/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ತರಕಾರಿ ವ್ಯಾಪಾರಿಗಳಿಗೆ ಹಾಗೂ ಪ್ರಾಣಿಗಳನ್ನ ಮಾರುವ ದಲ್ಲಾಳಿಗಳಿಗೆ ಆತಂಕ ಎದುರಾಗುವ ಸಾಧ್ಯತೆ ಇದೆ
- ಇಂದು ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
- ದಂಪತಿಗಳು ಹಾಗೂ ಮಕ್ಕಳ ಮಧ್ಯೆ ಬೇಸರದ ವಾತಾವರಣ ಉಂಟಾಗಬಹುದು
- ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ದಿನವಾಗಿದೆ
- ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
- ಆರೋಗ್ಯದಲ್ಲಿ ಸಮಸ್ಯೆಗಳಾಗಬಹುದು ಜಾಗ್ರತೆ ವಹಿಸಿ
- ಗುರು ಪ್ರಾರ್ಥನೆ ಮಾಡಿ
ವೃಷಭ
- ಧಾರ್ಮಿಕ,ಆದ್ಯಾತ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸು ಹರದಾಡುತ್ತೆ ಗಮನ ಹರಿಸಿ
- ಈ ದಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕು
- ಪ್ರಯಾಣದ ವಿಚಾರವಾಗಿ ಬೇಸರವಾಗುತ್ತದೆ
- ನಿರ್ಧಾರಗಳನ್ನು ಬದಲಿಸುವುದರಿಂದ ನೌಕರಿಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ
- ಅಧಿಕಾರ ಪ್ರಾಪ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು
- ವಿವಾಹ ವಿಚಾರಕ್ಕೆ ಚಾಲನೆ ಸಿಗುವಂತಹ ದಿನ
- ಮೂಲವ್ಯಾಧಿ ಇರುವವರಿಗೆ ಶಸ್ತ್ರ ಚಿಕಿತ್ಸೆ ಆಗುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿ
- ವಿಷ್ಣುತ್ರಯೀ ಮಂತ್ರವನ್ನು ಜಪಿಸಿ
ಮಿಥುನ
- ಕುಟುಂಬದಲ್ಲಿ ಕಿರಿಕಿರಿ ಆಗುವ ದಿನ
- ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
- ಇಂದು ಅನಿರೀಕ್ಷಿತ ಧನಾಗಮ ಆಗಲಿದೆ
- ನಿಮ್ಮ ವಿರೋಧಿಗಳೇ ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಬೆಂಬಲ ನೀಡುತ್ತಾರೆ
- ಇಂದು ಅಧಿಕವಾಗಿ ಆರ್ಥಿಕ ನಷ್ಟವಾಗಬಹುದು
- ಪಾರಂಪರಿಕ ವೃತ್ತಿಯಲ್ಲಿ ಗೌರವ ಸಿಗುವ ದಿನವಾಗಿದೆ
- ಮಾನಸಿಕ ನೆಮ್ಮದಿ ಇಲ್ಲದೆ ಇರುವ ದಿನ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನಿಮ್ಮ ಸಮಸ್ಯೆಗಳಿಗೆ ಸರಳವಾದ ಪರಿಹಾರ ಕಂಡುಕೊಳ್ಳುತ್ತೀರಿ
- ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ
- ಇಂದು ನಿಂದನೆಗೆ ಒಳಗಾಗುವ ಸಾಧ್ಯತೆಯಿದೆ ಎಚ್ಚರಿಕೆ
- ಸ್ತ್ರೀಯರಿಗೆ ಸಾಂಸಾರಿಕ ಜೀವನದಲ್ಲಿ ತೃಪ್ತಿ ಸಿಗುವ ದಿನ
- ನಿಮ್ಮ ಮಕ್ಕಳು ನಿಮ್ಮನ್ನು ಹೆಚ್ಚು ಪ್ರೀತಿಸುವ ದಿನವಾಗಿದೆ
- ಇಂದು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ
- ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ನಿಮ್ಮದಾಗತ್ತದೆ
- ಆಹಾರ ಸೇವಿಸಬೇಕಾದರೆ ಜಾಗರೂಕರಾಗಿರಿ
- ರಾಮರಕ್ಷಾ ಸ್ತೋತ್ರ ಪಠಿಸಿ
ಸಿಂಹ
- ಯಾವುದೇ ಆತುರವಾದ ನಿರ್ಧಾರ ಬೇಡ
- ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
- ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುವ ದಿನ
- ನೆರೆಹೊರೆಯವರೊಂದಿಗೆ ವಿಶ್ವಾಸದಿಂದಿರಿ
- ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳಿಂದ ಬೇಸರವಾಗುವ ಸಂಭವ
- ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ
- ಆರೋಗ್ಯದ ಕಡೆ ಗಮನಕೊಡಿ
- ಜೀವನದ ಸಾರ್ಥಕತೆಯ ಬಗ್ಗೆ ಹುಡುಕಾಟ ನಡೆಯಬಹುದು
- ಶಂಕರನಾರಾಯಣನನ್ನು ಪ್ರಾರ್ಥಿಸಿ
ಕನ್ಯಾ
- ಈ ದಿವಸ ಸಂಗಾತಿಯೊಂದಿಗೆ ವಿರಸ
- ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ
- ಕುಟುಂಬದಲ್ಲಿ ವಾದ-ವಿವಾದಗಳಿಂದ ರಾಜಿಯಾಗಬಹುದು
- ಮನಸ್ಸಿನ ಬೇಸರ ನಿವಾರಣೆಗೆ ಹೊಸ ಜಗತ್ತಿನ ಅರಿವಿನ ಅಗತ್ಯವಿರುತ್ತದೆ
- ಹೊಸ ಸಂಬಂಧ, ಹೊಸ ಪರಿಚಯ, ಗೆಳತನ ಎಲ್ಲವೂ ಲಭ್ಯವಾಗುವ ದಿನ
- ಕಟ್ಟಡ ಸಾಮಾಗ್ರಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ
- ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಮನಸ್ತಾಪ
- ನಯವಾಗಿ, ಸಮಾಧಾನದಿಂದ ಅವರೊಂದಿಗೆ ವ್ಯವಹರಿಸಿ
- ದಧಿವಾಮನ ಮಂತ್ರ ಜಪಿಸಿ
ತುಲಾ
- ನಿಮ್ಮ ಯೋಜನೆಗಳಿಗೆ ವಿಶೇಷ ಬೆಂಬಲ ಸಿಗುವ ದಿನ
- ವಸ್ತ್ರ ವ್ಯಾಪಾರಿಗಳಿಗೆ ಲಾಭದ ದಿನ
- ನಿರಾಸೆಯಿಂದ ಹೊರಬಂದು ನಿಮ್ಮ ಕೆಲಸ ಕಾರ್ಯದಲ್ಲಿ ತೊಡಗಿರಿ
- ಯಾವುದು ಸರಿ ಅನಿಸುತ್ತೆ ಅದನ್ನ ಮಾತ್ರ ಮಾಡಿ
- ದಾಂಪತ್ಯದಲ್ಲಿ ವಿರಸ ಮೂಡಬಹುದು
- ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
- ಸಂಪನ್ಮೂಲಗಳನ್ನ ಕ್ರೋಢೀಕರಿಸಲು ಹಲವಾರು ರೀತಿ ಪ್ರಯತ್ನಿಸುತ್ತೀರಿ
- ಏಕಾಕ್ಷರ ನರಸಿಂಹ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ಬೇರೆಯವರಿಂದ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿರುತ್ತದೆ
- ಯಾವುದೇ ಮುಲಾಜಿಗೆ ಒಳಗಾಗದೆ ವ್ಯವಹಾರಸ್ಥರಾಗಿದ್ದರೆ ಒಳಿತು
- ದೀರ್ಘಕಾಲದ ಖಾಯಿಲೆಯಿಂದ ಗುಣಮುಖರಾಗುತ್ತೀರಿ
- ಆಧಾತ್ಮಿಕ ಚಿಂತನೆ ನಿಮ್ಮ ಮನಸಲ್ಲಿ ನಡೆಯುತ್ತದೆ
- ಇಂದು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುತ್ತೀರಿ
- ನಿಮ್ಮ ಬಗ್ಗೆ ಇರೋ ಅಭಿಪ್ರಾಯ ಮನಸ್ಸಿಗೆ ಹಿತವೆನಿಸುತ್ತದೆ
- ಎರಡನೇ ಮದುವೆಗೆ ಇಂದು ಶುಭಫಲವಿದೆ
- ಕೂರ್ಮ ಮಂತ್ರ ಶ್ರವಣ ಮಾಡಿ
ಧನಸ್ಸು
- ಸತ್ಯಶೋಧನೆಯಿಂದ ಉಂಟಾಗುವ ಆಂತರಿಕ ಗೊಂದಲಗಳು ಇಂದು ನಿವಾರಣೆಯಾಗುತ್ತವೆ
- ಕ್ರೀಡಾಪಟುಗಳಿಗೆ ಉತ್ತಮ ಲಾಭ, ಗೌರವ-ಪುರಸ್ಕಾರಗಳು ಸಿಗುವ ದಿನವಾಗಿದೆ
- ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ
- ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
- ವಾತ್ಸಲ್ಯಪೂರ್ಣ ಮಾತಿನಿಂದಾಗಿ ಕುಟುಂಬದಲ್ಲಿ ಹೆಚ್ಚಿನ ವಿಶ್ವಾಸಗಳಿಸ್ತೀರಿ
- ಸಾಲಕ್ಕಾಗಿ ಪ್ರಿಯರು,ಸಂಬಂಧಿಕರು ಮನೆ ಹತ್ತಿರ ಬರುವ ಸಾಧ್ಯತೆ ಇದೆ
- ಲಕ್ಷ್ಮೀವಾಸುದೇವ ಮಂತ್ರವನ್ನು ಜಪಿಸುವುದು ಒಳಿತು
ಮಕರ
- ಪ್ರೇಮಿಗಳಿಗೆ ಬಹಳ ಹಿನ್ನಡೆಯ ದಿನವಾಗಲಿದೆ
- ವೃತ್ತಿಯಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುತ್ತೀರಿ
- ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವುದರಿಂದ ಇಂದು ಸಂತೋಷವಾಗಿರುತ್ತೀರಿ
- ನಿಮ್ಮ ನಿರ್ಧಾರ ಬೇರೆಯವರಿಗೆ ಮಾದರಿಯಾಗಿ ಪ್ರಶಂಸೆಗೆ ಪಾತ್ರರಾಗುತ್ತೀರಿ
- ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರಿಗೆ ಸಂತೋಷವನ್ನುಂಟುಮಾಡತ್ತೆ
- ಜಗನ್ಮೋಹನ ಮಂತ್ರವನ್ನು ಪಠಿಸಿ
ಕುಂಭ
- ಆಂತರಿಕ ಶತ್ರುಗಳಿಂದ ಅಡಚಣೆ ಉಂಟಾಗಬಹುದು ಎಚ್ಚರಿಕೆ ಇರಲಿ
- ನೌಕರಿಯಲ್ಲಿ ಪ್ರಗತಿ ಕಾಣುವ ದಿನವಾಗಿದೆ
- ಕುಟುಂಬದಲ್ಲಿ ನಿಮ್ಮ ವ್ಯಯಕ್ತಿಕ ವಿಚಾರಗಳನ್ನ ಪ್ರದರ್ಶನ ಮಾಡಿ ಬೇಸರಕ್ಕೆ ಗುರಿಯಾಗುತ್ತೀರಿ
- ನಿಮ್ಮ ತೀರ್ಮಾನಗಳು ಭವಿಷ್ಯಕ್ಕೆ ಬುನಾದಿಯಾಗುವ ದಿನ
- ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಮೀನ
- ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು ಜಾಗ್ರತೆ
- ನಿಮ್ಮ ಕೆಲಸದಲ್ಲಿ ಯಾವತ್ತೂ ಹಿಂಜರಿಯಬೇಡಿ ಯಶಸ್ಸು ನಿಮ್ಮದಾಗುತ್ತೆ
- ಯಂತ್ರೋಪಕರಣಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವವರಿಗೆ ಉತ್ತಮ ದಿನ
- ನಿಮ್ಮ ಜೀವನದಲ್ಲಿ ಬದಲಾವಣೆಯ ಘಟ್ಟ ಎನ್ನಬಹುದು
- ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆಯಿದೆ ಎಚ್ಚರಿಕೆ
- ವಿದ್ಯಾರಾಜಗೋಪಾಲ ಮಂತ್ರ ಪಠಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ