/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಇರಲಿದೆ.
ಮೇಷ ರಾಶಿ
- ಕೆಲಸದ ಒತ್ತಡ, ತಾಳ್ಮೆ ಪರೀಕ್ಷೆಯ ದಿನ
- ವ್ಯಾಪಾರದಲ್ಲಿ ಹಾನಿ, ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಬಹುದು
- ಸಂಬಂಧಿಕರಿಂದ ಹಣಕ್ಕೆ ಒತ್ತಾಯ ಬರಬಹುದು
- ಪ್ರೇಮಿಗಳಿಗೆ ಉತ್ತಮ ದಿನ
- ಮಾನಸಿಕ ನೆಮ್ಮದಿಯಿಲ್ಲ, ಜಿಗುಪ್ಸೆಗೆ ಅವಕಾಶವಿದೆ
- ತಂದೆಯವರಿಂದ ಉತ್ತಮ ಸಲಹೆ, ಹಣದ ಸಹಾಯ ಸಿಗಬಹುದು
- ಅಶ್ವತ್ಥ ಮರಕ್ಕೆ 12 ಬಾರಿ ಪ್ರದಕ್ಷಿಣೆ ಹಾಕಿ
ವೃಷಭ
- ಹಳೆಯ ಸ್ನೇಹಿತರ ಭೇಟಿಯಿಂದ ಉತ್ಸಾಹ ಹೆಚ್ಚಾಗುತ್ತದೆ
- ಹೆಚ್ಚು ಖರ್ಚು, ಕುಟುಂಬದಲ್ಲಿ ಜಗಳ ಉಂಟಾಗಬಹುದು
- ಅನಗತ್ಯ ಕೆಲಸದಿಂದ ಸಮಯ ವ್ಯರ್ಥ ಮಾಡಬಹುದು
- ಅನುಮಾನದ ಸಮಯ, ಮನಸ್ಸಿಗೆ ತುಂಬಾ ಕಿರಿಕಿರಿಯಾಗುತ್ತದೆ
- ಜೀವನ ಶೈಲಿ ಬದಲಿಸಲು ಪ್ರಯತ್ನ ಮಾಡುತ್ತೀರಿ ಆದರೆ ಆಗುವುದಿಲ್ಲ
- ಆಲಸ್ಯ ದೂರ ಮಾಡಿ ಆನಂದವಾಗಿರುತ್ತೀರಿ
- ಕುಲದೇವತಾ ಪ್ರಾರ್ಥನೆ ಮಾಡಿ
ಮಿಥುನ
- ಜೀವನದ ನಿರಾಸೆಗಳನ್ನು ದೂರಮಾಡಿ, ಆಶಾದಾಯಕರಾಗಿರಿ
- ಆತ್ಮವಿಶ್ವಾಸ ಬೆಳೆದಷ್ಟು ಅನುಕೂಲವಿರುತ್ತದೆ
- ಆರ್ಥಿಕ ಹಿನ್ನಡೆ ಆದರೂ ಸಮಾಧಾನವಿರಲಿ
- ಅಚ್ಚರಿಯ ಘಟನೆ ನಡೆಯಬಹುದು
- ವಿದ್ಯಾರ್ಥಿಗಳಿಗೆ ಅನುಕೂಲವಿದೆ, ಸಹಾಯಧನ ಸಿಗುತ್ತದೆ
- ಮಕ್ಕಳ ಚಿಂತೆಯಿಂದ ಹೊರಬನ್ನಿ
- ಕಲಿಯುವ ಮಕ್ಕಳಿಗೆ ಅಧ್ಯಯನ ಸಾಮಾಗ್ರಿ ಕೊಡಿಸಿ
ಕಟಕ
- ಕ್ರೀಡಾರಂಗದಲ್ಲಿರುವವರಿಗೆ ಹೆಚ್ಚು ಅನುಕೂಲವಿರುವ ದಿನ
- ಹೆಚ್ಚಿನ ಹಣದ ವ್ಯವಸ್ಥೆ ಸಿಗುವ ದಿನ
- ರಸ್ತೆ ದಾಟುವಾಗ, ವಾಹನ ಚಾಲನೆಯಲ್ಲಿ ಜಾಗ್ರತೆಯಿರಲಿ ತೊಂದರೆಯಿದೆ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಮಾನಸಿಕ ದ್ವೇಷ, ಅಸೂಯೆಗಳನ್ನು ದೂರಮಾಡಿ
- ಸ್ನೇಹಿತರು ಅಭಯ ನಿಮ್ಮ ಧೈರ್ಯ ಹೆಚ್ಚಿಸುತ್ತದೆ
- ಸೋದರರ ಸಂಬಂಧದಲ್ಲಿ ಘರ್ಷಣೆಯಾಗಬಹುದು
- ದುರ್ಗಾರಾಧನೆ ಮಾಡಿ
ಸಿಂಹ
- ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಗುವ ದಿನ
- ಆರೋಗ್ಯದ ಬಗ್ಗೆ ತಾತ್ಸಾರ ಮಾಡಬೇಡಿ
- ದೂರದ ಬಂಧುಗಳು, ಸ್ನೇಹಿತರು ಮನೆಗೆ ಬರಬಹುದು
- ನಿಮ್ಮ ವರ್ತನೆ ಮನೆಯವರಿಗೆ ಬೇಸರ ತರಬಹುದು
- ಕೆಲಸದ ಒತ್ತಡ, ಅಧಿಕ ಕೋಪದಿಂದ ನಿಮಗೆ ಹಿನ್ನಡೆ ಆಗಬಹುದು
- ಮನೆ ಕೆಲಸದ ಬಗ್ಗೆ ಕಾಳಜಿ ವಹಿಸಿ, ಗೌರವವಿದೆ
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ಏಕಾಗ್ರತೆಗೆ ತೊಂದರೆಯ ದಿನ
- ವ್ಯಾಪಾರಕ್ಕಾಗಿ ಹಣ ಹೂಡಿಕೆ ಈ ದಿನ ಬೇಡ
- ನಿಮ್ಮ ಉದ್ದೇಶದ ಬಗ್ಗೆ ಮುಕ್ತವಾಗಿ ಚರ್ಚಿಸಿ
- ನಿಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯ ನೀಡಿ
- ಮಕ್ಕಳಿಂದ ಶುಭ ವಾರ್ತೆ, ಸಂತೋಷ ಪಡುತ್ತೀರಿ
- ಹಳೆಯ ನೆನಪುಗಳಿಂದ ನೋವು, ಬೇಸರವಾಗಬಹುದು
- ಆಂಜನೇಯ ಸ್ವಾಮಿಯನ್ನ ಸ್ಮರಣೆ ಮಾಡಿ
ತುಲಾ
- ನಷ್ಟವಾಗಿದ್ದ ವಸ್ತು, ಹಣ, ಗೌರವ ಮತ್ತೆ ಸಿಗಬಹುದು
- ಸಾಮಾಜಿಕ ಕಾರ್ಯಕ್ರಮದಲ್ಲಿ ಸ್ಥಾನಮಾನವಿರುತ್ತದೆ
- ಹಿರಿಯರ, ಗುರುಗಳ ಆಶೀರ್ವಾದ ಲಭಿಸುತ್ತದೆ
- ಪ್ರಾಣಿ ವ್ಯಾಪಾರಿಗಳಿಗೆ ಲಾಭವಿದೆ
- ಮನೆಯ ಅಲಂಕಾರಕ್ಕಾಗಿ, ವಸ್ತು ಖರೀದಿಗೆ ಖರ್ಚು ಮಾಡಬಹುದು
- ದಿನವೀಡಿ ಶ್ರಮಾದಾಯಕ ಕೆಲಸ ಆದರೆ ತೃಪ್ತಿಯಿರುತ್ತದೆ
- ಕಾರ್ತವೀಱರ್ಜುನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಅನಗತ್ಯ ಆಲೋಚನೆಗಳಿಂದ ಬೇಸರವಾಗುತ್ತದೆ
- ಯಾವ ವಿಚಾರದಲ್ಲೂ ಸರಿಯಾದ ನಿರ್ಧಾರವಿಲ್ಲ
- ಸ್ನೇಹಿತರು, ಬಂಧುಗಳು ನಿಮ್ಮ ಉಪಯೋಗ ಪಡೆಯುತ್ತಾರೆ
- ಉದ್ಯೋಗದ ದೃಷ್ಟಿಯಿಂದ ಹಿನ್ನಡೆಯ ದಿನ
- ಗರ್ಭಿಣಿಯರಿಗೆ ಕಾಲುನೋವಿನಿಂದ ಸಮಸ್ಯೆ ಕಾಡಬಹುದು
- ಸಾಯಂಕಾಲ ಶುಭವಾರ್ತೆ ಕೇಳಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ರಸ್ತೆ ಅಪಘಾತದ ಸೂಚನೆಯಿದೆ ಎಚ್ಚರ
- ಚಿನ್ನ, ಬೆಳ್ಳಿ, ಹಣ ಕಳೆದುಕೊಳ್ಳಬಹುದು
- ಮನೆಯವರಲ್ಲಿ ಭಿನ್ನಾಭಿಪ್ರಾಯ ಆದರೆ ನಿಮ್ಮದೇ ಮೇಲುಗೈ
- ವಿದ್ಯಾರ್ಥಿಗಳಿಗೆ ಅನುಕುಲವಲ್ಲದ ದಿನ
- ಸುಳ್ಳಿನಿಂದ ಯಾವುದೇ ವಿಷಯವಾದ್ರೂ ತುಂಬಾ ಎಚ್ಚರಿಕೆವಹಿಸಿ
- ಮೃತ್ಯುಂಜಯನ್ನು ಪ್ರಾರ್ಥನೆ ಮಾಡಿ
ಮಕರ
- ವಿರೋಧಗಳಿಂದ ಸಮಸ್ಯೆ ಕಾಡಬಹುದು
- ಭೂ ಸಂಬಂಧೀ ವ್ಯವಹಾರಕ್ಕೆ ಅನುಕೂಲವಿದೆ ಆದರೆ ಸಮಾಧಾನವಿಲ್ಲ
- ಪರರ ವಸ್ತು ನಿಮ್ಮ ಕೈಯಲ್ಲಿದ್ದು ಸಮಸ್ಯೆಯಾಗಬಹುದು
- ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
- ಮಕ್ಕಳಿಗೆ ತೊಂದರೆ ಕಾಣಬಹುದು
- ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮಾತುಕತೆ
- ಭೂವರಹಾ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಕುಂಭ
- ಆತ್ಮವಿಶ್ವಾಸದಿಂದ ನಿಮ್ಮ ಜೀವನ ಹಸನಾಗುತ್ತದೆ
- ಹಣದ ವಿಚಾರದಲ್ಲಿ ಜಾಗ್ರತೆವಹಿಸಿ ನಷ್ಟವಾಗಬಹುದು
- ನಿಮ್ಮ ಕೋಪದಿಂದ ನಿಷ್ಟುರರಾಗುತ್ತೀರಿ
- ಹಳೆಯ ಶರೀರದ ನೋವು ಮರುಕಳಿಸಬಹುದು
- ದೂರದ ಊರಿನಿಂದ ಸಿಹಿ ಸುದ್ದಿ ಬರಬಹುದು
- ಬಂಧುಗಳ ಭೇಟಿಯಿಂದ ಸಮಾಧಾನ
- ನವಗ್ರಹರಾಧನೆ ಮಾಡಿ
ಮೀನ
- ಆರೋಗ್ಯದಲ್ಲಿ ಗಮನವಿರಲಿ, ಆರೈಕೆ ಮಾಡಿಕೊಳ್ಳಿ
- ಉತ್ತಮ ಜ್ಞಾನ ಸಂವೇದನೆಗೆ ಅವಕಾಶವಿದೆ
- ಒಳ್ಳೆ ಹಾಸ್ಯ ಮಾಡುವವರಿಂದ ಆಕರ್ಷಿತರಾಗಬಹುದು
- ಕುಟುಂಬದಲ್ಲಿ ಅನಿರೀಕ್ಷಿತ ಸಮಾಚಾರ ಮುನ್ನೆಲೆಗೆ ಬರಬಹುದು
- ನಿಮ್ಮ ಪ್ರೀತಿ ಮಿತ್ರರು ನಿಮಗೆ ಕೈ ಕೊಡಬಹುದು
- ಹಿರಿಯರನ್ನು ನಿರ್ಲಕ್ಷಿಸಬೇಡಿ
- ಉಮಾಮಹೇಶ್ವರರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ