ಆತುರವಾದ ನಿರ್ಧಾರ ಬೇಡ, ಈ ರಾಶಿಯವರು ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಇರಲಿ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ದಿನವಾಗಿದೆ
  • ಇಂದು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ
  • ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳಿಂದ ಬೇಸರವಾಗುವ ಸಂಭವ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ತರಕಾರಿ ವ್ಯಾಪಾರಿಗಳಿಗೆ ಹಾಗೂ ಪ್ರಾಣಿಗಳನ್ನ ಮಾರುವ ದಲ್ಲಾಳಿಗಳಿಗೆ ಆತಂಕ ಎದುರಾಗುವ ಸಾಧ್ಯತೆ ಇದೆ
  • ಇಂದು ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
  • ದಂಪತಿಗಳು ಹಾಗೂ ಮಕ್ಕಳ ಮಧ್ಯೆ ಬೇಸರದ ವಾತಾವರಣ ಉಂಟಾಗಬಹುದು
  • ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ದಿನವಾಗಿದೆ
  • ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
  • ಆರೋಗ್ಯದಲ್ಲಿ ಸಮಸ್ಯೆಗಳಾಗಬಹುದು ಜಾಗ್ರತೆ ವಹಿಸಿ
  • ಗುರು ಪ್ರಾರ್ಥನೆ ಮಾಡಿ

ವೃಷಭ

publive-image

  • ಧಾರ್ಮಿಕ,ಆದ್ಯಾತ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸು ಹರದಾಡುತ್ತೆ ಗಮನ ಹರಿಸಿ
  • ಈ ದಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕು
  • ಪ್ರಯಾಣದ ವಿಚಾರವಾಗಿ ಬೇಸರವಾಗುತ್ತದೆ
  • ನಿರ್ಧಾರಗಳನ್ನು ಬದಲಿಸುವುದರಿಂದ ನೌಕರಿಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ
  • ಅಧಿಕಾರ ಪ್ರಾಪ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು
  • ವಿವಾಹ ವಿಚಾರಕ್ಕೆ ಚಾಲನೆ ಸಿಗುವಂತಹ ದಿನ
  • ಮೂಲವ್ಯಾಧಿ ಇರುವವರಿಗೆ ಶಸ್ತ್ರ ಚಿಕಿತ್ಸೆ ಆಗುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿ
  • ವಿಷ್ಣುತ್ರಯೀ ಮಂತ್ರವನ್ನು ಜಪಿಸಿ

ಮಿಥುನ

publive-image

  • ಕುಟುಂಬದಲ್ಲಿ ಕಿರಿಕಿರಿ ಆಗುವ ದಿನ
  • ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
  • ಇಂದು ಅನಿರೀಕ್ಷಿತ ಧನಾಗಮ ಆಗಲಿದೆ
  • ನಿಮ್ಮ ವಿರೋಧಿಗಳೇ ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಬೆಂಬಲ ನೀಡುತ್ತಾರೆ
  • ಇಂದು ಅಧಿಕವಾಗಿ ಆರ್ಥಿಕ ನಷ್ಟವಾಗಬಹುದು
  • ಪಾರಂಪರಿಕ ವೃತ್ತಿಯಲ್ಲಿ ಗೌರವ ಸಿಗುವ ದಿನವಾಗಿದೆ
  • ಮಾನಸಿಕ ನೆಮ್ಮದಿ ಇಲ್ಲದೆ ಇರುವ ದಿನ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ನಿಮ್ಮ ಸಮಸ್ಯೆಗಳಿಗೆ ಸರಳವಾದ ಪರಿಹಾರ ಕಂಡುಕೊಳ್ಳುತ್ತೀರಿ
  • ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ
  • ಇಂದು ನಿಂದನೆಗೆ ಒಳಗಾಗುವ ಸಾಧ್ಯತೆಯಿದೆ ಎಚ್ಚರಿಕೆ
  • ಸ್ತ್ರೀಯರಿಗೆ ಸಾಂಸಾರಿಕ ಜೀವನದಲ್ಲಿ ತೃಪ್ತಿ ಸಿಗುವ ದಿನ
  • ನಿಮ್ಮ ಮಕ್ಕಳು ನಿಮ್ಮನ್ನು ಹೆಚ್ಚು ಪ್ರೀತಿಸುವ ದಿನವಾಗಿದೆ
  • ಇಂದು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ
  • ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ನಿಮ್ಮದಾಗತ್ತದೆ
  • ಆಹಾರ ಸೇವಿಸಬೇಕಾದರೆ ಜಾಗರೂಕರಾಗಿರಿ
  • ರಾಮರಕ್ಷಾ ಸ್ತೋತ್ರ ಪಠಿಸಿ

ಸಿಂಹ

publive-image

  • ಯಾವುದೇ ಆತುರವಾದ ನಿರ್ಧಾರ ಬೇಡ
  • ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
  • ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುವ ದಿನ
  • ನೆರೆಹೊರೆಯವರೊಂದಿಗೆ ವಿಶ್ವಾಸದಿಂದಿರಿ
  • ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳಿಂದ ಬೇಸರವಾಗುವ ಸಂಭವ
  • ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ
  • ಆರೋಗ್ಯದ ಕಡೆ ಗಮನಕೊಡಿ
  • ಜೀವನದ ಸಾರ್ಥಕತೆಯ ಬಗ್ಗೆ ಹುಡುಕಾಟ ನಡೆಯಬಹುದು
  • ಶಂಕರನಾರಾಯಣನನ್ನು ಪ್ರಾರ್ಥಿಸಿ

ಕನ್ಯಾ

publive-image

  • ಈ ದಿವಸ ಸಂಗಾತಿಯೊಂದಿಗೆ ವಿರಸ
  • ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ
  • ಕುಟುಂಬದಲ್ಲಿ ವಾದ-ವಿವಾದಗಳಿಂದ ರಾಜಿಯಾಗಬಹುದು
  • ಮನಸ್ಸಿನ ಬೇಸರ ನಿವಾರಣೆಗೆ ಹೊಸ ಜಗತ್ತಿನ ಅರಿವಿನ ಅಗತ್ಯವಿರುತ್ತದೆ
  • ಹೊಸ ಸಂಬಂಧ, ಹೊಸ ಪರಿಚಯ, ಗೆಳತನ ಎಲ್ಲವೂ ಲಭ್ಯವಾಗುವ ದಿನ
  • ಕಟ್ಟಡ ಸಾಮಾಗ್ರಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ
  • ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಮನಸ್ತಾಪ
  • ನಯವಾಗಿ, ಸಮಾಧಾನದಿಂದ ಅವರೊಂದಿಗೆ ವ್ಯವಹರಿಸಿ
  • ದಧಿವಾಮನ ಮಂತ್ರ ಜಪಿಸಿ

ತುಲಾ

publive-image

  • ನಿಮ್ಮ ಯೋಜನೆಗಳಿಗೆ ವಿಶೇಷ ಬೆಂಬಲ ಸಿಗುವ ದಿನ
  • ವಸ್ತ್ರ ವ್ಯಾಪಾರಿಗಳಿಗೆ ಲಾಭದ ದಿನ
  • ನಿರಾಸೆಯಿಂದ ಹೊರಬಂದು ನಿಮ್ಮ ಕೆಲಸ ಕಾರ್ಯದಲ್ಲಿ ತೊಡಗಿರಿ
  • ಯಾವುದು ಸರಿ ಅನಿಸುತ್ತೆ ಅದನ್ನ ಮಾತ್ರ ಮಾಡಿ
  • ದಾಂಪತ್ಯದಲ್ಲಿ ವಿರಸ ಮೂಡಬಹುದು
  • ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
  • ಸಂಪನ್ಮೂಲಗಳನ್ನ ಕ್ರೋಢೀಕರಿಸಲು ಹಲವಾರು ರೀತಿ ಪ್ರಯತ್ನಿಸುತ್ತೀರಿ
  • ಏಕಾಕ್ಷರ ನರಸಿಂಹ ಮಂತ್ರ ಶ್ರವಣ ಮಾಡಿ

ವೃಶ್ಚಿಕ

publive-image

  • ಬೇರೆಯವರಿಂದ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿರುತ್ತದೆ
  • ಯಾವುದೇ ಮುಲಾಜಿಗೆ ಒಳಗಾಗದೆ ವ್ಯವಹಾರಸ್ಥರಾಗಿದ್ದರೆ ಒಳಿತು
  • ದೀರ್ಘಕಾಲದ ಖಾಯಿಲೆಯಿಂದ ಗುಣಮುಖರಾಗುತ್ತೀರಿ
  • ಆಧಾತ್ಮಿಕ ಚಿಂತನೆ ನಿಮ್ಮ ಮನಸಲ್ಲಿ ನಡೆಯುತ್ತದೆ
  • ಇಂದು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುತ್ತೀರಿ
  • ನಿಮ್ಮ ಬಗ್ಗೆ ಇರೋ ಅಭಿಪ್ರಾಯ ಮನಸ್ಸಿಗೆ ಹಿತವೆನಿಸುತ್ತದೆ
  • ಎರಡನೇ ಮದುವೆಗೆ ಇಂದು ಶುಭಫಲವಿದೆ
  • ಕೂರ್ಮ ಮಂತ್ರ ಶ್ರವಣ ಮಾಡಿ

ಧನಸ್ಸು 

publive-image

  • ಸತ್ಯಶೋಧನೆಯಿಂದ ಉಂಟಾಗುವ ಆಂತರಿಕ ಗೊಂದಲಗಳು ಇಂದು ನಿವಾರಣೆಯಾಗುತ್ತವೆ
  • ಕ್ರೀಡಾಪಟುಗಳಿಗೆ ಉತ್ತಮ ಲಾಭ, ಗೌರವ-ಪುರಸ್ಕಾರಗಳು ಸಿಗುವ ದಿನವಾಗಿದೆ
  • ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ
  • ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
  • ವಾತ್ಸಲ್ಯಪೂರ್ಣ ಮಾತಿನಿಂದಾಗಿ ಕುಟುಂಬದಲ್ಲಿ ಹೆಚ್ಚಿನ ವಿಶ್ವಾಸಗಳಿಸ್ತೀರಿ
  • ಸಾಲಕ್ಕಾಗಿ ಪ್ರಿಯರು,ಸಂಬಂಧಿಕರು ಮನೆ ಹತ್ತಿರ ಬರುವ ಸಾಧ್ಯತೆ ಇದೆ
  • ಲಕ್ಷ್ಮೀವಾಸುದೇವ ಮಂತ್ರವನ್ನು ಜಪಿಸುವುದು ಒಳಿತು

ಮಕರ

publive-image

  • ಪ್ರೇಮಿಗಳಿಗೆ ಬಹಳ ಹಿನ್ನಡೆಯ ದಿನವಾಗಲಿದೆ
  • ವೃತ್ತಿಯಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುತ್ತೀರಿ
  • ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವುದರಿಂದ ಇಂದು ಸಂತೋಷವಾಗಿರುತ್ತೀರಿ
  • ನಿಮ್ಮ ನಿರ್ಧಾರ ಬೇರೆಯವರಿಗೆ ಮಾದರಿಯಾಗಿ ಪ್ರಶಂಸೆಗೆ ಪಾತ್ರರಾಗುತ್ತೀರಿ
  • ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರಿಗೆ ಸಂತೋಷವನ್ನುಂಟುಮಾಡತ್ತೆ
  • ಜಗನ್ಮೋಹನ ಮಂತ್ರವನ್ನು ಪಠಿಸಿ

ಕುಂಭ

publive-image

  • ಆಂತರಿಕ ಶತ್ರುಗಳಿಂದ ಅಡಚಣೆ ಉಂಟಾಗಬಹುದು ಎಚ್ಚರಿಕೆ ಇರಲಿ
  • ನೌಕರಿಯಲ್ಲಿ ಪ್ರಗತಿ ಕಾಣುವ ದಿನವಾಗಿದೆ
  • ಕುಟುಂಬದಲ್ಲಿ ನಿಮ್ಮ ವ್ಯಯಕ್ತಿಕ ವಿಚಾರಗಳನ್ನ ಪ್ರದರ್ಶನ ಮಾಡಿ ಬೇಸರಕ್ಕೆ ಗುರಿಯಾಗುತ್ತೀರಿ
  • ನಿಮ್ಮ ತೀರ್ಮಾನಗಳು ಭವಿಷ್ಯಕ್ಕೆ ಬುನಾದಿಯಾಗುವ ದಿನ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು ಜಾಗ್ರತೆ
  • ನಿಮ್ಮ ಕೆಲಸದಲ್ಲಿ ಯಾವತ್ತೂ ಹಿಂಜರಿಯಬೇಡಿ ಯಶಸ್ಸು ನಿಮ್ಮದಾಗುತ್ತೆ
  • ಯಂತ್ರೋಪಕರಣಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವವರಿಗೆ ಉತ್ತಮ ದಿನ
  • ನಿಮ್ಮ ಜೀವನದಲ್ಲಿ ಬದಲಾವಣೆಯ ಘಟ್ಟ ಎನ್ನಬಹುದು
  • ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆಯಿದೆ ಎಚ್ಚರಿಕೆ
  • ವಿದ್ಯಾರಾಜಗೋಪಾಲ ಮಂತ್ರ ಪಠಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment