ಸ್ನೇಹಿತರಿಂದ ಕಿರಿಕಿರಿ, ದಂಪತಿಗಳಿಗೆ ಶುಭದಿನ! ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿರುವ ದಿನ
  • ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯತೆಗಳನ್ನು ಪೂರೈಸುವ ದಿನ
  • ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಕಾಣುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ಮನೆಯಲ್ಲಿ ಸಂತೃಪ್ತಿಯ ವಾತಾವರಣ ಇರಲಿದೆ
  • ಆತ್ಮವಿಶ್ವಾಸ ಹೆಚ್ಚಾಗುವ ದಿನ
  • ಮುಂದಿನ ಯೋಚನೆಗಳ ಫಲ, ಯಶಸ್ಸಿನ ಗುಟ್ಟನ್ನು ತಿಳಿದುಕೊಳ್ಳುವುದು ಮುಖ್ಯ
  • ಸ್ನೇಹಿತರ ಮನೆಯಲ್ಲಿ ಮಂಗಳ ಕಾರ್ಯಗಳಲ್ಲಿ ಭಾಗಿಗಳಾಗುತ್ತೀರಿ
  • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯುಂಟಾಗಬಹುದು
  • ಗಣಪತಿಯ ಆರಾಧನೆ ಮಾಡಿ

ವೃಷಭ

publive-image

  • ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಕಾಣುತ್ತೀರಿ
  • ಈ ದಿನ ಉತ್ತಮವಾಗಿದೆ
  • ಇಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ
  • ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿಗಳನ್ನು ಕಾಣಬಹುದು
  • ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ
  • ಅಸಂಬದ್ಧ ಚಟುವಟಿಕೆಗಳ ಬಗ್ಗೆ ಮನಸ್ಸು ಹೋದರು ಗುರಿ ಸಾಧನೆ ಮಾಡಿ
  • ಮನಸ್ಸನ್ನು ಅಥವಾ ಚಂಚಲತೆಯನ್ನು ಹಟೋಟಿಯಲ್ಲಿಟ್ಟುಕೊಳ್ಳಿ
  • ಹಣ ಗಳಿಸಬೇಕು ಅನ್ನೋ ಭರದಲ್ಲಿ ತಪ್ಪು ದಾರಿಯನ್ನು ಹಿಡಿಯಬೇಡಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಆರೋಗ್ಯದ ದೃಷ್ಟಿಯಿಂದ ಸಮಸ್ಯೆಗಳನ್ನು ಕಂಡರೂ ಅದರಿಂದ ತೊಂದರೆಗಳಿಲ್ಲ
  • ಆರ್ಥಿಕವಾಗಿ ಅನುಕೂಲವಾಗುವ ದಿನ
  • ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯತೆಗಳನ್ನು ಪೂರೈಸುವ ದಿನ
  • ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ
  • ಪ್ರೇಮಿಗಳಿಗೆ ತುಂಬಾ ಉತ್ತಮವಾದ ದಿನ
  • ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿರುವ ದಿನ
  • ಸ್ನೇಹಿತರ ಭೇಟಿ, ಮೋಜು ಮಸ್ತಿಗೆ ಹಣವನ್ನು ಖರ್ಚು ಮಾಡುತ್ತೀರಿ
  • ಪ್ರಭಾವಿ ವ್ಯಕ್ತಿಗಳ ಭೇಟಿ, ಸಂಪರ್ಕ, ಪರಿಚಯ ಸಂತೋಷವನ್ನು ಕೊಡಲಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮುಂದಿನ ದಿನದಲ್ಲಿ ಬರುವ ಸವಾಲುಗಳ ಸೂಚನೆಯನ್ನು ಕೇಳುತ್ತೀರಿ
  • ಹತ್ತಿರದ ಸ್ನೇಹಿತರು, ಸಂಬಂಧಿಕರು ದ್ರೋಹವನ್ನು ಮಾಡಬಹುದು
  • ಆತುರವಾಗಿ ಯಾವ ನಿರ್ಧಾರವನ್ನು ಮಾಡಬೇಡಿ
  • ಅನಗತ್ಯವಾದ ವಿಷಯಗಳಿಗೆ ಜಗಳ ಆಗಬಹುದು
  • ಕುಟುಂಬದಲ್ಲಿ ಮಾತೆಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
  • ದಾಂಪತ್ಯದಲ್ಲಿ ವ್ಯಾವಹಾರಿಕವಾದ ವಿಚಾರಕ್ಕೆ ಕಲಹ ಆಗಬಹುದು
  • ಅಸಮಾಧಾನ ಮನೆಯಲ್ಲಿ ಕಾಡಬಹುದು
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ನೀವು ಆಲೋಚನೆ ಮಾಡಿರುವ ಕೆಲಸಗಳು ಪೂರ್ಣವಾಗಲಿದೆ
  • ಕೆಲಸವನ್ನು ಅಲ್ಪ ಎಂದು ಭಾವಿಸದೆ ಶ್ರದ್ಧೆಯಿಂದ ಮಾಡಿ
  • ಹೊಸ ಕೆಲಸವನ್ನು ಆರಂಭಿಸಲು ಉತ್ತಮ ದಿನ
  • ಕೆಲಸದ ನಿಮಿತ್ತವಾಗಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಂದರ್ಶನಕ್ಕಾಗಿ ಭಾಗಿಯಾಗುತ್ತೀರಿ
  • ಇಂದು ಯಶಸ್ಸು ನಿಮ್ಮದಾಗಲಿದೆ
  • ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಶಕ್ತಿ ಹೆಚ್ಚಾಗಲಿದೆ
  • ಪ್ರೇಮಿಗಳಿಗೆ ಅಪಾಯಕಾರಿಯಾದ ದಿನ
  • ಪಾರ್ವತಿ ಪರಮೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಮಾತೆಯರಿಗೆ ಆರೋಗ್ಯದ ವಿಚಾರಕ್ಕೆ ಆತಂಕ ಪಡುವ ದಿನ
  • ಅಲ್ಪ ಸ್ವಲ್ಪ ಕೂಡಿಟ್ಟ ಹಣ ಔಷಧಕ್ಕೆ ಖರ್ಚಾಗಲಿದೆ
  • ಹಣದ ಖರ್ಚು ಆರೋಗ್ಯದ ಮೇಲಿನ ಪ್ರಭಾವ ಹಿನ್ನಡೆಯನ್ನುಂಟು ಮಾಡಲಿದೆ
  • ಕಷ್ಟಪಟ್ಟು ಮಾಡಿದ ಕೆಲಸ, ಹಿಂದೆ ಮಾಡಿದ ಉದ್ಯೋಗದ ಫಲ ಸಿಗದೆ ನೋವನ್ನು ಅನುಭವಿಸುತ್ತೀರಿ
  • ಕುಟುಂಬದಲ್ಲಿ ನಂಬಿಕೆ ಕಡಿಮೆಯಾಗಬಹುದು
  • ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ ಅನ್ನೋ ಮನೋಭಾವ ಗಟ್ಟಿಯಾಗಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

publive-image

  • ಕುಟುಂಬದ ಎಲ್ಲಾ ಸದಸ್ಯರು ಸಂತೋಷವಾಗಿರುವ ದಿನ
  • ಆರ್ಥಿಕವಾದಂತಹ ಸ್ಥಿತಿಗತಿ ಬಂಧುಗಳ ವಿಶ್ವಾಸ ಸಮಾಧಾನವನ್ನು ನೀಡಲಿದೆ
  • ಅಂದುಕೊಂಡಂತಹ ಕೆಲಸಗಳು ಈಡೇರಲಿದೆ
  • ಧನಾತ್ಮಕವಾದ ಚಿಂತನೆಗಳು ನಿಮ್ಮ ಮನಸ್ಸಿಗೆ ಬರಬೇಕು
  • ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಇದೆ
  • ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
  • ಸಾಯಂಕಾಲದ ಹೊತ್ತಿಗೆ ನಿಮ್ಮ ಅದೃಷ್ಠ ವಿರುದ್ದವೇನೊ ಅಂತ ಅನುಭವವಾಗಲಿದೆ
  • ಕುಬೇರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ನಿರ್ದಿಷ್ಟವಾದ ಗುರಿಯನ್ನು ತಲುಪೋಕೆ ಪ್ರಯತ್ನಿಸುತ್ತೀರಿ
  • ಸಂಬಂಧಿಕರು, ಸ್ನೇಹಿತರು ಆತಂಕಕ್ಕೆ ಒಳಗಾಗಬಹುದು
  • ಇಡೀ ದಿನ ತಾಳ್ಮೆಯಿಂದ ಕಳೆಯಿರಿ
  • ದಾಂಪತ್ಯದಲ್ಲಿ ವೈಮನಸ್ಯ ಬಾರದ ಹಾಗೆ ನೋಡಿಕೊಳ್ಳಿ
  • ಹಣದ ವಿಚಾರದಲ್ಲೂ ಭಿನ್ನಾಭಿಪ್ರಾಯ ಇರಲಿದೆ
  • ಅಷ್ಟಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇರೆ ಅನುಕೂಲತೆಗಳ ಸೂಚನೆ ಸಿಗಲಿದೆ
  • ಸಂಪಾದನೆ ಮಾಡುವಾಗ ಆತ್ಮಸ್ಥೈರ್ಯ ಹೆಚ್ಚಾಗಲಿದೆ
  • ಖರ್ಚನ್ನು ನೋಡಿ ಧೈರ್ಯಗೆಡಬೇಕಾದ ಪರಿಸ್ಥಿತಿ ಏನು ಇಲ್ಲ
  • ವ್ಯವಹಾರದಲ್ಲಿ ಒಪ್ಪಂದ, ಮಾತುಕತೆಗಳಾಗುವ ಸಾಧ್ಯತೆ ಇದೆ
  • ವಸ್ತುಗಳನ್ನು ವಿತರಣೆ ಮಾಡುವವರಿಗೆ ಲಾಭ ಜಾಸ್ತಿ
  • ಮನೆಗೆ ಬಂದಿರುವ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುತ್ತೀರಿ
    ಅನುಭವಿಗಳ ಉಚಿತವಾದ ಸಲಹೆಗಳನ್ನು, ಮಾತುಗಳನ್ನು ಪಡೆಯಬೇಕಾದ ಅನಿವಾರ್ಯ ನಿಮ್ಮದಾಗಲಿದೆ
  • ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಕೂಡ ಸಮಾಧಾನ ಇರುವುದಿಲ್ಲ
  • ವಿದೇಶದಲ್ಲಿರುವವರಿಗೆ ಶುಭವಾರ್ತೆ ಸಿಗಲಿದೆ
  • ಆಸ್ತಿಯನ್ನು ಖರೀದಿ ಮಾಡಲು ಹಣ ಕೈ ಸೇರಲಿದೆ
  • ಮನೆಯಲ್ಲಿ ಎಲ್ಲವೂ ಶುಭ ಅನಿಸುವಾಗ ಮನಸ್ಸು ಹಿಂಜರಿಯುತ್ತದೆ
  • ದಿನ ಪೂರ್ತಿ ಅಧೈರ್ಯದಿಂದ ಕೆಲಸ ಮಾಡುತ್ತೀರಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ನಿರೀಕ್ಷಿತವಾದ ಕೆಲಸಕ್ಕೆ ವಿರುದ್ಧವಾದ ಮನಸ್ಸು ಇರಲಿದೆ
  • ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
  • ಉತ್ತಮವಾದ ಅಧಿಕಾರ ಇರುವ ಹಿರಿಯರು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾರೆ
  • ಈ ದಿನ ಪ್ರಯಾಣ, ಪ್ರವಾಸ ರದ್ದಾಗಬಹುದು
  • ಬೇರೆಯವರನ್ನು ಅವಲಂಬಸಿ ಮಾಡುವ ಕೆಲಸ ಅರ್ಧಕ್ಕೆ ನಿಲ್ಲಬಹುದು
  • ದೈನಂದಿನ ಶಿಸ್ತು ಅಸ್ತವ್ಯಸ್ತ ಆಗಲಿದೆ
  • ಮನಸ್ಸಿನಲ್ಲಿ ಗಾಬರಿ, ಹೆದರಿಕೆ, ಆತಂಕ, ಭಯ ಕಾಡಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಕೆಲವು ಕೆಲಸಗಳು ಬೇಸರವಾಗಿ ಮುಕ್ತಾಯವಾಗಲಿದೆ
  • ಮನಸ್ಸಿನ ತೊಳಲಾಟ ಧೈರ್ಯವನ್ನು ಕೆಡಿಸುತ್ತದೆ
  • ಸಹೋದ್ಯೋಗಿಗಳು,ಮಿತ್ರರು, ಬಂಧುಗಳು ನಿಮ್ಮ ವರ್ತನೆಯಲ್ಲಿ ತಪ್ಪನ್ನು ಎತ್ತಿ ತೋರಿಸುತ್ತಾರೆ
  • ಸಣ್ಣಪುಟ್ಟ ವಿಚಾರಕ್ಕೆ ಮಿತಿಮೀರಿ ಮಾತನಾಡಬಾರದು
  • ಹಲವಾರು ಕಾನೂನಿನ ತೊಡಕುಗಳು ನಿಮ್ಮ ಜೀವನದಲ್ಲಿ ಎದುರಾಗಬಹುದು
  • ಈ ದಿನ ಆರೋಗ್ಯದ ಬಗ್ಗೆ ಗಮನವಿರಲಿ
  • ಬೆನ್ನುನೋವಿಗೆ ಸಮಸ್ಯೆಯಾಗಬಹುದು, ವೈದ್ಯರ ಸಲಹೆ ಪಡೆಯಿರಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment