newsfirstkannada.com

ತವರಿಗೆ ಬಾ ತಂಗಿ ಅಂತ ಕರೆಯಲು ಹೋದ ಅಣ್ಣನ ಬರ್ಬರ ಕೊಲೆ; ಮೈಸೂರಲ್ಲಿ ಭಯಾನಕ ಘಟನೆ

Share :

Published June 8, 2024 at 6:38pm

Update June 8, 2024 at 6:39pm

    ನಗರದ ಕುವೆಂಪು ನಗರದ ಐ ಬ್ಲಾಕ್​ನಲ್ಲಿ ನಡೆದ ಘಟನೆ ಇದು

    ಕುಟುಂಬಸ್ಥರಿಂದ ಬಾವ ರವಿಚಂದ್ರನಿಂದ ಕೊಲೆ ಮೇಲೆ ಆರೋಪ

    ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲು

ಮೈಸೂರು: ವರದಕ್ಷಿಣೆ ಕಿರುಕುಳ ವಿಚಾರಕ್ಕೆ ಬಾಮೈದನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಘಟನೆ ಕುವೆಂಪು ನಗರದ ಐ ಬ್ಲಾಕ್​ನಲ್ಲಿ ನಡೆದಿದೆ ಅಭಿಷೇಕ್(27) ಮೃತ ದುರ್ದೈವಿ.

ಆರೋಪಿ

ಇದನ್ನೂ ಓದಿ: ಅವಳಿಗೆ 34, ಅವನಿಗೆ 25; ಗರ್ಭಿಣಿ ಮಾಡಿ ಎಸ್ಕೇಪ್ ಆದ ಕಿಲಾಡಿ ಗೆಳೆಯ; ದೂರು ದಾಖಲು

ಮೃತ ಅಭಿಷೇಕ್ ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ನಗರದ ಕುವೆಂಪು ಐ ಬ್ಲಾಕ್​ಗೆ ಹೋಗಿದ್ದ. ಇದೇ ವೇಳೆ ಅಭಿಷೇಕ್​ಗೆ, ಭಾವ ರವಿಚಂದ್ರ ಚಾಕುವಿನಿಂದ ಹಲ್ಲೆ ಮಾಡಿದ್ದಾನಂತೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ  ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

ಇನ್ನು, ಈ ಕೊಲೆ ಬಗ್ಗೆ ಅಭಿಷೇಕ್ ತಂಗಿ ವಿದ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲಾದರೂ ಹೋದರೆ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ಪ್ರತಿ ದಿನ ನನಗೆ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದೇ. ಆದರೆ ಈ ಬಗ್ಗೆ ಪೊಲೀಸರು ಕೂಡ ಏನು ಹೇಳಿಲ್ಲ. ಪೊಲೀಸರಿಗೆ ದುಡ್ಡು ಕೊಟ್ಟು ಸಮಾಧಾನ ಮಾಡುತ್ತಿದ್ದರು. ನನ್ನ ಕಾಪಾಡೋದಕ್ಕೆ ಬಂದ ಅಣ್ಣನನ್ನು ನನ್ನ ಮುಂದೆಯೇ ಕೊಲೆ ಮಾಡಿದ್ದಾರೆ. ನನ್ನ ಅಣ್ಣನನ್ನು ಕೊಲೆ ಮಾಡಿದ್ದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಕುಮಾರ್​​, ಮತ್ತೆ ರವಿಕುಮಾರ್​ ಇಬ್ಬರು ಕೊಲೆ ಮಾಡಿದ್ದಾರೆ. ನಮ್ಮ ಅಣ್ಣನ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತವರಿಗೆ ಬಾ ತಂಗಿ ಅಂತ ಕರೆಯಲು ಹೋದ ಅಣ್ಣನ ಬರ್ಬರ ಕೊಲೆ; ಮೈಸೂರಲ್ಲಿ ಭಯಾನಕ ಘಟನೆ

https://newsfirstlive.com/wp-content/uploads/2024/06/mys-death.jpg

    ನಗರದ ಕುವೆಂಪು ನಗರದ ಐ ಬ್ಲಾಕ್​ನಲ್ಲಿ ನಡೆದ ಘಟನೆ ಇದು

    ಕುಟುಂಬಸ್ಥರಿಂದ ಬಾವ ರವಿಚಂದ್ರನಿಂದ ಕೊಲೆ ಮೇಲೆ ಆರೋಪ

    ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲು

ಮೈಸೂರು: ವರದಕ್ಷಿಣೆ ಕಿರುಕುಳ ವಿಚಾರಕ್ಕೆ ಬಾಮೈದನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಘಟನೆ ಕುವೆಂಪು ನಗರದ ಐ ಬ್ಲಾಕ್​ನಲ್ಲಿ ನಡೆದಿದೆ ಅಭಿಷೇಕ್(27) ಮೃತ ದುರ್ದೈವಿ.

ಆರೋಪಿ

ಇದನ್ನೂ ಓದಿ: ಅವಳಿಗೆ 34, ಅವನಿಗೆ 25; ಗರ್ಭಿಣಿ ಮಾಡಿ ಎಸ್ಕೇಪ್ ಆದ ಕಿಲಾಡಿ ಗೆಳೆಯ; ದೂರು ದಾಖಲು

ಮೃತ ಅಭಿಷೇಕ್ ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ನಗರದ ಕುವೆಂಪು ಐ ಬ್ಲಾಕ್​ಗೆ ಹೋಗಿದ್ದ. ಇದೇ ವೇಳೆ ಅಭಿಷೇಕ್​ಗೆ, ಭಾವ ರವಿಚಂದ್ರ ಚಾಕುವಿನಿಂದ ಹಲ್ಲೆ ಮಾಡಿದ್ದಾನಂತೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ  ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

ಇನ್ನು, ಈ ಕೊಲೆ ಬಗ್ಗೆ ಅಭಿಷೇಕ್ ತಂಗಿ ವಿದ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲಾದರೂ ಹೋದರೆ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ಪ್ರತಿ ದಿನ ನನಗೆ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದೇ. ಆದರೆ ಈ ಬಗ್ಗೆ ಪೊಲೀಸರು ಕೂಡ ಏನು ಹೇಳಿಲ್ಲ. ಪೊಲೀಸರಿಗೆ ದುಡ್ಡು ಕೊಟ್ಟು ಸಮಾಧಾನ ಮಾಡುತ್ತಿದ್ದರು. ನನ್ನ ಕಾಪಾಡೋದಕ್ಕೆ ಬಂದ ಅಣ್ಣನನ್ನು ನನ್ನ ಮುಂದೆಯೇ ಕೊಲೆ ಮಾಡಿದ್ದಾರೆ. ನನ್ನ ಅಣ್ಣನನ್ನು ಕೊಲೆ ಮಾಡಿದ್ದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಕುಮಾರ್​​, ಮತ್ತೆ ರವಿಕುಮಾರ್​ ಇಬ್ಬರು ಕೊಲೆ ಮಾಡಿದ್ದಾರೆ. ನಮ್ಮ ಅಣ್ಣನ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More