರೀದಿ ಸಾಧ್ಯತೆ ಆದರೆ ಎಚ್ಚರವಿರಲಿ
- ವೈವಾಹಿಕ ವಿಚಾದಲ್ಲಿ ಒತ್ತಡ ಅನುಭವಿಸುವ ದಿನ
- ಮದುವೆಯ ಬಗ್ಗೆ ಹೆಚ್ಚು ಚಿಂತಿಸಿ ಗೊಂದಲಕ್ಕೆ ಒಳಗಾಗುತ್ತೀರಿ
- ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನಸ್ಸು
- ವಾದ-ವಿವಾದಗಳಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ
- ವೈಯ್ಯಕ್ತಿಕ ವಿಚಾರಗಳಿಂದ ಅಪಮಾನವಾಗುತ್ತದೆ
- ವಿನಾಕಾರಣ ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ
- ರಾತ್ರಿ ವೇಳೆ ದೂರದ ಊರಿನಿಂದ ನಿಮಗೆ ಶುಭಸುದ್ದಿ ಬರುತ್ತದೆ
- ನಿಮ್ಮ ಕುಲದೇವತೆಯನ್ನು ಆರಾಧನೆ ಮಾಡಿ
ಮಕರ
- ಕಲಾಕಾರರಿಗೆ ಬಹಳ ಪ್ರಗತಿದಾಯಕ ದಿನ
- ಯುವಕರು ತಮ್ಮ ಕಲೆಗೆ ಹೆಚ್ಚಿನ ಮಾನ್ಯತೆ ಪಡೆಯುತ್ತಾರೆ
- ಯುವತಿಯರು ಪರೀಕ್ಷೆಗೆ ಒಳಗಾದ ನಂತರ ಶುಭ ಸೂಚನೆ ಸಿಗುತ್ತದೆ
- ನಿಮ್ಮ ಕಲೆಗೆ ಹೆಚ್ಚು ಮಾನ್ಯತೆ, ಗೌರವ ಸಿಗುತ್ತದೆ
- ಕೋರ್ಟ್, ಕಚೇರಿ ಕೆಲಸಗಳಲ್ಲಿ ನಿಮಗೆ ಶುಭವಾಗುತ್ತದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಕುಟುಂಬದ ಸದಸ್ಯರೊಂದಿಗೆ ಹಲವು ವಿಚಾರ ಚರ್ಚೆ ಮಾಡುವುದಕ್ಕೆ ಉತ್ತಮ ದಿನ
- ನಿಮ್ಮ ಮನೆಯ ವಿಚಾರಗಳನ್ನು ಹೊರಗೆ ತರದೆ ನಿಮ್ಮ ಕುಟುಂಬದೊಳಗೆ
ಬಗೆಹರಿಸಿಕೊಳ್ಳಿ - ಮನೆ ವಿಚಾರ ಹೊರಗಡೆ ಬಂದರೆ ಅವಮಾನ ಸಾಧ್ಯತೆ
- ರಸ್ತೆಯಲ್ಲಿ ಚಲಿಸುವಾಗ ಜಾಗ್ರತೆಯಿರಲಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಹಳೆಯ ರೋಗಗಳಿದ್ದರೆ ಅದನ್ನ ತಾತ್ಸಾರ ಮಾಡಬೇಡಿ
- ವೈದ್ಯರ ಸಲಹೆ ಮೇರೆಗೆ ಪರೀಕ್ಷೆ ಮಾಡಿಸಿಕೊಳ್ಳಿ
- ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ
- ವಿವಾಹ ವಿಷಯಗಳು ಮುಂದೂಡಬಹುದು
- ಇವತ್ತು ಹೆಚ್ಚು ನಡೆದಾಡದೆ ಇದ್ದರೆ ಒಳ್ಳೆಯದು
- ನಿಮ್ಮ ಕುಲದೇವತೆಯನ್ನ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ