ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು.. ಮಲಗಿದ್ದ 20 ವರ್ಷದ ಯುವತಿಗೆ ಚಾಕು ಇರಿದು ಕೊಲೆ

author-image
AS Harshith
Updated On
ಹುಬ್ಬಳ್ಳಿ ಟು ಮೈಸೂರು.. ಜಸ್ಟ್​ ಮಿಸ್ ಆಗಿದ್ರೆ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಂಜಲಿ ಹತ್ಯೆಗೈದ ಹಂತಕ.!
Advertisment
  • 20 ವರ್ಷದ ಯುವತಿಯನ್ನು ಮನೆಗೆ ನುಗ್ಗಿ ಕೊಲೆ
  • ಬೆಳ್ಳಂಬೆಳಗ್ಗೆ ಚಾಕು ಇರಿದು ಕೊಲೆ ಮಾಡಿದ ಕೊಲೆಗಾರ
  • ಯುವತಿಯನ್ನು ಬೆಳ್ಳಂಬೆಳಗ್ಗೆಯೇ ಕೊಲೆ ಮಾಡಲು ಕಾರಣ?

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮನೆಯಲ್ಲಿ ಮಲಗಿದ್ದ ಯುವತಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವತಿಯನ್ನು ಅಂಜಲಿ ಅಂಬಿಗೇರ (20) ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯ ವೀರಾಪೂರ ಓಣಿ ಯಲ್ಲಿ ನಡೆದ ಘಟನೆ ಇದಾಗಿದ್ದು, ಮನೆಯಲ್ಲಿ ಮಲಗಿಕೊಂಡಿದ್ದ ವೇಳೆ ಅಂಜಲಿ ಕೊಲೆಯಾಗಿದ್ದಾಳೆ. ಗಿರೀಶ್ ಸಾವಂತ ಎಂಬಾತನಿಂದ ಈ ಹೆಣ್ಣು ಮಗಳು ಸಾವನ್ನಪ್ಪಿದ್ದಾಳೆ. ಗಿರೀಶ್​ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಚಾಕು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು ಮತ್ತು ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗೋ ಮುನ್ಸೂಚನೆ.. ಇಂದು ಎಷ್ಟು ಗಂಟೆಗೆ ಮಳೆ ಸುರಿಯಲಿದೆ?

ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಎಸ್ಕೇಪ್​ ಆಗಿರುವ ಕೊಲೆಗಾರ ಗಿರೀಶ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಂಜಲಿ ಅಂಬಿಗೇರ ಸಾವಿಗೆ ನೈಜ್ಯ ಕಾರಣ ಪತ್ತೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment