/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ
ಇರಲಿದೆ.
ಮೇಷ ರಾಶಿ
- ಮನೆಯಲ್ಲಿ ಸಂತೃಪ್ತಿಯ ವಾತಾವರಣ ಇರಲಿದೆ
- ಆತ್ಮವಿಶ್ವಾಸ ಹೆಚ್ಚಾಗುವ ದಿನ
- ಮುಂದಿನ ಯೋಚನೆಗಳ ಫಲ, ಯಶಸ್ಸಿನ ಗುಟ್ಟನ್ನು ತಿಳಿದುಕೊಳ್ಳುವುದು ಮುಖ್ಯ
- ಸ್ನೇಹಿತರ ಮನೆಯಲ್ಲಿ ಮಂಗಳ ಕಾರ್ಯಗಳಲ್ಲಿ ಭಾಗಿಗಳಾಗುತ್ತೀರಿ
- ಆಕಸ್ಮಿಕವಾಗಿ ವಾಹನಕ್ಕೆ ಹಾನಿಯುಂಟಾಗಬಹುದು
- ಗಣಪತಿಯ ಆರಾಧನೆ ಮಾಡಿ
ವೃಷಭ
- ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಕಾಣುತ್ತೀರಿ
- ಈ ದಿನ ಉತ್ತಮವಾಗಿದೆ
- ಇಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ
- ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿಗಳನ್ನು ಕಾಣಬಹುದು
- ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ
- ಅಸಂಬದ್ಧ ಚಟುವಟಿಕೆಗಳ ಬಗ್ಗೆ ಮನಸ್ಸು ಹೋದರು ಗುರಿ ಸಾಧನೆ ಮಾಡಿ
- ಮನಸ್ಸನ್ನು ಅಥವಾ ಚಂಚಲತೆಯನ್ನು ಹಟೋಟಿಯಲ್ಲಿಟ್ಟುಕೊಳ್ಳಿ
- ಹಣ ಗಳಿಸಬೇಕು ಅನ್ನೋ ಭರದಲ್ಲಿ ತಪ್ಪು ದಾರಿಯನ್ನು ಹಿಡಿಯಬೇಡಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಆರೋಗ್ಯದ ದೃಷ್ಟಿಯಿಂದ ಸಮಸ್ಯೆಗಳನ್ನು ಕಂಡರೂ ಅದರಿಂದ ತೊಂದರೆಗಳಿಲ್ಲ
- ಆರ್ಥಿಕವಾಗಿ ಅನುಕೂಲವಾಗುವ ದಿನ
- ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯತೆಗಳನ್ನು ಪೂರೈಸುವ ದಿನ
- ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ
- ಪ್ರೇಮಿಗಳಿಗೆ ತುಂಬಾ ಉತ್ತಮವಾದ ದಿನ
- ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿರುವ ದಿನ
- ಸ್ನೇಹಿತರ ಭೇಟಿ, ಮೋಜು ಮಸ್ತಿಗೆ ಹಣವನ್ನು ಖರ್ಚು ಮಾಡುತ್ತೀರಿ
- ಪ್ರಭಾವಿ ವ್ಯಕ್ತಿಗಳ ಭೇಟಿ, ಸಂಪರ್ಕ, ಪರಿಚಯ ಸಂತೋಷವನ್ನು ಕೊಡಲಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕಟಕ
- ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮುಂದಿನ ದಿನದಲ್ಲಿ ಬರುವ ಸವಾಲುಗಳ ಸೂಚನೆಯನ್ನು ಕೇಳುತ್ತೀರಿ
- ಹತ್ತಿರದ ಸ್ನೇಹಿತರು, ಸಂಬಂಧಿಕರು ದ್ರೋಹವನ್ನು ಮಾಡಬಹುದು
- ಆತುರವಾಗಿ ಯಾವ ನಿರ್ಧಾರವನ್ನು ಮಾಡಬೇಡಿ
- ಅನಗತ್ಯವಾದ ವಿಷಯಗಳಿಗೆ ಜಗಳ ಆಗಬಹುದು
- ಕುಟುಂಬದಲ್ಲಿ ಮಾತೆಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ದಾಂಪತ್ಯದಲ್ಲಿ ವ್ಯಾವಹಾರಿಕವಾದ ವಿಚಾರಕ್ಕೆ ಕಲಹ ಆಗಬಹುದು
- ಅಸಮಾಧಾನ ಮನೆಯಲ್ಲಿ ಕಾಡಬಹುದು
- ಈಶ್ವರನನ್ನು ಪ್ರಾರ್ಥನೆ ಮಾಡಿ
ಸಿಂಹ
- ನೀವು ಆಲೋಚನೆ ಮಾಡಿರುವ ಕೆಲಸಗಳು ಪೂರ್ಣವಾಗಲಿದೆ
- ಕೆಲಸವನ್ನು ಅಲ್ಪ ಎಂದು ಭಾವಿಸದೆ ಶ್ರದ್ಧೆಯಿಂದ ಮಾಡಿ
- ಹೊಸ ಕೆಲಸವನ್ನು ಆರಂಭಿಸಲು ಉತ್ತಮ ದಿನ
- ಕೆಲಸದ ನಿಮಿತ್ತವಾಗಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಂದರ್ಶನಕ್ಕಾಗಿ ಭಾಗಿಯಾಗುತ್ತೀರಿ
- ಇಂದು ಯಶಸ್ಸು ನಿಮ್ಮದಾಗಲಿದೆ
- ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಶಕ್ತಿ ಹೆಚ್ಚಾಗಲಿದೆ
- ಪ್ರೇಮಿಗಳಿಗೆ ಅಪಾಯಕಾರಿಯಾದ ದಿನ
- ಪಾರ್ವತಿ ಪರಮೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮಾತೆಯರಿಗೆ ಆರೋಗ್ಯದ ವಿಚಾರಕ್ಕೆ ಆತಂಕ ಪಡುವ ದಿನ
- ಅಲ್ಪ ಸ್ವಲ್ಪ ಕೂಡಿಟ್ಟ ಹಣ ಔಷಧಕ್ಕೆ ಖರ್ಚಾಗಲಿದೆ
- ಹಣದ ಖರ್ಚು ಆರೋಗ್ಯದ ಮೇಲಿನ ಪ್ರಭಾವ ಹಿನ್ನಡೆಯನ್ನುಂಟು ಮಾಡಲಿದೆ
- ಕಷ್ಟಪಟ್ಟು ಮಾಡಿದ ಕೆಲಸ, ಹಿಂದೆ ಮಾಡಿದ ಉದ್ಯೋಗದ ಫಲ ಸಿಗದೆ ನೋವನ್ನು ಅನುಭವಿಸುತ್ತೀರಿ
- ಕುಟುಂಬದಲ್ಲಿ ನಂಬಿಕೆ ಕಡಿಮೆಯಾಗಬಹುದು
- ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ ಅನ್ನೋ ಮನೋಭಾವ ಗಟ್ಟಿಯಾಗಲಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ತುಲಾ
- ಕುಟುಂಬದ ಎಲ್ಲಾ ಸದಸ್ಯರು ಸಂತೋಷವಾಗಿರುವ ದಿನ
- ಆರ್ಥಿಕವಾದಂತಹ ಸ್ಥಿತಿಗತಿ ಬಂಧುಗಳ ವಿಶ್ವಾಸ ಸಮಾಧಾನವನ್ನು ನೀಡಲಿದೆ
- ಅಂದುಕೊಂಡಂತಹ ಕೆಲಸಗಳು ಈಡೇರಲಿದೆ
- ಧನಾತ್ಮಕವಾದ ಚಿಂತನೆಗಳು ನಿಮ್ಮ ಮನಸ್ಸಿಗೆ ಬರಬೇಕು
- ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಇದೆ
- ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
- ಸಾಯಂಕಾಲದ ಹೊತ್ತಿಗೆ ನಿಮ್ಮ ಅದೃಷ್ಠ ವಿರುದ್ದವೇನೊ ಅಂತ ಅನುಭವವಾಗಲಿದೆ
- ಕುಬೇರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ನಿರ್ದಿಷ್ಟವಾದ ಗುರಿಯನ್ನು ತಲುಪೋಕೆ ಪ್ರಯತ್ನಿಸುತ್ತೀರಿ
- ಸಂಬಂಧಿಕರು, ಸ್ನೇಹಿತರು ಆತಂಕಕ್ಕೆ ಒಳಗಾಗಬಹುದು
- ಇಡೀ ದಿನ ತಾಳ್ಮೆಯಿಂದ ಕಳೆಯಿರಿ
- ದಾಂಪತ್ಯದಲ್ಲಿ ವೈಮನಸ್ಯ ಬಾರದ ಹಾಗೆ ನೋಡಿಕೊಳ್ಳಿ
- ಹಣದ ವಿಚಾರದಲ್ಲೂ ಭಿನ್ನಾಭಿಪ್ರಾಯ ಇರಲಿದೆ
- ಅಷ್ಟಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇರೆ ಅನುಕೂಲತೆಗಳ ಸೂಚನೆ ಸಿಗಲಿದೆ
- ಸಂಪಾದನೆ ಮಾಡುವಾಗ ಆತ್ಮಸ್ಥೈರ್ಯ ಹೆಚ್ಚಾಗಲಿದೆ
- ಖರ್ಚನ್ನು ನೋಡಿ ಧೈರ್ಯಗೆಡಬೇಕಾದ ಪರಿಸ್ಥಿತಿ ಏನು ಇಲ್ಲ
- ವ್ಯವಹಾರದಲ್ಲಿ ಒಪ್ಪಂದ, ಮಾತುಕತೆಗಳಾಗುವ ಸಾಧ್ಯತೆ ಇದೆ
- ವಸ್ತುಗಳನ್ನು ವಿತರಣೆ ಮಾಡುವವರಿಗೆ ಲಾಭ ಜಾಸ್ತಿ
- ಮನೆಗೆ ಬಂದಿರುವ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗಬಹುದು
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ
- ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುತ್ತೀರಿ
ಅನುಭವಿಗಳ ಉಚಿತವಾದ ಸಲಹೆಗಳನ್ನು, ಮಾತುಗಳನ್ನು ಪಡೆಯಬೇಕಾದ ಅನಿವಾರ್ಯ ನಿಮ್ಮದಾಗಲಿದೆ - ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಕೂಡ ಸಮಾಧಾನ ಇರುವುದಿಲ್ಲ
- ವಿದೇಶದಲ್ಲಿರುವವರಿಗೆ ಶುಭವಾರ್ತೆ ಸಿಗಲಿದೆ
- ಆಸ್ತಿಯನ್ನು ಖರೀದಿ ಮಾಡಲು ಹಣ ಕೈ ಸೇರಲಿದೆ
- ಮನೆಯಲ್ಲಿ ಎಲ್ಲವೂ ಶುಭ ಅನಿಸುವಾಗ ಮನಸ್ಸು ಹಿಂಜರಿಯುತ್ತದೆ
- ದಿನ ಪೂರ್ತಿ ಅಧೈರ್ಯದಿಂದ ಕೆಲಸ ಮಾಡುತ್ತೀರಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ನಿರೀಕ್ಷಿತವಾದ ಕೆಲಸಕ್ಕೆ ವಿರುದ್ಧವಾದ ಮನಸ್ಸು ಇರಲಿದೆ
- ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
- ಉತ್ತಮವಾದ ಅಧಿಕಾರ ಇರುವ ಹಿರಿಯರು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾರೆ
- ಈ ದಿನ ಪ್ರಯಾಣ, ಪ್ರವಾಸ ರದ್ದಾಗಬಹುದು
- ಬೇರೆಯವರನ್ನು ಅವಲಂಬಸಿ ಮಾಡುವ ಕೆಲಸ ಅರ್ಧಕ್ಕೆ ನಿಲ್ಲಬಹುದು
- ದೈನಂದಿನ ಶಿಸ್ತು ಅಸ್ತವ್ಯಸ್ತ ಆಗಲಿದೆ
- ಮನಸ್ಸಿನಲ್ಲಿ ಗಾಬರಿ, ಹೆದರಿಕೆ, ಆತಂಕ, ಭಯ ಕಾಡಬಹುದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಕೆಲವು ಕೆಲಸಗಳು ಬೇಸರವಾಗಿ ಮುಕ್ತಾಯವಾಗಲಿದೆ
- ಮನಸ್ಸಿನ ತೊಳಲಾಟ ಧೈರ್ಯವನ್ನು ಕೆಡಿಸುತ್ತದೆ
- ಸಹೋದ್ಯೋಗಿಗಳು,ಮಿತ್ರರು, ಬಂಧುಗಳು ನಿಮ್ಮ ವರ್ತನೆಯಲ್ಲಿ ತಪ್ಪನ್ನು ಎತ್ತಿ ತೋರಿಸುತ್ತಾರೆ
- ಸಣ್ಣಪುಟ್ಟ ವಿಚಾರಕ್ಕೆ ಮಿತಿಮೀರಿ ಮಾತನಾಡಬಾರದು
- ಹಲವಾರು ಕಾನೂನಿನ ತೊಡಕುಗಳು ನಿಮ್ಮ ಜೀವನದಲ್ಲಿ ಎದುರಾಗಬಹುದು
- ಈ ದಿನ ಆರೋಗ್ಯದ ಬಗ್ಗೆ ಗಮನವಿರಲಿ
- ಬೆನ್ನುನೋವಿಗೆ ಸಮಸ್ಯೆಯಾಗಬಹುದು, ವೈದ್ಯರ ಸಲಹೆ ಪಡೆಯಿರಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ