/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.30 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
- ಕಾನೂನು ವಿಷಯಗಳು ಜಟಿಲವಾಗುತ್ತದೆ
- ಬಂಧುಗಳ ಮಾತಿನಿಂದ ಬೇಸರ ಆಗಬಹುದು
- ಮಡದಿ, ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ
- ಅಪರಿಚಿತರನ್ನು ನಂಬಿದರೆ ದ್ರೋಹ ಆಗಬಹುದು
- ಹಣ ಕಳೆದುಕೊಳ್ಳುವ, ಕಳ್ಳತನದ ಭಯ ಉಂಟಾಗಬಹುದು
- ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ
ವೃಷಭ
- ವೈವಾಹಿಕ, ದಾಂಪತ್ಯದಲ್ಲಿ ಗೊಂದಲ ಉಂಟಾಗಬಹುದು
- ಬೇರೆಯವರ ಬಗ್ಗೆ ವಿಚಾರ ಮಾಡದೇ ಯಾರೊಂದಿಗೂ ಸ್ನೇಹ ಬೇಡ
- ವಿದೇಶ ಪ್ರವಾಸದಲ್ಲಿ ತೊಂದರೆಯಾಗಬಹುದು
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಇಂದು ಕಿರಿಯರನ್ನು ಗೌರವಿಸಿ
- ಬಿಳಿ ಬಟ್ಟೆ ಧರಿಸಿ ಸಂತೋಷವಿರುತ್ತದೆ
- ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ
ಮಿಥುನ
- ಈ ದಿನ ಅಂದುಕೊಂಡ ಕಾರ್ಯವನ್ನು ಸಾಧಿಸುತ್ತೀರಿ
- ಆತ್ಮೀಯರಿಂದ ಬೇಸರ ಅಗಬಹುದು
- ಹಳೆಯ ಸಮಸ್ಯೆ ಬಗೆಹರಿಯುವ ದಿನ
- ಈ ದಿನ ನಿಮಗೆ ಕುಟುಂಬದವರ ಬೆಂಬಲವಿರುತ್ತದೆ
- ಉದ್ಯೋಗ ಬದಲಾವಣೆಯ ಅವಕಾಶವಿದೆ
- ಸ್ನೇಹಿತರ ಆಕಸ್ಮಿಕ ಭೇಟಿಯಾಗಬಹುದು
- ಆಭರಣದ ಬಗ್ಗೆ ಎಚ್ಚರವಿರಲಿ
- ಕಾರ್ತವೀಱರ್ಜುನ ಸ್ಮರಣೆ ಮಾಡಿ
ಕಟಕ
- ಮೇಲಾಧಿಕಾರಿಗಳಿಂದ ಹೊಗಳಿಕೆ ಸಿಗಲಿದೆ
- ಹೊಟ್ಟೆಯ ಉರಿ, ನೋವು ಕಾಣಬಹುದು
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
- ತುಂಬಾ ಸೋಮಾರಿತನ ಕಾಡಬಹುದು
- ಮಾನಸಿಕ ಭಯ ಉಂಟಾಗಬಹುದು
- ಇಂದಿನ ಕಾರ್ಯ ಇಂದೇ ಮಾಡಿ
- ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಸಂತೋಷದಿಂದ ಈ ದಿನ ಕಳೆಯುತ್ತೀರಿ
- ಸಮಯದ ದುರುಪಯೋಗ ಆಗಬಹುದು
- ಹಿರಿಯರ, ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ
- ವ್ಯಾಪಾರ ನಿಮಿತ್ತ ಪ್ರವಾಸ ಕೈಗೊಳ್ಳುತ್ತೀರಿ
- ಅಪೂರ್ಣ ಕಾರ್ಯಗಳ ಬಗ್ಗೆ ಚಿಂತನೆ ಶುಭ
- ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲವಾಗಬಹುದು
- ಬೇರೆಯವರ ಸಮಯವನ್ನು ಹಾಳು ಮಾಡಬೇಡಿ
- ಮಾರುತಿಯನ್ನು ಉಪಾಸನೆ ಮಾಡಿ
ಕನ್ಯಾ
- ಅಗತ್ಯವಾಗಿ ಕೆಲವರ ಕೆಲಸಗಳನ್ನು ಮಾಡಬೇಕಾಗುತ್ತದೆ
- ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ
- ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
- ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕು
- ಬೆನ್ನು ನೋವಿನಿಂದ ಸಮಸ್ಯೆಯಾಗಬಹುದು
- ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ದಿನ
- ಅಜೀರ್ಣ ಸಮಸ್ಯೆಯಿಂದ ತೊಂದರೆ ಆಗಲಿದೆ
- ಶಿವಾರಾಧನೆ ಮಾಡಿ
ತುಲಾ
- ಕಮಿಷನ್ ಏಜೆಂಟ್ಗಳಿಗೆ ಲಾಭವಿದೆ
- ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿ ಸಂತೋಷ ಆಗಲಿದೆ
- ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗಬಹುದು
- ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
- ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಇರಲಿದೆ
- ನಾಯಕತ್ವದ ಗುಣ ಗೌರವವನ್ನು ಹೆಚ್ಚಿಸುತ್ತದೆ
- ಬಿಳಿ ಎಕ್ಕದ ಹೂ ಸಮರ್ಪಿಸಿ ಗಣಪತಿಯ ಪ್ರಾರ್ಥನೆ ಮಾಡಿ
ವೃಶ್ಚಿಕ
- ಕಲಾ ರಸಿಕರಿಗೆ ಉತ್ತಮ ಸಮಯ
- ತಂದೆಯ ಸಲಹೆ ಪಡೆಯಿರಿ ಒಳಿತಾಗಲಿದೆ
- ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ
- ಮನೆಯ ಅಲಂಕಾರ, ನವೀಕರಣಕ್ಕೆ ಖರ್ಚು ಆಗಲಿದೆ
- ಮಾನಸಿಕವಾಗಿ ಒತ್ತಡದ ದಿನ
- ಚಂಡಿಕೇಶ್ವರನ ಪ್ರಾರ್ಥನೆ ಮಾಡಿ
ಧನಸ್ಸು
- ನವದಂಪತಿಗಳಿಗೆ ಪ್ರವಾಸದ ಯೋಗ
- ಸಣ್ಣ ಪುಟ್ಟ ವಿಚಾರಗಳಲ್ಲಿ ಗೊಂದಲವಾಗಬಹುದು
- ವೃತ್ತಿಯಲ್ಲಿ ಬಡ್ತಿ ಸಿಗಲಿದೆ
- ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅದಾಯ ಸಿಗಲಿದೆ
- ಕುಟುಂಬದಲ್ಲಿ ಗೌರವ ಹೆಚ್ಚು
- ವರುಣ ದೇವರನ್ನು ಪ್ರಾರ್ಥಿಸಿ
ಮಕರ
- ಮಕ್ಕಳ ಪ್ರಗತಿಯ ಬಗ್ಗೆ ಚಿಂತಿಸಿ
- ನೀರಿನ ಭಯ, ಜಲಕಂಟಕ ಎದುರಾಗಬಹುದು ಎಚ್ಚರವಿರಲಿ
- ಹೆಚ್ಚು ಹಣದ ವ್ಯಯವಾಗಬಹುದು
- ಆದಾಯ ಗಮನಿಸದೆ ಖರ್ಚಿಗೆ ಮುಂದಾಗಬಾರದು
- ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ
- ಕೆಟ್ಟ ಕನಸುಗಳು ನಿಮ್ಮನ್ನು ಕಾಡಬಹುದು
- ಕುಬೇರ ಲಕ್ಷ್ಮಿಯನ್ನು ಆರಾಧಿಸಿ
ಕುಂಭ
- ನಿಮ್ಮ ಶಿಸ್ತು, ಸ್ವಭಾವ ಬೇರೆಯವರಿಗೆ ಮಾದರಿ
- ವಿವಾಹಿತರು ಜಗಳ ಮಾಡಿಕೊಳ್ಳಬಾರದು
- ಕುಟುಂಬದ ವಾತಾವರಣ ಶಾಂತವಾಗಿರುತ್ತದೆ
- ಹಿರಿಯರ ಬೆಂಬಲ ದೊರಕುತ್ತದೆ
- ಪ್ರೇಮಿಗಳಿಗೆ ಅವಮಾನ ಆಗಬಹುದು
- ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯದಿಂದ ಇರಬೇಡಿ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ಮೀನ
- ಇಂದು ಧನಾತ್ಮಕವಾಗಿ ಚಿಂತಿಸಿ
- ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರದಿರಿ
- ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ
- ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ
- ಅಧಿಕಾರಿಗಳೊಂದಿಗೆ ಮಾತುಕತೆ ಚೆನ್ನಾಗಿರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ