ಬಾಡಿಗೆ ಮನೆಯಲ್ಲಿ ಇರೋರಿಗೆ ಶುಭದಿನ, ಹಣದ ವಿಚಾರದಲ್ಲಿ ಮನಸ್ತಾಪ.. ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಹಾಸ್ಯ ಕಲಾವಿದರು, ಮಿಮಿಕ್ರಿ ಇತ್ಯಾದಿಗಳನ್ನ ಮಾಡುವವರಿಗೆ ಶುಭದಿನ
  • ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
  • ಇಂದು ತಾಳ್ಮೆಯಿಂದಿರಿ, ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಹಾಸ್ಯ ಕಲಾವಿದರು, ಮಿಮಿಕ್ರಿ ಇತ್ಯಾದಿಗಳನ್ನ ಮಾಡುವವರಿಗೆ ಶುಭದಿನ
  • ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
  • ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಾಣಬಹುದು ಎಚ್ಚರಿಕೆ ಇರಲಿ
    ನಿಮ್ಮ ಪ್ರೀತಿ ಪ್ರೇಮ ಇಂದು ದೂರವಾಗಬಹುದು
  • ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
  • ಪಂಚಮುಖಿ ಆಂಜನೇಯನ ಸ್ಮರಣೆ ಮಾಡಿ

ವೃಷಭ

publive-image

  • ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ
  • ಸ್ವಂತ ಮನೆ ಕಟ್ಟುವ, ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
  • ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
  • ಇಂದು ತುಂಬಾ ಸಂತೋಷದ ದಿನ
  • ಆಲಸ್ಯವೆಂಬುದು ಮನುಷ್ಯನ ಶರೀರದಲ್ಲಿಯೇ ಅಡಗಿರುವ ದೊಡ್ಡ ಶತ್ರು
  • ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥರಾಗಿರುತ್ತೀರಿ
  • ಭೂದೇವಿಯನ್ನ ಪ್ರಾರ್ಥನೆ ಮಾಡಿ

ಮಿಥುನ

publive-image

  • ನಿಮ್ಮ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಸಾಧ್ಯತೆ
  • ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ಬೇಡ
  • ಇಂದು ತಾಳ್ಮೆಯಿಂದಿರಿ, ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
  • ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಾಗುವ ಸಾಧ್ಯತೆ
  • ನಿಮ್ಮ ಉದ್ಯೋಗ ಬದಲಾಗಿ, ಬಡ್ತಿ ದೊರೆಯಬಹುದು, ಸಂಬಳ ಹೆಚ್ಚಾಗಬಹುದು
  • ನಿಮ್ಮ ಪಿತೃದೇವತೆಗಳನ್ನ ಪ್ರಾರ್ಥನೆ ಮಾಡಿ

ಕಟಕ

publive-image

  • ಇಂದು ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಸಾಧ್ಯತೆ, ಗಮನವಿರಲಿ
  • ನಿಮ್ಮ ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ಹಂಬಲಿಸುತ್ತೀರಿ
  • ಯಾವುದೇ ಆರೈಕೆ ಮಾಡಿಕೊಳ್ಳದೆ ಸರಿಯಾದ ವೈದ್ಯರ ಸಲಹೆ ಪಡೆಯಿರಿ
  • ಇಂದು ನಿಮ್ಮ ಮಾತು ಮೃದುವಾಗಿರಲಿ
  • ಆಲಸ್ಯವೆಂಬುದು ಮನುಷ್ಯರಿಗೆ ಶರೀರದಲ್ಲಿಯೇ ಅಡಗಿರುವ ದೊಡ್ಡ ಶತ್ರು
  • ವೇಣುಗೋಪಾಲನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಬಹುದು
  • ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತದೆ
  • ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
  • ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
  • ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
  • ಯಾವುದೋ ಕೀಟ ಕಚ್ಚಿ ಅಲರ್ಜಿ ನಿಮ್ಮನ್ನ ಕಾಡಬಹುದು, ಜಾಗ್ರತೆ ಇರಲಿ
  • ಭಗವಂತನ ದಶಾವತಾರ ಸ್ಮರಣೆ ಮಾಡಿ

ಕನ್ಯಾ

publive-image

  • ಇಂದು ಯಾವುದೇ ವಿಚಾರವನ್ನು ಹೆಚ್ಚಾಗಿ ಚರ್ಚೆ ಮಾಡದಿದ್ದರೆ ಉತ್ತಮ
  • ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
  • ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ, ಸ್ಥಾನಬಲ ದೊರೆಯುತ್ತದೆ
  • ಆದರೆ ಯಾವ ಕೆಲಸವೂ ಆಗಿರುವುದಿಲ್ಲ ಎಚ್ಚರಿಕೆವಹಿಸಿ
  • ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
  • ಮೃತ್ಯುಂಜಯನನ್ನು ಆರಾಧಿಸಿ

ತುಲಾ

publive-image

  • ವೃತ್ತಿಯಲ್ಲಿ, ನೌಕರಿಯಲ್ಲಿ ನಿಮ್ಮನ್ನು ದ್ವೇಷಿಸುವವರು ಹೆಚ್ಚು
  • ಜನರಿಗೆ ವಿರುದ್ಧವಾದ ಕೆಲಸ ಬೇಡ
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಅಧಿಕಾರ, ಸ್ಥಾನದ ದುರುಪಯೋಗ ಬೇಡ
  • ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ಮಾಡುತ್ತೀರಿ
  • ಹಣದ ತೊಂದರೆಯಿಲ್ಲ - ಶುಭವಿದೆ
  • ದತ್ತಾತ್ರೇಯರ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ವಿಶೇಷವಾಗಿ ದೇವರ ದರ್ಶಕ್ಕೆ ದೇವಾಲಯಕ್ಕೆ ಹೋಗುವ ಸಾಧ್ಯತೆ
  • ಇಂದು ನಿಮ್ಮ ಹಣಕಾಸಿನ ವಿಚಾರ ಬಗ್ಗೆ ಹೆಚ್ಚು ಚರ್ಚೆ ಸಾಧ್ಯತೆ
  • ತಾವು ಪರಿಶ್ರಮದಿಂದ ಕಲೆಹಾಕಿದ ವಿಷಯಕ್ಕೆ ಮಾನ್ಯತೆ, ಗೌರವ ದೊರೆಯುವ ದಿನ
  • ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ತೊಂದರೆಯಾಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ

ಧನಸ್ಸು 

publive-image

  • ಇಂದು ಸರಿಯಾದ ಸಾತ್ವಿಕವಾದ ಆಹಾರವನ್ನು ಸೇವಿಸಿ
  • ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ
  • ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಬರಬಹುದು
  • ನಿಮ್ಮ ಬೇಜವಾಬ್ದಾರಿಯಿಂದ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ
  • ಮೇಧಾ ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ

ಮಕರ

publive-image

  • ವಿದ್ಯಾರ್ಥಿಗಳಿಗೆ ತುಂಬಾ ಆತಂಕ ಉಂಟಾಗುವ ದಿನ
  • ಇಂದು ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
  • ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆವಹಿಸಿ
  • ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
  • ತ್ವರಿತ ರುದ್ರನನ್ನ ಆರಾಧಿಸಿ

ಕುಂಭ

publive-image

  • ವಿದೇಶಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ನೌಕರಿಯಲ್ಲಿ ಅಸ್ಥಿರತೆ ಕಾಣಬಹುದು
  • ಇಂದಿನ ನಿಮ್ಮ ದಿನಚರಿ ಶಿಸ್ತುಬಧ್ಧವಾಗಿ ಆರಂಭವಾಗುತ್ತದೆ
  • ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
  • ಸಂಜೆ ವೇಳೆಗೆ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
  • ಕುಂಭರಾಶಿಯ ಅಧಿಪತಿ ಶನಿಯನ್ನ ಪ್ರಾರ್ಥನೆ ಮಾಡಿ

ಮೀನ 

publive-image

  • ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
  • ಜೀವನಕ್ಕಿಂತ ಜೀವಮುಖ್ಯ ಎಂದು ತಿಳಿದು ಕೆಲಸ ಮಾಡಿ
  • ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
  • ನಿಮ್ಮ ಮನಸ್ಸಿನಲ್ಲಿ ಹತ್ತು ಹಲವುಆಲೋಚನೆಗಳು ಬರುವ ಸಾಧ್ಯತೆ
  • ಶ್ರೀಸೂಕ್ತ ಹೋಮ ಮಾಡಿಸಿ ಒಳ್ಳೆದಾಗುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment