ನೀರಿನ ಭಯ, ಜಲಕಂಟಕ ಇದ್ದವರು ಎಚ್ಚರದಿಂದಿರಿ, ಈ ರಾಶಿಗೆ ಶುಭವಿದೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕಳೆದುಕೊಳ್ಳುವ, ಕಳ್ಳತನದ ಭಯ ಉಂಟಾಗಬಹುದು
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
  • ಹಿರಿಯರ, ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.30 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
  • ಕಾನೂನು ವಿಷಯಗಳು ಜಟಿಲವಾಗುತ್ತದೆ
  • ಬಂಧುಗಳ ಮಾತಿನಿಂದ ಬೇಸರ ಆಗಬಹುದು
  • ಮಡದಿ, ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ
  • ಅಪರಿಚಿತರನ್ನು ನಂಬಿದರೆ ದ್ರೋಹ ಆಗಬಹುದು
  • ಹಣ ಕಳೆದುಕೊಳ್ಳುವ, ಕಳ್ಳತನದ ಭಯ ಉಂಟಾಗಬಹುದು
  • ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ

ವೃಷಭ

publive-image

  • ವೈವಾಹಿಕ, ದಾಂಪತ್ಯದಲ್ಲಿ ಗೊಂದಲ ಉಂಟಾಗಬಹುದು
  • ಬೇರೆಯವರ ಬಗ್ಗೆ ವಿಚಾರ ಮಾಡದೇ ಯಾರೊಂದಿಗೂ ಸ್ನೇಹ ಬೇಡ
  • ವಿದೇಶ ಪ್ರವಾಸದಲ್ಲಿ ತೊಂದರೆಯಾಗಬಹುದು
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಇಂದು ಕಿರಿಯರನ್ನು ಗೌರವಿಸಿ
  • ಬಿಳಿ ಬಟ್ಟೆ ಧರಿಸಿ ಸಂತೋಷವಿರುತ್ತದೆ
  • ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ

ಮಿಥುನ

publive-image

  • ಈ ದಿನ ಅಂದುಕೊಂಡ ಕಾರ್ಯವನ್ನು ಸಾಧಿಸುತ್ತೀರಿ
  • ಆತ್ಮೀಯರಿಂದ ಬೇಸರ ಅಗಬಹುದು
  • ಹಳೆಯ ಸಮಸ್ಯೆ ಬಗೆಹರಿಯುವ ದಿನ
  • ಈ ದಿನ ನಿಮಗೆ ಕುಟುಂಬದವರ ಬೆಂಬಲವಿರುತ್ತದೆ
  • ಉದ್ಯೋಗ ಬದಲಾವಣೆಯ ಅವಕಾಶವಿದೆ
  • ಸ್ನೇಹಿತರ ಆಕಸ್ಮಿಕ ಭೇಟಿಯಾಗಬಹುದು
  • ಆಭರಣದ ಬಗ್ಗೆ ಎಚ್ಚರವಿರಲಿ
  • ಕಾರ್ತವೀಱರ್ಜುನ ಸ್ಮರಣೆ ಮಾಡಿ

ಕಟಕ

publive-image

  • ಮೇಲಾಧಿಕಾರಿಗಳಿಂದ ಹೊಗಳಿಕೆ ಸಿಗಲಿದೆ
  • ಹೊಟ್ಟೆಯ ಉರಿ, ನೋವು ಕಾಣಬಹುದು
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
  • ತುಂಬಾ ಸೋಮಾರಿತನ ಕಾಡಬಹುದು
  • ಮಾನಸಿಕ ಭಯ ಉಂಟಾಗಬಹುದು
  • ಇಂದಿನ ಕಾರ್ಯ ಇಂದೇ ಮಾಡಿ
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಸಂತೋಷದಿಂದ ಈ ದಿನ ಕಳೆಯುತ್ತೀರಿ
  • ಸಮಯದ ದುರುಪಯೋಗ ಆಗಬಹುದು
  • ಹಿರಿಯರ, ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ
  • ವ್ಯಾಪಾರ ನಿಮಿತ್ತ ಪ್ರವಾಸ ಕೈಗೊಳ್ಳುತ್ತೀರಿ
  • ಅಪೂರ್ಣ ಕಾರ್ಯಗಳ ಬಗ್ಗೆ ಚಿಂತನೆ ಶುಭ
  • ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲವಾಗಬಹುದು
  • ಬೇರೆಯವರ ಸಮಯವನ್ನು ಹಾಳು ಮಾಡಬೇಡಿ
  • ಮಾರುತಿಯನ್ನು ಉಪಾಸನೆ ಮಾಡಿ

ಕನ್ಯಾ

publive-image

  • ಅಗತ್ಯವಾಗಿ ಕೆಲವರ ಕೆಲಸಗಳನ್ನು ಮಾಡಬೇಕಾಗುತ್ತದೆ
  • ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ
  • ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
  • ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕು
  • ಬೆನ್ನು ನೋವಿನಿಂದ ಸಮಸ್ಯೆಯಾಗಬಹುದು
  • ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ದಿನ
  • ಅಜೀರ್ಣ ಸಮಸ್ಯೆಯಿಂದ ತೊಂದರೆ ಆಗಲಿದೆ
  • ಶಿವಾರಾಧನೆ ಮಾಡಿ

ತುಲಾ

publive-image

  • ಕಮಿಷನ್ ಏಜೆಂಟ್​ಗಳಿಗೆ ಲಾಭವಿದೆ
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿ ಸಂತೋಷ ಆಗಲಿದೆ
  • ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗಬಹುದು
  • ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ
  • ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಇರಲಿದೆ
  • ನಾಯಕತ್ವದ ಗುಣ ಗೌರವವನ್ನು ಹೆಚ್ಚಿಸುತ್ತದೆ
  • ಬಿಳಿ ಎಕ್ಕದ ಹೂ ಸಮರ್ಪಿಸಿ ಗಣಪತಿಯ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಕಲಾ ರಸಿಕರಿಗೆ ಉತ್ತಮ ಸಮಯ
  • ತಂದೆಯ ಸಲಹೆ ಪಡೆಯಿರಿ ಒಳಿತಾಗಲಿದೆ
  • ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ
  • ಮನೆಯ ಅಲಂಕಾರ, ನವೀಕರಣಕ್ಕೆ ಖರ್ಚು ಆಗಲಿದೆ
  • ಮಾನಸಿಕವಾಗಿ ಒತ್ತಡದ ದಿನ
  • ಚಂಡಿಕೇಶ್ವರನ ಪ್ರಾರ್ಥನೆ ಮಾಡಿ

ಧನಸ್ಸು 

publive-image

  • ನವದಂಪತಿಗಳಿಗೆ ಪ್ರವಾಸದ ಯೋಗ
  • ಸಣ್ಣ ಪುಟ್ಟ ವಿಚಾರಗಳಲ್ಲಿ ಗೊಂದಲವಾಗಬಹುದು
  • ವೃತ್ತಿಯಲ್ಲಿ ಬಡ್ತಿ ಸಿಗಲಿದೆ
  • ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅದಾಯ ಸಿಗಲಿದೆ
  • ಕುಟುಂಬದಲ್ಲಿ ಗೌರವ ಹೆಚ್ಚು
  • ವರುಣ ದೇವರನ್ನು ಪ್ರಾರ್ಥಿಸಿ

ಮಕರ

publive-image

  • ಮಕ್ಕಳ ಪ್ರಗತಿಯ ಬಗ್ಗೆ ಚಿಂತಿಸಿ
  • ನೀರಿನ ಭಯ, ಜಲಕಂಟಕ ಎದುರಾಗಬಹುದು ಎಚ್ಚರವಿರಲಿ
  • ಹೆಚ್ಚು ಹಣದ ವ್ಯಯವಾಗಬಹುದು
  • ಆದಾಯ ಗಮನಿಸದೆ ಖರ್ಚಿಗೆ ಮುಂದಾಗಬಾರದು
  • ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ
  • ಕೆಟ್ಟ ಕನಸುಗಳು ನಿಮ್ಮನ್ನು ಕಾಡಬಹುದು
  • ಕುಬೇರ ಲಕ್ಷ್ಮಿಯನ್ನು ಆರಾಧಿಸಿ

ಕುಂಭ

publive-image

  • ನಿಮ್ಮ ಶಿಸ್ತು, ಸ್ವಭಾವ ಬೇರೆಯವರಿಗೆ ಮಾದರಿ
  • ವಿವಾಹಿತರು ಜಗಳ ಮಾಡಿಕೊಳ್ಳಬಾರದು
  • ಕುಟುಂಬದ ವಾತಾವರಣ ಶಾಂತವಾಗಿರುತ್ತದೆ
  • ಹಿರಿಯರ ಬೆಂಬಲ ದೊರಕುತ್ತದೆ
  • ಪ್ರೇಮಿಗಳಿಗೆ ಅವಮಾನ ಆಗಬಹುದು
  • ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯದಿಂದ ಇರಬೇಡಿ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ

ಮೀನ 

publive-image

  • ಇಂದು ಧನಾತ್ಮಕವಾಗಿ ಚಿಂತಿಸಿ
  • ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರದಿರಿ
  • ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ
  • ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ
  • ಅಧಿಕಾರಿಗಳೊಂದಿಗೆ ಮಾತುಕತೆ ಚೆನ್ನಾಗಿರುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment