ಅಯ್ಯೋ ಕಂದಮ್ಮ.. ಮೂರು ವರ್ಷದ ಮಗುವಿನ ಜೀವ ತೆಗೆದ ಮಳೆರಾಯ

author-image
Veena Gangani
Updated On
ಅಯ್ಯೋ ಕಂದಮ್ಮ.. ಮೂರು ವರ್ಷದ ಮಗುವಿನ ಜೀವ ತೆಗೆದ ಮಳೆರಾಯ
Advertisment
  • ಮಳೆಯ ಅವಾಂತರಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಬಲಿ
  • ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಬಾಲಕಿ ನಿಧನ
  • ಗೋಕಾಕ ನಗರದ ಮಹಾಲಿಂಗೇಶ್ವರ ನಗರದಲ್ಲಿ ನಡೆದ ಘಟನೆ

ಬೆಳಗಾವಿ: ನಿರಂತರ ಮಳೆಯ ಅವಾಂತರಕ್ಕೆ ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಬಲಿಯಾಗಿರೋ ಘಟನೆ ಗೋಕಾಕ ನಗರದ ಮಹಾಲಿಂಗೇಶ್ವರ ನಗರದಲ್ಲಿ ನಡೆದಿದೆ. ಕೀರ್ತಿಕಾ ನಾಗೇಶ ಪೂಜಾರಿ (3) ಮೃತ ಬಾಲಕಿ.

ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್‌ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?

publive-image

ಕೋಣೆಯಲ್ಲಿ ಮಲಗಿದ್ದಾಗ ಪಕ್ಕದ ಮನೆಯ ಗೋಡೆ ನಾಗೇಶ ಪೂಜಾರಿ ಮನೆ ಮೇಲೆ ಬಿದ್ದಿದೆ. ಪರಿಣಾಮ ಘಟನೆಯಲ್ಲಿ 3 ವರ್ಷದ ಕಂದಮ್ಮ, ತಾಯಿ ರೇಷ್ಮಾ, ಸಹೋದರಿ ಖುಷಿಗೂ ಗಂಭೀರ ಗಾಯಗಳಾಗಿವೆ. ಗಾಯಾಲುಗಳನ್ನು ಗೋಕಾಕ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

publive-image

ಕಳೆದ ವಾರವೂ ಗೋಕಾಕ ನಗರದ ವ್ಯಕ್ತಿಯೋರ್ವ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿ ಜೀವಬಿಟ್ಟಿದ್ದ. ಈಗ ಗೋಕಾಕ ನಗರದಲ್ಲಿ ಮಹಾ ಮಳೆಗೆ ಎರಡನೇ ಬಲಿ ಅಂತಲೇ ಹೇಳಬಹುದು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment