newsfirstkannada.com

ಅಂಗಾಂಗ ದಾನ ಮಾಡಿದ 21 ತಿಂಗಳ ಮಗು! 2 ಜೀವ ಉಳಿಸಿತು ಈ ಪುಟ್ಟ ಕಂದಮ್ಮ

Share :

Published May 28, 2024 at 12:52pm

Update May 28, 2024 at 12:54pm

    ಮೆದುಳು ಜ್ವರದಿಂದ ಬಳಲಿ ಸಾವನ್ನಪ್ಪಿದ ಮಗು

    ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆ ಪಾತ್ರವಾದ ಕಂದಮ್ಮ

    ಯಕೃತ್​, ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದ ಕೂಸು

21 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ ಎರಡು ಜೀವಗಳನ್ನು ಉಳಿಸಿದ ಘಟನೆ ಬೆಳಕಿಗೆ ಬಂದಿದೆ. ಆ ಮೂಲಕ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಒಡಿಶಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 21 ತಿಂಗಳ ಅಂಬೆಗಾಲಿಡುವ ಮಗು ಮೆನಿಂಜೈಟಿಸ್​ನಿಂದ ಬಳಲುತ್ತಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ಪೋಷಕರು ಕೊನೆಗೆ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ.

ಮಗು ಅನಾರೋಗ್ಯದ ಜೊತೆಗೆ ಮೆದುಳು ಜ್ವರದಿಂದ ಬಳಲುತ್ತಿತ್ತು. ನಂತರ ಚಿಕಿತ್ಸೆ ವೇಳೆ ಸೆಫ್ಟಿಕ್​ ಶಾಕ್​ ಕೂಡ ತಗುಲಿತ್ತು. ಕೊನೆಗೆ ಮಗು ಉಸಿರುಚೆಲ್ಲಿತು. ನಂತರ ಪೋಷಕರ ಅನುಮತಿ ಮೇರೆಗೆ ವೈದ್ಯರು ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆಗೆ ಮಾಹಿತಿ ತಿಳಿಸಿದರು.

ಇದನ್ನೂ ಓದಿ: ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ

ಮಗು ಯಕೃತ್​,ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದೆ. ಹೊಂದಿಕೆಯಾಗುವ ಯಕೃತ್​, ಮೂತ್ರಪಿಂಡಗಳನ್ನು ಬೇರೆ ಮಕ್ಕಳಿಗೆ ಕಸಿ ಮಾಡಲಾಗಿದೆ. ಆದರೆ ಸೂಕ್ತವಾದವರು ಸಿಗದ ಕಾರಣ ಹೃದಯವನ್ನು ಕಸಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಗಾಂಗ ದಾನ ಮಾಡಿದ 21 ತಿಂಗಳ ಮಗು! 2 ಜೀವ ಉಳಿಸಿತು ಈ ಪುಟ್ಟ ಕಂದಮ್ಮ

https://newsfirstlive.com/wp-content/uploads/2024/05/Odisha.jpg

    ಮೆದುಳು ಜ್ವರದಿಂದ ಬಳಲಿ ಸಾವನ್ನಪ್ಪಿದ ಮಗು

    ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆ ಪಾತ್ರವಾದ ಕಂದಮ್ಮ

    ಯಕೃತ್​, ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದ ಕೂಸು

21 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ ಎರಡು ಜೀವಗಳನ್ನು ಉಳಿಸಿದ ಘಟನೆ ಬೆಳಕಿಗೆ ಬಂದಿದೆ. ಆ ಮೂಲಕ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಒಡಿಶಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 21 ತಿಂಗಳ ಅಂಬೆಗಾಲಿಡುವ ಮಗು ಮೆನಿಂಜೈಟಿಸ್​ನಿಂದ ಬಳಲುತ್ತಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ಪೋಷಕರು ಕೊನೆಗೆ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ.

ಮಗು ಅನಾರೋಗ್ಯದ ಜೊತೆಗೆ ಮೆದುಳು ಜ್ವರದಿಂದ ಬಳಲುತ್ತಿತ್ತು. ನಂತರ ಚಿಕಿತ್ಸೆ ವೇಳೆ ಸೆಫ್ಟಿಕ್​ ಶಾಕ್​ ಕೂಡ ತಗುಲಿತ್ತು. ಕೊನೆಗೆ ಮಗು ಉಸಿರುಚೆಲ್ಲಿತು. ನಂತರ ಪೋಷಕರ ಅನುಮತಿ ಮೇರೆಗೆ ವೈದ್ಯರು ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆಗೆ ಮಾಹಿತಿ ತಿಳಿಸಿದರು.

ಇದನ್ನೂ ಓದಿ: ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ

ಮಗು ಯಕೃತ್​,ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದೆ. ಹೊಂದಿಕೆಯಾಗುವ ಯಕೃತ್​, ಮೂತ್ರಪಿಂಡಗಳನ್ನು ಬೇರೆ ಮಕ್ಕಳಿಗೆ ಕಸಿ ಮಾಡಲಾಗಿದೆ. ಆದರೆ ಸೂಕ್ತವಾದವರು ಸಿಗದ ಕಾರಣ ಹೃದಯವನ್ನು ಕಸಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More