/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ನೌಕರಿ, ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
- ನಿಮ್ಮ ಸುತ್ತ ಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ
- ಕೆಲಸ ಕಾರ್ಯಗಳಲ್ಲಿ ಯಶಸ್ಸಿನ ಜೊತೆ ತೃಪ್ತಿ ಸಿಗುವ ದಿನ
- ವ್ಯಾಪಾರ, ವ್ಯವಹಾರದ ದೃಷ್ಟಿಯಿಂದ ಪ್ರವಾಸ ಕೈಗೊಳ್ಳಬಹುದು
- ಆರ್ಥಿಕ ಅನುಕೂಲತೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ
- ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ
- ವ್ಯಾಪಾರಸ್ಥರಿಗೆ ಶುಭ ಹಾಗೂ ಲಾಭದ ದಿನ
- ಪಿತ್ರಾರ್ಜಿತ ಆಸ್ತಿಯಿಂದ ಲಾಭ ಹೆಚ್ಚು
- ಮಾನಸಿಕವಾಗಿ ತೃಪ್ತಿ ಸಿಗುವ ದಿನ
- ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
- ಹಳೆಯ ಎಲ್ಲ ಗೊಂದಲಗಳಿಗೆ ಇಂದು ಉತ್ತರ ಸಿಗುತ್ತದೆ
- ಕುಲದೇವರ ಆರಾಧನೆ ಮಾಡಿ
ಮಿಥುನ
- ನಿಯಮಿತ ಆದಾಯದ ಮೂಲ ಸಿಗಬಹುದು ಗಮನಿಸಿ
- ಅಧಿಕಾರ, ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುವುದಿಲ್ಲ
- ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿರಲಿ
- ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಡಬಹುದು
- ರಾಜಕೀಯ ವಿಚಾರದಲ್ಲಿ ಹಿನ್ನಡೆಯ ದಿನ
- ರಾಜಕಾರಣಿಗಳಿಗೆ ಅಪಾಯವಿದೆ ಎಚ್ಚರಿಕೆ ಇರಲಿ
- ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ
ಕಟಕ
- ಕೋಪ ಕಡಿಮೆ ಮಾಡಿಕೊಳ್ಳಿ ದಿನ ಚೆನ್ನಾಗಿಲ್ಲ
- ಇಂದು ತಾಳ್ಮೆ ಪರೀಕ್ಷೆಯ ದಿನವಾಗಿರುತ್ತದೆ
- ಮಕ್ಕಳು ಅನುಚಿತವಾಗಿ ವರ್ತಿಸಬಹುದು
- ನಿಮ್ಮ ಹಿತೈಷಿಗಳಿಂದ ಯಾವುದೇ ಅನುಕೂಲವಿಲ್ಲ
- ನಿಮ್ಮ ಕೆಲಸಗಳಲ್ಲಿ ತಪ್ಪನ್ನು ಹುಡುಕುವ ದಿನ
- ಕಾರ್ಯ, ವೃತ್ತಿಯ ಮೇಲೆ ಹೆಚ್ಚು ಗಮನಹರಿಸಿ
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ಸಿಂಹ
- ವ್ಯವಹಾರಿಕವಾಗಿ ಗಾಂಭೀರ್ಯದಿಂದ ಇರುತ್ತೀರಿ
- ಯೋಜನೆಯಂತೆ ಎಲ್ಲಾ ಕೆಲಸಗಳು ನಡೆಯುತ್ತವೆ
- ಸಹಾಯಕರು ತುಂಬಾ ಪ್ರಾಮಾಣಿಕವಾಗಿರುತ್ತಾರೆ
- ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ತೋರಬೇಕು
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ
- ದಾಂಪತ್ಯದಲ್ಲಿ ಸಾಮರಸ್ಯ ಇರುತ್ತದೆ
- ಇಷ್ಟದೇವತಾರಾಧನೆ ಮಾಡಿ
ಕನ್ಯಾ
- ಕುಟುಂಬದಲ್ಲಿ ನಿಮ್ಮ ಪ್ರತಿಷ್ಠೆ , ಗೌರವ ಹೆಚ್ಚಾಗಬಹುದು
- ಮಾನಸಿಕ ತೊಂದರೆ ದೂರವಾಗಬಹುದು
- ನಿಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ
- ಬೇರೆಯವರಿಗೆ ಸಹಾಯ ಮಾಡಿ, ಪುಣ್ಯ ಸಂಪಾದಿಸಿ
- ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತೀರಿ
- ಅನಗತ್ಯ ಮಾತು ಬೇಡ, ಉತ್ತಮ ಕೆಲಸ ಮಾಡಿ
- ಮಾರುತಿಯನ್ನು ಆರಾಧಿಸಿ
ತುಲಾ
- ವೃತ್ತಿಯಲ್ಲಿ, ನೌಕರಿಯಲ್ಲಿ ನಿಮ್ಮನ್ನು ದ್ವೇಷಿಸುವವರು ಹೆಚ್ಚು
- ಜನರಿಗೆ ವಿರುದ್ಧವಾದ ಕೆಲಸ ಬೇಡ
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಅಧಿಕಾರ, ಸ್ಥಾನದ ದುರುಪಯೋಗ ಬೇಡ
- ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ಮಾಡುತ್ತೀರಿ
- ಹಣದ ತೊಂದರೆಯಿಲ್ಲ - ಶುಭವಿದೆ
- ದತ್ತಾತ್ರೇಯರ ಪ್ರಾರ್ಥನೆ ಮಾಡಿ
ವೃಶ್ಚಿಕ
- ಅನಗತ್ಯವಾಗಿ ಯಾವ ಬದಲಾವಣೆಯೂ ಬೇಡ
- ನಿಮ್ಮ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತರಾಗಿರಿ
- ಕೌಟುಂಬಿಕ ಜಗಳ, ಮನಸ್ತಾಪವಾಗಬಹುದು
- ವ್ಯಾಪಾರದಲ್ಲಿ ಗೊಂದಲವನ್ನು ಬಗೆಹರಿಸಿಕೊಳ್ಳಿ
- ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನ
- ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಇಂದು ಉದ್ಯೋಗದಲ್ಲಿ ಬದಲಾವಣೆಯಾಗಬಹುದು
- ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನದಿಂದ ಪ್ರಯೋಜನ ಸಿಗುತ್ತದೆ
- ದಿನದ ಹೆಚ್ಚಿನ ಭಾಗ ನಿಮಗೆ ಅನುಕೂಲಕರವಾದದ್ದು
- ಪ್ರೇಮಿಗಳಿಗೆ ಉತ್ತಮವಾದ ದಿನ
- ನಿಮ್ಮ ಸರಿಯಾದ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗುತ್ತಾರೆ
- ವಿದ್ಯಾರ್ಥಿಗಳಿಗೆ ಸಹಾಯ ದೊರಕಬಹುದಾದ ದಿನ
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಮಕರ
- ಈ ದಿನ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
- ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಬಹುದು
- ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಬೇಡ
- ಹಳೆಯ ತಪ್ಪಿನ ಅರಿವಾಗುತ್ತದೆ
- ಸ್ವಯಂ ಪ್ರೇರಣೆಯಿಂದ ಮನಸ್ಸನ್ನು ಕೇಂದ್ರೀಕರಿಸಬೇಕು
- ಸ್ನೇಹಿತರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳಿರುತ್ತದೆ
- ದುರ್ಗಾರಾಧನೆ ಮಾಡಿ
ಕುಂಭ
- ದಾಂಪತ್ಯದಲ್ಲಿ ಪ್ರಯತ್ನಪೂರ್ವಕವಾಗಿಯಾದ್ರೂ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ
- ಆರಾಮದಿಂದ ದಿನ ಕಳೆಯಲು ಯತ್ನಿಸಬಹುದು
- ಕುಟುಂಬದವರ ಸಹಕಾರವಿರುತ್ತದೆ
- ಪೂರ್ಣ ಉತ್ಸಾಹದಿಂದ ಜವಾಬ್ದಾರಿಗಳನ್ನು ಪೂರೈಸಬಹುದು
- ಆರೋಗ್ಯದಲ್ಲಿ ತೊಂದರೆಯಿಲ್ಲ
- ಹಣದ ವಿಚಾರವಾಗಿ ಗೊಂದಲ, ಮನಸ್ತಾಪ ಉಂಟಾಗಬಹುದು
- ಪಾರ್ವತಿ ದೇವಿಯನ್ನು ಪ್ರಾರ್ಥಿಸಿ
ಮೀನ
- ನಿಮ್ಮ ಕೆಲಸ ನಿಮಗೆ ತೃಪ್ತಿಕೊಡುವುದಿಲ್ಲ
- ಕೆಲವು ಕೆಲಸಗಳು ನಿಧಾನವಾಗಿ ಪೂರ್ಣವಾಗಬಹುದು
- ಹಳೆಯ ತಪ್ಪಿನಿಂದ ಬೇಸರ ಆಗಬಹುದು
- ಜವಾಬ್ದಾರಿಯ ಬಗ್ಗೆ ಚಿಂತಿಸಿ
- ಆರೋಗ್ಯದ ಬಗ್ಗೆ ಗಮನವಿರಲಿ, ತಾತ್ಸಾರ ಬೇಡ
- ವ್ಯವಹಾರ, ಹಣಕಾಸು ಮಾಮೂಲಿಯಂತೆ ನಡೆಯುತ್ತದೆ
- ಅಮೃತ ಮೃತ್ಯಂಜಯನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ