ಮೆದುಳು ಜ್ವರದಿಂದ ಬಳಲಿ ಸಾವನ್ನಪ್ಪಿದ ಮಗು
ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆ ಪಾತ್ರವಾದ ಕಂದಮ್ಮ
ಯಕೃತ್, ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದ ಕೂಸು
21 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ ಎರಡು ಜೀವಗಳನ್ನು ಉಳಿಸಿದ ಘಟನೆ ಬೆಳಕಿಗೆ ಬಂದಿದೆ. ಆ ಮೂಲಕ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಒಡಿಶಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 21 ತಿಂಗಳ ಅಂಬೆಗಾಲಿಡುವ ಮಗು ಮೆನಿಂಜೈಟಿಸ್ನಿಂದ ಬಳಲುತ್ತಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ಪೋಷಕರು ಕೊನೆಗೆ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ.
ಮಗು ಅನಾರೋಗ್ಯದ ಜೊತೆಗೆ ಮೆದುಳು ಜ್ವರದಿಂದ ಬಳಲುತ್ತಿತ್ತು. ನಂತರ ಚಿಕಿತ್ಸೆ ವೇಳೆ ಸೆಫ್ಟಿಕ್ ಶಾಕ್ ಕೂಡ ತಗುಲಿತ್ತು. ಕೊನೆಗೆ ಮಗು ಉಸಿರುಚೆಲ್ಲಿತು. ನಂತರ ಪೋಷಕರ ಅನುಮತಿ ಮೇರೆಗೆ ವೈದ್ಯರು ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆಗೆ ಮಾಹಿತಿ ತಿಳಿಸಿದರು.
ಇದನ್ನೂ ಓದಿ: ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ
ಮಗು ಯಕೃತ್,ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದೆ. ಹೊಂದಿಕೆಯಾಗುವ ಯಕೃತ್, ಮೂತ್ರಪಿಂಡಗಳನ್ನು ಬೇರೆ ಮಕ್ಕಳಿಗೆ ಕಸಿ ಮಾಡಲಾಗಿದೆ. ಆದರೆ ಸೂಕ್ತವಾದವರು ಸಿಗದ ಕಾರಣ ಹೃದಯವನ್ನು ಕಸಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೆದುಳು ಜ್ವರದಿಂದ ಬಳಲಿ ಸಾವನ್ನಪ್ಪಿದ ಮಗು
ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆ ಪಾತ್ರವಾದ ಕಂದಮ್ಮ
ಯಕೃತ್, ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದ ಕೂಸು
21 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ ಎರಡು ಜೀವಗಳನ್ನು ಉಳಿಸಿದ ಘಟನೆ ಬೆಳಕಿಗೆ ಬಂದಿದೆ. ಆ ಮೂಲಕ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಒಡಿಶಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 21 ತಿಂಗಳ ಅಂಬೆಗಾಲಿಡುವ ಮಗು ಮೆನಿಂಜೈಟಿಸ್ನಿಂದ ಬಳಲುತ್ತಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ಪೋಷಕರು ಕೊನೆಗೆ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ.
ಮಗು ಅನಾರೋಗ್ಯದ ಜೊತೆಗೆ ಮೆದುಳು ಜ್ವರದಿಂದ ಬಳಲುತ್ತಿತ್ತು. ನಂತರ ಚಿಕಿತ್ಸೆ ವೇಳೆ ಸೆಫ್ಟಿಕ್ ಶಾಕ್ ಕೂಡ ತಗುಲಿತ್ತು. ಕೊನೆಗೆ ಮಗು ಉಸಿರುಚೆಲ್ಲಿತು. ನಂತರ ಪೋಷಕರ ಅನುಮತಿ ಮೇರೆಗೆ ವೈದ್ಯರು ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆಗೆ ಮಾಹಿತಿ ತಿಳಿಸಿದರು.
ಇದನ್ನೂ ಓದಿ: ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ
ಮಗು ಯಕೃತ್,ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದೆ. ಹೊಂದಿಕೆಯಾಗುವ ಯಕೃತ್, ಮೂತ್ರಪಿಂಡಗಳನ್ನು ಬೇರೆ ಮಕ್ಕಳಿಗೆ ಕಸಿ ಮಾಡಲಾಗಿದೆ. ಆದರೆ ಸೂಕ್ತವಾದವರು ಸಿಗದ ಕಾರಣ ಹೃದಯವನ್ನು ಕಸಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ