Advertisment

ಮೌನಿ ಅಮವಾಸ್ಯೆ ಪ್ರಯುಕ್ತ ದಶದಿಕ್ಕುಗಳಿಂದ ಭಕ್ತರ ಆಗಮನ; ರೈಲ್ವೆ ಇಲಾಖೆಯಿಂದ ವ್ಯವಸ್ಥೆಯಾದ ಟ್ರೈನ್​ಗಳ ಸಂಖ್ಯೆಯಷ್ಟು?

author-image
Gopal Kulkarni
Updated On
ಕುಂಭಮೇಳದ ಕ್ಲೈಮ್ಯಾಕ್ಸ್​​ ಟೆನ್ಶನ್.. ‘ಕೈ ಮುಗಿದು ಬೇಡ್ತೀವಿ’ ಅಂತಾ ಸ್ಥಳೀಯರ ಮನವಿ; 32 ರೈಲುಗಳು ಕ್ಯಾನ್ಸಲ್ ಯಾಕೆ?
Advertisment
  • ಬೆಂಗಳೂರಿನಿಂದ ಪ್ರಯಾಗರಾಜ್​​ಗೆ ಸ್ಲೀಪರ್ ಕ್ಲಾಸ್​ನಲ್ಲಿ 1000 ಟಿಕೆಟ್ ದರ
  • 3 AC ಟಿಕೆಟ್​​​ಗೆ 2,200 ರೂ., 2AC ಟಿಕೆಟ್​​ಗೆ 3,200 ರೂಪಾಯಿ ದರ ಇದೆ
  • ಬೆಂಗಳೂರಿನಿಂದ ಪ್ರಯಾಗರಾಜ್​​ಗೆ ವಿಮಾನ ಟಿಕೆಟ್​ 25 - 30 ಸಾವಿರ ರೂ.

ನಾಳೆ ಅಂದ್ರೆ ಜನವರಿ 29 ರಂದು ಮೌನಿ ಅಮವಾಸ್ಸಯೆಯಂದು ಪ್ರಯಾಗರಾಜ್​ನಲ್ಲಿ ಎರಡನೇ ಅಮೃತ ಸ್ನಾನ ನಡೆಯಲಿದೆ. ಈ ದಿನ ಗಂಗಾನದಿಯಲ್ಲಿ ಮಿಂದೆದ್ದರೆ ವಿಶೇಷ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಶತಮಾನಗಳಿಂದಲೂ ಇದೆ. ಹೀಗಾಗಿ ಪ್ರಯಾಗರಾಜ್​ಗೆ ದಶದಿಕ್ಕುಗಳಿಂದಲೂ ಭಕ್ತಾದಿಗಳು ಹರಿದು ಬರುವ ಸಂಭವವಿದ್ದು. 10 ಕೋಟಿಗೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಹೀಗಾಗಿಯೇ ರೈಲ್ವೆ ಇಲಾಖೆಯಿಂದ ಟ್ರೈನ್​ಗಳ ವ್ಯವಸ್ಥೆಯಾಗಿದೆ. ನಾಳೆ ರೈಲ್ವೆ ಇಲಾಖೆಯಿಂದ ಸುಮಾರು 360 ರಿಂದ 400 ಟ್ರೈನ್​ಗಳು ಸಂಚಾರ ಮಾಡಲಿವೆ ಎಂದು ಹೇಳಲಾಗಿದೆ.

Advertisment

ಜನವರಿ 29 ರಂದು ಪ್ರಯಾಗರಾಜ್ ನ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ನಡೆಯಲಿದೆ.‌ ಮೌನಿ ಅಮಾವಾಸ್ಯೆಯ ದಿನ 8-10 ಕೋಟಿ ಜನರು ಪ್ರಯಾಗರಾಜ್ ಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಕೂಡ ಪ್ಲ್ಯಾನ್ ಮಾಡಿಕೊಂಡಿದೆ. ಜನವರಿ 29 ರಂದು ದೇಶದ ಎಲ್ಲ ದಿಕ್ಕುಗಳಿಂದ ಪ್ರತಿ ನಾಲ್ಕು ನಿಮಿಷಗಳಿಗೆ ಒಂದರಂತೆ ರೈಲುಗಳು ಪ್ರಯಾಗರಾಜ್ ಗೆ ಬರಲಿವೆ.

ಇದನ್ನೂ ಓದಿ: ಪಥ ಬದಲಿಸಿಲಿವೆಯಾ ಗಂಗೆ, ಯಮುನೆ? ಗಂಗಾ ಮಾತೆಯ ಸ್ಥಿತಿ ನಿಜಕ್ಕೂ ಕಣ್ಣಿನಿಂದ ನೋಡಲು ಆಗಲ್ವಾ? ಏನಿದು ಭಯಾನಕ ಭವಿಷ್ಯ!

ಜನವರಿ 29 ರಂದು 360- 400 ಟ್ರೈನ್ ಗಳು ಪ್ರಯಾಗರಾಜ್ ಗೆ ಬರಲಿವೆ.‌ ಪ್ರಯಾಗರಾಜ್ ನಲ್ಲಿ ಒಟ್ಟು 9 ರೈಲ್ವೆ ನಿಲ್ದಾಣಗಳಿವೆ. ಈ ಎಲ್ಲ ರೈಲ್ವೆ ನಿಲ್ದಾಣಗಳಿಂದ ರೈಲುಗಳು ಸಂಚರಿಸುತ್ತಿವೆ.‌ ಬೆಂಗಳೂರಿನಿಂದ ಪ್ರಯಾಗರಾಜ್ ಗೆ ಸ್ಲೀಪರ್ ಕ್ಲಾಸ್ ನಲ್ಲಿ 1 ಸಾವಿರ ರೂಪಾಯಿ ಟಿಕೆಟ್ ದರ ಇದ್ದರೇ, 3 AC ಟಿಕೆಟ್ ಗೆ 2,200 ರೂಪಾಯಿ, 2AC ಟಿಕೆಟ್ ಗೆ 3,200 ರೂಪಾಯಿ ದರ ಇದೆ.‌

Advertisment

ಆದರೆ ಬೆಂಗಳೂರಿನಿಂದ ಈಗ ಪ್ರಯಾಗರಾಜ್ ಗೆ ವಿಮಾನದಲ್ಲಿ ಹೋಗಲು 25 ರಿಂದ 30 ಸಾವಿರ ರೂಪಾಯಿ ಪ್ಲೈಟ್ ಟಿಕೆಟ್ ದರ ಇದೆ.‌ ವಿಮಾನಕ್ಕಿಂತ ರೈಲು ಟಿಕೆಟ್ ದರ ಯಾವಾಗಲೂ ಅಗ್ಗ.‌ ಜನ ಸಾಮಾನ್ಯರು ಸಂಚರಿಸಲು ರೈಲ್ವೆ ಟಿಕೆಟ್ ದರ ಅನುಕೂಲಕಾರಿ. ಹೀಗಾಗಿ ರೈಲ್ವೆ ಇಲಾಖೆ ಈ ಭಾರಿಯ ಮಹಾಕುಂಭಮೇಳಕ್ಕೆ ವಿಶೇಷ ಟ್ರೈನ್ ಗಳನ್ನು ಓಡಿಸುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ವಿಶ್ರಾಂತಿ ಪಡೆಯಲು ಜರ್ಮನ್ ಟೆಂಟ್ ಆಳವಡಿಸಿ ವಿಶೇಷ ವ್ಯವಸ್ಥೆ ಮಾಡಿದೆ. ಟ್ರೈನ್ ಗಳ ಮೂಲಕವೇ ಲಕ್ಷಾಂತರ ಮಂದಿ‌ ನಿತ್ಯ ಪ್ರಯಾಗರಾಜ್ ಗೆ ಆಗಮಿಸುತ್ತಿದ್ದಾರೆ.‌ ಮೌನಿ ಅಮಾವಾಸ್ಯೆಯ ಬಳಿಕವೂ 150 ವಿಶೇಷ ಟ್ರೈನ್ ಗಳನ್ನು ರೈಲ್ವೆ ಇಲಾಖೆ ಪ್ರಯಾಗರಾಜ್ ನಿಂದ ಓಡಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment