ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದ ಘನಘೋರ ಘಟನೆ
ಎರಡನೇ ಗಂಡನ ಜೊತೆ ಸೇರಿ ಜನ್ಮ ಕೊಟ್ಟ ಮಗನ ಮೇಲೆ ದೌರ್ಜನ್ಯ
ಸಿಗರೇಟ್ನಿಂದ ಸುಟ್ಟು, ಕೇಬಲ್ ವೈರ್ನಿಂದ ಹಿಂಸೆ ಕೊಟ್ಟ ಮಲತಂದೆ!
ಬೆಂಗಳೂರು: ಜನ್ಮ ನೀಡಿದ ತಾಯಿಯೇ ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ನಾಲ್ಕು ವರ್ಷದ ಕಂದಮ್ಮನಿಗೆ ಚಿತ್ರಹಿಂಸೆ ಕೊಟ್ಟಿದ್ದಳು ಅನ್ನೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಅಂಥಹದ್ದೇ ಘೋರ ಘಟನೆ ಮತ್ತೊಂದು ವರದಿಯಾಗಿದೆ. ಎರಡನೇ ಗಂಡನ ಜೊತೆ ಸೇರಿ ಜನ್ಮ ಕೊಟ್ಟ ಮಗನ ಮೇಲೆ ದೌರ್ಜನ್ಯ ಮಾಡಿರುವ ಘಟನೆ ಇದು.
ಕಳೆದ ಒಂದು ವಾರದ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಒಂದು ಅಮಾನವೀಯ ಘಟನೆ ವರದಿಯಾಗಿತ್ತು. ಬೆಂಗಳೂರಿನ ಹನುಮಂತನಗರದಲ್ಲಿ ಬಾಯ್ಫ್ರೆಂಡ್ ಜೊತೆ ಸೇರಿ ಜನ್ಮ ಕೊಟ್ಟ ಮಗುವಿಗೆ ಹೆತ್ತ ತಾಯಿ ನರಕಯಾತನೆ ತೋರಿಸಿದ್ದಳು. ಚಿತ್ರಹಿಂಸೆ ಕೊಟ್ಟಿದ್ದಳು.
ಇಡೀ ಸಮಾಜ ಈ ತಾಯಿಗೆ ಹಿಡಿ ಶಾಪ ಹಾಕಿತ್ತು. ಇಂಥ ತಾಯಿ ಯಾವ ಮಕ್ಕಳಿಗೂ ಬೇಡ ಅಂತ ನಿಂದಿಸಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಇದೇ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೆತ್ತ ಮಗು ಅಂತಾನೂ ನೋಡದೇ ಪುಟ್ಟ ಕಂದಮ್ಮನ ಮೇಲೆ ದೌರ್ಜನ್ಯ ಮಾಡಿರುವ ಘನಘೋರ ಘಟನೆ ವರದಿಯಾಗಿದೆ. ಪುಟ್ಟ ಮಗುವಿಗೆ ಇನ್ನೂ ನಾಲ್ಕು ವರ್ಷ. ಅಪ್ಪ ಅಮ್ಮನ ಬಿಟ್ಟರೇ ಬೇರೆ ಯಾರ ಬಗ್ಗೆಯೂ ಯೋಚಿಸದ ವಯಸ್ಸು. ಯಾರ ಮಾತು ಅರ್ಥವಾಗದ ಮನಸ್ಸು. ಇಂಥಹ ಮಗುವಿನ ದೇಹದ ಮೇಲೆಲ್ಲ ಗಾಯದ ಗುರುತು. ಅಲ್ಲಲ್ಲಿ ಸುಟ್ಟ ಗಾಯ. ಬಾಸುಂಡೆ ಬರೋ ಥರಾ ಹಲ್ಲೆ ಮಾಡಿರುವ ಗುರುತುಗಳು. ಯಾವ ತಪ್ಪಿಗೆ ಈ ಶಿಕ್ಷೆಯೋ ಗೊತ್ತಿಲ್ಲ. ಈ ಮಗು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಅಂತಾನೂ ಗೊತ್ತಿಲ್ಲ. ಆದರೂ ಸರಿಯಾಗಿ ಮಾತೇ ಬಾರದ ಈ ಮಗುವಿನ ಮೇಲೆ ಇಂಥ ದೌರ್ಜನ್ಯ ಆಗಿದೆ.
ಈ ಕ್ರೌರ್ಯವನ್ನ ಬೇರೆ ಯಾರೋ ಮಾಡಿಲ್ಲ. ಜನ್ಮ ಕೊಟ್ಟ ತಾಯಿಯೇ ಮಾಡಿದ್ದಾಳೆ ಅನ್ನೋದು ನಿಜಕ್ಕೂ ದುರಂತ. ಆ ತಾಯಿಯ ಹೆಸರು ಮಂಜುಳ. ತಾಯಿ ಅನ್ನೋ ಪದಕ್ಕೆ ಅವಮಾನ ಬಿಡಿ. ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ವಾಸವಿರುವ ಮಂಜುಳ, ಮೊದಲನೇ ಪತಿ ಜೊತೆಗಿಲ್ಲ. ಅದ್ಯಾಕೆ ಜೊತೆಗಿಲ್ವೋ ಅದು ಬೇರೆ ಕಥೆ. ಸದ್ಯ ಚಿಕ್ಕಬಳ್ಳಾಪುರ ಮೂಲದ ಮಂಜುನಾಥ್ ಜೊತೆ ಎರಡನೇ ಮದುವೆ ಆಗಿದ್ದಾಳಂತೆ. ಮಂಜುಳಾ ಮತ್ತು ಮಂಜುನಾಥ್ ಇಬ್ಬರು ಒಟ್ಟಿಗೆ ಇದ್ದಾರೆ. ಆದ್ರೆ ಈ ಇಬ್ಬರಿಗೆ ಈ ಪುಟ್ಟ ಮಗು ಕೊಟ್ಟ ಕಷ್ಟ ಏನು? ಈ ಮಗುವಿನಿಂದ ಆಗ್ತಿರೋ ಸಮಸ್ಯೆ ಏನೋ ಅನ್ನೋದಂತೂ ಗೊತ್ತಿಲ್ಲ. ಆದರೂ ನಿರಂತರವಾಗಿ ಮಂಜುಳಾ ಮತ್ತು ಮಂಜುನಾಥ್ ಇಬ್ಬರು ಈ ಮಗುವಿನ ಮೇಲೆ ಹಲ್ಲೆ ಮಾಡಿದ್ದಾರೆ.
ಗಂಡನಿಲ್ಲದ ಮಹಿಳೆಗೆ ಗಂಡನಾಗಿ ಬಂದ ಮಂಜುನಾಥ್, ತಂದೆ ಇಲ್ಲದ ಆ ಮಗುವಿಗೆ ತಂದೆಯಾಗಿಲ್ಲ. ಮಲ ತಂದೆಯಾದರೂ ತಂದೆಯಂತೆ ನಡೆದುಕೊಂಡಿಲ್ಲ. ತಂದೆ ಪ್ರೀತಿ ಕೊಟ್ಟಿಲ್ಲ ಅಂದರೂ ಪರವಾಗಿರಲಿಲ್ಲ, ಆದ್ರೆ ಈ ದೌರ್ಜನ್ಯ ಯಾತಕ್ಕಾಗಿ? ನೀವ್ ನಂಬಲೇಬೇಕು ಈ ಮಂಜುನಾಥ್ ಆ ಮಗುವಿನ ಕೈ ಮತ್ತು ಕುತ್ತಿಗೆ ಭಾಗಕ್ಕೆ ಸಿಗರೇಟ್ ನಿಂದ ಸುಟ್ಟಿದ್ದಾನಂತೆ. ಹೀಟರ್ನಿಂದ ಸುಟ್ಟಿದ್ದಾನಂತೆ. ಇದೆಂಥಾ ವಿಕೃತಿ ಅಲ್ವೇ? ಪ್ರಪಂಚವೇ ಗೊತ್ತಿಲ್ಲದ ಹಸುಗೂಸು ಏನಾದರೂ ಮಾಡಿತು? ಇಂಥ ಮಗುವಿನ ಮೇಲೆ ಹಲ್ಲೆ ಮಾಡೋದಕ್ಕೆ ಮನಸಾದರೂ ಹೇಗೆ ಬಂತು ಹೇಳಿ! ಇತ್ತೀಚೆಗೆ ಚೆನ್ನಾಗಿ ಕುಡಿದು ಬಂದಿದ್ದ ಮಂಜುನಾಥ್, ಮಗುವಿನ ಹಲ್ಲೆ ಮಾಡಿದ್ದಾನೆ.
ಕೇಬಲ್ ವೈರ್ನಿಂದ ಹೊಡೆದಿದ್ದ. ಅದ್ಯಾಗೋ ಈ ವಿಷಯ ನೆರೆಹೊರೆಯವರಿಗೆ ಗೊತ್ತಾಗಿದೆ. ಆಮೇಲೆ ಅಕ್ಕಪಕ್ಕದವರೆಲ್ಲಾ ಸೇರಿ ಆ ಮಗುವನ್ನ ರಕ್ಷಿಸಿ ಹೆಬ್ಬಗೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಗಂಡ-ಹೆಂಡತಿ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾರೆ. ದುರಂತ ಏನ್ ಗೊತ್ತಾ? ನಾಲ್ಕು ತಿಂಗಳ ಹಿಂದೆ ಈ ಮಗುವಿನ ಅಣ್ಣನ ಮೇಲೂ ಮಂಜುನಾಥ್ ಹಲ್ಲೆ ಮಾಡಿದ್ದನಂತೆ. ಆಗಲೂ ಸ್ಥಳೀಯರು ಪೊಲೀಸರಿಗೆ ದೂರು ಕೊಟ್ಟಿದ್ದರಂತೆ. ಈಗಲೂ ಮತ್ತದೇ ಕೆಲಸ ಮಾಡಿದ್ದು ಕಂಡು ಬಂದಿದ್ದರಿಂದ ಈ ಸಲ ಸ್ಥಳೀಯರು ಮಂಜುನಾಥ್ಗೆ ಹಿಗ್ಗಾಮುಗ್ಗಾ ಥಳಿಸಿ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಮಂಜುಳಾ ಮತ್ತು ಮಂಜುನಾಥ್ ಮೇಲೆ ದೂರು ದಾಖಲಾಗಿದೆ. ಮಗು ಸದ್ಯ CWC ಕೇಂದ್ರದಲ್ಲಿದೆ. ಅದೇನೇ ಇರಲಿ, ತಮ್ಮ ತಮ್ಮ ಹಿತಾಸಕ್ತಿಗೆ ಮಕ್ಕಳನ್ನ ಬಲಿ ಕೊಡ್ತಿರೋದು ನಿಜಕ್ಕೂ ಘೋರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದ ಘನಘೋರ ಘಟನೆ
ಎರಡನೇ ಗಂಡನ ಜೊತೆ ಸೇರಿ ಜನ್ಮ ಕೊಟ್ಟ ಮಗನ ಮೇಲೆ ದೌರ್ಜನ್ಯ
ಸಿಗರೇಟ್ನಿಂದ ಸುಟ್ಟು, ಕೇಬಲ್ ವೈರ್ನಿಂದ ಹಿಂಸೆ ಕೊಟ್ಟ ಮಲತಂದೆ!
ಬೆಂಗಳೂರು: ಜನ್ಮ ನೀಡಿದ ತಾಯಿಯೇ ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ನಾಲ್ಕು ವರ್ಷದ ಕಂದಮ್ಮನಿಗೆ ಚಿತ್ರಹಿಂಸೆ ಕೊಟ್ಟಿದ್ದಳು ಅನ್ನೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಅಂಥಹದ್ದೇ ಘೋರ ಘಟನೆ ಮತ್ತೊಂದು ವರದಿಯಾಗಿದೆ. ಎರಡನೇ ಗಂಡನ ಜೊತೆ ಸೇರಿ ಜನ್ಮ ಕೊಟ್ಟ ಮಗನ ಮೇಲೆ ದೌರ್ಜನ್ಯ ಮಾಡಿರುವ ಘಟನೆ ಇದು.
ಕಳೆದ ಒಂದು ವಾರದ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಒಂದು ಅಮಾನವೀಯ ಘಟನೆ ವರದಿಯಾಗಿತ್ತು. ಬೆಂಗಳೂರಿನ ಹನುಮಂತನಗರದಲ್ಲಿ ಬಾಯ್ಫ್ರೆಂಡ್ ಜೊತೆ ಸೇರಿ ಜನ್ಮ ಕೊಟ್ಟ ಮಗುವಿಗೆ ಹೆತ್ತ ತಾಯಿ ನರಕಯಾತನೆ ತೋರಿಸಿದ್ದಳು. ಚಿತ್ರಹಿಂಸೆ ಕೊಟ್ಟಿದ್ದಳು.
ಇಡೀ ಸಮಾಜ ಈ ತಾಯಿಗೆ ಹಿಡಿ ಶಾಪ ಹಾಕಿತ್ತು. ಇಂಥ ತಾಯಿ ಯಾವ ಮಕ್ಕಳಿಗೂ ಬೇಡ ಅಂತ ನಿಂದಿಸಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಇದೇ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೆತ್ತ ಮಗು ಅಂತಾನೂ ನೋಡದೇ ಪುಟ್ಟ ಕಂದಮ್ಮನ ಮೇಲೆ ದೌರ್ಜನ್ಯ ಮಾಡಿರುವ ಘನಘೋರ ಘಟನೆ ವರದಿಯಾಗಿದೆ. ಪುಟ್ಟ ಮಗುವಿಗೆ ಇನ್ನೂ ನಾಲ್ಕು ವರ್ಷ. ಅಪ್ಪ ಅಮ್ಮನ ಬಿಟ್ಟರೇ ಬೇರೆ ಯಾರ ಬಗ್ಗೆಯೂ ಯೋಚಿಸದ ವಯಸ್ಸು. ಯಾರ ಮಾತು ಅರ್ಥವಾಗದ ಮನಸ್ಸು. ಇಂಥಹ ಮಗುವಿನ ದೇಹದ ಮೇಲೆಲ್ಲ ಗಾಯದ ಗುರುತು. ಅಲ್ಲಲ್ಲಿ ಸುಟ್ಟ ಗಾಯ. ಬಾಸುಂಡೆ ಬರೋ ಥರಾ ಹಲ್ಲೆ ಮಾಡಿರುವ ಗುರುತುಗಳು. ಯಾವ ತಪ್ಪಿಗೆ ಈ ಶಿಕ್ಷೆಯೋ ಗೊತ್ತಿಲ್ಲ. ಈ ಮಗು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಅಂತಾನೂ ಗೊತ್ತಿಲ್ಲ. ಆದರೂ ಸರಿಯಾಗಿ ಮಾತೇ ಬಾರದ ಈ ಮಗುವಿನ ಮೇಲೆ ಇಂಥ ದೌರ್ಜನ್ಯ ಆಗಿದೆ.
ಈ ಕ್ರೌರ್ಯವನ್ನ ಬೇರೆ ಯಾರೋ ಮಾಡಿಲ್ಲ. ಜನ್ಮ ಕೊಟ್ಟ ತಾಯಿಯೇ ಮಾಡಿದ್ದಾಳೆ ಅನ್ನೋದು ನಿಜಕ್ಕೂ ದುರಂತ. ಆ ತಾಯಿಯ ಹೆಸರು ಮಂಜುಳ. ತಾಯಿ ಅನ್ನೋ ಪದಕ್ಕೆ ಅವಮಾನ ಬಿಡಿ. ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ವಾಸವಿರುವ ಮಂಜುಳ, ಮೊದಲನೇ ಪತಿ ಜೊತೆಗಿಲ್ಲ. ಅದ್ಯಾಕೆ ಜೊತೆಗಿಲ್ವೋ ಅದು ಬೇರೆ ಕಥೆ. ಸದ್ಯ ಚಿಕ್ಕಬಳ್ಳಾಪುರ ಮೂಲದ ಮಂಜುನಾಥ್ ಜೊತೆ ಎರಡನೇ ಮದುವೆ ಆಗಿದ್ದಾಳಂತೆ. ಮಂಜುಳಾ ಮತ್ತು ಮಂಜುನಾಥ್ ಇಬ್ಬರು ಒಟ್ಟಿಗೆ ಇದ್ದಾರೆ. ಆದ್ರೆ ಈ ಇಬ್ಬರಿಗೆ ಈ ಪುಟ್ಟ ಮಗು ಕೊಟ್ಟ ಕಷ್ಟ ಏನು? ಈ ಮಗುವಿನಿಂದ ಆಗ್ತಿರೋ ಸಮಸ್ಯೆ ಏನೋ ಅನ್ನೋದಂತೂ ಗೊತ್ತಿಲ್ಲ. ಆದರೂ ನಿರಂತರವಾಗಿ ಮಂಜುಳಾ ಮತ್ತು ಮಂಜುನಾಥ್ ಇಬ್ಬರು ಈ ಮಗುವಿನ ಮೇಲೆ ಹಲ್ಲೆ ಮಾಡಿದ್ದಾರೆ.
ಗಂಡನಿಲ್ಲದ ಮಹಿಳೆಗೆ ಗಂಡನಾಗಿ ಬಂದ ಮಂಜುನಾಥ್, ತಂದೆ ಇಲ್ಲದ ಆ ಮಗುವಿಗೆ ತಂದೆಯಾಗಿಲ್ಲ. ಮಲ ತಂದೆಯಾದರೂ ತಂದೆಯಂತೆ ನಡೆದುಕೊಂಡಿಲ್ಲ. ತಂದೆ ಪ್ರೀತಿ ಕೊಟ್ಟಿಲ್ಲ ಅಂದರೂ ಪರವಾಗಿರಲಿಲ್ಲ, ಆದ್ರೆ ಈ ದೌರ್ಜನ್ಯ ಯಾತಕ್ಕಾಗಿ? ನೀವ್ ನಂಬಲೇಬೇಕು ಈ ಮಂಜುನಾಥ್ ಆ ಮಗುವಿನ ಕೈ ಮತ್ತು ಕುತ್ತಿಗೆ ಭಾಗಕ್ಕೆ ಸಿಗರೇಟ್ ನಿಂದ ಸುಟ್ಟಿದ್ದಾನಂತೆ. ಹೀಟರ್ನಿಂದ ಸುಟ್ಟಿದ್ದಾನಂತೆ. ಇದೆಂಥಾ ವಿಕೃತಿ ಅಲ್ವೇ? ಪ್ರಪಂಚವೇ ಗೊತ್ತಿಲ್ಲದ ಹಸುಗೂಸು ಏನಾದರೂ ಮಾಡಿತು? ಇಂಥ ಮಗುವಿನ ಮೇಲೆ ಹಲ್ಲೆ ಮಾಡೋದಕ್ಕೆ ಮನಸಾದರೂ ಹೇಗೆ ಬಂತು ಹೇಳಿ! ಇತ್ತೀಚೆಗೆ ಚೆನ್ನಾಗಿ ಕುಡಿದು ಬಂದಿದ್ದ ಮಂಜುನಾಥ್, ಮಗುವಿನ ಹಲ್ಲೆ ಮಾಡಿದ್ದಾನೆ.
ಕೇಬಲ್ ವೈರ್ನಿಂದ ಹೊಡೆದಿದ್ದ. ಅದ್ಯಾಗೋ ಈ ವಿಷಯ ನೆರೆಹೊರೆಯವರಿಗೆ ಗೊತ್ತಾಗಿದೆ. ಆಮೇಲೆ ಅಕ್ಕಪಕ್ಕದವರೆಲ್ಲಾ ಸೇರಿ ಆ ಮಗುವನ್ನ ರಕ್ಷಿಸಿ ಹೆಬ್ಬಗೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಗಂಡ-ಹೆಂಡತಿ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾರೆ. ದುರಂತ ಏನ್ ಗೊತ್ತಾ? ನಾಲ್ಕು ತಿಂಗಳ ಹಿಂದೆ ಈ ಮಗುವಿನ ಅಣ್ಣನ ಮೇಲೂ ಮಂಜುನಾಥ್ ಹಲ್ಲೆ ಮಾಡಿದ್ದನಂತೆ. ಆಗಲೂ ಸ್ಥಳೀಯರು ಪೊಲೀಸರಿಗೆ ದೂರು ಕೊಟ್ಟಿದ್ದರಂತೆ. ಈಗಲೂ ಮತ್ತದೇ ಕೆಲಸ ಮಾಡಿದ್ದು ಕಂಡು ಬಂದಿದ್ದರಿಂದ ಈ ಸಲ ಸ್ಥಳೀಯರು ಮಂಜುನಾಥ್ಗೆ ಹಿಗ್ಗಾಮುಗ್ಗಾ ಥಳಿಸಿ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಮಂಜುಳಾ ಮತ್ತು ಮಂಜುನಾಥ್ ಮೇಲೆ ದೂರು ದಾಖಲಾಗಿದೆ. ಮಗು ಸದ್ಯ CWC ಕೇಂದ್ರದಲ್ಲಿದೆ. ಅದೇನೇ ಇರಲಿ, ತಮ್ಮ ತಮ್ಮ ಹಿತಾಸಕ್ತಿಗೆ ಮಕ್ಕಳನ್ನ ಬಲಿ ಕೊಡ್ತಿರೋದು ನಿಜಕ್ಕೂ ಘೋರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ