ಏರ್​ಪೋರ್ಟ್​ಗಳು ತಾತ್ಕಾಲಿಕ ಬಂದ್; ಭಾರತ- ಪಾಕ್ ನಡುವೆ ಘರ್ಷಣೆ ಬೆನ್ನಲ್ಲೇ ಸರ್ಕಾರ ಸೂಚನೆ

author-image
Bheemappa
Updated On
ಏರ್​ಪೋರ್ಟ್​ಗಳು ತಾತ್ಕಾಲಿಕ ಬಂದ್; ಭಾರತ- ಪಾಕ್ ನಡುವೆ ಘರ್ಷಣೆ ಬೆನ್ನಲ್ಲೇ ಸರ್ಕಾರ ಸೂಚನೆ
Advertisment
  • ವಿಮಾನ ಪ್ರಯಾಣಿಕರ ಬಳಿ ವಿಶೇಷ ಮನವಿ ಮಾಡಿದ ಸರ್ಕಾರ
  • ಡ್ರೋಣ್ ಅಟ್ಯಾಕ್, ಕ್ಷಿಪಣಿ ಉಡಾವಣೆಗೆ ಪಾಕ್ ವಿಫಲ ಯತ್ನ
  • ತಾತ್ಕಾಲಿಕವಾಗಿ ವಿಮಾನ ನಿಲ್ದಾಣಗಳನ್ನು ಮುಚ್ಚಿರುವ ಸರ್ಕಾರ

ಭಾರತ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೇಶದ ಒಟ್ಟು 24 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.

ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ್ ಸೇರಿದಂತೆ ಕೆಲವು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನವೂ ಡ್ರೋಣ್, ಕ್ಷಿಪಣಿಗಳನ್ನು ಉಡಾಯಿಸಲು ಯತ್ನಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನದ ಡ್ರೋಣ್, ಕ್ಷಿಪಣಿಗಳನ್ನು ಹೊಡೆದುರಳಿಸಿದೆ. ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಭಾರತದ ಗಡಿ ಭಾಗಗಳಲ್ಲಿ ಬರುವಂತಹ 24 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚವಂತೆ ತಿಳಿಸಲಾಗಿದೆ.

ಇದನ್ನೂ ಓದಿ: IPL ಮ್ಯಾಚ್ ರದ್ದು.. ವಂದೇ ಭಾರತ್ ರೈಲಿನಲ್ಲಿ ಪಂಜಾಬ್, ಡೆಲ್ಲಿ ಆಟಗಾರರ ಸ್ಥಳಾಂತರ

publive-image

ಇದರ ಜೊತೆಗೆ ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಬರುವಂತೆ ಸೂಚಿಸಿದೆ. ದೇಶದ್ಯಾಂತ ಇರುವ ಏರ್​ಪೋರ್ಟ್​ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿಯೇ ಬರಬೇಕೆಂದು ತಿಳಿಸಲಾಗಿದೆ. ನೆರೆಯ ರಾಷ್ಟ್ರಗಳ ಮಧ್ಯ ಘರ್ಷಣೆ ಮತ್ತಷ್ಟು ಬಿಗಡಾಯಿಸುತ್ತಿದ್ದಂರಿಂದ 100ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ಸ್ಥಗಿತ ಮಾಡಲಾಗಿದೆ.

ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್ (ಎಸ್​​ಎಲ್​ಪಿಸಿ)ಗೆ ಒಳಪಡಿಸಲಾಗುತ್ತದೆ. ಹೀಗಾಗಿ ಮೊದಲೇ ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಪಂಜಾಬ್​ನ ಅಮೃತಸರ್, ಲೂಧಿಯಾನ, ಪಾಟಿಯಾಲ, ಬಥಿಂದಾ, ಹಲ್ವಾರಾ, ಪಠಣ್​ಕೋಟ್, ಹಿಮಾಚಲ ಪ್ರದೇಶದ ಭೂಂತರ್, ಶಿಮ್ಲಾ ಹಾಗೂ ಕಂಗ್ರಾ-ಗಗ್ಗಲ್​ ಸೇರಿದಂತೆ ಅನೇಕ ಅನೇಕ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment