/newsfirstlive-kannada/media/post_attachments/wp-content/uploads/2025/03/NAGPUR-CLASH.jpg)
ಮಹಾರಾಷ್ಟ್ರದ ನಾಗ್ಪುರ್ ನಿನ್ನೆ ಧಗಧಗಿಸ್ತು.. ಮೊಘಲ್ ದೊರೆ ಔರಂಗಜೇಬ್ ಸಮಾಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ.. ಭಾರೀ ಹಿಂಸಾಚಾರಕ್ಕೆ ನಗರ ಅಕ್ಷರಶಃ ನಲುಗಿದೆ..
ಇದು ನಾಗ್ಪುರದಲ್ಲಿ ಸದ್ಯದ ಪರಿಸ್ಥಿತಿ. ಭುಗಿಲೆದ್ದ ಘರ್ಷಣೆ. ಇಷ್ಟೆಲ್ಲ ಹಿಂಸಾಚಾರಕ್ಕೆ, ಉದ್ವಿಗ್ನ ಪರಿಸ್ಥಿತಿಗೆ ಕಾರಣ ಮೊಘಲ್ ದೊರೆ ಔರಂಗಜೇಬ್ ಸಮಾಧಿಯಾದ ಸ್ಥಳಕ್ಕಾಗಿ ಎದ್ದ ವಿವಾದ..
ಛಾವಾ ಸಿನಿಮಾ ಯಾವಾಗ ರಿಲೀಸ್ ಆಯ್ತೋ. ಆವತ್ತಿನಿಂದ ಮಹಾರಾಷ್ಟ್ರದಲ್ಲಿ ಔರಂಗಜೇಬ್ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ಸಂಬಾಜಿನಗರ ಜಿಲ್ಲೆಯಲ್ಲಿನ ಔರಂಗಜೇಬ್ನ ಸಮಾಧಿ ವಿವಾದಕ್ಕೆ ಕಾರಣ ಆಗಿದೆ. ಕೆಲ ದಿನಗಳಿಂದ ಪ್ರತಿಭಟನೆ ಕಿಚ್ಚು ಹಬ್ಬಿದೆ. ಈ ಕಿಚ್ಚಿನ ಧರ್ಮಗ್ರಂಥಕ್ಕೆ ಬೆಂಕಿ ಬಿದ್ದಿದೆ ಎಂಬ ವದಂತಿ ಮತ್ತಷ್ಟು ಧಗಧಗ ಎಬ್ಬಿಸಿದೆ.
ಸಂಭಾಜಿನಗರದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿದೆ. ಈ ಬೆನ್ನಲ್ಲೆ ಧರ್ಮಗ್ರಂಥವನ್ನ ಸುಟ್ಟು ಹಾಕಲಾಗಿದೆ ಅಂತ ವದಂತಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವದಂತಿಯಿಂದ ಕೆರಳಿದ ಒಂದು ಕೋಮು ಗಲಾಟೆಗೆ ಇಳಿದಿದೆ. ಇದರ ಪ್ರತೀಕಾರಕ್ಕೆ ಇಳಿದ ಎದುರಾಳಿ ಮತ್ತೊಂದು ಗುಂಪು ಸಹ ಕಲ್ಲು ತೂರಾಟ ನಡೆಸಿದೆ. ಆ ಬಳಿಕ ಘರ್ಷಣೆಯಿಂದ ವಾಹನಗಳಿಗೆ ಬೆಂಕಿ ಬಿದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರಿಗೆ ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಇನ್ನು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.
ನಿನ್ನೆ ಸಂಜೆ ಇಡೀ ನಾಗ್ಪುರ್ನಲ್ಲಿ ಪತ್ಥರ್ಬಾಜಿ ನಡೆದಿದೆ. ದೊಣ್ಣೆಗಳನ್ನ ಹಿಡಿದು ರಸ್ತೆಗಳಲ್ಲಿ ದಾಂಧಲೆ ನಡೆದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡ್ಲಾಗಿದೆ.. ವದಂತಿಗೆ ಯಾರೂ ಕಿವಿಗೊಡದೇ, ಶಾಂತಿ ಕಾಪಾಡುವಂತೆ ನಾಗ್ಪುರ್ ಲೋಕಲ್ ಲೀಡರ್ಸ್ ಕೇಂದ್ರ ಸಚಿವ ಗಡ್ಕರಿ ಮತ್ತು ಸಿಎಂ ಫಡ್ನವೀಸ್ ಮನವಿ ಮಾಡಿದ್ದಾರೆ. ಸದ್ಯಕ್ಕೆ ನಾಗ್ಪುರದಲ್ಲಿ ಪರಿಸ್ಥಿತಿ ಶಾಂತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ