/newsfirstlive-kannada/media/post_attachments/wp-content/uploads/2024/10/Lawrence.jpg)
ಪನ್ವೇಲ್ ಬಳಿ ಇರುವ ಸಲ್ಮಾನ್ ಖಾನ್ ಫಾರ್ಮ್ಹೌಸ್ ಬಳಿಯೇ ಸಲ್ಮಾನ್ ಖಾನ್ ಹತ್ಯೆಗೆ ಸ್ಕೇಚ್ ಹಾಕಿತ್ತು ಲಾರೆನ್ಸ್ ಬಿಷ್ಣೋಯಿ ಪಡೆ. ಅದಕ್ಕಾಗಿ ಬರೋಬ್ಬರಿ 25 ಲಕ್ಷ ರೂಪಾಯಿಯ ಕಾಂಟ್ರ್ಯಾಕ್ಟ್ಗೆ ನೀಡಲಾಗಿತ್ತು ಎಂದು ಮುಂಬೈ ಪೊಲೀಸರು ತಮ್ಮ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಜೂನ್ನಲ್ಲಿಯೇ ಇಂತಹದೊಂದು ಬರ್ಬರ ಹತ್ಯೆಗೆ ಬಿಷ್ಣೋಯಿ ಗ್ಯಾಂಗ್ ಸ್ಕೆಚ್ ಹಾಕಿ ಕಾದುಕೊಂಡು ಕುಳಿತಿತ್ತು. ಅದನ್ನು ವಿಫಲಗೊಳಿಸಿದ್ದ ಮುಂಬೈ ಪೊಲೀಸರು ಸದ್ಯ ಚಾರ್ಜ್ಶೀಟ್ ಸಿದ್ಧಪಡಿಸಿದ್ದು, ಅದರಲ್ಲಿ ಐವರು ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಆರೋಪಿಗಳು ಸಲ್ಮಾನ್ ಹತ್ಯೆಗೆ 25 ಲಕ್ಷಗೆ ರೂಪಾಯಿ ಗುಜರಾತ್ನ ಸಾಬರಮತಿ ಜೈಲಿನಲ್ಲಿರೋ ಗ್ಯಾಂಗ್ಸ್ಟಾರ್ ಬಿಷ್ಣೋಯಿಯಿಂದ ಕಾಂಟ್ರ್ಯಾಕ್ಟ್ ಪಡೆದಿದ್ದರು ಎಂದು ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ.
ಆರೋಪಿಗಳು ಸಲ್ಮಾನ್ ಹತ್ಯೆಗೆಂದು ಪಾಕಿಸ್ತಾನದಿಂದ ಅತ್ಯಾಧುನಿ ಗನ್ಗಳಾದ ಎಕೆ47, ಎಕೆ92 ಹಾಗೂ ಎಂ 16 ರೈಫಲ್ಗಳನ್ನು ಪಾಕಿಸ್ತಾನದಿಂದ ಖರೀದಿಸಲು ಪ್ಲಾನ್ ಕೂಡ ನಡೆಸಿತ್ತು ಎಂಬ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರಕಿದೆ. ಇದರ ಜೊತೆಗೆ ಪಂಜಾಬಿ ಸಿಂಗರ್ ಸಿಧು ಮೂಸೆವಾಲರ ಹತ್ಯೆ ವೇಳೆ ಬಳಸಿದ್ದ ಟರ್ಕಿಶ್ ನಿರ್ಮಿತ ಝೀಗಾನ್ ಶಸ್ತ್ರವನ್ನೂ ಕೂಡ ಖರೀದಿಸಲು ಈ ಗ್ಯಾಂಗ್ ಚಿಂತನೆ ನಡೆಸಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳು 18 ವಯಸ್ಸಿನೊಳಗಿನ ಮಕ್ಕಳನ್ನೇ ಸಲ್ಮಾನ್ ಹತ್ಯೆಗಾಗಿ ನೇಮಿಸಿದ್ದರು ಎಂದು ಕೂಡ ತಿಳಿದು ಬಂದಿದೆ.
ಇದನ್ನೂ ಓದಿ: VIDEO: ಜೋಗಿ ಅಮ್ಮನನ್ನೂ ಮೀರಿಸುವ ಹಾರ್ಟ್ ಟಚ್ಚಿಂಗ್ ಸ್ಟೋರಿ ಇದು; ಕರುಳು ಚುರ್ ಅನ್ನುತ್ತೆ!
ಸುಮಾರು 60 ರಿಂದ 70 ಜನರು ಸಲ್ಮಾನ್ ಖಾನ್ ಅವರ ನಿತ್ಯದ ಓಡಾಟವನ್ನು ಗಮನಿಸಲೆಂದೇ ನೇಮಿಸಲಾಗಿತ್ತಂತೆ. ಪ್ರಮುಖವಾಗಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸ, ಪನ್ವೇಲ್ನಲ್ಲಿರುವ ಅವರ ಫಾರ್ಮ್ಹೌಸ್ ಹಾಗೂ ಗೊರೆಗಾಂವ್ನಲ್ಲಿರುವ ಫಿಲ್ಮ್ಸಿಟಿಯಲ್ಲಿ ಸಲ್ಮಾನ್ ಖಾನ್ ಓಡಾಟದ ಮೇಲೆ ನಿಗಾಯಿರಿಸಲು ಜನರನ್ನು ನೇಮಿಸಲಾಗಿತ್ತು ಎಂದು ಆರೋಪಿಗಳು ತಪ್ಪೊಪ್ಪಿಗೆಯಲ್ಲಿ ಹೇಳಿಕೆ ನೀಡಿದ್ದಾರೆ. ಸಲ್ಮಾನ್ ಖಾನ್ ಹತ್ಯೆಗಾಗಿ ಈ ಒಂದು ಯೋಜನೆ ಕಳೆದ ವರ್ಷ ಆಗಸ್ಟ್ 2023ರಿಂದ ಏಪ್ರಿಲ್ 2024ರವರೆಗೆ ನಡೆದಿತ್ತಂತೆ
ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ವ್ಯಕ್ತಿಗೆ ಜಾಮೀನು; ಹೈಕೋರ್ಟ್ ವಿಧಿಸಿದ ಷರತ್ತುಗಳೇನು ಗೊತ್ತಾ?
ಪೊಲೀಸರ ತನಿಖೆಯ ಪ್ರಕಾರ ಹರಿಯಾಣದ ಪಾನಿಪತ್ನಲ್ಲಿ ಬಂಧಿಸಲಾಗಿದ್ದ ಸುಖ್ಖಾ ಹಾಗೂ ಅಶೋಕ್ ಕಶ್ಯಪ್ ಅಲಿಯಾಸ್ ಎಕೆ ಯನ್ನು ಶೂಟರ್ಗಳೆಂದು ನಿಯೋಜಿಸಲಾಗಿತ್ತಂತೆ. ಸುಖ್ಖಾ ಪಾಕಿಸ್ತಾನ ಮೂಲದ ಡೊಗಾರ್ ಜೊತೆ ವಿಡಿಯೋ ಕಾಲ್ ಮಾಡಿ ಶಸ್ತ್ರಾಸ್ತ್ರಗಳ ಖರೀದಿಗೆ ಡೀಲ್ ಕುದುರಿಸಿದ್ದನಂತೆ. ಎಲ್ಲಾ ಮಾತುಕತೆಗಳು ಮುಗಿದ ನಂತರ ಡೊಗಾರ್ ಶಸ್ತ್ರಾಸ್ತ್ರಗಳನ್ನು ಪೂರೈಸಲು ರೆಡಿಯಾಗಿದ್ದಾಗ ಡೀಲ್ನ ಶೇಕಡಾ 50 ರಷ್ಟು ಹಣವನ್ನು ನೀಡಲು ಕೂಡ ಸುಖ್ಖಾ ಒಪ್ಪಿಕೊಂಡಿಂದನಂತೆ. ಈ ಎಲ್ಲಾ ಶೂಟರ್ಗಳು ಕೆನಡಾದ ಗ್ಯಾಂಗ್ಸ್ಟಾರ್ ಗೋಲ್ಡೈ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಬರುವಿಕೆಗಾಗಿ ಕಾಯುತ್ತಿದ್ದಂತೆ.
ಇಷ್ಟು ಮಾತ್ರವಲ್ಲ, ಶೂಟ್ ಮಾಡುವ ಕೆಲಸ ಮುಗಿದ ಕೂಡಲೇ ಎಲ್ಲರೂ ಕನ್ಯಾಕುಮಾರಿಯಲ್ಲಿ ಸೇರಿ ಅಲ್ಲಿಂದ ಬೋಟ್ ಮೂಲಕ ಶ್ರೀಲಂಕಾಗೆ ತಲುಪಿ ಭಾರತೀಯ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ನಡೆದಿತ್ತು. ಈ ಎಲ್ಲಾ ವಿಚಾರಗಳನ್ನು ಸದ್ಯ ಮುಂಬೈ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ