/newsfirstlive-kannada/media/post_attachments/wp-content/uploads/2025/03/yugadi.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಗುರು ವೃಷಭ ರಾಶಿಯಲ್ಲಿರುವ ತನಕ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ
- ಈ ವರ್ಷ ಮೇ 14ನೇ ತಾರೀಖಿನವರೆಗೆ ಎಲ್ಲವೂ ಚೆನ್ನಾಗಿರುತ್ತದೆ
- ವ್ಯವಹಾರ, ಆರೋಗ್ಯ, ಹಣಕಾಸಿನ ವಿಚಾರ, ಅಂದುಕೊಂಡ ಕೆಲಸಗಳು ಚೆನ್ನಾಗಿ ನಡೆಯುತ್ತವೆ
- ಮೇ 15ನೇ ತಾರೀಖಿನ ನಂತರ ಗುರು ಮಿಥುನ ರಾಶಿಯಲ್ಲಿ ಸಂಚಾರ ಆಗ ಮಿಶ್ರಫಲ
- ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕೆಲಸದಲ್ಲಿ ವಿಘ್ನಗಳು ಹೆಚ್ಚಾಗುತ್ತವೆ
- ಬಂಧು ಮಿತ್ರರಲ್ಲಿ ಮನಸ್ತಾಪ, ಶತ್ರುಗಳ ಕಾಟ, ಕಿರುಕುಳ ಹೆಚ್ಚಾಗುತ್ತದೆ
- ಕುಟುಂಬದಲ್ಲಿ ಅಹಿತಕರ ವಾತಾವರಣ, ದುಷ್ಟರ ಸಹವಾಸ ಪ್ರಾಪ್ತವಾಗಬಹುದು
- ಎಲ್ಲ ಕಡೆ ವಿರೋಧ ಜಗಳಗಳೇ ಹೆಚ್ಚಾಗುತ್ತವೆ
- ಕೋಪದಿಂದ ಅನಾಹುತವಾಗುವ ಸಾಧ್ಯತೆಯಿದೆ
- ದುರ್ಗಾದೇವಿಯ ಆರಾಧನೆ, ಪೂಜೆ, ಪ್ರಾರ್ಥನೆ, ಹೋಮ ಆಚರಿಣೆ ಮಾಡಿ
- ಪ್ರತಿ ಅಮವಾಸ್ಯೆಯಂದು ನಿಂಬೆಹಣ್ಣು, ಬೂದುಗುಂಬಳ ಕಾಯಿಯಿಂದ ದೃಷ್ಠಿ ತೆಗೆದುಕೊಳ್ಳಿ
- ಈ ಮಂತ್ರವನ್ನು ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮವಾಸ್ಯೆಯಂದು 9 ಬಾರಿ ಪಠಿಸಿ
- ಜಯಂತೀ ಮಂಗಳ ಕಾಲೀ ಭದ್ರಕಾಲೀ ಕಪಾಲಿನಿ|
- ದುರ್ಗಾ ಕ್ಷಮಾ ಶಿವಾಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತ್ತೇ||
ವೃಷಭ
- ಗುರುವಿನಿಂದ ಸಾಧಾರಣ ಮತ್ತು ಮಿಶ್ರಫಲ ಸಿಗುತ್ತದೆ
- ಶನಿಯಿಂದ ಉತ್ತಮವಾದ ಫಲ ಸಿಗುತ್ತದೆ
- ಉದ್ಯೋಗದಲ್ಲಿ ಅಲ್ಪ ಪ್ರಗತಿ, ಅತಿಯಾದ ತಿರುಗಾಟ ಇರುತ್ತದೆ
- ಬಂಧುಗಳಲ್ಲಿ ಜಗಳ, ಮನಸ್ತಾಪವಾಗುತ್ತದೆ
- ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗುತ್ತದೆ
- ವ್ಯಾವಹಾರಿಕವಾಗಿ ಧನ ಲಾಭವಾಗುತ್ತದೆ ಹಾಗೇ ಅಧಿಕವಾಗಿ ಖರೀದಿ ಮಾಡುತ್ತೀರಿ
- ಸರ್ಕಾರಿ ಕ್ಷೇತ್ರದಲ್ಲಿ ಸೇವೆ ಮಾಡುವವರಿಗೆ ಅನುಕೂಲಕರ ಸಮಯ
- ಶನಿಯಿಂದ ಸ್ಥಿರಾಸ್ತಿಗೆ ಒಡೆಯರಾಗುವ ಯೋಗವಿದೆ
- ಗುರು ಚರಿತ್ರೆಯನ್ನು ಪಾರಾಯಣ ಮಾಡಿ
- ವಿಶೇಷವಾಗಿ ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
- ಸಾಧು ಸಂತರಿಗೆ, ಅವಧೂತರಿಗೆ ದವಸ, ಧಾನ್ಯದ ಸಹಾಯ ಮಾಡಿ
- ಪ್ರತಿ ಗುರುವಾರ ಸೂರ್ಯೋದಯಕ್ಕೆ ಸರಿಯಾಗಿ ಪೂರ್ವಾಭಿಮುಖವಾಗಿ 28 ಬಾರಿ "ದತ್ತಾತ್ರೇಯಾಯ ನಮಃ" ಎಂದು ಪಠಣೆ ಮಾಡಿ
ಮಿಥುನ
- ಈ ವರ್ಷದ ಆರಂಭ ಅಷ್ಟೊಂದು ಚೆನ್ನಾಗಿಲ್ಲ ನಂತರ ನಿಧಾನವಾಗಿ ಸರಿಯಾಗುತ್ತದೆ
- ಗುರುವಿನಿಂದ ಅಶುಭ ಫಲಗಳೇ ಹೆಚ್ಚಾಗಿ ಕಾಣಬಹುದು
- ವಾಸಸ್ಥಳ, ಉದ್ಯೋಗದಲ್ಲಿ ಬದಲಾವಣೆ ಕಾಣುತ್ತೀರಿ
- ಹೆಚ್ಚು ಹೆಚ್ಚು ಯೋಚನೆ ಮಾಡುವ ಪರಿಸ್ಥಿತಿ ಬರುತ್ತದೆ
- ವಿನಾಕಾರಣ ಧನವ್ಯಯ, ಮಿತ್ರರಿಂದ ವಂಚನೆಗೆ ಒಳಗಾಗಬಹುದು
- ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ಕೆಲಸಗಳು ಅರ್ಧಕ್ಕೆ ನಿಲ್ಲುವ ಸೂಚನೆಗಳೇ ಹೆಚ್ಚು
- ಅರ್ಧ ವರ್ಷ ಕಳೆದ ನಂತರ ಸ್ವಲ್ಪಮಟ್ಟಿಗೆ ಸುಧಾರಣೆಯ ಸಮಯ ಬರುತ್ತದೆ
- ಅರ್ಧ ವರ್ಷ ಕಳೆದ ನಂತರ ಧರ್ಮ ಕಾರ್ಯಾಸಕ್ತಿ ಬರುತ್ತದೆ
- ಶನಿ ಮೀನ ರಾಶಿಯಲ್ಲಿ ಸಂಚಾರದಿಂದ ಶತ್ರುಗಳಿಂದ ತೊಂದರೆಯಾಗುತ್ತದೆ
- ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡಬಹುದು
- ಒಂದು ಕೆಲಸಕ್ಕೆ ಹಲವಾರು ಬಾರಿ ಪ್ರಯತ್ನ ಅದರಿಂದ ಬೇಸರವಾಗುತ್ತದೆ
- ಶತ್ರುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
- ಮಾನಸಿಕವಾಗಿ ಬೇಸರ, ಅಸಮಾಧಾನ ಹೆಚ್ಚಾಗುತ್ತದೆ
- ಪ್ರತಿ ದಿನ ಪ್ರತ್ಯಂಗಿರಾ ದೇವಿಯ ಅಷ್ಟೋತ್ತರ ಶತನಾಮವಳಿಗಳನ್ನು ಪಠಣೆ ಮಾಡಿ
- ಹುಣ್ಣಿಮೆ ಮತ್ತು ಅಮವಾಸ್ಯೆಯಂದು ಬೆಳಗ್ಗೆ ಮತ್ತು ಸಂಜೆ ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಮೇ 14ನೇ ತಾರೀಖಿನವರೆಗೆ ಸ್ವಲ್ಪ ಸಮಾಧಾನ, ಸಂತೋಷದ ಸಮಯ
- ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಆಗುತ್ತದೆ
- ಬಂಧು ಮಿತ್ರರ ಒಡನಾಟ, ಸಹಾಯ, ಸಹಕಾರ ಸಿಗುತ್ತದೆ
- ಸಾರ್ವಜನಿಕ ಕ್ಷೇತ್ರದಲ್ಲಿ ಸಾಮಾಜಿಕವಾಗಿ ನಿಮಗೆ ಜಯ, ಸ್ಥಾನಮಾನ, ಗೌರವ ಸಿಗುತ್ತದೆ
- ಸತ್ಕರ್ಮಾಸಕ್ತಿ ಮನಸ್ಸಿಗೆ ಬರುತ್ತದೆ ಅದರಿಂದ ಶುಭ ಫಲಗಳನ್ನು ಕಾಣುತ್ತೀರಿ
- ಅಕ್ಟೋಬರ್ 18ನೇ ತಾರೀಖಿನಿಂದ ಡಿಸೆಂಬರವರೆಗೆ ತುಂಬಾ ಕಷ್ಟಕಾಲ
- ಆಪಾದನೆಗಳು, ಅವಮಾನ ಹೆಚ್ಚಾಗಬಹುದು
- ಪ್ರಯಾಣದಿಂದ ತೊಂದರೆಯಿದೆ ಅಪಘಾತ, ಆಘಾತವಾಗಬಹುದು
- ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ವ್ಯವಹಾರದಲ್ಲಿ ಅಪಜಯ
- ವ್ಯಾಪಾರ, ವ್ಯವಹಾರದಲ್ಲಿ ನಷ್ಟ- ಶತ್ರುಗಳ ಕಾಟ ಹೆಚ್ಚಾಗುತ್ತದೆ
- ಜೀವನ ಜಿಗುಪ್ಸೆ ಬರುವ ಸೂಚನೆಗಳೇ ಹೆಚ್ಚು ಆದರೆ ಧೈರ್ಯದಿಂದ ಎದುರಿಸಿ
- ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಶ್ರವಣ ಅಥವಾ ಪಠಣೆ ಮಾಡಿ
- ತುಳಸಿ ಗಿಡಕ್ಕೆ ಶುದ್ಧವಾದ ನೀರನ್ನು ಹಾಕಿ
- ತುಳಸಿ ಗಿಡಗಳನ್ನು ದಾನ ಮಾಡಿ
- ಯಾರೊಂದಿಗೂ ವಿರೋಧ ಮಾಡಿಕೊಳ್ಳಬೇಡಿ
ಸಿಂಹ
- ಈ ವರ್ಷದ ಆರಂಭ ಮತ್ತು ಅಂತ್ಯ ಎರಡು ಅಷ್ಟೊಂದು ಚೆನ್ನಾಗಿಲ್ಲ
- ಮೇ ತಿಂಗಳಿನಿಂದ ಅಕ್ಟೋಬರ್ ಆರಂಭದವರೆಗೆ ಸಮಾಧಾನಕರ ಸಮಯ
- ಯಾರನ್ನ ತುಂಬಾ ನಂಬಿರ್ತೀರಿ ಅವರೇ ಮೋಸ ಮಾಡುತ್ತಾರೆ ಎಚ್ಚರ
- ನೀವು ಎಷ್ಟೇ ಬುದ್ಧಿವಂತರಾಗಿದ್ರು ಹಿತಶತ್ರುಗಳು ತಮ್ಮ ಕೈ ಚಳಕವನ್ನು ತೋರಿಸುತ್ತಾರೆ
- ಅತಿಯಾದ ಕೋಪ, ಮಾನಸಿಕ ಸ್ತಿಮಿತತೆ ಇಲ್ಲದೆ ತೊಂದರೆಯಾಗುತ್ತದೆ
- ಮಿಥುನ ರಾಶಿಯ ಗುರು ಮನಸ್ಸಿಗೆ ಅಲ್ಪ ನೆಮ್ಮದಿಯನ್ನು ಕೊಡುತ್ತಾನೆ
- ಈ ವರ್ಷ ವಿವಾಹಾದಿ ಮಂಗಳ ಕಾರ್ಯಾಗಳು ನಡೆಯುತ್ತವೆ
- ಶನಿ ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭ ಫಲಗಳನ್ನು ಕೊಡುತ್ತಾನೆ
- ತಂದೆ ಮಕ್ಕಳಲ್ಲಿ ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯ, ಮನಸ್ತಾಪಗಳು ಬರುತ್ತವೆ
- ಹಣದ ಅಭಾವ ಹೆಚ್ಚಾಗಿ ಕಾಡಬಹುದು
- ಬಂಧು ಮಿತ್ರರಿಂದ ಅವಮಾನವಾಗಬಹುದು
- ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಗಮನವಿರಲಿ, ಮಾನಸಿಕ ಕಿರಿಕಿರಿ ಹೆಚ್ಚಾಗಬಹುದು
- ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚು ಪರಿಶ್ರಮ ಪಡಬೇಕು
- ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ
- ಸೂರ್ಯ ಸಂಬಂಧೀ ಸ್ತೋತ್ರಗಳನ್ನು ಪಠಣೆ ಮಾಡಿ
- ಪ್ರತಿ ಭಾನುವಾರ ಸೂರ್ಯನಿಗೆ ನಮನ ಸಲ್ಲಿಸಿ ಬಿಳಿ ಎಕ್ಕದ ಗಿಡಕ್ಕೆ ಪ್ರದಕ್ಷಿಣೆ ಮಾಡಿ
ಕನ್ಯಾ
- ವರ್ಷದ ಆರಂಭ ಮತ್ತು ಅಂತ್ಯದಲ್ಲಿ ಗುರುವಿನ ಸಂಚಾರದಿಂದ ಶುಭವಿದೆ
- ಮೇ 15ರಿಂದ ಸೆಪ್ಟಂಬರ್ ಕೊನೆಯವರೆಗೆ ಅತಿಯಾದ ಕಷ್ಟ, ನೋವು ಅನುಭವಿಸಬೇಕಾಗುತ್ತದೆ
- ಪರಸ್ಥಳ ವಾಸ ಮಾಡುವ ಪರಿಸ್ಥಿತಿ ಬರಬಹುದು
- ಕುಟುಂಬ ಸದಸ್ಯರಿಂದ ದೂರವಾಗಬಹುದು
- ಮಕ್ಕಳ ವಿಚಾರದಲ್ಲಿ ತುಂಬ ಬೇಸರವಾಗುತ್ತದೆ
- ಆರೋಗ್ಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಎದುರಿಸಬಹುದು
- ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ದೊಡ್ಡ ಗೊಂದಲ ಮಾಡಿಕೊಳ್ಳುತ್ತೀರಿ
- ಶನಿಯ ಸಂಚಾರ ನೀಚ ಕರ್ಮದಲ್ಲಿ ನಿಮ್ಮ ಮನಸ್ಸನ್ನು ತೊಡಗಿಸಿ ಕೊಳ್ಳುವ ಹಾಗೆ ಮಾಡುತ್ತದೆ
- ಉದ್ದೇಶ ಇಲ್ಲದೆ ಸುಮ್ಮನೆ ತಿರುಗುತ್ತೀರಿ
- ಒಪ್ಪಿಕೊಂಡ ಯಾವ ಮಾತನ್ನು ಈಡೇರಿಸುವುದಿಲ್ಲ
- ಮಿತ್ರರನ್ನೆಲ್ಲ ಶತ್ರುಗಳನ್ನಾಗಿ ಮಾಡಿಕೊಳ್ಳುತ್ತೀರಿ
- ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಪೂಜೆ, ಪ್ರಾರ್ಥನೆ ಮಾಡಿ
- ಪ್ರತಿ ಶನಿವಾರ ಹನುಮಾನ್ ಚಾಲೀಸಾ ಪಠಣೆ ಅಥವಾ ಶ್ರವಣ ಮಾಡಿ
- ಸುಂದರಕಾಂಡ ರಾಮಾಯಣವನ್ನು ಪಾರಾಯಣ ಮಾಡಿಸಿ
ತುಲಾ
- ಗುರು ವೃಷಭ ಮತ್ತು ಕಟಕ ರಾಶಿಯಲ್ಲಿ ಸಂಚಾರ ಮಾಡುವಾಗ ಅಷ್ಟೊಂದು ಚೆನ್ನಾಗಿರುವುದಿಲ್ಲ
- ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ಈ ನಾಲ್ಕು ತಿಂಗಳು ತುಂಬಾ ಚೆನ್ನಾಗಿರುತ್ತವೆ
- ಸಮಯ ಚೆನ್ನಾಗಿಲ್ಲದಿರುವಾಗ ಹಣ ಕಳೆದು ಕೋಳಬಹುದು, ಕಳ್ಳರ ಭೀತಿ
- ಬಂಧುಗಳಲ್ಲಿ ಸ್ವಲ್ಪ ನಿಷ್ಠೂರವಾಗುತ್ತೀರಿ
- ಪರಿಚಯದವರು ಕೆಲವು ವಿಚಾರಕ್ಕೆ ಒಪ್ಪಿಗೆ ನೀಡುವುದಿಲ್ಲ, ವ್ಯಾವಹಾರಿಕವಾಗಿ ದೂರವಾಗ್ತಾರೆ
- ಹಣ ಹೂಡಿಕೆ ವಿಚಾರದಲ್ಲಿ ಹಿಂದೆ ಮುಂದೆ ಆಗುತ್ತದೆ, ಹಣದ ಅಭಾವ ಕಾಡುತ್ತದೆ
- ವರ್ಷದ ಉತ್ತರ ಭಾಗದಲ್ಲಿ ಎಲ್ಲಾ ವಿಚಾರಗಳು ಒಂದೊಂದೇ ಸರಿಯಾಗುತ್ತವೆ
- ಪುಣ್ಯಕ್ಷೇತ್ರ ದರ್ಶನ, ದೂರದೂರಿಗೆ ಪ್ರವಾಸ, ವಿದೇಶ ಪ್ರವಾಸ ಒದಗಿಬರುತ್ತವೆ
- ಶನಿ ಮೀನ ರಾಶಿಯಲ್ಲಿ ಸಂಚಾರ ಮಾಡುವಾಗ ಮಿಶ್ರ ಫಲಗಳು ಹೆಚ್ಚಾಗಿರುತ್ತವೆ ಆದರೆ ವಿಶೇಷ ಫಲ ಕೂಡ ನೀಡುತ್ತಾನೆ
- ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಗುರು ಹಿರಿಯರ ಆಶೀರ್ವಾದ ಸಿಗುತ್ತದೆ
- ಬಹಳ ದಿನಗಳ ಕಾನೂನು ಹೋರಾಟದಲ್ಲಿ ಜಯ ಸಿಗುತ್ತದೆ
- ನಿಮ್ಮ ಜೀವಮಾನ ಸಾಧನೆಯಾಗುವ ವರ್ಷ
- ಆರ್ಥಿಕವಾಗಿ ವರ್ಷದ ಕೊನೆಯಲ್ಲಿ ಅಭಿವೃದ್ಧಿ ಕಾಣುತ್ತೀರಿ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮತ್ತು ಹೋಮವನ್ನು ಅಗತ್ಯವಾಗಿ ಮಾಡಿಸಿ
ವೃಶ್ಚಿಕ
- ಗುರುವಿನ ಸಂಚಾರ ವರ್ಷದ ಆರಂಭ ಮತ್ತು ಕೊನೆಯಲ್ಲಿ ಅನುಕೂಲ ಮಾಡುತ್ತದೆ
- ಗುರು 8ನೇ ಮನೆ ಮಿಥುನ ರಾಶಿ ಪ್ರವೇಶ ಮಾಡಿದಾಗ ಎಲ್ಲ ವಿಚಾರಗಳಲ್ಲಿ ಎಚ್ಚರಿಕೆಯಿಂದಿಬೇಕು
- ಆರೋಗ್ಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಾಡುತ್ತದೆ
- ಸರ್ಕಾರಿ ಕೆಲಸಗಳಲ್ಲಿ ವಿಘ್ನಗಳು ಉಂಟಾಗುತ್ತವೆ
- ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಅಪಜಯವಾಗುತ್ತದೆ
- ದುಷ್ಟ ಜನರಿಂದ ತೊಂದರೆ, ಜೀವ ಭೀತಿ ಕಾಡಬಹುದು
- ಆಸ್ಪತ್ರೆಗೆ ಹೆಚ್ಚು ಹಣ ಖರ್ಚಾಗಬಹುದು
- ಪುಣ್ಯಕ್ಷೇತ್ರ ದರ್ಶನಕ್ಕೆ ಅವಕಾಶಗಳಿವೆ ಅಗತ್ಯವಾಗಿ ದೇವರ ದರ್ಶನ ಮಾಡಿ
- ನಿಮ್ಮ ಯಾವುದೇ ಯೋಜನೆಗಳನ್ನು ಪ್ರಯಾಸದಿಂದ ಮಾಡಬೇಡಿ
- ನಿಮ್ಮ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು
- ಕೌಟುಂಬಿಕ ಕಲಹ, ಮನಸ್ತಾಪಗಳು ಹೆಚ್ಚಾಗಿರುತ್ತವೆ
- ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು, ಧೈರ್ಯ ಬಹಳ ಮುಖ್ಯ
- ಪ್ರತಿನಿತ್ಯ ಲಲಿತಾ ಸಹಸ್ರನಾಮ ಶ್ರವಣ ಮಾಡಿ ಅಥವಾ ಪಠಣೆ ಮಾಡಿ
- ವೃದ್ಧರಿಗೆ ಆಹಾರವನ್ನು ಕೊಡಿ, ಕೈಲಾದಷ್ಟು ಸಹಾಯ ಮಾಡಿ
ಧನಸ್ಸು
- ರಾಶ್ಯಾಧಿಪತಿ ಗುರುವಿನ ಪ್ರಭಾವ ರಾಶಿ ಮೇಲೆ ತುಂಬಾಯಿದ್ದು ಹೆಚ್ಚಿನ ಫಲ ನೀಡುತ್ತಾನೆ
- ಗುರು 6 ಮತ್ತು 8ನೇ ಮನೆಯಲ್ಲಿ ಸಂಚರಿಸುವಾಗ ಅತಿಯಾದ ಕಷ್ಟನಷ್ಟಗಳನ್ನು ನೋಡಬೇಕಾಗುತ್ತದೆ
- ಎಲ್ಲಾ ವಿಚಾರಗಳು ಲಾಭದಾಯಕ ಅನಿಸಬಹುದು ಆದರೆ ಫಲ ಅಶುಭವಾಗಿ ಸಿಗುತ್ತವೆ
- ಮನಸ್ತಾಪ, ಅನಾರೋಗ್ಯ ಸಮಸ್ಯೆ ಕಾಡಬಹುದು
- ಗುರು 7ನೇ ಮನೆಯಲ್ಲಿ ಸಂಚರಿಸುವಾಗ ಎಲ್ಲಾ ರೀತಿಯ ಸುಖ, ಸಂತೋಷ ಸಿಗುವ ಸಮಯ
- ಶುಭ ಕಾರ್ಯಾಗಳು ನಡೆಯುತ್ತವೆ ಆದರೆ ನಿಮಗೆ ಸಮಾಧಾನ ಇರುವುದಿಲ್ಲ
- ಆರ್ಥಿಕವಾಗಿ ಸುಧಾರಣೆ ಕಾಣಬಹುದು
- ಶನಿ ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭ ಪ್ರಭಾವ ಉಂಟಾಗುತ್ತದೆ
- ಕೊಟ್ಟು ಕಿತ್ತುಕೊಳ್ಳುವ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತವೆ
- ಕುಟುಂಬ ಮತ್ತು ಆಪ್ತರಲ್ಲಿ ಸಾವು, ನೋವುಗಳನ್ನು ನೋಡಬೇಕಾಗುತ್ತದೆ
- ಕೈ ಕೆಳಗೆ ಕೆಲಸ ಮಾಡವವರೆ ನಿಮಗೆ ತೊಂದರೆ ಮಾಡುತ್ತಾರೆ
- ತಾಳ್ಮೆ ಕಳೆದುಕೊಳ್ಳುವುದು, ಕೆಟ್ಟ ನಿರ್ಧಾರ ಮಾಡುವುದು ಬೇಡ
- ನರಸಿಂಹ ಸ್ವಾಮಿಯನ್ನು ವಿಶೇಷವಾಗಿ ಪೂಜೆ ಮಾಡಿ
- ಪ್ರತಿ ಗುರುವಾರ ನಿಮ್ಮ ಗುರುಗಳನ್ನು ಸ್ಮರಣೆ ಮಾಡಿ ಅವರ ಆಶೀರ್ವಾದ ಪಡೆಯಿರಿ
- ಕ್ಷೇತ್ರ, ಮಠಗಳಲ್ಲಿ ನಿಮ್ಮ ಕೈಲಾದ ಸೇವೆಯನ್ನ ಮಾಡಿ
ಮಕರ
- ಗುರು ಗ್ರಹ ವೃಷಭ ಮತ್ತು ಕಟಕ ರಾಶಿಯಲ್ಲಿರುವಾಗ ಶುಭಫಲಗಳು ಹೆಚ್ಚಾಗಿರುತ್ತವೆ
- ದೊಡ್ಡ ಕಾಯಿಲೆಗಳಿದ್ದರೂ ಸ್ಪಲ್ಪ ಗುಣಮುಖವಾಗುವ ಸೂಚನೆ ಸಿಗುತ್ತದೆ
- ಮನಸ್ತಾಪದಿಂದ ದೂರವಾಗಿದ್ದವರು ಪುನಃ ಹತ್ತಿರವಾಗುತ್ತಾರೆ
- ಸಜ್ಜನರ ಸಹವಾಸದಿಂದ ಕೀರ್ತಿ, ಸತ್ಕರ್ಮಾಸಕ್ತಿ ಬರುತ್ತದೆ
- ಕುಟುಂಬದಲ್ಲಿ ಸ್ಪಲ್ಪ ಮಟ್ಟಿನ ಸಮಾಧಾನ ಸಿಗುತ್ತದೆ
- ಮೇ 14ರ ನಂತರ ದುಡ್ಡು ಕಾಸಿನ ವಿಚಾರದಲ್ಲಿ ಸಮಸ್ಯೆಗಳು ಆರಂಭವಾಗುತ್ತವೆ
- ಬಂಧುಗಳಲ್ಲಿ ಹಣಕಾಸಿನ ವಿಚಾರದಲ್ಲಿ ಜಗಳವಾಗುತ್ತದೆ
- ಆರೋಗ್ಯದಲ್ಲಿ ತತಕ್ಷಣದಲ್ಲಿ ವ್ಯತ್ಯಾಸವಾಗುತ್ತದೆ
- ಮಾನಸಿಕವಾದ ಚಿಂತೆ, ಯಾವ ವಿಷಯದಲ್ಲೂ ಆಸಕ್ತಿ ಇರುವುದಿಲ್ಲ
- ಶನಿಯ ಸ್ಥಾನ ಬದಲಾವಣೆ ಮಧ್ಯದಲ್ಲಿ ಬಲವಂತದ ಕೆಲವು ಕೆಲಸಗಳನ್ನು ಮಾಡಿಸುತ್ತದೆ
- ಸ್ಥಿರಾಸ್ತಿಯ ವಿಚಾರ ಮುನ್ನೆಲೆಗೆ ಬರುತ್ತದೆ ಆದರೆ ಬರೀ ಗೊಂದಲ, ಜಗಳವಾಗುತ್ತದೆ
- ಸೇವಕರು ಸಹಾಯ ಮಾಡುತ್ತಾರೆ, ನಂಬಿಕೆ ಉಳಿಸಿಕೊಳ್ಳುತ್ತಾರೆ
- ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಅವಕಾಶವಿದೆ
- ಪ್ರತಿ ತಿಂಗಳಿಗೊಮ್ಮೆ ನಿಮ್ಮ ಜನ್ಮ ನಕ್ಷತ್ರ, ರಾಶಿದಂದು ತಲೆಗೆ ಎಣ್ಣೆ ಸ್ನಾನ ಮಾಡಿ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ
ಕುಂಭ
- ವರ್ಷದ ಆರಂಭದಲ್ಲಿ ಲಾಭ ಮತ್ತು ಶುಭಗಳಿಂದ ಪುಳಕಿತರಾಗುತ್ತೀರಿ
- ಮೇಲಾಧಿಕಾರಿಗಳ ಕಿರುಕುಳ, ಹಿಂಸೆ ತಪ್ಪಿದಲ್ಲ ಅನುಭವಿಸಬೇಕಾಗುತ್ತದೆ
- ಮಾನಸಿಕವಾದ ಸ್ತಿಮಿತತೆ ಇರುವುದಿಲ್ಲ
- ವಿನಾಕಾರಣ ತಿರುಗಾಟ, ಒಂದು ಕೆಲಸಕ್ಕೆ ಹಲವು ಬಾರಿ ತಿರುಗಬೇಕಾದ ಪರಿಸ್ಥಿತಿ ಬರುತ್ತದೆ
- ವಿರೋಧಿಗಳಿಂದ ಭೀತಿ ಹೆಚ್ಚಾಗಬಹುದು
- ಶತ್ರುಗಳು, ಶತ್ರು ಕಾಟ ಹೆಚ್ಚಾಗುತ್ತದೆ
- ಗುರು ಗ್ರಹ ಮಿಥುನ ರಾಶಿ ಪ್ರವೇಶ ಮಾಡಿದಾಗ ಸ್ವಲ್ಪ ಬದಲಾವಣೆ ಕಾಣುತ್ತೀರಿ
- ಜೀವನೋತ್ಸಾಹ ಕಷ್ಟದಿಂದ ಪಾರಾಗಬಹುದು ಎಂಬ ಧೈರ್ಯ ನೀಡುತ್ತದೆ
- ಶತ್ರುಗಳನ್ನ ಎದುರಿಸೋ ಧೈರ್ಯ, ಶಕ್ತಿ ಬರುತ್ತದೆ
- ಕುಟುಂಬದ ವಾತಾವರಣ ನಿಧಾನವಾಗಿ ಸರಿ ಹೋಗುವ ಅನುಭವ ಆಗುತ್ತದೆ
- ಶನಿ ಪ್ರಭಾವ, ಶನಿಯ ಸ್ಥಾನಪಲ್ಲಟ ಕುಟುಂಬದಲ್ಲಿ ಕಲಹ ಉಂಟು ಮಾಡುತ್ತದೆ
- ಏಕನಕ್ಷತ್ರ - ಏಕರಾಶಿಯ ದಂಪತಿಗಳಲ್ಲಿ ವಿಚ್ಛೇದನದ ಭೀತಿ ಉಂಟಾಗುತ್ತದೆ
- ಇಲ್ಲ ಸಲ್ಲದ ಅಪವಾದ, ರಾಜಕೀಯ ಹಿನ್ನಡೆ, ಅವಮಾನ, ವ್ಯವಹಾರಿಕ ನಷ್ಟ
- ಸ್ವಯಂಕೃತ ಅಪರಾಧ, ಬೇರೆಯವರ ಮಾತಿಗೆ ಬೆಲೆ ಕೊಡದೆ ಇರುವುದು, ಅಹಂ ಭಾವ ದೂರು ಮಾಡಿಕೊಳ್ಳದೇ
- ತೊಂದರೆಯನ್ನ ಅನುಭವಿಸುವ ಸ್ಥಿತಿ
- ಪ್ರತೀ ಶನಿವಾರ ಸೂರ್ಯೋದಯಕ್ಕೆ ಸರಿಯಾಗಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
- ಹನುಮಾನ್ ಚಾಲೀಸಾ ಪಠಣೆ ಮಾಡಿ, ಆದಷ್ಟು ಕಪ್ಪು ಬಟ್ಟೆ, ಕೆಂಪು ಬಟ್ಟೆಯನ್ನ ಧರಿಸಬೇಡಿ
ಮೀನ
- ಈ ವರ್ಷ ಮೇ 14ರಿಂದ ಅಕ್ಟೋಬರ್ 18ರವರೆಗೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಅನುಭವಿಸುತ್ತೀರಿ
- ಅಕ್ಟೋಬರ್ 18ರಿಂದ ಡಿಸೆಂಬರ್ 5ರವರೆಗೆ ಮತ್ತೆ ಹಳೆಯ ಸಮಸ್ಯೆಗಳೇ ಪುನರಾವರ್ತಿಯಾಗುತ್ತವೆ ಆದರೆ ಪರಿಹಾರ ಸಿಗುತ್ತದೆ
- ಡಿಸೆಂಬರ್ 5ರಿಂದ ವರ್ಷಪೂರ್ತಿ ಮತ್ತೆ ಸಮಸ್ಯೆಗಳು ಹೆಚ್ಚಾಗುತ್ತವೆ
- ಜನ್ಮರಾಶಿಯಿಂದ 4ನೇ ಮನೆಯಲ್ಲಿ ಗುರು ಸಂಚಾರ ಅತಿಯಾದ ಕೋಪ, ತೊಂದರೆ ಕೊಡುತ್ತಾನೆ
- ರಾಜಕಾರಣಿಗಳಿಗೆ ಸ್ಥಾನ ಭಯ ಕಾಡಬಹುದು
- ಅಧಿಕಾರಿಗಳ ತಪ್ಪಿನಿಂದ ಸಮಸ್ಯೆ, ಅವಮಾನ ಎದುರಿಸುತ್ತೀರಿ
- ಈ ವರ್ಷ ಒಂದು ರೀತಿಯ ಹೋರಾಟದ ಜೀವನ ನಿಮ್ಮದಾಗಿರುತ್ತದೆ
- ಮಧ್ಯದಲ್ಲಿ ತಪ್ಪಿನ ಅರಿವಾಗುತ್ತದೆ ಆದರೆ ಅಹಂಭಾವದಿಂದ ತಿದ್ದಿಕೊಳ್ಳಲು ಮುಂದಾಗುವುದಿಲ್ಲ
- ಸ್ತ್ರೀ ಸಂಬಂಧ ವಿಚಾರಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು
- ವಾಹನದಿಂದ, ಮನೆಯಿಂದ ನಷ್ಟ, ಹಣ ಕಳೆದು ಕೊಳ್ಳಬಹುದು
- ಜಾತಕ ಪರೀಕ್ಷೆಯ ಅಗತ್ಯತೆ ತುಂಬಾ ಇದ್ದು ಸರಿಯಾಗಿ ಜಾತಕ ಪರೀಕ್ಷೆ ಮಾಡಿಸಿ
- ಮನೆಯಲ್ಲಿ ಹಿರಿಯರ ಕಾರ್ಯ ಸರಿಯಾಗಿ ಮಾಡಿ
- ವಿಶೇಷವಾಗಿ ಗೋ ಸೇವೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ