newsfirstkannada.com

ಆಟ ಆಡುತ್ತಿದ್ದಾಗ ಯೋಧನ ಮಗು ದಿಢೀರ್​ ಸಾವು.. ಮಲತಾಯಿಯಿಂದ ಕೊಲೆ ಆರೋಪ

Share :

Published May 20, 2024 at 5:47pm

    ಬೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಗು ಸಾವು

    ಸಿಆರ್​​ಪಿಎಫ್​​​ ಯೋಧ ರಾಯಣ್ಣ ನಾವಿ ಅವರ ಮಗು ಇನ್ನಿಲ್ಲ

    ದೂರು ನೀಡಿದ್ರೂ ಪೊಲೀಸ್ರು ಕೇಸ್​ ಮಾಡಲು ಹಿಂದೇಟು!

ಬೆಳಗಾವಿ: ಇಂದು ಬೆಳಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ಮೃತಪಟ್ಟಿರೋ ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ 4 ವರ್ಷದ ಮಗುವನ್ನ ಮಲತಾಯಿಯೇ ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಅಜ್ಜಿಯಿಂದಲೇ ಕೇಳಿ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ರೇವ್​ ಪಾರ್ಟಿಯಲ್ಲಿ ಸಿಸಿಬಿಗೆ ಕಂಡ ಕಿರುತೆರೆ ಮತ್ತು ಸಿನಿಮಾ ನಟಿಯರು! ಯಾರೆಲ್ಲಾ ಇದ್ದರು ಗೊತ್ತಾ?

ಮಗುವಿನ ತಾಯಿಯನ್ನು 2021ರಲ್ಲಿ ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಲಾಗಿತ್ತು. ಈಗ 4 ವರ್ಷದ ಮೊಮ್ಮಗಳನ್ನು ಕೊಲೆ ಮಾಡಿದ್ದಾರೆ. ಅದು ಮಲೆತಾಯಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೃತ ಮಗುವಿನ ತಂದೆ ರಾಯಣ್ಣ ನಾವಿ. ಬೆಳಗಾವಿ ಎಪಿಎಂಸಿ ಯಾರ್ಡ್ ಬಳಿ ಇರೋ ರಾಯಣ್ಣ ನಾವಿ CRPF ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು, ಮಗು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಮಗು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಜ್ಜ ಹಾಗೂ ಅಜ್ಜಿ ಆಸ್ಪತ್ರೆಗೆ ದೌಡಾಯಿಸಿ ಅಳಲು ತೊಡಿಕೊಂಡಿದ್ದಾರೆ. ಇನ್ನು ಈ ಸಂಬಂಧ ಮಗುವಿನ ಅಜ್ಜ ಅಜ್ಜಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದ್ರು. ಆದರೆ ಪೊಲೀಸ್​ ಅಧಿಕಾರಿಗಳು ಮಗುವಿನ ತಂದೆ ಬರೋವರೆಗೂ ಕೇಸ್ ದಾಖಲಿಸಿಕೊಳ್ಳಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟ ಆಡುತ್ತಿದ್ದಾಗ ಯೋಧನ ಮಗು ದಿಢೀರ್​ ಸಾವು.. ಮಲತಾಯಿಯಿಂದ ಕೊಲೆ ಆರೋಪ

https://newsfirstlive.com/wp-content/uploads/2024/05/belagavi.jpg

    ಬೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಗು ಸಾವು

    ಸಿಆರ್​​ಪಿಎಫ್​​​ ಯೋಧ ರಾಯಣ್ಣ ನಾವಿ ಅವರ ಮಗು ಇನ್ನಿಲ್ಲ

    ದೂರು ನೀಡಿದ್ರೂ ಪೊಲೀಸ್ರು ಕೇಸ್​ ಮಾಡಲು ಹಿಂದೇಟು!

ಬೆಳಗಾವಿ: ಇಂದು ಬೆಳಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ಮೃತಪಟ್ಟಿರೋ ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ 4 ವರ್ಷದ ಮಗುವನ್ನ ಮಲತಾಯಿಯೇ ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಅಜ್ಜಿಯಿಂದಲೇ ಕೇಳಿ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ರೇವ್​ ಪಾರ್ಟಿಯಲ್ಲಿ ಸಿಸಿಬಿಗೆ ಕಂಡ ಕಿರುತೆರೆ ಮತ್ತು ಸಿನಿಮಾ ನಟಿಯರು! ಯಾರೆಲ್ಲಾ ಇದ್ದರು ಗೊತ್ತಾ?

ಮಗುವಿನ ತಾಯಿಯನ್ನು 2021ರಲ್ಲಿ ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಲಾಗಿತ್ತು. ಈಗ 4 ವರ್ಷದ ಮೊಮ್ಮಗಳನ್ನು ಕೊಲೆ ಮಾಡಿದ್ದಾರೆ. ಅದು ಮಲೆತಾಯಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೃತ ಮಗುವಿನ ತಂದೆ ರಾಯಣ್ಣ ನಾವಿ. ಬೆಳಗಾವಿ ಎಪಿಎಂಸಿ ಯಾರ್ಡ್ ಬಳಿ ಇರೋ ರಾಯಣ್ಣ ನಾವಿ CRPF ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು, ಮಗು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಮಗು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಜ್ಜ ಹಾಗೂ ಅಜ್ಜಿ ಆಸ್ಪತ್ರೆಗೆ ದೌಡಾಯಿಸಿ ಅಳಲು ತೊಡಿಕೊಂಡಿದ್ದಾರೆ. ಇನ್ನು ಈ ಸಂಬಂಧ ಮಗುವಿನ ಅಜ್ಜ ಅಜ್ಜಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದ್ರು. ಆದರೆ ಪೊಲೀಸ್​ ಅಧಿಕಾರಿಗಳು ಮಗುವಿನ ತಂದೆ ಬರೋವರೆಗೂ ಕೇಸ್ ದಾಖಲಿಸಿಕೊಳ್ಳಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More