3ನೇ ಮಹಡಿಯಿಂದ ಬಿದ್ದು ಧರ್ಮಸ್ಥಳದ ಯುವತಿ ಬಲಿ; ಆಗಿದ್ದೇನು?

author-image
Veena Gangani
Updated On
3ನೇ ಮಹಡಿಯಿಂದ ಬಿದ್ದು ಧರ್ಮಸ್ಥಳದ ಯುವತಿ ಬಲಿ; ಆಗಿದ್ದೇನು?
Advertisment
  • ಏರೋಸ್ಪೇಸ್ ಉದ್ಯೋಗಿಯಾಗಿರುವ ಆಕಾಂಕ್ಷ ಎಸ್ ನಾಯರ್
  • ಪಂಜಾಬ್​ನ ಜಲಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
  • 6 ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗ

ಮಂಗಳೂರು: ಧರ್ಮಸ್ಥಳದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್​​ನಲ್ಲಿ ನಿಗೂಢ ಮೃತಪಟ್ಟಿದ್ದಾಳೆ. ಆಕಾಂಕ್ಷ ಎಸ್ ನಾಯರ್ (22) ಮೃತ ಯುವತಿ.

ಇದನ್ನೂ ಓದಿ: ಚೈತ್ರಾ ಕುಂದಾಪುರ, ರಂಜಿತ್​ ಮದುವೆಗೆ ಗೌತಮಿ ಜಾಧವ್​ ಹೋಗಲಿಲ್ಲವೇಕೆ? ಈ ಬಗ್ಗೆ ಏನಂದ್ರು?

publive-image

22 ವರ್ಷದ ಆಕಾಂಕ್ಷ ಎಸ್ ನಾಯರ್ ಏರೋಸ್ಪೇಸ್ ಉದ್ಯೋಗಿಯಾಗಿದ್ದಳು. ಧರ್ಮಸ್ಥಳ ಬಳಿಯ ಬೊಳಿಯಾರ್ ಗ್ರಾಮದ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿಯಾಗಿದ್ದಳು.  ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಪಂಜಾಬಿನ ಎಲ್.ಪಿ.ಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದುಕೊಂಡಿದ್ದರು. ಹೀಗಾಗಿ ಎಲ್.ಪಿ.ಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ಆಕಾಂಕ್ಷ ಪಂಜಾಬ್​ಗೆ ತೆರಳಿದ್ದರು.

publive-image

ಆದ್ರೆ ಪಂಜಾಬ್​ನಲ್ಲಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಷಯ ತಿಳಿದ ಕೂಡಲೇ ಪಂಜಾಬ್​ನ ಜಲಂದರ್ ಪೋಲೀಸರು ಸ್ಥಳಕ್ಕೆ ಭೇಟಿ ಕೊಟ್ಟು 3ನೇ ಮಹಡಿಯಿಂದ ಬಿದ್ದಿದ್ದಾದರೂ ಹೇಗೆ ಎಂದು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಯುವತಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿವೆ. ಸದ್ಯ ಈ ಘಟನೆ ಸಂಬಂಧ ಪಂಜಾಬ್​ನ ಜಲಂದರ್ ಪೋಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment