ಯಾರ ಮೇಲೂ ಅತಿಯಾದ ವಿಶ್ವಾಸ ಬೇಡ, ಈ ರಾಶಿಗೆ ಅಶುಭ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮನೆಯ ದಿನನಿತ್ಯದ ಖರ್ಚಿಗೆ ತೊಂದರೆ ಆಗಬಹುದು ಜಾಗ್ರತೆ ಇರಲಿ
  • ಕುಟುಂಬದ ಜೊತೆ ಬಹಳ ಮೌಲ್ಯಯುತ ಸಮಯ ಕಳೆಯುವ ಸಾಧ್ಯತೆ
  • ಉದ್ವಿಗ್ನ ಪರಿಸ್ಥಿತಿ ಏರ್ಪಾಟ್ಟಾಗ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ದಿನಪೂರ್ತಿ ಬಿಡುವಿಲ್ಲದೆ ನಿಮ್ಮ ಕೆಲಸಗಳಲ್ಲಿ ನಿರತರಾಗುವ ಸಾಧ್ಯತೆ ಹೆಚ್ಚು
  • ಹಿರಿಯರ ಆಶೀರ್ವಾದ, ಮಾರ್ಗದರ್ಶನ ಹಾಗೂ ಚಿಕ್ಕಮಕ್ಕಳ ಪ್ರೀತಿ ನಿಮಗೆ ಸಂತೋಷ ನೀಡುತ್ತದೆ
  • ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸ್ನೇಹಿತರು, ಕುಟುಂಬದವರು ನಿಮ್ಮನ್ನು ಸಂತೋಷ ಪಡಿಸುತ್ತಾರೆ
  • ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆ
  • ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬಹುದು ಶುಭವಿದೆ
  • ಪಕ್ಷಿಗಳಿಗೆ ಆಹಾರ ನೀರು ಕೊಡಿ

ವೃಷಭ

publive-image

  • ಇಂದು ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
  • ನಿಮ್ಮ ಕೋಪ ನಿಯಂತ್ರಣದಲ್ಲಿ ಇರಲಿ
  • ಈ ದಿನ ಕೆಟ್ಟ ಭಾಷೆ ಬಳಸಬೇಡಿ
  • ನಿಮ್ಮ ಕುಟುಂಬಕ್ಕೆ ನಿಮ್ಮಿಂದ ಸೌಖ್ಯ, ಆನಂದ ಸಿಗುವ ದಿನ
  • ಇಂದು ಯಾರ ಮನಸ್ಸಿಗೆ ನೋವಾಗದಂತೆ ವರ್ತಿಸಬೇಡಿ
  • ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭದಿನ
  • ವಿಕಲಚೇತನರಿಗೆ ಹಣ್ಣನ್ನು ನೀಡಿ ಶುಭವಾಗುತ್ತದೆ

ಮಿಥುನ

publive-image

  • ಮನೆಯ ದಿನನಿತ್ಯದ ಖರ್ಚಿಗೆ ತೊಂದರೆ ಆಗಬಹುದು ಜಾಗ್ರತೆ ಇರಲಿ
  • ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
  • ವಿವಾಹ ಅಪೇಕ್ಷಿಗಳ ವೈವಾಹಿಕ ವಿಚಾರದಲ್ಲಿ ಸಹಾಯಕ್ಕೆ ಹೋದರೆ ಅವಮಾನ ಸಾಧ್ಯತೆ
  • ಇಂದು ಸಂಘ-ಸಂಸ್ಥೆಗಳನ್ನು ಆರಂಭಿಸಲು ಶುಭದಿನ
  • ಸಂಬಂಧಿಕರ ಜೊತೆ ದೊಡ್ಡ ಕಾರ್ಯಗಳ ಬಗ್ಗೆ ಚರ್ಚೆ ಸಾಧ್ಯತೆ
  • ಮಾತೃಭಕ್ತ ಪರಶುರಾಮನನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ನಿಮ್ಮ ಕುಟುಂಬದ ಜೊತೆ ಬಹಳ ಮೌಲ್ಯಯುತ ಸಮಯ ಕಳೆಯುವ ಸಾಧ್ಯತೆ
  • ಈ ದಿನ ಒಳ್ಳೆಯ ವಿಚಾರಗಳಿಂದ ಪ್ರಾರಂಭವಾಗುತ್ತದೆ
  • ಯಾವುದೇ ಪರಿಸ್ಥಿತಿಯಲ್ಲಿ ನೀವು ಉದ್ವಿಗ್ನಕ್ಕೆ ಒಳಗಾಗದಿದ್ದರೆ ಒಳ್ಳೆಯದು
  • ಇಂದು ಆರ್ಥಿಕವಾಗಿಯೂ ಬಹಳ ಅನುಕೂಲಕರವಾಗಿದೆ
  • ಉದ್ವಿಗ್ನ ಪರಿಸ್ಥಿತಿ ಏರ್ಪಾಟ್ಟಾಗ ಅದನ್ನ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು
  • ಇಂದು ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿರಲಿ
  • ಧನಲಕ್ಷ್ಮಿ ಪ್ರಾರ್ಥನೆ ಮಾಡಿ

ಸಿಂಹ

publive-image

  • ಇಂದು ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ರೂ ಶುಭವಾಗುತ್ತದೆ
  • ನಿಮ್ಮ ಪ್ರತಿಭೆಗೆ ಗೌರವ, ಪುರಸ್ಕಾರ ದೊರೆಯುವ ದಿನ
  • ನಿಮ್ಮ ಕೆಲಸ-ಕಾರ್ಯಗಳ ಗುಣಮಟ್ಟ ಹೆಚ್ಚಾಗುತ್ತದೆ
  • ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ ಕಾಣುವ ದಿನ
  • ಸ್ವಾರ್ಥಿಗಳ ಮಾತಿಗೆ ಮರುಳಾಗಿ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ
  • ವೀರಾಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಇಂದು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ
  • ಹಿಂದೆ ಸೇವಿಸಿದ ಆಹಾರ ವಿಷಾಹಾರವಾಗಿ ಪರಿವರ್ತನೆಯಾಗುವ ಸಾಧ್ಯತೆ
  • ಆದರೆ ಮನೆಮದ್ದನ್ನು ಉಪಯೋಗಿಸಿ ಗುಣಮುಖರಾಗಬಹುದು
  • ಈ ದಿನ ಆಗತ್ಯವಾಗಿ ವಿಶ್ರಾಂತಿ ಮಾಡಿದರೆ ಒಳ್ಳೆಯದು
  • ಅಗತ್ಯ ಬಿದ್ದರೆ ಮಾತ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ
  • ಮೂಕಾಂಬಿಕೆಯನ್ನ ಧ್ಯಾನ ಮಾಡಿ

ತುಲಾ

publive-image

  • ಕುಟುಂಬದವರು ತೆಗೆದುಕೊಂಡ ನಿರ್ಧಾರ, ಮನೆಯ ವಾತಾವರಣವನ್ನ ಕಲುಷಿತ ಮಾಡಬಹುದು
  • ಮಾತೆಯರು ತಮ್ಮ ಆಸೆ-ಆಕಾಂಕ್ಷೆಗಳನ್ನ ಇಂದು ಮನೆಯಲ್ಲಿ ವ್ಯಕ್ತಪಡಿಸದಿದ್ದರೆ ಉತ್ತಮ
  • ಯಾವುದೇ ಪರಿಸ್ಥಿತಿಯನ್ನ ವಿಕೋಪಕ್ಕೆ ಹೋಗಲು ಅವಕಾಶ ಕೊಡಬೇಡಿ
  • ಮನೆಯವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಹೆಚ್ಚು ಗಮನವಿರಲಿ
  • ಆ ಸಮಯದಲ್ಲಿ ಕಪ್ಪು ಬಟ್ಟೆ ಧರಿಸಿದರೆ ಉತ್ತಮ
  • ಕೆಂಪು ಹೂವಿನಿಂದ ಕಾಳಿಕಾದೇವಿಯನ್ನ ಆರ್ಚನೆ ಮಾಡಿ

ವೃಶ್ಚಿಕ

publive-image

  • ಲ್ಯಾಪ್​ಟಾಪ್​, ಮೊಬೈಲ್​ ಬಳಕೆಯನ್ನ ಅಗತ್ಯವಿದ್ದಷ್ಟು ಬಳಸಿ
  • ಅತಿ ಮಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಕೆಡುವ ಸಾಧ್ಯತೆ ಇದೆ
  • ನಿಮ್ಮ ಕೋಪದ ಮೇಲೆ ಹಿಡಿತ ಇರಲಿ, ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ
  • ಹಿಂದೆ ಖರೀದಿಸಿದ ವಸ್ತುವಿನಿಂದ ನಿಷ್ಠೂರಕ್ಕೆ ಒಳಗಾಗುವ ಸಾಧ್ಯತೆ
  • ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ

ಧನಸ್ಸು

publive-image

  • ನಿಮ್ಮ ಹಲವು ದಿನದ ಕನಸು ಇಂದು ನೆರವೇರುವ ಸಾಧ್ಯತೆ
  • ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು, ಗೌರವ ಸಂಪಾದನೆ ಮಾಡುವ ದಿನ
  • ಇಂದು ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು ಎಚ್ಚರಿಕೆ ಇರಲಿ
  • ತಪ್ಪು ಅರ್ಥವಾದ ನಂತರ ಪಶ್ಚಾತ್ತಾಪ ಪಡುತ್ತೀರಿ
  • ವಿನಾಕಾರಣ ಆರೋಗ್ಯ ಹಾಳಾಗಬಹುದು, ಜಾಗ್ರತೆವಹಿಸಿ
  • ಅಶ್ವಿನಿ ದೇವತೆಗಳನ್ನು ಸ್ಮರಿಸಿ

ಮಕರ

publive-image

  • ನಿಮ್ಮ ಮನೆಯ ವಾತಾವರಣ ಬಹಳ ಚೆನ್ನಾಗಿರುತ್ತದೆ
  • ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ ತುಂಬಾ ಎಚ್ಚರಿಕೆ ಇರಲಿ
  • ಅಗೌರವ, ಹಣದ ನಷ್ಟ ಕಾಡುವ ಸಾಧ್ಯತೆ, ನಿಮ್ಮ ತಾಳ್ಮೆ ಪರೀಕ್ಷೆಗೆ ಒಳಗಾಗುವ ಸಾಧ್ಯತೆ
  • ಮನೆಯಿಂದ ಹೊರಡುವಾಗ ಬಾಯಿ ಸಿಹಿ ಮಾಡಿಕೊಂಡು ಹೊರಡಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
  • ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನ ಮಾಡಿಕೊಂಡರೆ ಒಳ್ಳೆಯದು
  • ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪನ್ನ ಸರಿ ಎಂದು ವಾದ ಮಾಡಬಹುದು
  • ವಾಹನ ಹರಾಜಿನಲ್ಲಿ ಭಾಗವಹಿಸಬೇಡಿ ತೊಂದರೆಯಿದೆ
  • ಅತಿಯಾದ ಆತ್ಮವಿಶ್ವಾಸ ಯಾವ ಕಾರಣಕ್ಕೂ ಬೇಡ
  • ಧ್ಯಾನಾವಸ್ಥೆಯಲ್ಲಿರುವ ಗಾಯತ್ರಿದೇವಿಯನ್ನು ಪ್ರಾರ್ಥಿಸಿ

ಮೀನ 

publive-image

  • ನಿಮ್ಮ ಸ್ವಭಾವ, ನಡತೆಗಳಿಂದ ಸ್ನೇಹಿತರು, ಬಂಧುಗಳು ಕೋಪಗೊಳ್ಳಬಹುದು
  • ಮಕ್ಕಳು ನಿಮ್ಮ ಬಗ್ಗೆ ಮಾನಸಿಕವಾಗಿ ಬೇಸತ್ತು ದೂರವಾಗಬಹುದು ಎಚ್ಚರಿಕೆ ಇರಲಿ
  • ಸರ್ಕಾರದಿಂದ ಹರಾಜಾಗುವ ಭೂಮಿ ಮತ್ತು ವಸ್ತುಗಳ ಹರಾಜಿನಲ್ಲಿ ಭಾಗವಹಿಸಿದರೆ ಶುಭವಿದೆ
  • ಇಂದು ರಾಜಕಾರಣಿಗಳಿಗೆ ಬಹಳ ಉತ್ತಮ ದಿನ
  • ವಿನಾಕಾರಣ ಬೇರೆ ರಾಜಕಾರಣಿಗಳೊಂದಿಗೆ ವಾದ-ವಿವಾದ ಬೇಡ, ತೊಂದರೆ ಸಾಧ್ಯತೆ
  • ಕಾಲಭೈರವನನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment