ಅಪರಿಚಿತರಿಂದ ತೊಂದರೆ, ಈ ರಾಶಿಯವರಿಗೆ ಅಧಿಕ ಲಾಭ.. ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ತಾಯಿ ಅಥವಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  • ಈ ದಿನ ಕಹಿ ಘಟನೆಗಳನ್ನ ನೆನಪಿಸಿಕೊಳ್ಳುತ್ತಾ ಬೇಸರದಿಂದಿರುತ್ತೀರಿ
  • ಸಂಬಂಧಿಕರ ಮನೆಯಲ್ಲಿ ವಿವಾಹದ ವಿಚಾರ ಕೇಳಿ ಆನಂದಿಸುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ತಾಯಿ ಅಥವಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಕೆಲಸ ಹುಡುಕುತ್ತಿರುವವರಿಗೆ ಹೊಸ ನೌಕರಿ ಸಿಗುವ ಸಾಧ್ಯತೆ
  • ಮನೆಗೆ ದುಬಾರಿ ವಸ್ತುವನ್ನು ತರುವ ಸಾಧ್ಯತೆ ಇದೆ
  • ಈ ದಿನ ಕಹಿ ಘಟನೆಗಳನ್ನ ನೆನಪಿಸಿಕೊಳ್ಳುತ್ತಾ ಬೇಸರದಿಂದಿರುತ್ತೀರಿ
  • ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು
  • ಮಾಡಿದ ಸಹಾಯಕ್ಕೆ ಹೆಚ್ಚು ಹಣ ನಿಮಗೆ ಲಭಿಸುತ್ತದೆ
  • ಹರಿದ್ರಾ ಗಣಪತಿಯನ್ನು ಆರಾಧಿಸಿ

ವೃಷಭ

publive-image

  • ಸಂಬಂಧಿಕರ ಮನೆಯಲ್ಲಿ ವಿವಾಹದ ವಿಚಾರ ಕೇಳಿ ಆನಂದಿಸುತ್ತೀರಿ
  • ನಿಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ
  • ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವಿದೇಶದ ಕಂಪನಿಯಿಂದ ಉಡುಗೊರೆಗಳು ಬರಬಹುದು
  • ಇಂದು ದುಂದುವೆಚ್ಚ ಮಾಡಬೇಡಿ
  • ಮಧ್ಯಾಹ್ನದ ನಂತರ ಹಣದ ಹೂಡಿಕೆ ಮಾಡಿ
  • ವೀರಭದ್ರನನ್ನು ಆರಾಧಿಸಿ

ಮಿಥುನ

publive-image

  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ
  • ಇಂದು ಕುಟುಂಬ ಸದಸ್ಯರ ಬೆಂಬಲ ನಿಮಗಿರುತ್ತದೆ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಎದುರಾಗಬಹುದು ಎಚ್ಚರವಿರಲಿ
  • ಇಂದು ಹೊಸ ಉದ್ಯೋಗವನ್ನ ಪ್ರಾರಂಭಿಸಬಹುದು
  • ಮಕ್ಕಳ ಸಾಧನೆಯಿಂದ ಸಂತೋಷವಾಗಿರುತ್ತೀರಿ
  • ಇಂದು ವ್ಯಾಪಾರ, ವ್ಯವಹಾರ ಚೆನ್ನಾಗಿ ನಡೆಯುತ್ತದೆ
  • ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಒಳಿತಲ್ಲ
  • ರುದ್ರವಟುಕನನ್ನು ಆರಾಧಿಸಿ

ಕಟಕ

publive-image

  • ತರಕಾರಿ ವ್ಯಾಪಾರ ಮಾಡುವವರಿಗೆ ಶುಭಫಲವಿದೆ
  • ಮನೆಯ ವಿಚಾರದಲ್ಲಿ ಹೆಚ್ಚು ಗಮನ ಕೊಡಿ
  • ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಲು ಒಳ್ಳೆಯದಿನ
  • ಅರ್ಧಕ್ಕೆ ನಿಂತ ಕೆಲಸ ಮತ್ತೆ ಆರಂಭವಾಗುವ ಸಾಧ್ಯತೆ
  • ಸಂಜೆ ವೇಳೆಗೆ ಪದಾರ್ಥವನ್ನ ಅಥವಾ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ, ಎಚ್ಚರ ವಹಿಸಿ
  • ಸ್ಕಂದನನ್ನು ಆರಾಧಿಸಿ

ಸಿಂಹ

publive-image

  • ನಿಮ್ಮ ಚಂಚಲ ಸ್ವಭಾವವನ್ನು ದೂರಮಾಡಿಕೊಂಡರೆ ಒಳಿತು
  • ಸಮಯಕ್ಕೆ ಹೆಚ್ಚಿನ ಬೆಲೆ ಕೊಡಲಿಲ್ಲ ಅಂದ್ರೆ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
  • ಕೂಡಿಟ್ಟ ಹಣವು ಖರ್ಚಾಗುವ ಸಾಧ್ಯತೆ ಇದೆ
  • ಪುಸ್ತಕ ವ್ಯಾಪಾರಿಗಳಿಗೆ ಲಾಭ ಆಗುವ ಸಾಧ್ಯತೆ
  • ಪುನಃ ಹಣ ಸಂಪಾದಿಸುತ್ತೇನೆಂಬ ಧೈರ್ಯ ನಿಮ್ಮಲ್ಲಿರುತ್ತದೆ
  • ಸಂಕಷ್ಟಹರ ಗಣಪತಿಯನ್ನು ಪ್ರಾರ್ಥಿಸಿ

ಕನ್ಯಾ

publive-image

  • ಆದಾಯಕ್ಕೆ ಹೊಸ ಹಣದ ಮೂಲ ಸಿಗುವ ಸಾಧ್ಯತೆ ಇದೆ
  • ಬಾಕಿ ಇರುವ ಕೆಲಸಗಳೆಲ್ಲಾ ಪೂರ್ಣವಾಗುವ ಸಾಧ್ಯತೆ ಇದೆ
  • ವಿದ್ಯಾರ್ಥಿಗಳಿಗೆ ಕೆಲಸ ದೊರೆಯುವ ಸಾಧ್ಯತೆ ಇದೆ
  • ನೀವು ಕೆಲಸ ಮಾಡುವ ಸ್ಥಳದಲ್ಲಿ ಬೇರೆ ವಿಷಯಗಳಿಗೆ ತಲೆ ಹಾಕಿ ಅಗೌರವ ಉಂಟಾಗುತ್ತದೆ
  • ಭಗವತಿಯನ್ನು ಪ್ರಾರ್ಥಿಸಿ

ತುಲಾ

publive-image

  • ಕೆಲಸ ಮಾಡುವ ಜಾಗದಲ್ಲಿ ಇಂದು ಹೊಸ ಹುರುಪು ಉತ್ತೇಜನ ಸಿಗಲಿದೆ
  • ನಿಮ್ಮ ತಂದೆಯ ಜೊತೆ ಉತ್ತಮ ಬಾಂಧವ್ಯವನ್ನಿಟ್ಟುಕೊಳ್ಳಬೇಕು
  • ಕಾರ್ಯಕ್ಷೇತ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಗೊಂದಲ ಉಂಟಾಗುವ ದಿನ
  • ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ
  • ತಪ್ಪು ಮಾಡಿದ್ರೆ ಅದನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡಿ
  • ಪ್ರಸನ್ನ ಗಣಪತಿಯನ್ನು ಸ್ಮರಿಸಿ

ವೃಶ್ಚಿಕ

publive-image

  • ಆಸ್ತಿ, ಜಮೀನು ವಿಷಯ, ಕೋರ್ಟ್ ನಲ್ಲಿ ನಿಮ್ಮ ಕಡೆ ಇತ್ಯರ್ಥ ಆಗಲಿದೆ
  • ಹಿರಿಯ ಅಧಿಕಾರಿಗಳು ಇಂದು ನಿಮ್ಮನ್ನು ಪ್ರಶಂಶಿಸುತ್ತಾರೆ
  • ವಿರೋಧಿಗಳು, ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆ
  • ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಗಂಭೀರ ಸಮಸ್ಯೆಗಳು ಇಂದು ಪರಿಹಾರವಾಗುತ್ತದೆ
  • ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು
  • ಪ್ರತಾಪ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ

ಧನಸ್ಸು 

publive-image

  • ಹೊಸ ಸಂಬಂಧದ ಮಾತುಕತೆ ಮಾಡುವ ಪ್ರಯತ್ನಗಳಿಗೆ ಶುಭದಿನ
  • ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಮನಸಿಗೆ ತುಂಬಾ ಬೇಸರ ಆಗುವ ದಿನ
  • ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ
  • ಕುಟುಂಬದಲ್ಲಿ ಉತ್ತಮ ವಾತಾವರಣವಿರುತ್ತದೆ
  • ನವಗ್ರಹ ಮಂತ್ರವನ್ನು ಪ್ರ್ರಾರ್ಥಿಸಿ

ಮಕರ

publive-image

  • ಇಂದು ಪ್ರೇಮಿಗಳಿಗೆ ಶುಭದಿನ
  • ಇಂದು ಆಶ್ಚರ್ಯಕರ ವಿಚಾರಗಳನ್ನು ಕೇಳುತ್ತೀರಿ
  • ಕೆಲಸಗಳಲ್ಲಿ ಅಡ್ಡಿ-ಆತಂಕಗಳು ಬರಬಹುದು
  • ಬಂಧುಗಳು, ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗುವ ದಿನ
  • ಲೆಕ್ಕ ಪರಿಶೋಧಕರಿಗೆ ಇಂದು ಉತ್ತಮ ದಿನ
  • ಮಧುಮೇಹಿಗಳು ಆರೋಗ್ಯದ ಕಡೆ ಗಮನ ಹರಿಸಿ
  • ವಿಂಜಾ ಮಂತ್ರವನ್ನು ಶ್ರವಣ ಮಾಡಿ

ಕುಂಭ

publive-image

  • ಕಾಲು ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚಿಗೆ ಮುಂದಾಗಬೇಕಾದ ದಿನ
  • ಸಿ.ಎ ವಿದ್ಯಾರ್ಥಿಗಳಿಗೆ ಶುಭ ಸುದ್ಧಿ
  • ಇಂದು ವಾಹನ ಚಾಲನೆಯಲ್ಲಿ ಜಾಗ್ರತೆವಹಿಸಿ
  • ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ
  • ಮದುವೆಯ ಪ್ರಸ್ತಾಪ ಇಂದು ಮಾಡಬೇಡಿ
  • ಅಪಸ್ಮಾರ ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ

ಮೀನ 

publive-image

  • ಯಾವಾಗಲು ಸಂಚಾರಿ ನಿಯಮಗಳನ್ನು ಪಾಲಿಸಿ
  • ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಒಳ್ಳೆಯದಾಗಲಿದೆ
  • ದಾನ ಮತ್ತು ಸಹಾಯ ಮಾಡಲು ಇಂದು ಪ್ರಶಸ್ತವಾದ ದಿನ
  • ದಾನ ಮಾಡಿದ ಮೇಲೆ ಪ್ರತಿಫಲ ನಿರೀಕ್ಷಿಸಬೇಡಿ
  • ಇಂದು ಹಣಕಾಸಿನ ತೊಂದರೆ ಆಗುವ ಸಾಧ್ಯತೆ
  • ತಂದೆ ತಾಯಿಗೆ ಗೌರವ ನೀಡಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment